16 Aug 2018

ರಾಕ್ಷಸ-ತಂಗಡಿ: ಗಿರೀಶ್ ಕಾರ್ನಾಡ್

ಕರಣಂ ಪ್ರಸಾದ್
ನೆನ್ನೆ ಬಿಡುಗಡೆಯಾದ ಗಿರೀಶ್ ಕಾರ್ನಾಡರ ರಚನೆಯ ಹೊಸ ನಾಟಕ "ರಾಕ್ಷಸ-ತಂಗಡಿ"
---
ಇತಿಹಾಸದ ವಸ್ತುವಿಟ್ಟುಕೊಂಡು ಕೃತಿ ರಚಿಸುವುದೆಂದರೆ ಕಾಲಪ್ರವಾಹದಲ್ಲಿ ಕುರುಡನೊಬ್ಬ ಈಜಿದಂತೆ. ಪ್ರವಾಹದಲ್ಲಿ ಈಜುತ್ತಾ ತಮಗೆ ಹಿತವಾದ ಜೊಂಡು, ಜಾಡು, ಕಲ್ಲು, ಪೊಟರೆ ಹಿಡಿದು... ಅದರ ಸುತ್ತಲನ್ನೇ ತಡಕಿ ಪ್ರವಾಹದ ಲಕ್ಷಣದ ಬಗ್ಗೆ ನಮ್ಮ ನಿರ್ಣಯ ಹೇಳುವ ದಯನೀಯತೆಗೆ ನಾವು ಎದುರಾಗುತ್ತೇವೆ. ಏಕೆಂದರೆ ಅಲ್ಲಿ ದೃಷ್ಟಿಜ್ಞಾನ ವಿವೇಕವಿರುವುದಿಲ್ಲ, ಕೇವಲ ಸ್ಪರ್ಶ ಮತ್ತು ಭಾವವೇ ಪ್ರಧಾನವಾಗುತ್ತದೆ. ಈ ನಾಟಕದಲ್ಲಿ ಕಾರ್ನಾಡರು ಕೂಡ ಹಾಗೇ ಮಾಡಿದ್ದಾರೆ. ಇದು ಖಂಡಿತಾ ದೂಷಣೆಯಲ್ಲ... ಇತಿಹಾಸವನ್ನು ಕೊರೆದ ಪಂಡಿತರಲ್ಲೇ ಈ ಮಿತಿ ಇರುವಾಗ, ಅದನ್ನು ಬಳಸುವ ಸೃಷ್ಟಿಶೀಲನೂ ಆ ಮಿತಿಯಲ್ಲೇ ಇರುತ್ತಾನೆ. ಈ ನಾಟಕವು ರಿಚರ್ಡ್ ಎಂ ಈಟೆನ್ ಅವರ "ಎ ಸೊಷಿಯಲ್ ಹಿಸ್ಟರಿ ಆಫ್ ಡೆಕ್ಕನ್" ಮತ್ತು ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಬರೆಹವನ್ನು ಋಣವಾಗಿಟ್ಟುಕೊಂಡಿದೆ. ಈ ನಾಟಕವನ್ನು ರೂಪಕ ಮತ್ತು ಧ್ವನಿ - ವಸ್ತುನಿಷ್ಠತೆ ಮತ್ತು ಇತಿಹಾಸ ಎಂದು ಎರಡು ಭಾಗದಲ್ಲಿ ವಿವೇಚಿಸುವುದು ಒಳಿತು.
---
ರೂಪಕ ಮತ್ತು ಧ್ವನಿ
---
ವಿಜಯನಗರ ಧ್ವಂಸವಾಗಿದೆ, ಜನ ಅಲ್ಲಿಂದ ಓಡಿದ್ದಾರೆ, ಸೈನಿಕರು ಅಟ್ಟಾಡಿಸಿ ಬಂಗಾರ-ಬೊಕ್ಕಸಕ್ಕಾಗಿ ಹುಡುಕುತ್ತಿದ್ದಾರೆ. ಈ ಸನ್ನಿವೇಶದ ಅಡಿಯಲ್ಲಿ ನಾಟಕ ಪ್ರಾರಂಭವಾಗುತ್ತದೆ. ನಾಟಕದ ಬಗ್ಗೆ ಕುತೂಹಲ ಕಾಯ್ದಿಟ್ಟುಕೊಳ್ಳಲು ಇದು ವ್ಯವಸ್ಥಿತವಾದ ಪ್ರಾರಂಭ. ರಚನಕಾರರು ಅಲ್ಲಿ ಯಶಸ್ವಿಯಾಗುತ್ತಾರೆ. ನಂತರದ ದೃಶ್ಯದಲ್ಲೇ ರಾಮರಾಯನ ತಮ್ಮ ತಿರುಮಲ ವಿಜಯನಗರ ಕೇಂದ್ರಕ್ಕೆ ಬಂದು ಎಲ್ಲವೂ ಆಗಿ ಹೋಯಿತು, ಶೀಘ್ರ ಇಲ್ಲಿಂದು ಹೊರಡೋಣ ಎಂದು ಸಿಂಹಾಸನದ ರಾಜ ಸದಾಶಿವರಾಯನನ್ನು ಎಬ್ಬಿಸುವ, ಮಾತೆ-ಅತ್ತಿಗೆ ಎಲ್ಲರಿಗೂ ಆದ ದುರಂತವನ್ನು ವಿವರಿಸುವ ದೃಶ್ಯ. ನಿಜದಲ್ಲಿ ಸದಾಶಿವರಾಯ ವಿಜಯನಗರದ ಅಧಿಪತಿ. ಅವನು ತುಳುವ ವಂಶದವ, ರಾಮರಾಯ; ಕೃಷ್ಣದೇವರಾಯನ ಆಳಿಯ, ನಿಜದಲ್ಲಿ ಸಿಂಹಾಸನಧೀಶ ಅಲ್ಲ! ಆದರೆ ಹಿಡಿತ ಇರುವುದು ಅವನ ಕೈಯಲ್ಲೇ. ಅವನು ಅರವೀಡು ವಂಶಕ್ಕೆ ಸೇರಿದವನು. ಈ ಸೂಕ್ಷ್ಮವು ಬಲವಾಗಿ ಬಿಂಬಿತವಾಗಿದೆ. ಈ ಧರ್ಮ ಸಂಕಟವು ರಾಮರಾಯನ ಕೊನೆಯನ್ನು ನಿರ್ಣಯಿಸಿತು ಎಂಬ ಧ್ವನಿ ನಾಟಕದಲ್ಲಿ ಹೊರಡುತ್ತದೆ. ತಾನೂ ರಾಜವಂಶದವ ಎಂದು ಹೇಳಿಕೊಳ್ಳುವ ಹಂಬಲ ಎದ್ದು ಕಲ್ಯಾಣದ ಚಾಲುಕ್ಯನ ವಂಶಜ ಎಂದು ತನ್ನನ್ನೇ ಸಂತೈಸಿಕೊಂಡು ಆ ಕಲ್ಯಾಣದ ಆಸೆಯಲ್ಲೇ ಅಹಮದ್ ನಗರದ ನಿಝಾಮ್’ಶಹನನ್ನು ಎದುರು ಹಾಕಿಕೊಂಡು ಅದನ್ನು ಬಿಜಾಪುರದ ಸುಲ್ತಾನ ಅಲಿ ಆದಿಲ್ ಶಾನಿಗೆ ಕೊಟ್ಟು, ಕೊನೆಗೆ ರಕ್ಕಸ-ತಂಗಡಿ ಯುದ್ಧದಲ್ಲಿ ನಿಝಾಮಶಹನ ಪಾದದಡಿಯೇ ತಲೆ ಉರುಳಿಸಿಕೊಳ್ಳುವ ರಾಮರಾಯನೇ ಕಥಾ ಎಳೆ. ಇಲ್ಲಿ ಕಾರ್ನಾಡರು ಹೇಳಹೊರಟಿರುವುದು ವಿಜಯನಗರದ ಪತನವನ್ನಲ್ಲ, ರಾಮಾರಾಯನ ಪತನವನ್ನ. ಚಮತ್ಕಾರಿ ವಾಕ್ಯಗಳ ಮೂಲಕ ಪಾತ್ರವನ್ನು ಸಿಂಗರಿಸುವ ಕಾರ್ನಾಡರ ಪದ್ಧತಿ ಇಲ್ಲೂ ಮುಂದುವರಿದಿದೆ. "ಬದುಕಲಿಕ್ಕೊಂದು ಭ್ರಾಂತಿ ಬೇಕಾಗಿರತದೆ, ಸುಲ್ತಾನರಿಗೂ ಇರತದೆ, ಪ್ರಜೆಗಳಿಗೂ ಇರತದೆ" ಎಂಬ ಬೇಗಮ್ ಪಾತ್ರದ ಮಾತು ಅದಕ್ಕೆ ಸಾಕ್ಷಿ. "ಕರಾರುಗಳನ್ನು ಓದಿ ತೋರಿಸು, ಎಲ್ಲರು ಕೇಳಲಿ, ಕೇಳಲಿಕ್ಕಷ್ಟೇ, ಚರ್ಚೆಗಾಗಿ ಅಲ್ಲ" ಎಂಬ ರಾಮರಾಯನ ಮಾತು ಇನ್ನೊಂದು ಉದಾಹರಣೆ. ನಾಟಕದ ನಿಜವಾದ ರಸಸ್ಥಾನ ಇರುವುದು ದೃಶ್ಯ-೬ ರಲ್ಲಿ, ರಾಮರಾಯ ನಿಝಾಮಶಹನನ್ನು ಮಾತಲ್ಲೇ ಮಂಡಿಯೂರಿಸಿ ಕಲ್ಯಾಣದ ಕೋಟೆಯ ಬೀಗವನ್ನು ಬಿಜಾಪುರಕ್ಕೆ ಹಸ್ತಾತಂತರಿಸುವ ಸನ್ನಿವೇಶ. ನಾಟಕಕಾರ ಕಾರ್ನಾಡ್ ಅಲ್ಲಿ ಗೆದ್ದುಬಿಡುತ್ತಾರೆ. ಕಾರ್ನಾಡರಿಗೆ ಸ್ಟೇಜ್ ಸೆನ್ಸ್ ಬಹಳವಾಗಿ ಇದೆ ಎಂಬುದು ಅವರು ದೃಶ್ಯ ಪೋಣಿಸುವುದರಲ್ಲೇ ಗೊತ್ತಾಗುತ್ತದೆ. ಇದೇ ಅವರನ್ನು ಇತರ ನಾಟಕಕಾರನಿಂದ ಭಿನ್ನ ಮಾಡುವುದು. ಈ ದೃಶ್ಯವೇಕೆ ಗಟ್ಟಿಯಾದ ರಸಸ್ಥಾನ ಎಂದರೆ - ಅದೇ ರಾಮರಾಯನ ಅಂತ್ಯಕ್ಕೆ ಮುನ್ನುಡಿ. ನಿಝಾಮಶಹ ಆ ದೃಶ್ಯದಲ್ಲಿ ರಾಮರಾಯ ಕೊಟ್ಟ ತಾಂಬೂಲವನ್ನು ನೆಲಕ್ಕೆ ಉಗಿಯುವುದೇ... ಇವನು ಕೊನೆಯಲ್ಲಿ ಅವನ ತಲೆ ಕತ್ತರಿಸುತ್ತಾನೆ ಎಂದು ತಿಳಿಸಿಬಿಡುತ್ತದೆ. ಇದು ಕಾರ್ನಾಡರ ಪ್ರತಿಭೆ, ಒಬ್ಬ ನಟರೂ ಆಗಿರುವುದರಿಂದ ಇದು ಅವರಿಗೆ ಸಿದ್ಧಿಸಿರಬಹುದು(!) ಶೇಕ್ಸಪಿಯರ್ ಉತ್ತಮ ನಾಟಕಕಾರ ಯಾಕೆ ಆದನೆಂದರೆ ಸ್ವತಃ ಆತನೂ ನಟನಾಗಿದ್ದ. ಭಾರತದ ಪ್ರಪ್ರಥಮ ನಾಟಕಕಾರ ಅಶ್ವಘೋಷನಿಗೆ ನಾಟಕ ರಚನೆಯ ಪ್ರತಿಭೆ ನಟನಾಗಿದ್ದರಿಂದಲೇ ಬಂದಿತೇನೋ. ಅಶ್ವಘೋಷ; ರಾಮಾಯಣ ಮತ್ತು ಮಹಾಭಾರತದ ನಂತರ ಬುದ್ಧಚರಿತದಂತ ಮಹಾಕಾವ್ಯ ರಚಿಸಿದ ಮಹಾಕವಿ (ಕಾಳಿದಾಸನಿಗೂ ಮುನ್ನ) ಎಷ್ಟು ಸಂಸ್ಕೃತಿ ರಕ್ಷಕರಿಗೆ ಕನಿಷ್ಠ ಆತನ ಹೆಸರು ತಿಳಿದಿದೆಯೋ ಗೊತ್ತಿಲ್ಲ. ಇರಲಿ... ರಾಕ್ಷಸ-ತಂಗಡಿಯತ್ತ ನೋಡೋಣ. ತಂಗಡಿ ಎಂಬ ದಖ್ಖನಿ ಭಾಷೆಯ ಪದ ಮತ್ತು ರಾಕ್ಷಸ ಎಂಬ ಸಂಸ್ಕೃತ ಶಬ್ಧದ ಸಮಾಗಮ ಇರುವುದರಿಂದ ನಾಟಕದ ಹೆಸರಾಗಿ ಬಳಸಿದೆ ಎಂದು ಕಾರ್ನಾಡರು ಹೇಳಿದ್ದಾರೆ... ಒಪ್ಪುವಂಥದ್ದೇ. ಒಮ್ಮೆ ಕಲೆ ಕರಗತವಾಗಿಬಿಟ್ಟರೆ, ಕಲಾವಿದನು ಪ್ರತಿಭೆಯ ಗಿಲೀಟಿನ ಕೆಳಗೆ ತನ್ನ ಹಿತೋದ್ದೇಶಗಳನ್ನು ಜೋಪಾನವಾಗಿ ದಾಟಿಸಿಬಿಡುತ್ತಾನೆ. ಕಾರ್ನಾಡರು ಅದನ್ನು ಹೆಮ್ಮೆಯಿಂದ ಮಾಡಿದ್ದಾರೆ! ಅಲಿ ಆದಿಲ್ ಶಹನ ಬಗ್ಗೆ ಬರೆಯುವಾಗ ಮಾತು ಮಾತಿಗೂ ಸೂಫಿ ಸಂತರ ಸಂಗೀತ-ದೈವತ್ವ ಲೀನದ ಮಾತುಗಳನ್ನು ಆಡಿಸಿ... ಅಲ್ಲೊಂದು ಸೌಮ್ಯ ಮುಖ ದಾಟಿಸಲು ಪ್ರಯತ್ನಿಸಿದ್ದಾರೆ. ಇದು ಹಿಟ್ಲರನು ಸಸ್ಯಹಾರಿ-ಪ್ರಾಣಿಪ್ರಿಯ ಎಂದು ತೋರಿಸುವಷ್ಟೇ ಹಾಸ್ಯಾಸ್ಪದ. ಪ್ರತಿ ದೃಶ್ಯದಲ್ಲೂ ಹಿಡಿತ ಬಿಟ್ಟುಕೊಡದೆ ನಿರೂಪಣೆ ಸಾಗಿದೆ, ತುಘಲಕ್ ಮತ್ತು ತಲೆದಂಡ ನಾಟಕದ ಜೊತೆಗೆ ತುಲನೆ ಮಾಡುವಷ್ಟು ನಾಟಕ ಪ್ರಬುದ್ಧವಾಗಿದೆ. ಟೀಪೂ ಸುಲ್ತಾನನ ಕನಸು ನಾಟಕದಲ್ಲಿ ಇದ್ದ "ದರ್ದು" ಇಲ್ಲಿ ಕಾಣುವುದಿಲ್ಲ. ರಾಮರಾಯನ ತಲೆಯನ್ನು ಭರ್ಜಿಗೆ ಸಿಕ್ಕಿಸಿ ವಿಜಯನಗರ ಸಾಮ್ರಾಜ್ಯದ ಪತನವನ್ನು ಸಾಂಕೇತಿಕವಾಗಿ ತೋರುವ ಅಂತ್ಯ ದೃಶ್ಯ ನಾಟಕದ ಹಿಡಿತವನ್ನು ತಪ್ಪಿಸಿದೆ... ಥಟಕ್ಕನೇ ಓದು ನಿಂತಂತೆ ಆಗುತ್ತದೆ. ರಂಗದ ಮೇಲೆ ಇದು ಬೇರೆ ರೀತಿ ಕಾಣಬಹುದೇನೋ, ಆದರೆ ಓದಿನಲ್ಲಿ ಅಂತ್ಯ ಕಥಾರಚನೆಗೆ ಪೂರಕವಾಗಿಲ್ಲ. ಅಡಿಪಾಯದ ದೃಶ್ಯಗಳು ಗಟ್ಟಿಯಾಗಿ ನಿಂತಿರುವುದರಿಂದ ಕಳಶ ಬಿದ್ದರೂ ಗೋಪುರಕ್ಕೆ ತೊಂದರೆ ಇಲ್ಲ ಎಂದು ಹೇಳಬಹುದು.
---
ವಸ್ತುನಿಷ್ಠತೆ - ಇತಿಹಾಸ
---
ರಾಮರಾಯ ರಾಜನಾಗಿರಲಿಲ್ಲ, ಯುದ್ಧರಂಗದಲ್ಲಿ ಆತ ಪಲ್ಲಕ್ಕಿಯ ಮೇಲೆ ಕೂತು ಸೈನಿಕರತ್ತ ಉಡುಗೊರೆ ಚೆಲ್ಲುತ್ತಾ "ತದಕಿರಿ, ತುರುಕರಿಗೆ, ತದಕಿರಿ..." ಎನ್ನುತ್ತಾ ತನ್ನ ಭಂಡಧೈರ್ಯದಿಂದ ತಲೆ ಕೊಟ್ಟದ್ದು ಎಲ್ಲವೂ ಇತಿಹಾಸ ಸಮ್ಮತವೇ. ಯುದ್ಧ ನಡೆದದ್ದು ಅಂದಾಜು ೧೫೦ ಕಿ.ಮೀ ದೂರದಲ್ಲಿ, ಹಂಪಿಗೆ ಬರಲು ಸೈನ್ಯಕ್ಕೆ ಮೂರು ದಿನ ಹಿಡಿಯಿತು ಅಷ್ಟರಲ್ಲಿ ತಿರುಮಲಾ, ಸಾವಿರಾರು ಆನೆಯ ಮೇಲೆ ಬೊಕ್ಕಸ ತುಂಬಿಕೊಂಡು ಪೆನಗೊಂಡಕ್ಕೆ ಹೋದ, ಅಲ್ಲಿನ ಸುತ್ತಮುತ್ತಲ ಜನರೇ  ಮೊದಲು ಸಿಕ್ಕ ಸಿಕ್ಕದ್ದು ಲೂಟಿ ಮಾಡಿದರು, ಆಮೇಲೆ ಮಹಮದೀಯ ಸೈನಿಕರು ಹಂಪಿಯ ಮೇಲೆ ದಾಳಿ ಇಟ್ಟದ್ದು ಎಂಬುದೂ ಇತಿಹಾಸಕ್ಕೆ ಬದ್ಧವಾಗಿದೆ. ಆದರೆ ಇವೆಲ್ಲವನ್ನೂ ನಾಟಕ ರಚನೆಯಲ್ಲಿ ತೊಡಗಿಸಿ... ಹಂಪಿಯ ದಾಳಿಯನ್ನು ಮಾತ್ರ ಮರೆಮಾಚಿದ್ದು ಜಾಣತನವೂ ಹೌದು, ಅಕ್ಷಮ್ಯವೂ ಹೌದು. ಯುದ್ಧಕ್ಕೆ ನಾಟಕ ಮುಗಿಯುತ್ತದೆ ಎಂಬ ಸಮಾಧಾನ ಒಪ್ಪಲಾಗದು ಏಕೆಂದರೆ ಮೊದಲ ದೃಶ್ಯದಲ್ಲಿ ಸೂಕ್ಷ್ಮವಾಗಿ ಕಾರ್ನಾಡರು ಗುಹಾವಾಸಿ ಮತ್ತು ಸೈನಿಕರ ನಡುವಿನ ಕಾಳಗವನ್ನು ತೋರಿಸಿದ್ದಾರೆ. ರಿಚರ್ಡ್ ಈಟನ್ ತಮ್ಮ ಪುಸ್ತಕದಲ್ಲಿ ರಾಬರ್ಟ್ ಸೀವೆಲ್ ಅವರನ್ನು ಖಂಡಿಸಿದ್ದಾನೆ ಸರಿ. ತೌಲನಿಕ ಅಭ್ಯಾಸ ಮಾಡುವವರಾದರೆ ರಾಬರ್ಟ್ ಅನ್ನು ಓದಿಕೊಳ್ಳಬೇಕಿತ್ತಲ್ಲವೇ. ಕೇವಲ ರಿಚರ್ಡ್ ಈಟನ್ ಬರೆದದ್ದನ್ನು ಮಾತ್ರ ಕಣ್ಮುಚ್ಚಿ ತೆಗೆದುಕೊಂಡಿರುವುದು ದೊಡ್ಡ ಮಿತಿ ಆಗಿದೆ. ಎಷ್ಟರ ಮಟ್ಟಿಗೆ ಎಂದರೆ ರಿಚರ್ಡ್ ಈಟನ್ ತನ್ನ ಪುಸ್ತಕದಲ್ಲಿ "Hapless Sadashiva..." (ಎ ಸೊಷಿಯಲ್ ಹಿಸ್ಟರಿ ಆಫ್ ಡೆಕ್ಕನ್ ಪೇಜ್ ನಂ.೧೯೬) ಎಂದು ಬರೆದಿರುವುದನ್ನು "ಹೇಪಲಾಯಿ ಸದಾಶಿವ" ಎಂದು ತದ್ವತ್ ಸಂಭಾಷಣೆಯಲ್ಲಿ ಬಳಸಿದ್ದಾರೆ. ಆಯಿತು ರಾಬರ್ಟ್ ಸೀವೆಲ್ ರಚನಕಾರರ ಹಿತೋದ್ದೇಶಕ್ಕೆ ವಿರುದ್ಧವಾಗಿದ್ದಾನೆ, ಆತನ ದೃಷ್ಟಿ ಖಂಡನೆ ಮಾಡಬಹುದು. ಆದರೆ ಅವನು ಕೊಟ್ಟಿರುವ ವಿವರಣೆಯನ್ನು ನೋಡಬೇಕಿತ್ತಲ್ಲವೇ... "ಹಂಪಿಯ ದಂಡು ಗೋಲಕೊಂಡಾದಲ್ಲಿ ಹಾಯ್ದು ಹೋಗುವಾಗ ಹಳ್ಳಿಗಳನ್ನು ಸುಟ್ಟಿದೆಯಂತೆ, ಮಸೀದಿಗಳನ್ನು ಉಧ್ವಸ್ತಗೊಳಿಸಿದೆಯಂತೆ" ಎಂದು ಪಾತ್ರದ ಕೈಯಲ್ಲಿ ಹೇಳಿಸುವಾಗ ಇರುವ ಸತ್ಯನಿಷ್ಠತೆ, ಹಂಪಿಯ ಬಗ್ಗೆಯೂ ಇರಬೇಕಿತ್ತಲ್ಲವೇ. ಅದನ್ನೂ ನೀಡುತ್ತೇನೆ ಓದಿಕೊಳ್ಳಿ.
"The third day saw the beginning of the end. The victorious Mussulmans had halted on the field of battle for rest and refreshment, but now they had reached the capital, and from that time forward for a space of five months Vijayanagar knew no rest. The enemy had come to destroy, and they carried out their object relentlessly. They slaughtered the people without mercy, broke down the temples and palaces; and wreaked such savage vengeance on the abode of the kings, that, with the exception of a few great stone-built temples and walls, nothing now remains but a heap of ruins to mark the spot where once the stately buildings stood. They demolished the statues, and even succeeded in breaking the limbs of the huge Narasimha monolith. Nothing seemed to escape them..."
(A Forgotten Empire: Vijayanagar; A Contribution to the History of India by Robert Sewell)
ಈ ಹಿಂದೆ ಬಹುಮನಿ ಉತ್ಸವ ಎಂಬ ಮಾತನ್ನು ಸರ್ಕಾರ ಹೇಳಿ, ಅದಕ್ಕೆ ಪ್ರತಿಯಾಗಿ ಬಹುಮನಿ ಸುಲ್ತಾನರು ವಿಜಯನಗರ ಸಾಮ್ರಾಜ್ಯ ಪತನ ಮಾಡಿದರು ಎಂಬ ಪ್ರತಿಕ್ರಿಯೆ ಬಂದಿತ್ತು. ಅದು ಶುದ್ಧ ತಪ್ಪು. ಬಹುಮನಿ ಸುಲ್ತಾನರು ನಿರಂತರ ವಿಜಯನಗರದ ಜೊತೆ ಕಾದಾಟದಲ್ಲಿದ್ದರು ಎಂಬುದು ಸರಿ ಆದರೆ ರಕ್ಕಸ-ತಂಗಡಿ ಯುದ್ಧದ ಹೊತ್ತಿಗೆ ಬಹುಮನಿ ಸಾಮ್ರಾಜ್ಯವೇ ಇರಲಿಲ್ಲ. ಯುದ್ಧ ನಡೆದದ್ದು ೧೫೬೫ರಲ್ಲಿ, ಬಹುಮನಿಯ ಕೊನೆಯ ರಾಜ ಕಲಿಮುಲ್ಲಾ ಶಾನ ಆಡಳಿತ ೧೫೨೫ಕ್ಕೆ ಕೊನೆಯಾಗುತ್ತದೆ. ಇಲ್ಲಿ ವಿಜಯನಗರದ ವಿರುದ್ಧ ಒಟ್ಟಾದವರು ಬಿಜಾಪುರದ ಆದಿಲ್ ಶಾ, ಅಹಮದ್ ನಗರ ನಿಝಾಮ್ ಶಾ, ಗೋಲ್ಕಂಡಾದ ಕುತುಬ್ ಶಾ , ಬೀದರಿನ ಬರೀದ್ ಶಹ, ಬೇರಾರಿನ ಸುಲ್ತಾನರು, ಅಷ್ಟರಲ್ಲಿ ಬಹುಮನಿ ಪ್ರದೇಶ ಇವರುಗಳ ನಡುವೆ ಹಂಚಿಗೋಗಿತ್ತು. ಹಲವು ಪುಸ್ತಕದಲ್ಲಿ ಸಹ ಇದ್ದೇ ತಪ್ಪು ಅಚ್ಚಾಗಿದೆ. ಈ ವಿಷಯದಲ್ಲಿ ಕಾರ್ನಾಡರು ಸ್ಪಷ್ಟವಾಗಿದ್ದಾರೆ, ಪ್ರತಿ ಸುಲ್ತಾನನ ಮನೋಮರ್ಮವನ್ನು, ವಿಜಯನಗರ ಸೋಲಿಸುವ ಒಂದೇ ಕಾರಣಕ್ಕೆ ಮನೆಯ ಹೆಣ್ಣನ್ನು, ಇತರ ಸುಲ್ತಾನರಿಗೆ ಮದುವೆ ಮಾಡಿಕೊಡುವ ಸನ್ನಿವೇಶ ರಸಪೂರ್ಣವಾಗಿದೆ. ರಾಮರಾಯ ಭಂಡಧೈರ್ಯ ಮಾಡಿರದಿದ್ದರೆ ವಿಜಯನಗರ ಉಳಿಯುತಿತ್ತು ಎಂಬುದನ್ನೂ ಕಾರ್ನಾಡರು ದಾಟಿಸುತ್ತಾರೆ. ವಿಜಯನಗರ ಸಾಮ್ರಾಜ್ಯ ಪತನ ಕನ್ನಡ ದೇಶದ ಪತನವೂ ಹೌದು ಎಂಬ ಸೂಕ್ಷ್ಮ ದೃಷ್ಟಿಯನ್ನು ಅವರು ಹೊರಡಿಸಿದ್ದು ನಿಜಕ್ಕೂ ಮೆಚ್ಚಬೇಕಾದ್ದೆ! "ಅಮ್ಮಾ, ಮೂರು ಮಂದಿ ಸುಲ್ತಾನರು ಒಂದಾಗಿ ಕರ್ನಾಟಕ ದೇಶದ ಮೇಲೆ ಏರಿ ಬರತಾ ಇದ್ದಾರೆ" ಎಂದು ರಾಮರಾಯನ ಬಾಯಲ್ಲಿ ಆಡಿಸಿದ್ದು ಗಮನೀಯ. ನಿಜವಾಗಿಯೂ ಅವನು ಹಾಗೆ ಹೇಳಿದ್ದನೋ ಇಲ್ಲವೋ ರಚನಕಾರರಿಗೆ ಆ ದೃಷ್ಟಿ ಸಿಕ್ಕಿರುವುದು ಒಳ್ಳೆಯ ವಿಚಾರ. ವಿಜಯನಗರದ ಧೈರ್ಯ ಎಷ್ಟಿತ್ತೆಂದರೆ ಯುದ್ಧದ ಸಮಯದಲ್ಲಿ ಹಂಪಿಗೆ ಕಾವಲೇ ಇರಲಿಲ್ಲ. ಶತಮಾನದಿಂದ ಯಾರೂ ಅದನ್ನು ಮುಟ್ಟುವ ಧೈರ್ಯ ಮಾಡಿರಲಿಲ್ಲ. ಈ ಅತಿಯಾದ ಆತ್ಮ ವಿಶ್ವಾಸವೇ ಪತನಕ್ಕೆ ಕಾರಣ ಎಂಬುದನ್ನೂ ನಾಟಕ ಹೇಳಿದೆ. ಅದು ಇತಿಹಾಸಕ್ಕೆ ಬದ್ಧವಾಗಿಯೇ ಇದೆ. ಯುದ್ಧಕ್ಕೆ ಹೊರಟಾಗ ರಾಮರಾಯನ ವಯಸ್ಸು ಕೆಲವೆಡೆ ೯೨ ಎಂದಿದೆ, ಕೆಲವೆಡೆ ೭೬ ಎಂದಿದೆ, ೮೨ ಎಂಬ ಬಹು ಪಂಡಿತರ ಅಭಿಪ್ರಾಯವನ್ನು ಕಾರ್ನಾಡರು ಬಳಸಿದ್ದಾರೆ.
---


ಉಪಸಂಹಾರ
---
ಇದೇ ವಸ್ತುವನ್ನು ಕಾರ್ನಾಡರ ಮನೋಧರ್ಮಕ್ಕೆ ವಿರುದ್ಧವಾದ ಧೋರಣೆ ಇರುವವರು ಬರೆದಿದ್ದರೆ ಪಾತ್ರಗಳಿಂದ ಬರುವ ಮಾತು ವ್ಯತ್ಯಾಸವಾಗುತ್ತಿತ್ತು. ಆದರೆ ವಿಜಯನಗರ ಪತನವಾಗಿದ್ದನ್ನು- ಸುಲ್ತಾನರು ಒಟ್ಟಾಗಿ ಎರಗಿದ್ದನು ಯಾವುದೇ ಪಂಥದವರು ಅಲ್ಲಗೆಳೆಯಲು ಸಾಧ್ಯವಿಲ್ಲ ಅಲ್ಲವೇ!? ಒಂದು ರೂಪಕವಾಗಿ ನಾಟಕ ದಷ್ಟಪುಷ್ಟವಾಗಿದೆ, ಅಲ್ಲೊಂದು ರಸಸಂಚಾರವಿದೆ. ತನಗೇ ಬೇಕಾದ್ದು ಮಾತ್ರ ಆಯ್ದ ವಸ್ತುನಿಷ್ಠತೆ ಇಲ್ಲದ ಜಾಣತನವೂ ಇಲ್ಲಿದೆ. ಈ ಮಾತನ್ನು ಹೇಳುತ್ತೇನೆ ಎಂದು ಕಾರ್ನಾಡರು ಮತ್ತು ಇತರರು ಬೇಸರಿಸಿಕೊಳ್ಳಬಾರದು... ಕಾರ್ನಾಡರ ಕನ್ನಡ ಸುಧಾರಿಸಬೇಕು. ಮರಾಠಿ, ಕೊಂಕಣಿ, ಇಂಗ್ಲೀಷು, ಹಿಂದಿ ಆಗಾಗ ಸಂಸ್ಕೃತದ ಜಾಗ್ರತೆ ಎಲ್ಲವನ್ನೂ ವೈಯಕ್ತಿಕವಾಗಿ ಮೈಮೇಲಿ ಹೇರಿಕೊಂಡ ಪರಿಣಾಮವಾಗಿ ಅವರ ಕನ್ನಡ; ಸಾಹಿತ್ಯ ರಚನೆಯಲ್ಲಿ ಹೇಗೇಗೋ ವರ್ತಿಸುತ್ತದೆ. ನಾನು ಒಣ ಮಾತುಗಾರನಲ್ಲ, ಸೃಷ್ಟಿಶೀಲ ಸಾಹಿತ್ಯ ರಚನೆಯ ಕಸುವು ನನ್ನಲ್ಲಿ ಇನ್ನೂ ಇದೆ ಎಂದು ಈ ನಾಟಕದ ಮೂಲಕ ಎಂಭತ್ತರ ಹರೆಯದ ಕಾರ್ನಾಡರು ಸಾಹಿತ್ಯ ವಲಯದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೆ ಎಲ್ಲಾ ರೀತಿಯ ಪ್ರತಿಕ್ರಿಯೆ ನೀಡುವವರು ಕೂಡ ಗಾಳಿಯಲ್ಲಿ ಎಂಜಲು ಉಗುಳದೆ, ಬೌದ್ಧಿಕವಾಗಿ ಪ್ರತಿಕ್ರಿಯಿಸಲಿ ಖಂಡಿಸಲಿ, ಹೊಗಳಲಿ ಎನ್ನಬೇಕಾಗುತ್ತದೆ. ಇಲ್ಲವಾದರೆ ಪ್ರತಿಕ್ರಿಯೆಯ ಮಾತು ಮತ್ತು ವ್ಯಕ್ತಿ ಎರಡೂ "ಚಿಲ್ಲರೆ"ಯಾಗುತ್ತದೆ. ಈ ಐದು ಜನ ಸುಲ್ತಾನರು ತಮ್ಮ ಭೇದ ಮರೆತು ಒಂದಾಗಿ-ಅತಿಯಾದ ವಿಶ್ವಾಸ ಹೊಂದಿರುವ ಒಬ್ಬ ಸಾಮ್ರಾಜ್ಯಾಧಿಪತಿಯನ್ನು ಹೊಸಕಿ ಹಾಕುವ ನಿರೂಪಣೆ ಸಮಕಾಲೀನ ವಿದ್ಯಮಾನಕ್ಕೆ ಹೊಂದುವಂತೆ ಅವರು ರಚಿಸಿದ್ದಾರೋ ಅಥವಾ ಕಾಕತಾಳೀಯವೋ ಆ ವಿರೂಪಾಕ್ಷನೇ ಬಲ್ಲ.

ವಿಡಿಯೋ ಕೃಪೆ: thestate.news

29 Jul 2018

The man who fought for the progressive state...

As I was watching the news channel a breaking news just flashed into the tv screen.  M Karunanidhi is hospitalized! Well, It's not a shocking news to many of the people who know about his health and way he is being wheelchaired from few years. but its definitely a heartbreaking news to many of his followers in Tamilnadu.
Mr. M Karunanidhi, popularly known as Kalaignar in the southern state of India, Tamilnadu. He is also one of the longest-serving MLA in India. He has served as MLA for 61 long years that's definitely a record indeed.
Karunanidhi was born in a small village in what is now eastern Tamil Nadu and was the member of a caste of musicians. He left school early and began working as a screenwriter in the Tamil film industry. There he honed skills for promoting the Dravidian movement against Brahmans (the highest caste in the Hindu social order) that later contributed to his rise as a popular politician.

Karunanidhi began his career as a screenwriter in the Tamil film industry.Through his wit and oratorical skills he rapidly rose as a popular politician. He was famous for writing historical and social (reformist) stories which propagated the socialist and rationalist ideals of the Dravidian movementto which he belonged. He first began using Tamil cinema to propagate his political ideas through the movie Parasakthi.Parasakthiwas a turning point in Tamil cinema, as it espoused the ideologies of the Dravidian movement and also introduced two prominent actors of Tamil filmdom, Sivaji Ganesan and S. S. Rajendran. The movie was initially banned but was eventually released in 1952. It was a huge box office hit, but its release was marred with controversies. The movie was opposed by orthodox Hindus since it contained elements that criticized Brahmanism.Two other movies written by Karunanidhi that contained such messages were Panam and Thangarathnam.These movies contained themes such as widow remarriage, abolition of untouchability, self-respect marriages, abolition of zamindari and abolition of religious hypocrisy.As his movies and plays with strong social messages became popular, they suffered from increased censorship; two of his plays in the 1950s were banned.
Karunanidhi rose to fame as a scriptwriter for the Modern Theatres Studio in Salem about 350 kilometers from Madras or present day Chennai. T R Sundaram, the owner of Modern Theatres Studio at Yercaud foot hills, was instrumental in honouring the talents of Karunanidhi, Jayalalithaa and M G Ramachandran.
Karunanidhi became involved in politics in his early teens, beginning with public protests against the use of the Hindi language in the region. He formed organizations for the local youth and students and started a newspaper that eventually became the Murasoli, the DMK’s official newspaper. He became a close associate of DMK founder C.N. Annadurai and first received broader notice in Tamil politics when he led a 1953 protest in a town where its Tamil name had been replaced with one honoring an industrialist from northern India with a Hindi name.
Karunanidhi in his early life.
Karunanidhi, running as an independent candidate, was first elected to the legislative assembly of Madras state (the name for Tamil Nadu until 1968) in 1957. Beginning with the 1962 assembly polls (which included the DMK), he was continually reelected to that body.

  He became the party’s treasurer in 1961 and deputy leader of the opposition when the party entered the state assembly the following year. After the DMK won the 1967 assembly elections (with Karunanidhi soundly defeating his Indian National Congress [Congress Party] opponent), the party formed the government, and Annadurai became chief minister. Karunanidhi was named the minister for public works. Annadurai died in early 1969, and Karunanidhi succeeded him as the head of DMK and as chief minister. His first tenure lasted only until January 1971, but another DMK victory in assembly elections later that year returned him to the chief minister’s office.
In 1972, however, a new party, the All India Dravidian Progressive Federation (All India Dravida Munnetra Kazhagam, AIADMK), split from the DMK. Thereafter, the two parties became bitter rivals and traded terms heading the state government. 
In 2006, at the age of 82, Karunanidhi became chief minister of Tamil Nadu for the fifth time, after a DMK-Congress alliance had secured a majority of seats in assembly elections. The party had won on the promise that it would provide cheap rice to the citizenry and a free television for every household in the state. By 2011, however, such incentives were not enough to overcome allegations of corruption, and the party was thoroughly trounced by the AIADMK in assembly elections. Although Karunanidhi easily retained his seat, only 22 other DMK candidates could win in the polling. He was by then in poor health, but he remained the DMK’s supreme leader and continued to command immense popularity in Tamil Nadu politics.
At this moment let's wish a man of revolution a speedy recovery.
Karunanidhi... The kalaingar of Tamilnadu

29 Jun 2018

ಕಾಲ-ಚಕ್ರ


            'ಚೋಳ ರಾಜರ ಇತಿಹಾಸ ವನ್ನು ಓದುವಾಗ, ಅವರ ವಾಸ್ತುಶಿಲ್ಪ, ದೇವಾಲಯದ ಶೈಲಿ ಎಲ್ಲವೂ ನನಗೆ ಮಂತ್ರ-ಮುಗ್ಧಗೊಳಿಸಿತ್ತು. ಚೋಳರ ಮಹಾದೇವಾಲಯದಲ್ಲಿ(Greatest living Cholas temple) ಉಳಿದೆಲ್ಲದಕ್ಕಿಂತಲೂ ನನ್ನನ್ನೂ ಸಾಕಷ್ಟು ಆಕರ್ಷಿಸಿದ್ದು ದಾರಾಸುರಂನ ಐರಾವತೇಶ್ವರ ದೇವಾಲಯ. ತಂಜಾವೂರಿನ ಬೃಹದೇಶ್ವರ ದೇವಾಲಯ ಮತ್ತು ಗಂಗೈಕೊಂಡ ಚೋಳಪೂರಂನ ಗಂಗೈಕೊಂಡ ಚೋಳ ದೇವಾಲಯಗಿಂತಲೂ ಐರಾವತೇಶ್ವರ ದೇವಾಲಯ ಚಿಕ್ಕದಾಗಿದ್ದರೂ ಅದರ ವಾಸ್ತುಶಿಲ್ಪ, ಶಿಲ್ಪಕಲೆಗಳು ಅಚ್ಚರಿ ಮೂಡಿಸದೆ ಇರಲಾರದು. ಅದು ಚೋಳರ ವೈಭವ! ಸಾಂಸ್ಕೃತಿಕವಾಗಿ ಹಾಗೂ ಐತಿಹಾಸಿಕವಾಗಿ ದಾರಾಸುರಂನ ಈ ಐರಾವತೇಶ್ವರ ದೇವಾಲಯ ವಿಶಿಷ್ಟವಾಗಿ ನಿಲ್ಲುತ್ತದೆ. ಅದಕ್ಕಾಗಿಯೇ ಇದನ್ನು UNESCO ವಿಶ್ವಪರಂಪರಿಕ ಪಟ್ಟಿಗೆ ಸೇರಿಸಿದ್ದು. ನಾನು ನಾಳೆ ಈ ದೇವಾಲಯಕ್ಕೆ ಭೇಟಿ ನೀಡಲು ಉತ್ಸುಕಳಾಗಿದ್ದೇನೆ!'
          ಈ ರೀತಿ ಅಂದು ರಾತ್ರಿ ಬೆಂಗಳೂರಿನ ವಿಶ್ವವಿದ್ಯಾಲಯದ ಎಂ.. ಪ್ರಾಚ್ಯ ಶಾಸ್ತ್ರ ಮತ್ತು ಇತಿಹಾಸ ವಿದ್ಯಾರ್ಥಿನಿ ಯಾದ ಸ್ಫೂರ್ತಿ ತನ್ನ ಡೈರಿಯಲ್ಲಿ ಬರೆದು, ತಾನು ಪ್ರಯಾಣಿಸುತ್ತಿದ್ದ ಸ್ಲಿಪರ್ಕ್ಲಾಸ್ನ ಬಸ್ಸಿನ ಕಿಟಕಿಯಿಂದ ಹೊರ ನೋಡುತ್ತ, ಆ ದೇವಾಲಯದ ಬಗ್ಗೆಯೇ ಯೋಚಿಸುತ್ತಾ ಮಲಗುತ್ತಾಳೆ. ಹೊರಗೆ ಒಂದೇ ಸಮ ಜೋರು ಮಳೆ. ತಾನು ನಾಳೆ ತನ್ನ ಗೆಳತಿಯ ಮದುವೆಯ ಸಲುವಾಗಿ ಕುಂಬಕೊಣಂಗೆ ಹೋಗುತ್ತಿದ್ದೇನೆ ಎಂಬುದನ್ನೇ ಮರೆತು ಅದೇ ಐರಾವತೇಶ್ವರ ದೇವಾಲಯವನ್ನು ತನ್ನ ಮನಸ್ಸಿನಲ್ಲಿ ತುಂಬಿಕೊಳ್ಳುತ್ತಾಳೆ.
          ಐರಾವತೇಶ್ವರ ದೇವಾಲಯ ಕ್ರೀ.1150 ರಂದು ಚೋಳರ ದೊರೆ, ಇಮ್ಮಡಿ ರಾಜ ರಾಜ ಚೋಳ ತನ್ನ ರಾಜ್ಯದಲ್ಲಿ ನಿರ್ಮಾಣ ಮಾಡುತ್ತಾನೆ. ತನ್ನ ಹೆಸರಲ್ಲೆ ಇದ್ದ ರಾಜರಾಜೇಶ್ವರ ದೇಗುಲ ಕಾಲ ಕಳೆದಂತೆ ಐರಾವತೇಶ್ವರ ದೇವಾಲಯವಾಗಿ ವಿಜೃಂಭೀಸುತ್ತದೆ. ತನ್ನ ತಂದೆ ಕಟ್ಟಿದ ಬೃಹದೇಶ್ವರ ದೇವಾಲಯಗಿಂತಲೂ ಇದರಲ್ಲಿ ಶಿಲ್ಪಕಲೆಗಳು ಹೆಚ್ಚು ಇರಬೇಕು ಎಂದು ಭಾವಿಸಿ. ನಿತ್ಯ-ವಿನೋದ(ETERNAL ENTERTAINMENT) ಕಲ್ಪನೆಯಲ್ಲಿ ಈ ದೇವಾಲಯವನ್ನು ಅಭೂತಪೂರ್ವವಾಗಿ ಸುಮಾರು ಮೂವತ್ತು ವರ್ಷಗಳ ಕಾಲ ನಿರ್ಮಾಣ ಮಾಡುತ್ತಾನೆ ರಾಜ ರಾಜ ಚೋಳ. ದ್ರಾವಿಡ ಶೈಲಿಯ ಈ ದೇವಾಲಯದ ಗರ್ಭಗುಡಿಯು ರಥದ ಮಾದರಿಲ್ಲಿದ್ದು ಇದನ್ನು ಎರಡು ಅಶ್ವಗಳು ಎಳೆಯುತ್ತಿದ್ದಂತೆ ಭಾಸವಾಗುತ್ತದೆ. ಇಲ್ಲಿನ ಮೂಲ ದೇವರು ಶಿವ ಐರಾವತೇಶ್ವರನ ರೂಪದಲ್ಲಿ ಪೂಜಿ ಯನ್ನು ಪಡೆಯುತ್ತ ಶೈವ ತತ್ವವನ್ನು ಪ್ರತಿಬಿಂಬಿಸುತ್ತದೆ. ಇದರ ವಾಸ್ತುಶೈಲಿಯೇ ವಿಶಿಷ್ಟ. ಸಾಕಷ್ಟು ವಿಗ್ರಹಗಳೊಂದಿರುವ ಈ ದೇವಾಲಯ ಗಂಗಾ, ಕಾವೇರಿ, ಯಮುನೆ ಜಲದೇವರುಗಳ ವಿಗ್ರಹಗಳನ್ನು ಕೂಡ ಹೊಂದಿದೆ. ರಾಜ ರಾಜ ಚೋಳನ ಆಸ್ಥಾನದಲ್ಲಿದ್ದ 108 ಒತುವರರ(ಹಾಡುಗಾರರ) ವಿಗ್ರಹಗಳು ಕೂಡ ಒಂದಿದೆ. ಇಲ್ಲಿನ ಬಲಿಪೀಠದ ವಿಶೇಷವೆಂದರೆ ಬಲಿಪೀಠದ ಏಳು ಮೆಟ್ಟಿಲುಗಳನ್ನು ಬಡಿದರೆ ಏಳು ಸ್ವರವನ್ನು ಹೊರಹೊಮ್ಮಿಸುತ್ತದೆ!
          ಅದರೆ ನನಗೆ ಇದಾವುದು ಬೇಡ "ಭಾರತದ ಪ್ರತಿ ಪುರಾತನ ಕೆತ್ತನೆಯಲ್ಲಿ ಒಂದಲ್ಲ ಒಂದು ರೀತಿಯ ನಿಗೂಢರ್ಥವಿರುತ್ತದೆ." ಎಂದು ತನ್ನ ಪ್ರೊಫೆಸರ್‌‌ ರಗತಿಯಲ್ಲಿ ಹೇಳುತ್ತಿದ್ದ ಮಾತು ನೆನಪಾಗಿ ಸ್ಫೂರ್ತಿ, ಆ ದೇವಾಲಯದ ಬಗ್ಗೆ ಮತ್ತಷ್ಟು ತಿಳಿಯಲು ಹೊರಡುತ್ತಾಳೆ. ಪ್ರತಿ ಕೆತ್ತನೆಯನ್ನು, ಶಿಲ್ಪವನ್ನು ಸೂಕ್ಷ್ಮವಾಗಿ ಗಮಿಸುತ್ತಿರುವಾಗ: ಹಿಂಬದಿಯಿಂದ ಯಾರೋ ತನ್ನನ್ನು ಮುಟ್ಟಿದ ಹಾಗೆ ಆಗಿ ಹಿಂದೆ ತಿರುಗಿ ನೋಡಿದಾಗ ಯಾರೋ ತುಂಬಾ ವಯಸ್ಸಾದ ವೈಕ್ತಿ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದನ್ನು ಗಮನಿಸುತ್ತಾಳೆ. ಆ ವೈಕ್ತಿಯ ಮುಖದ ಕಾಂತಿಗೊ ಅಥವಾ ಇದ್ದಕಿದ್ದಹಾಗೆ ಯಾರೋ ನನ್ನನ್ನು ಮುಟ್ಟಿದರು ಎಂಬ ಕೋಪಕ್ಕೊ ಆಕೆಯಿಂದ ಮಾತು ಹೊರಬರಲಿಲ್ಲ!
          "ಯಾರಮ್ಮಾ ನೀನು, ತುಂಬಾ ಹೊತ್ತಿನಿಂದ ದೇವಾಲಯವನ್ನು ಇಷ್ಟು ಸುತ್ತಿ ಪರಿಶೀಲಿಸುತ್ತಿದ್ದಿಯಾ?" ಎಂದು ಮೊದಲು ಅ ವ್ಯಕ್ತಿಯೇ ಅವಳನ್ನು ಕೇಳಿದರು.
          "ನಾನು ಪ್ರಾಚ್ಯ ಶಾಸ್ತ್ರ ಮತ್ತು ಇತಿಹಾಸದ ವಿದ್ಯಾರ್ಥಿನಿ, ಚೋಳರ ಈ ಅದ್ಭುತ ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯಲು ಪರಿಶೀಲಿಸುತ್ತಿದ್ದೆ" ಎಂದಾಗ ಆ ವ್ಯಕ್ತಿ. "ಅಲ್ಲೇ ಹಾಕಿದಾರಲ್ಲಮ್ಮ ದೇವಾಲಯದ ಮಾಹಿತಿ ಫಲಕದಲ್ಲಿ, ನೀನು ಕೂಡ ಓದಿದೆಯಲ್ಲಾ" ಎಂದು ಹೇಳುತ್ತಾರೆ. ಆಗ ಸ್ಫೂರ್ತಿ "ಇಲ್ಲ ಅದೇಕೊ ನನಗೆ ಅಲ್ಲಿ ಸಂಪೂರ್ಣ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಇಲ್ಲಿನ ಗರ್ಭಗುಡಿಯ ಶೈಲಿ, ಅನೇಕ ವಿಗ್ರಹಗಳು, ಕುದುರೆ, ಐರಾವತ, ರಥ ಏನೋ ನಿಗೂಢ ಅರ್ಥವನ್ನು ಸೂಚಿಸುತ್ತದೆ! ಅದು ನನಗೆ ಬೇಕಾದ ನಿಜವಾದ ಮಾಹಿತಿ" ಎಂದಾಗ ಆಕೆ ಮತ್ತೆ ತನ್ನ ಪ್ರೊಫೆಸರ್ ಅವಳಿಗೆ ಹೇಳಿದ ಮಾತನ್ನು ಆತನಿಗೆ ಹೇಳುತ್ತಾಳೆ. "ಭಾರತದ ಪ್ರತಿ ಪುರಾತನ ಕೆತ್ತನೆಯಲ್ಲಿ ಒಂದಲ್ಲ ಒಂದು ರೀತಿಯ ನಿಗೂಢರ್ಥವಿರುತ್ತದೆ!!"
          ಆಕೆಯ ಮಾತನ್ನು ಕೇಳಿದ ಆ ವ್ಯಕ್ತಿ ಸ್ವಲ್ಪ ಮಟ್ಟಿಗೆ ಸಂತೋಷಗೊಂಡು "ಬಾರಮ್ಮಾ ನಾನು ನಿನಗೆ ಈ ದೇವಾಲಯದ ವಿಶಿಷ್ಟ ವಾಸ್ತುಶಿಲ್ಪದ ಇತಿಹಾಸವನ್ನು ಹೇಳುತ್ತೇನೆ" ಎಂದು ನುಡಿದು ದೇವಾಲಯದ ಮತ್ತೊಂದು ದಿಕ್ಕಿಗೆ ಆತ ಕರೆದುಕೊಂಡು ಹೋಗುತ್ತಾರೆ. ಗೊಂದಲದಿಂದಲೇ ಆಕೆ ಅವರನ್ನು ಹಿಂಬಾಲಿಸುತ್ತಾಳೆ. ಆ ವ್ಯಕ್ತಿ ದೇವಾಲಯದ ಮುಂಭಾಗದ ಸ್ವಲ್ಪ ಬದಿಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಓಂದು ವಿಗ್ರಹವನ್ನು ತೋರಿಸುತ್ತಾರೆ. ಪುರಾತನ ಶಾಸ್ತ್ರ ದ ವಿದ್ಯಾರ್ಥಿನಿ ಯಾದ ಕಾರಣ ಆಕೆಗೆ ಆ ವಿಗ್ರಹವನ್ನು ನೋಡಿದ ಕೂಡಲೇ ಅದು ಸೂರ್ಯ ದೇವರ ವಿಗ್ರಹವೆಂದು ಆಕೆಗೆ ತಿಳಿಯುತ್ತದೆ.(ಭಾರತದ ಅಷ್ಟು ಸೂರ್ಯನ ಪುರಾತನ ವಿಗ್ರಹದಲ್ಲಿ, ಸೂರ್ಯ ತನ್ನ ಎರಡು ಕೈಗಳಲ್ಲೂ ಕಮಲವನ್ನು ಹಿಡಿದುಕೊಂಡಿರುತ್ತಾನೆ.)
          ಕೂಡಲೇ ಆ ವ್ಯಕ್ತಿ ಅವಳನ್ನು ಪುನಃ ದೇವಾಲಯದ ಮತ್ತೊಂದು ಭಾಗಕ್ಕೆ ಕರೆದುಕೊಂಡು ಹೋಗಿ ಮತ್ತೊಂದು ಕೆತ್ತನೆಯನ್ನು ತೋರಿಸುತ್ತಾರೆ.ಅದು ಕೂಡ ಸೂರ್ಯನ ವಿಗ್ರಹವೇ ಆಗಿರುತ್ತದೆ. ದೇವಾಲಯದ ಎರಡು ಬದಿಯಲ್ಲೂ ಸೂರ್ಯನ ವಿಗ್ರಹವನ್ನು ಕೆತ್ತಿರಬಹುದೆಂದು ಆಕೆ ಭಾವಿಸುತ್ತಾಳೆ!
          ಅ ವಿಗ್ರಹವನ್ನೆ ತೋರಿಸುತ್ತ ಅ ವ್ಯಕ್ತಿ ಅಲ್ಲಿ ನೋಡಿದ ವಿಗ್ರಹಕ್ಕೂ ಮತ್ತು ಇದಕ್ಕೂ ಏನು ವ್ಯತ್ಯಾಸವಿದೆ ಎಂದು ಕೇಳಿದಾಗ ಆಕೆ ಮತ್ತಷ್ಟು ಗೊಂದಲಕ್ಕೆ ಇಡಾಗುತ್ತಾಳೆ. "ಎರಡು ಸೂರ್ಯನ ವಿಗ್ರಹಗಳೇ ಅದರಲ್ಲಿ ವ್ಯತ್ಯಾಸವೆಲ್ಲಿಂದ ಬಂತು" ಎಂದು ಆಕೆ ಹೇಳಿದಾಗ ಆತ ವಿಗ್ರಹವನ್ನು ಸೂಕ್ಷ್ಮವಾಗಿ ತೋರಿಸಿ ಅದರಲ್ಲಿರುವ ವ್ಯತ್ಯಾಸವನ್ನು ತಿಳಿಸುತ್ತಾರೆ.
          'ಒಂದು ಬದಿಯ ಸೂರ್ಯನ ಕೈಯಲ್ಲಿರುವ ಕಮಲಗಳು ಅರಳಿದ್ದರೆ ಮತ್ತೊಂದು ಬದಿಯ ಸೂರ್ಯನ ಕೈಯಲ್ಲಿರುವ ಕಮಲಗಳು ಅರಳಿರುವುದಿಲ್ಲದಂತೆ ಕೆತ್ತನೆ ಮಾಡಲಾಗಿದೆ. ಇದರ ಅರ್ಥ ಒಂದು ವಿಗ್ರಹ ಬೆಳಗಿನ ಸೂರ್ಯನನ್ನು ಸೂಚಿಸಿದರೆ ಮತ್ತೊಂದು ವಿಗ್ರಹ ಸಂಜೆಯ ಸೂರ್ಯನ ವಿಗ್ರಹವನ್ನು ಸಂಕೇತಿಸುತ್ತದೆ. ಅಂದರೆ ಕಮಲದ ಹೂಗಳು ಬೆಳಗ್ಗಿನ ಸೂರ್ಯ ಕಿರಣಗಳಿಗೆ ಅರಳಿದರೆ ಸಂಜೆಯಾಗುತ್ತಿದ್ದಂತೆ ತನ್ನ ದಳಗಳನ್ನೆಲ್ಲ ಮುದುಡಿಕೊಳ್ಳತ್ತದೆ. ಇದಕ್ಕೆ ಮತ್ತಷ್ಟು ಪುರಾವೆಗಳು ಇದೆ ವಿಗ್ರಹಗಳ ಮುಂದೆ ದೊರೆಯುತ್ತದೆ.'
          ರಥದ ಮಾದರಿಯಲ್ಲಿರುವ ಗರ್ಭಗುಡಿಯನ್ನು ಏಳೆಯುತ್ತಿರುವ ಆಶ್ವದ ಬದಿಗೆ ಸಣ್ಣದಾಗಿ ಕೆತ್ತಿರುವ ವ್ಯಕ್ತಿಯೊಬ್ಬನ ವಿಗ್ರಹ. ಬೆಳಗಿನ ಸೂರ್ಯನ ವಿಗ್ರಹದ ಮುಂದೆ ಇರುವ ಆ ವ್ಯಕ್ತಿಯ ಕೆತ್ತನೆಯಲ್ಲಿ: ಅವನ ಮುಖವು ಸಂತೋಷದಿಂದ ಕೂಡಿದ್ದು, ಆತನ ತಲೆಗೂದಲು ಅಚ್ಚುಕಟ್ಟಾಗಿ ಬಾಚಿ ಅಶ್ವ ವನ್ನು ಸವಾರಿಮಾಡಲು ಸಿದ್ದನಾಗಿದ್ದನೆ ಎಂದು ಭಾಸವಾಗುತ್ತದೆ. ಸಂಜೆಯ ಸೂರ್ಯನ ವಿಗ್ರಹದ ಮುಂದೆ ಇರುವ ಅದೇ ವ್ಯಕ್ತಿಯ ಕೆತ್ತನೆಯಲ್ಲಿ: ಅವನ ಮುಖಭಾವ ಆಯಸದಿಂದ ಕೂಡಿರುವುದನ್ನು ಗಮನಿಸಬಹುದು ಅಲ್ಲದೇ, ಆತನ ತಲೆಗೂದಲು ಬೆಳಗಿನ ರೀತಿ ಅಚ್ಚುಕಟ್ಟಾಗಿ ಇರುವುದಿಲ್ಲ ಮತ್ತು ತನ್ನ ಕುದುರೆಗೆ ಇಮ್ಮುಖವಾಗಿ ನಡೆಯಲು ಪ್ರಾರಂಭಿಸಿದ್ದಾನೆ. ಅಂದರೆ ಇದರರ್ಥ ಆತನ ದಿನಚರಿ ಮುಗಿದಿದೆ ಎಂದರ್ಥ' ಎಂದು ವಿವರಿಸುತ್ತಿರುವಾಗ.
          "ಬೆಳಗ್ಗೆ, ಸಂಜೆಯ ಸೂರ್ಯನ ವಿಗ್ರಹಕ್ಕೂ. ಈ ರಥದ ಮಾದರಿಯ ಗರ್ಭಗುಡಿಗೂ, ದೇವಾಲಯಕ್ಕೂ ಏನು ಸಂಬಂಧ? ಇದರ ಅರ್ಥವೇನು?" ಎಂದು ಸ್ಫೂರ್ತಿ ಮತ್ತಷ್ಟು ಕುತೂಹಲದಿಂದ ಮತ್ತು ಗೊಂದಲದಿಂದ ಕೇಳುತ್ತಾಳೆ. "ವಿವರಿಸುತ್ತೇನೆ ಕೇಳಮ್ಮಾ" ಎಂದು ಮುಂದುವರಿಸುತ್ತಾರೆ.
          'ಈ ವಿಗ್ರಹಗಳೆಲ್ಲ ಕೇವಲ ಸಂಕೇತಿಕಾವಾಗಿ ಕೆತ್ತನೆ ಮಾಡಿದ್ದಲ್ಲ, ಇದನ್ನು ಮಡಿದಕ್ಕೂ ಕೆಲವು ಕಾರಣಗಳಿವೆ ಎಂದು ಆತ ಗರ್ಭಗುಡಿಯಯನ್ನು ಏಳೆಯುತ್ತಿರುವ ರಥದ ಚಕ್ರವನ್ನು ತೋರಿಸುತ್ತಾ ಇದು ಏನೆಂಬುದನ್ನು ಕೇಳುತ್ತಾರೆ?' "ಅದರಲ್ಲೆನಿದೆ, ಅದು ರಥದ ಚಕ್ರವಲ್ಲವೇ?" ಎಂದು ಹೇಳಿದಾಗ ಆತ 'ಇದು ಕೇವಲ ರಥದ ಚಕ್ರವಲ್ಲ. ಇದು ಛಾಯ ಗಡಿಯಾರ ಅಥವಾ ಸೂರ್ಯನ ನೆರಳಿನ ಗಡಿಯಾರ!! ಅಂದರೆ ಸನ್-ಡಯಲ್(SUN-DIAL) (ಯಾಂತ್ರಿಕ ಗಡಿಯಾರದ ಅವಿಷ್ಕಾರಕ್ಕೂ ಮೊದಲು ದಿನದ ಸಮಯವನ್ನು ತಿಳಿಯಲು ಉಪಯೋಗಿಸುತ್ತಿದ್ದ ಸಾಧನ ಸನ್-ಡಯಲ್ ಅಥವಾ ಛಾಯ ಗಡಿಯಾರ)
          ಇದನ್ನು ಕೇಳುತ್ತಲೆ ಅಚ್ಚರಿಗೊಂಡ ಸ್ಫೂರ್ತಿ "ಏನು? ಇದು ಸನ್-ಡಯಲಾ! ಭಾರತದ ಪುರಾತನ ಛಾಯಗಡಿಯಾರವೆಂದರೆ ಅದು ಕೊನರ್ಕ್ನ ಸೂರ್ಯ ದೇವಾಲಯದಲ್ಲಿರುವ ಛಾಯಗಡಿಯಾರವಲ್ಲವೇ? ಅದನ್ನು ನಿರ್ಮಿಸಿದ್ದು ಕ್ರೀ.1250ರಲ್ಲಿ. ಇದು ಛಾಯ ಗಡಿಯಾರವಾದರೆ ಅದಕ್ಕಿಂತಲೂ ಪ್ಚಾಚಿನವಾದದ್ದು ಅಂದರೆ ಇದನ್ನು ನಿರ್ಮಿಸಿದ್ದು ಕ್ರಿ.1150 ರಲ್ಲಿ ಕೊನರ್ಕ್ನ ಸೂರ್ಯ ದೇವಾಲಯದಲ್ಲಿರುವ ಛಾಯಗಡಿಯಾರ ನಿರ್ಮಾಣಕ್ಕೂ ನೂರು ವರ್ಷದ ಮುಂಚೆಯೇ! ಏಕೆ ಇದು ಇತಿಹಾಸಕಾರರ ಗಮನಕ್ಕೆ ಬರಲಿಲ್ಲ! ಇದನ್ನು ಕಟ್ಟಿಸಿದ್ದ ರಾಜರಾಜ ಚೋಳ ಅದೆಷ್ಟು ನೊಂದು ಕೊಂಡಿರುತ್ತಾನೋ?" ಎಂದು ಅಶ್ಚರ್ಯದ ಜೊತೆಗೆ ದುಃಖವನ್ನು ವ್ಯಕ್ತಪಡಿಸುತ್ತಾಳೆ.
          "ಅದಕ್ಕೆನಮ್ಮಾ ನಾನು ನಿನಗೆ ಇತಿಹಾಸ ಕಾಲ ಗರ್ಭದಲ್ಲಿ ಅಡಗಿರುವ ರಹಸ್ಯವನ್ನು ತಿಳಿಸುತ್ತಿರುವುದು. ಹೌದು! ಇದು ಭಾರತದ ಪುರಾತನ ಛಾಯ ಗಡಿಯಾರ. ನೀನು ಕೇಳುತ್ತಿದ್ದೆಯಲ್ಲಾ ಬೆಳಗಿನ ಸೂರ್ಯ ಮತ್ತು ಸಂಜೆಯ ಸೂರ್ಯನ ವಿಗ್ರಹದ ಕೆತ್ತನೆಗೆ ಕಾರಣವೇನು ಎಂದು. ಇದಕ್ಕೆ ಇದೇ ನೋಡಮ್ಮ ಉತ್ತರ! ಬೆಳಗಿನ ಸೂರ್ಯನ ಕೆಳಗೆ ಇರುವ ಈ ರಥ ಚಕ್ರ ಅಂದರೆ ಈ ಛಾಯ ಗಡಿಯಾರ ಬೆಳಗ್ಗಿನ ಸಮಯವನ್ನು ಸೂಚಿಸಿದರೆ ಸಂಜೆ ಸೂರ್ಯನ ವಿಗ್ರಹದ ಕೆಳಗೆ ಇರುವ ಛಾಯ ಗಡಿಯಾರ ಸಂಜೆಯ ಸಮಯವನ್ನು ಸೂಚಿಸುತ್ತದೆ: ಸೂರ್ಯನ ನೆರಳು-ಬೆಳಕಿನ ಆಟದಿಂದ. ಇದು ಒಂದು ವಿಶೇಷ ರೀತಿಯಲ್ಲಿ ಕೆತ್ತನೆಮಾಡಿರುವ ಛಾಯ ಗಡಿಯಾರ- ರಥದ ಚಕ್ರವಾಗಿ ಸೂರ್ಯನ ವಿಗ್ರಹದ ಕೆಳಗೆ ಕೆತ್ತಿರುವ ಛಾಯಗಡಿಯಾರ- ಅಂದರೆ ಕಾಲಚಕ್ರ!"
          ಸೂಕ್ಷ್ಮವಾಗಿ ಇದನೆಲ್ಲಾ ಗಮನಿಸಿತ್ತಿದ್ದ ಸ್ಫೂರ್ತಿಗೆ ಒಂದು ರೀತಿಯ ಅಚ್ಚರಿ ಮೂಡಿಸಿತ್ತು. "ನಾನು ನೋಡಿರುವ- ಓದಿರುವ ಛಾಯಗಡಿಯಾರಗಳೆಲ್ಲ ಕೇವಲ ಒಂದೇ ಚಕ್ರದ ರೀತಿಯಲ್ಲಿತ್ತು ಬೌದ್ಧ ಧರ್ಮದ ಕಾಲಚಕ್ರವನ್ನು ಹೊರತುಪಡಿಸಿ. ಇಲ್ಲಿ ಸೂರ್ಯನ ಎರಡು ವಿಗ್ರಹ ಮತ್ತು ಅದರ ಬಳಿ ಇರುವ ಚಕ್ರಗಳು ಕಾಲವನ್ನು ತಿಳಿಸುತ್ತದೆಯಂದಾಯಿತು ಅದರೆ ಏಕೆ ಮತ್ತು ಹೇಗೆ ಎಂಬ ಗೊಂದಲವನ್ನು ಆಕೆ ಆತನ ಬಳಿ ತೋರಿಸಿಕೊಂಡಳು.
          'ಸನ್-ಡಯಲ್ಗಡಿಯಾರದ ನೆರಳಿನ ಚಲನೆ ಹೇಗಿರುತ್ತದೆಂದು ಸೂಕ್ಷ್ಮವಾಗಿ ಗಮನಿಸು ಮಗಳೇ, ಬೆಳಗ್ಗೆ ಸೂರ್ಯ ಪೂರ್ವದಲ್ಲಿದ್ದಾಗ ಕೋಲಿನ ನೆರಳು ಪಶ್ಚಿಮದಲ್ಲಿರುತ್ತದೆ. ಹೊತ್ತು ಏರಿದಂತೆಲ್ಲ, ಅಂದರೆ ಮಧ್ಯಾಹ್ನವಾದಾಗ ಸೂರ್ಯ ನೆತ್ತಿಯ ಮೇಲಿದ್ದಾನೆ ಅಂತನಿಸಿದರೂ ವಾಸ್ತವವಾಗಿ ದಕ್ಷಿಣ ದಿಕ್ಕಿನ ಕಡೆಗಿರುತ್ತಾನೆ. ಹಾಗಾಗಿ ಕೋಲಿನ ನೆರಳು ಕಡಿಮೆ ಉದ್ದದ್ದಾದರೂ ಉತ್ತರ ದಿಕ್ಕಿಗೆ ಚಾಚಿದ್ದಿರುತ್ತದೆ. ಸಂಜೆ ಹೊತ್ತು ಸೂರ್ಯ ಪಶ್ವಿಮ ದಿಕ್ಕಿಗೆ ಬಂದಾಗ ಕೋಲಿನ ನೆರಳು ಪೂರ್ವದ ಕಡೆಗಿರುತ್ತದೆ. ಒಟ್ಟಿನಲ್ಲಿ ಮುಂಜಾನೆಯಿಂದ ಸಂಜೆಯವರೆಗಿನ ನೆರಳಿನ ಚಲನೆ ಪಶ್ಚಿಮದಿಂದ ಆರಂಭಗೊಂಡು ಉತ್ತರರದ ಮೂಲಕ ಪೂರ್ವಕ್ಕೆ ಸಾಗಿರುತ್ತದೆ. ಅಂದರೆ, ಅರ್ಧವೃತ್ತವೇ ಹೌದಾದರೂ ಅದು ಪ್ರದಕ್ಷಿಣೆ ರೀತಿಯದೇ. ಮಧ್ಯಪ್ರಾಚೀನ ಯುಗದಲ್ಲಿ ಕಾಲ ಗಣನೆ ಈ ರೀತಿಯ ಸನ್-ಡಯಲ್ಗಡಿಯಾರಗಳಿಂದಲೇ ನಡೆಯುತ್ತಿತ್ತು. ಆದರೆ ಇಲ್ಲಿನ ಛಾಯ ಗಡಿಯಾರ ಅದರಂತಲ್ಲ ಸೂಕ್ಷ್ಮವಾಗಿ ಗಮನಿಸು ಇಲ್ಲಿ ಆ ಚಕ್ರದಲ್ಲಿ ಸುಮಾರು 32ಗೆರೆಗಳಿವೆ ಅಂದರೆ ಪ್ರತಿ ಗೆರೆಗಳ ಅಂತರವು 45 ನಿಮಿಷವನ್ನು ಸೂಚಕವಾಗಿ ತೋರಿಸುತ್ತದೆ ಅಂದರೆ ಸೂರ್ಯ ತಾನು ಬೆಳಗಿನ ದಿಕ್ಕು ಬದಲಿಸಿ ಆ ಬದಿಯ ಚಕ್ರದಿಂದ ಈ ಬದಿಗೆ ಬರುತ್ತದೆ. ಒಂದು ಚಕ್ರದಲ್ಲಿ ಬೆಳಗಿನ ಸಮಯವನ್ನು ತೋರಿದರೆ ಮತ್ತೊಂದೆಡೆ ಸಂಜೆಯ ಸಮಯವನ್ನು ತಿಳಿಸುತ್ತದೆ. ಅದಕ್ಕಾಗಿ ಇಲ್ಲಿ ಬೆಳಗಿನ ಸೂರ್ಯ ವಿಗ್ರಹವು ಮತ್ತು ಸಂಜೆಯ ಸೂರ್ಯ ವಿಗ್ರಹವನ್ನು ಸೂಚಕವಾಗಿ ಕೆತ್ತಿದ್ದಾರೆ. ಇಷ್ಟೆ ಅಲ್ಲದೆ ನಮಗೆ ಮತ್ತಷ್ಟು ಪುರಾವೆಗಳು ಇಲ್ಲಿ ದೊರೆಯುತ್ತದೆಂದು ಆತ ರಥದ ಎರಡು ಬದಿಯ ಕುದುರೆಯ ಅಡಿಯಲ್ಲಿ ರಥದಲ್ಲಿ ಕೆತ್ತಿರುವ ಮತ್ತೆರಡು ವಿಗ್ರಹವನ್ನು ತೋರಿಸುತ್ತಾರೆ.
          ಮೊದಲ ವಿಗ್ರಹವನ್ನು ನೋಡಿದ ಸ್ಫೂರ್ತಿಗೆ ಆ ವಿಗ್ರಹ ಯಾವುದೆಂದು ತಿಳಿಯುತ್ತದೆ. ಅದು ಶಿವನ ಉಗ್ರ ರೂಪವಾದ ಕಾಲಭೈರವ!
          ಅದು ಕಾಲಭೈರವನ ವಿಗ್ರಹ. ಕಾಲಭೈರವನೆಂದರೆ ಸಾರ್ವಕಾಲಿಕ, ತ್ರಿಕಾಲಭಾಧಿತ ಕಾಲ ಸೂಚಕ. ಭೂತ, ಭವಿಷ್ಯ ಮತ್ತ ವರ್ತಮಾನದ ಸೂಚಕವಾಗಿ ಆ ವಿಗ್ರಹವನ್ನು ಒಂದು ಚಕ್ರದ ಬಳಿ ಕೆತ್ತಿದ್ದರೆ ಮತ್ತೊಂದು ಚಕ್ರದ ಬಳಿ ಕೆತ್ತಿದ ವಿಗ್ರಹವನ್ನು ನೋಡಿ ಸ್ಫೂರ್ತಿಗೆ ದಂಗುಬಡಿದಂತಾಯ್ತು!
          ಅದು ಜ್ಞಾನಮುದ್ರೆಯಲ್ಲಿ ಕೂತು, ಆಚಲವಾಗಿ, ಶಾಂತವಾಗಿ ಧ್ಯನಿಸುತ್ತಿದ್ದ ಬುದ್ದನ ವಿಗ್ರಹ! ಶೈವ ದೇಗುಲದಲ್ಲಿ ಬುದ್ದನ ವಿಗ್ರಹ!
          ಕೂತುಹಲ ಮತ್ತು ಗೊಂದಲಗಳನ್ನು ತಡೆಯದೇ ಆಕೆ "ಇಲ್ಲಿ ಬುದ್ದನ ವಿಗ್ರಹವಿರುವುದಕ್ಕೆ ಕಾರಣವೇನು? ದೇಗುಲದ ಯಾವುದೇ ಭಾಗದಲ್ಲೂ ಭೌದ್ಧಧರ್ಮದ ಕೂರಹುಗಳಿಲ್ಲದಿದ್ದರೂ ಇಲ್ಲಿ ಬುಧ್ಧನ ವಿಗ್ರಹ ಏಕೆ ಕೆತ್ತೆದ್ದಾರೆ?" ಎಂದು ಆತನಿಗೆ ಕೇಳುತ್ತಾಳೆ. 'ಬುದ್ದನ ವಿಗ್ರಹ ಕೆತ್ತಿರುವುದಕ್ಕೂ ಇಲ್ಲಿ ಕಾರಣವಿದೆ! ಬೌದ್ದಧರ್ಮದಲ್ಲಿ ಕಾಲಚಕ್ರದ ಬಳಕೆ ಮಹತ್ವದಾಗಿದ್ದೆ ನಮಗೆ ಅದಕ್ಕೆ ಬಹಳಷ್ಟು ಉದಾಹರಣೆಗಳೂ ಕೂಡ ದೊರೆಯುತ್ತದೆ. ಬೌದ್ದಧರ್ಮದ ಪುರಾತನ ಗ್ರಂಥಗಳಲ್ಲಿ ಹೇಳಿರುವಂತೆ ಹಿಂದೆ ಬೌದ್ದರು ಸಮಯವನ್ನು ನೋಡಲು ಇದೆ ಮಾದರಿಯ ಸನ್ಡಯಲ್ ಅಂದರೆ ಎರಡು ಚಕ್ರದ ಕಾಲಚಕ್ರವನ್ನು ಉಪಯೋಗಿಸುತ್ತಿದ್ದರು." ಇದಕ್ಕೆ ಸ್ಫೂರ್ತಿ, ಇಲ್ಲಿರುವ ಛಾಯ ಗಡಿಯಾರವೂ ಬೌದ್ಧದರ್ಮದ ಕಾಲಚಕ್ರದಂತೆ ಕೆತ್ತಲ್ಪಟ್ಟಿದೆಯೇ??" ಎಂದು ಕೇಳುತ್ತಾಳೆ. ಅಷ್ಟರಲ್ಲಿ ಒಂದೇ ಸಮನೆ ಜೋರು ಮಳೆ ಗುಡುಗಿನ ಸಮೇತ ಬಂದ ಕಾರಣ ಅವಳೆ ಅಲ್ಲೆ ಹತ್ತಿರದಲ್ಲಿದ್ದ ಮಂಟಪದಲ್ಲಿ ಆಶ್ರಯ ಪಡೆಯಲು ಓಡುತ್ತಾಳೆ. ಆತ ಬಾರದೇ ಇದ್ದದ್ದನ್ನೂ ನೋಡಿ ' ಸರ್, ನಿಮ್ಮ ಹೆಸರು ಹೇಳಿ, ನಾಳೆ ಭೇಟಿಯಾಗಿ ಮತ್ತಷ್ಟು ಮಾಹಿತಿ ಪಡೆಯುತ್ತೇನೆ ಎಂದಾಗ' ಆ ವ್ಯಕ್ತಿ ಹಿಂದೆ ತಿರುಗಿ ಆಕೆಯನ್ನೇ ದಿಟ್ಟಿಸಿ ನೋಡುತ್ತ "ರಾಜ ರಾಜ ಚೋಳ" ಅಂದು ಹೇಳಿ ಮಳೆಯಲ್ಲಿ ಮರೆಯಾಗುತ್ತಾನೆ!
          "ದಿಗ್ಭ್ರಮೆಗೊಂಡಳು ಸ್ಫೂರ್ತಿ" ಭೀಕರ ಸಿಡಿಲುಬಡೆದಂತೆ ಭಾಸವಾಯ್ತು! ಸ್ಲಿಪರ್ಕೋಚ್ನಲ್ಲಿ ಮಲಗಿದ್ದ ಸ್ಫೂರ್ತಿ ಸಿಡಿಲಿನ ಸದ್ದಿಗೆ ಎಚ್ಚರಗೊಳ್ಳುತ್ತಾಳೆ! ತಾನು ಇದುವರೆಗೂ ಕಂಡದ್ದೂ ಕನಸಾ!! ಎಂದು ಚಿಂತಿಸುತ್ತಲೆ ಬಸ್ಸು ದಾರಾಸುರಂ ಪಟ್ಟಣವನ್ನು ಬಂದು ಸೇರುತ್ತದೆ. ಕೂಡಲೇ ಐರಾವತೇಶ್ವರ ದೇವಾಲಯಕ್ಕೆ ಬಂದ ಆಕೆಗೆ ತಾನು ಕನಸಿನಲ್ಲಿ ಕಂಡ ಅಷ್ಟು ಕೆತ್ತನೆಗಳು ಅದೇ ರೀತಿಯ ವಿವರಗಳನ್ನೊಲುವ ಚಕ್ರಗಳನ್ನು ನೋಡಿ ಆಶ್ಚರ್ಯಗೊಳ್ಳುತ್ತಾಳೆ!
          ಬೆಂಗಳೂರಿಗೆ ಬಂದು ತಾನು ಕನಸಿನಲ್ಲಿ ಕಂಡ ಎಲ್ಲವನ್ನು ಕತೆಯ ರೂಪದಲ್ಲಿ ಬರೆದು ಪತ್ರಿಕೆಗೆ ಕಳುಹಿಸಿತ್ತಾಳೆ. ಕತೆ ಬರೆದ ಅವಳಿಗೆ ಸಾಕಷ್ಟು ಪ್ರಶಂಸೆ ಕೂಡ ದೊರೆಯುತ್ತದೆ! ಆದರೆ ಕನಸಿನಲ್ಲಿ ಬಂದ ವ್ಯಕ್ತಿ ಯಾರು? ನಿಜಾವಾಗಿಂತಯೇ ನನಗೆ ಕನಸು ಬರಲು ಹೇಗೆ ಸಾಧ್ಯ! ಮತ್ತು ಆ ಬುದ್ದನ ವಿಗ್ರಹ? ಅವಳ ಅಷ್ಟು ಪ್ರಶ್ನೆಗಳು ಪ್ರಶ್ನೆಯಾಗೆ ಉಳಿದುಬಿಡುತ್ತದೆ....
                                                                     -ಮಂಜುನಾಥ್. ಆರ್
AIRAVATESHWARA TEMPLE DARASURAM



ರಥದ ಮಾದರಿಯಲ್ಲಿರುವ ದೇವಾಲಯದ ಗರ್ಭಗುಡಿ- ರಥದ ಮೇಲೆ ಸೂರ್ಯ ದೇವನ ಕೆತ್ತನೆ ನೋಡಬಹುದು ನಂತರ ಚಕ್ರ.. ಚಕ್ರದ ಪಕ್ಕದಲ್ಲಿ ಪುಟ್ಟದಾಗಿರುವ ಬುದ್ದನ ವಿಗ್ರಹ


ಚಕ್ರ


ಎರಡು ವಿಗ್ರಹದಲ್ಲಿರುವ ವ್ಯತ್ಯಾಸ








19 Jun 2018

It is ridiculous to describe Gauri as anti-Hindu as it is ridiculous as belittling Buddha, Basavanna, Narayana guru and Ambedkar

The last few days have been strangely painful and numbing. Men, some of them young, have been justifying a cold blooded murder. Reading the headlines quoting the killers , “Gauri was killed for her anti-Hindu ideology,” i have been very disturbed. If media cannot differentiate between Hinduism and Hindutva, how will the common man?
Many people across the country were devastated by Gauri Lankesh’s murder. Many openly gloated at her brutal killing. Others, faceless and anonymous on social media, even celebrated her death. All in the name of ‘Hinduism’. A woman member of BJP Yuva Morcha even posted that a Parashuram, the (name of the) alleged killer of Gauri, should be born in every Indian house. The Sri Ram Sene, which is today claiming that it has nothing to do with the alleged killer, has reportedly sought funds to help his family.
If this article can in any small way change perceptions and garner support for the values that Gauri stood for, i would be satisfied and the memory of Gauri, redeemed. Let me make one thing absolutely clear. Gauri never opposed the religious beliefs of the people. She celebrated the Ganesha festival as she did Bakr Eid and Christmas, with great joy and fervour.
What Gauri did oppose was the manipulation of people’s faith by vested interests. She was also against fundamentalism in all religions. In that sense she followed Ambedkar who said his respect is reserved for such religion which upholds equality and fraternity. As a corollary she opposed the casteism and patriarchy that is the basis of Hindutva. I recollect reading a dozen of Gauri’s articles condemning patriarchal and fundamental dictums and practices within Islam and Christianity too.
Gauri always believed that people’s faith in God and religion is completely different from organised politics based on manipulating people’s religious sentiments. Then the question arises, was Gauri not religious? Yes and no. If religion is defined as looking for God in every human being, she was religious. If being empathetic about the toiling and oppressed is spiritual, she was most spiritual.
If harming human sensibilities and killing in the name of God is religious, no she was not religious. At a philosophical level she did not dwell deep into the questions of existence of God or any supernatural power. There she followed Buddha. She never considered mediation of God or religion necessary to consider fellow humans as brothers and sisters.
For example, in an article written a few months before her murder, she had made it amply clear that she supports the Lingayat religion as perceived by the working class sharanas of 12th century who propounded an egalitarian social order, against the Vedic Brahminical Hindu social order based on caste and gender discrimination. It is ridiculous, therefore, to describe Gauri as anti-Hindu. It is as ridiculous as belittling Buddha, Basavanna, Narayana guru and Ambedkar on the same charges. Gauri also strongly believed that RSS does not represent the true spirit of Indian civilisation or our religious traditions.
Gauri did not have a child of her own, but she was a mother to many, she used to call everyone me nan koosu(my child), and many others like Kanhaiya Kumar and Umar Khalid.  Isn’t it thus a cruel irony that the operation to kill Gauri was named “Amma” even by her killers? How does one contemplate an ideology, or set of beliefs, which demonise human sensibilities, and set in force a chain of events, a plan, to kill one’s amma?

10 May 2018

KANNADA NOVELS AND BOOKS FREE DOWNLOAD| FREE KANNADA NOVEL PDF| KANNADA NOVEL PDF DOWNLOAD


ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳುಓದಿ ಆನಂದಿಸಿ! Kannada Detective Novels

 Bimba Studio – Everyday Kurtis Designed with Intention

If you are looking for kurtis that combine comfort and elegance without compromise, explore the collection at www.bimbastudio.in.

Because style should feel natural.



ರವಿ ಬೆಳಗೆರೆ ಅವರ ಪುಸ್ತಕಗಳು



ರಾಜಾ ಚೆಂಡೂರ್



ಯಂಡಮೂರಿ ವೀರೇಂದ್ರನಾಥ್


If you need any more Kannada eBook, you can mail me at sahitya.spoorthi@gmail.com




BV ಅನಂತರಾಮ್ 

1.    Death Chase
2.    Desert Storm
3.    Final Assault
4.    Final Victory
6.    Journey To Hell
7.    Open Challenge

ಕೌಂಡಿನ್ಯ  

1.    ವ್ಯೂಹ

If you need any more Kannada eBook, you can mail me at sahitya.spoorthi@gmail.com


 

RV ಕಟ್ಟಿಮನಿ

1.    Black Maamba






ಶಿವರಾಮು 







1.    ‘ಪ್ರಹಸನ ಪ್ರಪಿತಾಮಹ’, ‘ಕನ್ನಡಕ್ಕೊಬ್ಬನೇ ಕೈಲಾಸಂ’ ಎನಿಸಿಕೊಂಡ ತ್ಯಾಗರಾಜ ಪರಮಶಿವ ಕೈಲಾಸಂ (1884-1946) ಅವರ ಪರಿಚಯದ ಅಗತ್ಯ ಕನ್ನಡದ ನಾಟಕಪ್ರಿಯರಿಗೆ ಇಲ್ಲವೇ ಇಲ್ಲ.
ನಾಟಕ:

If you need any more Kannada eBook, you can mail me at sahitya.spoorthi@gmail.com

ಪಂಜೆ ಮಂಗೇಶರಾಯರು 

ಮಕ್ಕಳ ಕಥೆಗಳು: ಮಕ್ಕಳ ಕಥೆಗಳು


ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ .
ಕಾವ್ಯ: ಇಂಗ್ಲಿಷ್ ಗೀತಗಳು (ಮೂಲ ಇಂಗ್ಲಿಷ್ ಕವನಗಳ ಜೊತೆಗೆ) 

3. ಕೆರೂರ ವಾಸುದೇವಾಚಾರ್ಯರು

4. ಕೊಡಗಿನ ಗೌರಮ್ಮ 


5. ಕೊರಡ್ಕಲ್ ಶ್ರೀನಿವಾಸರಾವ್ 


6. ಬಿಎಸ್ ಸೀತಾರತ್ನಬಾಯಿ  ಕಾವ್ಯ: ಶ್ರೀಮದ್ಭಗವದ್ಗೀತಾ: 

If you need any more Kannada eBook, you can mail me at sahitya.spoorthi@gmail.com
 FOR MORE KANNADA NOVEL FREE PDF CLICK HERE


close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →