29 Sept 2014

ಹುಣ್ಣಿಮೆಯ ನಿಶಬ್ಧ ಭಾಗ-೨

    (ಮೊದಲ ಭಾಗದಿಂದ-ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆದರು ಹಿಮಾಂಶು ಎಲ್ಲರಿಗೂ ನಿಗೂಢನಾಗಿದ್ದ.... ಹುಣ್ಣಿಮೆಯ ದಿನ ಕಾಲೇಜಿಗೆ ಬಾರದ ಹಿಮಾಂಶುವಿನ ಬಗ್ಗೆ  ಅನುಮಾನ ಮೂಡಿತ್ತು .... ತನಗೆ ತಿಳಿಯದೆ ಹಿಮಾಂಶುವಿನ ಕಡೆ ಶಾಲಿನಿಯ ಮನಸ್ಸು ವಾಲುತ್ತಿತ್ತು )
  ಹುಣ್ಣಿಮೆಯ ನಿಶಬ್ಧ ಮೊದಲ ಭಾಗ ಓದಲು ಇಲ್ಲಿ click ಮಾಡಿ.

 
      ಅವತ್ತು ಕೂಡ ಅಂತಹುದೇ ಒಂದು ಹುಣ್ಣಿಮೆಯ ದಿನ , ಇವತ್ತು ಹಿಮು ಬಂದಿರವಿಲ್ಲವೆಂದು ಶಾಲಿನಿಯ ಕಣ್ಣು ಹುಡುಗರ ಬೆಂಚಿನೆಡೆಗೆ ಹೋಗಿರಲಿಲ್ಲ...ಅವಳ ಪಕ್ಕದಲ್ಲಿದ್ದ ಪ್ರಾಥನ 'ಹಿಮಾಂಶು' ಬಂದಿದ್ದಾನೆಂದು ಉದ್ಗರಿಸಿದಳು..ಕ್ಲಾಸ್ ನಲ್ಲಿದ್ದ ಅಷ್ಟು ಜನರು ಹಿಮಾಂಶುನನ್ನು ದಿಟ್ಟಿಸಿ ನೋಡಿದರು , ಶಾಲಿನಿ ತಡೆಯಲಾಗದೆ "wow what a surprise, ಹಿಮು ಇವತ್ತು ನೀ ಬಂದಿದ್ಯಾ , ನಿನ್ನ ಹುಣ್ಣಿಮೆಯ ಕೆಲಸ ಮಾರೆತುಬಿಟ್ಯಾ"ವೆಂದು ವ್ಯಂಗ್ಯವಾಗಿ ಮಾತಾಡಿದ್ಳು... ಏನು ನಡೆದಿಲ್ಲ ಮತ್ತು ಯಾವುದೇ ಅಚ್ಚರಿಯಿಲ್ಲದೆ ಹಿಮಾಂಶು ಸಣ್ಣದೊಂದು ನಗೆ ಬೀರಿ ಸುಮ್ಮನಾಗಿದ್ದ
      ಹಿಮಾಂಶು ಪಕ್ಕದಲ್ಲಿ ಕುತ್ತಿದ್ದ ಚಿರಂತ್ "ಹಿಮಾಂಶು, ನೀನು ಎಲ್ಲಿರೋದು , ನೀನೇಕೆ ಇಷ್ಟು ನಿಗೂಡ , ಹುಣ್ಣಿಮೆ ದಿನ ಎಲ್ಲಿಗೆ ಹೊಗ್ತ್ಯ? ಯಾಕೋ ನಿನ್ನ ಮೇಲೆ ನನಗೆ ಅನುಮಾನ , ನೀನು ಏನೋ ಮಾಡ್ತಯಿದ್ಯ??!" ಎಂದು ಅನುಮಾನದಿಂದ ಕೇಳಿದ್ದ..   ಹಿಮಾಂಶು ಅವನನ್ನೆ ದಿಟ್ಟಿಸಿ ನೋಡಿದ, ಅವನ ಕಣ್ಣುಗಳಲ್ಲಿ ಏನೋ ಶಕ್ತಿಯಿದೆ ಎನಿಸಿದ ಚಿರಂತ್ ಗೆ ದಂಗುಬಡಿಸಿತ್ತು , ಭಯಗೊಂಡವನೆ ಅಲ್ಲಿಂದ ಎದ್ದುಹೋಗಿದ್ದ ಚಿರಂತ್ , ಆಗ ನಡೆಯುತ್ತಿದ್ದ ಕ್ಲಾಸ್ನಿಂದ ಅತ್ಯಂತ  ಭಯಗೊಂಡು ನಡುಗುತ್ತ ಹೋಡಿಹೋಗಿದ್ದ ಚಿರಂತ್ ರೋಡಿನಲ್ಲಿ ಯಾವುದೋ ಲಾರಿಗೆ ಸಿಕ್ಕು ಸತ್ತನೆಂಬ ಸುದ್ದಿ ಕಾಲೇಜಿನಲ್ಲಿ ಹರಿದಾಡಿತ್ತು..ಅವನ ಸಾವು ದಾರುಣವೇನಿಸಿದ್ದೆ ಇದಕ್ಕೆ..ತನ್ನ ಪಾಡಿಗೆ ಕಾಲೇಜು ರೋಡಿನ ಫುಟ್ ಬಾತ್ ಮೇಲೆ ಒಂದು ಸಿಗರೇಟ್ ಸೇದುತ್ತ ಏನೋ ಚಿಂತಿಸುತ್ತಿದ್ದ ಚಿರಂತ್ ಮೇಲೆ ಅತಿವೇಗವಾಗಿ ದನದ ಚರ್ಮವನ್ನು ಹೊತ್ತು ತರುತಿದ್ದ ಲಾರಿ ಬ್ರೇಕ್ ಫೇಲ್ ಆಗಿ ಯಾವುದೇ ಕಷ್ಟವಿಲ್ಲದೆ  ಚಕ್ರಗಳು ಅವನ ದೇಹದ ಮೇಲೆ ಅರಿದಿತ್ತು.. ರಕ್ತ ರೋಡಿನ ಇಕ್ಕೆಲಗಳಿಗು ಹರಿದಿತ್ತು , ಎದುರಿಗೆ ನಿಂತಿದ್ದ ಶಾಲಿನಿ ಗೆಳತಿ ಪ್ರಾರ್ಥನ ಮೇಲೆ ರಕ್ತ ಚಿಮ್ಮಿತ್ತು. ವಿಷಯ ತಿಳಿಯುತ್ತಿದಂತೆ ಕ್ಲಾಸಿನ ಅಷ್ಟು ಜನ ಓಡಿ ಬಂದಿದ್ದರು , ಹಿಮಾಂಶುವನ್ನ ಹೊರತುಪಡಿಸಿ... ಕಾರಣವಿಲ್ಲದೆ ಸತ್ತು ಹೋಗಿದ್ದ ಚಿರಂತ್. ಹಿಮಾಂಶು ಆ ಹುಣ್ಣಿಮೆಯ ದಿನ ಬಂದಿದ್ದಕ್ಕು ಒಂದು ಕಾರಣವಿತ್ತು!!!
                                                    * * *    * * *    * * *
     ಆಗ ತಾನೆ ಬಿದ್ದಿದ್ದ  ಅಲ್ಪ ಮಳೆ ಭಾನುವಾರದ ಸಂಜೆಯನ್ನು ಮತ್ತಷ್ಟು ತಂಪುಗೊಳಿಸಿತ್ತು , ಆ ನಿಚ್ಚಳ ಸಂಜೆಯನ್ನು enjoy ಮಾಡುತ್ತ ಹೋಗುತ್ತಿದ್ದ ಹಿಮಾಂಶು, ಶಾಲಿನಿಯ ಕಣ್ಣಗೆ ಬಿದ್ದಿದ್ದ..  ಬ್ಲೂ ಜಿಂನ್ಸ್ ಮೇಲೆ ಬಿಳಿ ಜುಬ್ಬ ಧರಿಸಿ , ಕ್ರಾಪ್ ತೆಗದ ತಲೆ , ಮುಗ್ಲ್ನಗೆ ಬಿರುತ್ತಿದ್ದ ತುಟಿಗಳು , ತಣ್ಣನೆಯಾ ಪ್ರಶಾಂತವಾದ ಕಣ್ಣಗಳು , ಇದೆ ಮೊದಲ ಬಾರಿಗೆ ಇಷ್ಟು ಸುಂದರವಾದ ಹಿಮಾಂಶುನನ್ನು ಮೊದಲ ಬಾರಿಗೆ ನೋಡಿದ್ದಳು ಶಾಲಿನಿ , ತಡೆಯಾಲಾಗದೆ ತನ್ನ ಕೈನಿಯನ್ನು ಹಿಮುವಿನ ಕಡೆ ತಿರುಗಿಸಿದಳು.
   ಶಾಲಿನಿ, ಹೇಳಿಮಾಡಿಸಿದ ದುಂಡನೆಯ ತಲೆಗೆ ಬಿಗಿಯಾಗಿ ಕಟ್ಟಿದ ತುರುಬು , ಅದರ ಹಿಂಬದಿಗೊಣದು ಚಿಟ್ಟೆಯಾ ಕ್ಲಿಪ್ , ಉತ್ತರಾಷಡದ ಮಳೆಯಂತೆ ಹೊಳೆಯುವ ವಜ್ರದ ಹರಳಿನ ಬೆಂಡೋಲೆ , ಅವಳ ಬಿಳಿ ಬಿಂದಿ, ಆ ನಗು ಹಿಮಾಂಶುನನ್ನು ಹೊಟ್ಟೆಕಿಚ್ಚಿಸುತ್ತಿತ್ತು..
  ಕೈನಿಯನ್ನು ನಿಲ್ಲಿಸಿದವಳೆ "hi" ಅಂದಿದ್ಲು.
 ಒಂದು ತೆಳುವಾದ ನಗೆ ಬೇರಿದ್ದ ಹಿಮಾಂಶು.
 "where are you going handsome " ಎಂದು ಕಿಲಕಿಲ ನಕ್ಕಿದ್ಲು.
 "ನಿನ್ನಷ್ಟು ಸುಂದರವಾಗೆನಿಲ್ಲ ನಾನು ,  i am just a normal man , ನೀನು ಸುಂದರಿ " ಎಂದಿದ್ದ ಅವನು  ಅವಳ ನಗುವನ್ನು ಕಣ್ತುಂಬ ತುಂಬಿಕೊಂಡ.
"ಹಿಮು , is that you talking   ನಿನಗೆ ಮಾತಡಕ್ಕೂಡ ಬರುತ್ತ " ಎಂದು ಅಚ್ಚರಿ ಪಟ್ಟಿದ್ದಳು ಶಾಲಿನಿ.
" ಅವತ್ತು ನಾನು ಹಾಗೆ ಮಾತಡಿರಬಾರದಿತ್ತು I'm sorry ಶಾಲಿನಿ " ಎಂದು ವಿನಂತಿಸಿಕೊಂಡ.
"chill ಹಿಮು ಅದ್ಯಾವುದನ್ನು ನಾನು ಮನಸ್ಸಿನಲ್ಲಿಟ್ಟುಕೊಂಡಿಲ್ಲ , at least ಇವತ್ತಾದರೂ ನಿನ್ನ ಜೊತೆ ಕಾಫಿ ಕುಡಿಬಹುದ?? " ಎಂದಳು .
"off course " ಎಂದವನೇ ಅಲ್ಲೆ ಪಕ್ಕದಲ್ಲಿದ್ದ ಕಾಫಿ ಡೇಗೆ ಕರೆದ್ಹೊದ..
"Thanks a lot Himu , its getting late I'll meet you tommorow " ಎಂದವಳೆ ತನ್ನ ಕೈನಿಯನ್ನು ಯಾವತ್ತು ಇಲ್ಲದ ಸಂತೋಷದಲ್ಲಿ ಓಡಿಸುತ ಹೋದಳು ಶಾಲಿನಿ , ಹಿಮುನನ್ನ ಮನಸ್ಸಿನಲ್ಲಿಟ್ಟುಕೊಂಡು.
                                                        *   *   *   *   *   *   *

      ಬೆಂಗಳೂರಿನಿಂದ ಭಬನೆಶ್ವರ ತಲುಪುತಿದ್ದ ಟ್ರೇನ್ ನಂ.೧೮೪೬೪ ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಇಂದಿನ ಆ ಪ್ರಶಾಂತತೆ ಇರಲಿಲ್ಲ , ಅಷ್ಟು busy ಹಾಗಿದ್ದ ಟ್ರೇನ್ ಕ್ರಮೇಣ ತನ್ನ ಪ್ರಯಣಿಕರು ಕಡಿಮೆಯಾಗುತ್ತಿರುವುದನ್ನು ನಿಶಬ್ಧದಿದಂದಲೆ ಗಮನಿಸಿತ್ತು , ಇದಕ್ಕಿಂತ ಹೆಚ್ಚು ತಲೆಕೆಡಿಸಿಕಂಡಿದ್ದು ಒಂದೀಡಿ ಪೋಲಿಸರ ದಂಡು.. ಬೆಂಗಳೂರು , ಅಂಧ್ರ ಮತ್ತು ರೈಲ್ವೆ ಪೋಲಿಸರು ... ಪ್ರಶಾಂತತೆ ಕೂಡಿದ್ದ ಪ್ರಶಾಂತಿ ಎಕ್ಸಪ್ರೇಸ್ ಬೆಂಗಳೂರು ಸಿಟಿ ಜಂಕ್ಷನ್ ಬಿಟ್ಟು ಕಂಟೋನ್ಮೇಟ್ , ಯಲಹಂಕ , ಗೌರಿಬಿದನೂರು ಡಾಟುತ್ತಿದಂತೆ ಕರ್ನಾಟಕ- ಅಂಧ್ರ ಗಾಡಿಯಾದ ಹಿಂದುಪುರದಲ್ಲಿ ಸಂಭವಿಸುತ್ತಿದ್ದ ಸಾವು ಮಧ್ಯವಯಸ್ಕ ಹೆಣ್ಣುಮಕ್ಕಳೆ ಸಾಯುತ್ತಿದ್ದದ್ದು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿತ್ತು ಬೆಂಗಳೂರು ಪೋಲಿಸರಿಗೆ.... ಇದರೊಂದಿಗೆ ರೈಲು   ಕರ್ನಾಟಕ ಗಡಿ ದಾಟಿ ಸತ್ಯಸಾಯಿಬಾಬನ ಆಶ್ರಮ ಬಿಟ್ಟು ದಾರ್ಮವಾರಂ ಜಂಕ್ಷನ್  ತಲುಪಿ ಇನ್ನೆನು ಅನಂತಪುರ ಸಮೀಪಿಸಬೇಕು ಅನ್ನುವಷ್ಟರಲ್ಲೆ ಬಿಳುತ್ತಿತ್ತು ಮತ್ತೊಂದು ಹೆಣ , ೧೧೦kmನ ಹಿಂದುಪುರ ಮತ್ತು ೨೨೦kmನ  ದಾರ್ಮವಾರಂ  ಮತ್ತು ಅನಂತಪುರ ಜಂಕ್ಷನ್ ನಡುವೆ....

 ಪ್ರತಿ ಅದಿನೈದು ದಿನಕ್ಕೊಮ್ಮೆ ಸಂಭವಿಸುತ್ತಿದ್ದ ಈ ಸಾವು ಪೋಲಿಸ್ ಇಲಾಖೆಯ ಪ್ರಮುಖರನ್ನು ನಿದ್ದೆಗೆಡಿಸಿತ್ತು , ಎರಡು ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳ ತಂಡವನ್ನು ಕಟ್ಟಿ ಕಾರ್ಯಚರಣಕ್ಕೆ ಇಳಿಸಲಾಯಿತು.. ಹಿಂದುಪುರದ assistant commissioner vinciet ಅತ್ಯಂತ ಕ್ಲಷ್ಟವಾದ ಈ ಕೇಸ್ನ ನೇತೃತ್ವವಾಯಿಸಿದರು , ಬರ್ಬರ ಹತ್ಯಗಳ , ಸಾಲು ಸಾಲು ಕೊಲೆಗಳ ಜಾಡು ಇಡಿದು ಹೊರಟರು... ಅ ಎಲ್ಲಾ ಕೊಲೆಗಳು ಒಂದೇರೀತಿಯಾಗಿತ್ತು..ಕತ್ತನ್ನು ಕುಯ್ದು ಗಂಟಲ ಭಾಗವನ್ನು ಹೊತ್ತು ಹೊಯುತ್ತಿದ್ದರು ಹಂತಕರು... ವಿಚಾರಣೆ ಕೈಗೆತ್ತಿಕೊಂಡ ಕೇಲವೆ ದಿನದಲ್ಲಿ hint ಸಿಕಿದ್ದ ಖುಷಿಯಲ್ಲಿದ್ದ AC Vincient , commissioner  ಬಳಿ ಹೊದವರೆ..
 "sir ,  we got a hint , ಹಂತಕರು ಬೆಂಗಳೂರಿನವರೆ ಮತ್ತು ಬೆಂಗಳೂರಿನಲ್ಲಿ ಪ್ರಶಾಂತಿ ಎಕ್ಸಪ್ರಸ್ ಟ್ರೇನ್ ನಂ.೧೮೪೬೪ ಹತ್ತುತ್ತಿದ್ದವರೆ ಕೊಲೆಯಾಗುತ್ತಿದ್ದರು Sir, I need a full force ನಮ್ಮ ಮತ್ತು ಬೆಂಗಳೂರು ಪೋಲಿಸರು ಮಫ್ತಿಯಲ್ಲಿ  ಕಾರ್ಯಚರಣೆ ನಡೆಸಿದರೆ we can trap them " ಅಂತ ವರದಿನೀಟಿದ್ದ ...
 ಯಾವುದೇ ಮರು ಯೊಚನೆ ಇಲ್ಲದೆ "go ahead ಅಂದಿದ್ದರು " commissioner  ಎಂ , ಎನ್ , ಪ್ರಕಾಶ್ ನಾಯ್ಡು..
ಎಲ್ಲದಕ್ಕಿಂತ ಅತಿ ಪ್ರಮುಖವಾಗಿ  assistant commissioner viencient  ಗಮನಿಸಿದ್ದು....ಮದ್ಯವಯಸ್ಕ ಹೆಣ್ಣುಮಕ್ಕಳೆ ಹಂತಕರ ಟಾರ್ಗೆಟ್ ಅಗಿತ್ತು ಮತ್ತು ಈ ಸರಣಿ ಕೊಲೆ ನಡೆಯುತ್ತಿದೂ ಕೂಡ ಹುಣ್ಣಿಮೆಯ ದಿನದಂದೆ..
                                                                 (ಮುಂದುವರೆಯುತ್ತದೆ-to be continued)

27 Sept 2014

ಹುಣ್ಣಿಮೆಯ ನಿಶಬ್ಧ!

   ಒಂದು ನಿಚ್ಚಳ ಸುರ‍್ಯೂದಯದ ಬೆಳಗ್ಗೆ ಸುರ‍್ಯನಂತೆ ಪ್ರಜ್ವಲಿಸುತ್ತ ಪ್ರತಿಷ್ಠಿತ ಸಂಟ್ ಡೇವಿಡ್ ಕಾಲೇಜು ಮೆಟ್ಟಿಲೇರಿ ಬರುತ್ತಿದ್ದ ಯುವಕನ ಕಣ್ಣಾಲ್ಲಿ ಸಾವಿರ ಸಾವಿರ ಕನಸುಗಳಿದ್ದವು , ನಿರೀಕ್ಷೆಯಿತ್ತು , ಸಾದಿಸಬೇಕು ಎಂಬ ಹಂಬಲವಿತ್ತು.. ಪ್ರಿನ್ಸಿಪಾಲರ ಕ್ಯಾಬಿನ್ ಗೆ ಹೋದವನೆ ಆಪ್ಲೀಕೆಷನ್ ಫಾರಂ ಅವರ ಕೈಗಿಟ್ಟ..
  "ಹೆಸರು?" ಕೇಳಿದರು ಪ್ರಿನ್ಸಿಪಾಲ್ .
"ಅಪ್ಪ ಏನಿಟ್ಟನೋ ಗೋತ್ತಿಲ್ಲ , ಅಮ್ಮ ಹಿಮಾಂಶು ಅಂತ ಕರಿತಾಳೆ, ಜಗತ್ತು ಅನಾಥ ಅಂತ ಗುರುತುಸುತ್ತದೆ" ಯಾವುದೇ ದುಗುಡವಿಲ್ಲದೆ , ಒಂದೇ ಉಸಿರಿನಲ್ಲಿ ಒಂದಿಷ್ಟು ಯೋಚಿಸದೆ ಉತ್ತರಿಸಿದ ಹಿಮಾಂಶು.
 ಕುಳಿತ ಕುರ್ಚಿಯಲ್ಲೆ ಅಸಹನೆಯಿಂದ ಹಂದಾಡಿದ್ದರು ಪ್ರಿನ್ಸಿಪಾಲ್.. ಹೆಸರು-ಹಿಮಾಂಶು , ಜಾತಿ-ಮನುಷ್ಯ , ಅಪ್ಪ-ಗೊತ್ತಿಲ್ಲ , ಅಮ್ಮ-ಕಾಮಟಿಪುರದ ಕಾವೇರಿ ( ನಿಜವಾದ ಹೆಸರು ಹೇಳಿದ್ದರೆ ಪ್ರಿನ್ಸಿಪಾಲ ಬೆಚ್ಚಿಬಿಳುತ್ತಿದ್ದರೆನೋ... ಆ ಹೆಸರಿಗೆ ಅಷ್ಟು ಇತಿಹಾಸವಿತ್ತು , ನೆನಪಿತ್ತು , ಮೋಸವಿತ್ತು ) , ಕೆಲಸ-ಸೂ*ಗರಿಕೆ, ಸ೦ಬಳ- it depends!!     ತನ್ನ ಇಡೀ ಜೀವನದಲ್ಲೆ ಅಂತಹದೊಂದು ಆಪ್ಲೀಕೆಷನ್ ಫಾರಂ ಕಂಡಿರದ  ಪ್ರಿನ್ಸಿಪಾಲ ಅವನನ್ನ ನೋಡುತ್ತ ಬೆವತಿದ್ದರು..
  "character certificate ಎಲ್ಲಿ??" ತೀರಸ್ಕರದ ಧನಿಯಲ್ಲಿ ಕೇಳಿದರು  ಪ್ರಿನ್ಸಿಪಾಲ್.
 "No, I don't need it" ಅಂದಿದ್ದ ಹಿಮಾಂಶು
 "ಅಂದರೆ??" ಪ್ರಿನ್ಸಿಪಾಲ್ ಕಣ್ಣಗಾಲಿಸಿ ಕೇಳಿದ್ದ
 "ನನ್ನ characterಗೆ ಬೇರೆಯವರಿಂದ certificate ತೋಗಬೇಕಾಗಿಲ್ಲ, I am not here to impress anyone , ನನ್ನ character ಏನೆ೦ದು ನನಗೆ ಗೊತ್ತು , ನನ್ನ ಮಾತಿನಿಂದ ನೀವು ಬೇಸರಗೊಂಡರೆ i am helpless" ಯಾವುದೇ ಅಂಜಿಕೆಯಿಲ್ಲದೆ , ದುಗುಡವಿಲ್ಲದೆ ಸತ್ಯವನ್ನ ನುಡಿದಿದ್ದ ಹಿಮಾಂಶುವಿನ ಕಣ್ಣಲ್ಲಿ ಭರವಸೆಯ , ಸಾಧಿಸುವ ಬೆಳಕು ಕಾಣಿಸಿತು.  ಅವನ ಮಾತನ್ನು ನಿಶಬ್ದದಿಂದಲೇ ಆಲಿಸಿದರು ಪ್ರಿನ್ಸಿಪಾಲ್ , ಎರಡು ನಿಮಿಷ ನೀರವ ಮೌನ.. ಅದೆನನಿಸಿತೋ ಪ್ರಿನ್ಸಿಪಾಲರಿಗೆ " you are admitted , ನೀನು ಫೀ ಕೂಡ ಕಟ್ಟಬೇಕಿಲ್ಲ, ನಾನು scholorship ನೀಡ್ತೇನೆ" ಎಂದಿದ್ದರು... ಏನೋ ದೊಡ್ಡ ಗೆಲುವು ಸಾಧಿಸುತ್ತಾನೆ ಅಂತ ಪ್ರಿನ್ಸಿಪಾಲ್ಗೆ ಅನಿಸಿತ್ತು.. ಏನದು ಗೊತ್ತಿಲ್ಲ? , ಯಾವಾಗ ಉತ್ತರವಿಲ್ಲ , ಅದರೆ ನಿಜಕ್ಕೂ ಈತ ನಮ್ಮೆಲರಿಗಿಂತ ಎತ್ತರಕ್ಕೆ ಬೆಳೆಯುತ್ತಾನೆ ಮತ್ತು ತನ್ನ ಜೀವನದಲ್ಲೂ ಪ್ರಮುಖ ಪಾತ್ರವಯಿಸುತಾನೆಂದು ಪ್ರಿನ್ಸಿಪಾಲ್ ಕೂಡ ಊಹಿಸಿರಲಿಲ್ಲ.. ಹೆಸರು " Alexander ರಾಜನಾಥ ಚಟರ್ಜಿ" ಹಿಂದೂ-ಕ್ರಿಶ್ಯನ್ ದಂಪತಿಗೆ ಜನಿಸಿದ ಪ್ರಿನ್ಸಿಪಾಲ್ ಎರಡು ಮನೆತನದ ಹೆಸರು ಇಟ್ಟುಕೊಂಡು ವಿಚಿತ್ರವೇನಿಸಿದ..
                                                                    
                                                             *     *     *     *     *     *

        ಕಾಲೇಜು ಪ್ರಾರಂಭವಾಗಿತ್ತು ಹಿಮಾಂಶು ಬೇರೆ ವಿದ್ಯಾರ್ಥಿಗಳೊಂದಿಗೆ ಬೇರೆಯುತ್ತಿರಲಿಲ್ಲ , ಆತ ಯಾರು , ಎಲ್ಲಿಂದ ಬರುತ್ತಾನೆ , ಅಪ್ಪ-ಅಮ್ಮ , ಊಂ, ಯಾರಿಗೂ ಏನು ತಿಳಿದಿರಲಿಲ್ಲ ... ಹಿಮಾಂಶು ಕಾಲೇಜುನವರಿಗೆ ನಿಗೂಡನಾಗಿದ್ದ , ಒಬ್ಬನೆ ಕುರುತ್ತಿದ್ದ , breakನಲ್ಲೂ ಏನು ತಿನ್ನದೆ ಯಾವುದೋ  ಕಾದಂಬರಿಯನ್ನು ಓದುತ್ತಿರುತ್ತೆದ್ದ , ಐದು ದಿನಗಳಿಗೊಂದು ಹೊಸ ಕಾದಂಬರಿ , ಅಷ್ಟು ಓದುತ್ತಿದ್ದ ಹಿಮಾಂಶು , ವಾಲಿಬಾಲ್ ನಲ್ಲಿ ಕಾಲೇಜಿಗೆ ಕ್ಯಾಪ್ಟನ್ ಆಗಿದ್ದ , ಕೊರ್ಟನೊಳಗೆ ಕಾಲಿಟ್ಟರೆ ಹಸಿದ ಹೆಬ್ಬುಲಿಯಂತೆ ಬಡಬಡನೆ ಆಡುತಿದ್ದ , ಎಲ್ಲರೊಂದಿಗೂ ಬೇರೆಯುತ್ತಿದ್ದ ಆತ ಕೊರ್ಟನಿಂದ ಹೊರ ಬಂದರೆ ಅದೆ ನೀರಾವ ಮೌನ ಮತ್ತು ನಿಗೂಡತೆ ಅವರಿಸಿಕೊಳ್ಲುತ್ತಿತ್ತು.. ಹಿಮಾಂಶು ಯಾಕೆ ಹೀಗೆ ಅಂತ ಎಲ್ಲರಿಗಿಂತ ಹೆಚ್ಚು ತಲೆಕೆಡಿಸಿಕೊಂಡವಳು ಶಾಲಿನಿ.. ದೊಡ್ಡ ಶ್ರೀಮಂತರ ಮಗಳು ಇಡೀ ಕಾಲೇಜಿಗೆ ಗಾಡಿ ತರುತಿದ್ದ ಹುಡುಗಿ ಅವಳೊಬ್ಬಳೆ , ಕಪ್ಪು kinetic honda...

    ಕೈನಿಯಲ್ಲಿ ಬರುತ್ತಿದ್ದರೆ ಒಂದೀಡಿ ಹುಡುಗರ ಗುಂಪು ಬೆರಗಾಗಿ ನೋಡುತ್ತ ನಿಂತಿರುತಿದ್ದರು , ಅದೆಷ್ಟು ಪ್ರಪೋಸಲ್ ಬಂದಿತ್ತು ಶಾಲಿನಿಗೆ , ಲೆಕ್ಕವೆಯಿಲ್ಲ ಅದನ್ನ ಆಗೆ ಲೆಕ್ಕವೆಯಿಲ್ಲದಂತೆ ತೀರಸ್ಕರಿಸಿದ್ದಳು, ಹುಡುಗರ ಬಗ್ಗೆ ಆಸಕ್ತಿಯಿಲದ ಶಾಲಿನಿಗೆ ಅವತ್ತು ಹಿಮಾಂಶು ಬಗ್ಗೆ ಚಿಂತಿಸಿದ್ಲು.. ಮೊದಲ ಬಾರಿಗೆ ಯಾವುದೋ ಹುಡುಗನ ಬಗ್ಗೆ ಅದರಲ್ಲೂ ನಿಗೂಢತೆಯನ್ನು ಮೈಗೂಡಿಸಿಕೊಂಡಿದವನ ಬಗ್ಗೆ ಚಿಂತಿಸುತ್ತಿದಿನಿ ಎಂದು ಶಾಲಿನಿ ತನ್ನೊಳಗೆ ತಾನೆ ನಕ್ಕಳು! , ಆಗ್ಗೆ ಒಂದು ದಿನ ತೀರ ಬೊರಿಂಗ್ ಆದ ಕ್ಲಾಸ್ ನಂತರ ಹಿಮಾಂಶು ಬಳಿ ಹೋಗಿ "Let's have a cup of coffee, ಹಿಮು!!" , ಅಂದಿದ್ಲು , ಹಿಮು ತನ್ನ ಮನಸ್ಸಿಗೆ ತಿಳಿಯದೆ ಬಂದ ಪಧವಾ? ಅಥವಾ ಇಷ್ಟು ದಿನ ಮನಸ್ಸಿನಲ್ಲಿ ಅಡಗಿದ ಪ್ರೀತಿಯ ಮಾತ? ಆರೆ ನಾನೇಕೆ ಹಿಮು ಎಂದೆ?. ಯೊಚಿಸುವುದಕ್ಕು ಸಮಯ ಕೊಡದೆ ಅವಳ ಆಹ್ವನಕ್ಕೆ ಉತ್ತರ ನೀಡಿದ್ದ ಹಿಮಾಂಶು..

      "can you mind your own business " ಎಷ್ಟು ಆಹಂಕಾರ ಎಂದುಕೊಂಡಿದ್ದಲು ಶಾಲಿನಿ,

       "Look ಹಿಮಾಂಶು , ನೀನು ಒಬೊಂಟಿಯಾಗಿ ಇರುತಿಯಾಲ್ಲ ಅಂತ ನಾನು ಕಾಫಿಗೆ ಕರೆದದ್ದು ,ನಿನ್ನನ್ನ ಮೆಚ್ಚಿಸಿಲಿಕ್ಲ ಅಥವಾ ನನ್ನ ಜೊತೆ ಕಾಫಿ ಕುಡಿಯಲು ಯಾರು ಇಲ್ಲವೆಂದಲ್ಲ , ನಾನು ಕರೆದರೆ ನೂರಾರು ಹುಡುಗರು ತಲೆಮೆಲೊತ್ತು ರಾಣಿತರ ಕಾಫಿ ಡೇ ಕರೆದುಕೊಂಡು ಹೋಗ್ತರೆ" ಬಸುಗುಡುತ್ತ ಹೇಳಿದಳು ಶಾಲಿನಿ , ಅವಳ ಕೆನ್ನೆ ಕೆಂಪಾಗಿತ್ತು , ಕಣ್ಣು ಕೆಂಡಾಕರುತಿತ್ತು. ಇದನ್ನು ಹೇಳಿದವಳೆ ಮುಖ ತಿರುಗಿಸಿ ಹೊರಟು ಹೊದಳು.. ಇದನ್ನು ಕೇಳಿಸಿಕೊಂಡಿದ್ದ ಹಿಮಾಂಶುವಿನ ಕಣ್ಣಲ್ಲಿ ಯಾವುದೇ ಅಪರಾಧ ಮನೋಭವ ಇರಲಿಲ್ಲ , ಏನು ನಡೆದಿಲ್ಲವೆನೋ ಎಂಬಂತೆ ವಾಲಿಬಾಲ್ practice ನಲ್ಲಿ ತೋಡಗಿದ , ಅವನ ಮನೆ, ಎಲ್ಲಿಂದ ಬರುತ್ತನೆ ಎಂಬೂದು ಅವನಷ್ಟೆ ನಿಗೂಡವಾಗಿತ್ತು , ನಡೆದು ಬರುತ್ತಿದ್ದ , ಕೀಲೊ ಮೀಟರ್ ಕೀಲೊ ಮೀಟರ್‍ ಲೆಕ್ಕಿಸದೆ ನಡೆದುಬರುತ್ತಿದ್ದ , ಕಾಲೇಜಿಗೆ ಒಂದು ದಿನವೂ ರಜೆ ಹಾಕದೆ ಬರುತ್ತಿದ್ದ , ಒಬ್ಬರನ್ನೂ ಮಾತಡಿಸಿರಲಿಲ್ಲ ಶಾಲಿನಿಯನ್ನು ಬಿಟ್ಟು  "can you mind your own business " ಅನ್ನೊ ಮಾತನ್ನು ಬಿಟ್ಟು , ಅವನ ನಿಗೂಡತೆಯ ಬಗ್ಗೆ ಆಸಕ್ತಿ ಬೆಳೆಯುತ್ತಲೆ ಇತ್ತು , ಒಮ್ಮೆ ಹಿಮಾಂಶು ಕಾಲೇಜಿಗೆ ಬರದಿರುವುದು ಎಲ್ಲರಿಗೂ ಅಚ್ಚರಿಯಾಗಿತ್ತು , ನಂತರ ಕಾಲ ಉರುಳಿದಂತೆ ತಿಂಗಳು ತಿಂಗಳು ಕಳೆದಂತೆ ಎಲ್ಲರು ಗಮನಿಸಿದ್ದು ಒಂದೇ!! ಹಿಮಾಂಶು ಪೂರ್ತಿ ಚಂದ್ರನ ದಿನ ಅಂದರೆ "ಹುಣ್ಣಿಮೆಯ ದಿನ" ಕಾಲೇಜಿಗೆ ಬರುತ್ತಿಲ್ಲವೆಂದು , ಹಿಮಾಂಶು ಮತ್ತಷ್ಟು ನಿಗೂಡನಾದ , ಯಾರು ಏನೇ ಮಾತಡಿದರೂ ಕಣ್ಣಲ್ಲೆ ಉತ್ತರ , semester examನಲ್ಲಿ first ಬಂದರು ಕೂಡ ಅತನ ಮುಖದಲ್ಲಿ ನಗುವಿರದನ್ನು ಕಂಡು ಸ್ವತಃ ಪ್ರಿನ್ಸಿಪಾಲ್ ಕೂಡ ಅಚ್ಚರಿಪಟ್ಟರು. ಹಿಮಾಂಶು ನಮ್ಮೆಲ್ಲರಿಗಿಂತಲೂ ವಿಚಿತ್ರ ಮತ್ತು ವಿಶಿಷ್ಟತೆಯುಳ್ಳ ಒಳ್ಳ ಹುಡುಗನೆಂದುಕೊಂಡಳು ಶಾಲಿನಿ , ತನ್ನ ಮನಸ್ಸು ಹಿಮಾಂಶುವಿನ ಕಡೆ ವಾಲುತ್ತಿರುವುದೂ ಶಾಲಿನಿ ಕೂಡ ಅರ್ಥಮಾಡಿಕೊಂಡಿರಲಿಲ್ಲ... ಮತ್ತೊಂದು ಅಚ್ಚರಿಯಂದರೆ state level championshipಗೆ ಹಿಮಾಂಶು ಬರದೆ ಇದ್ದದ್ದು!! ಅವತ್ತು ಕೂಡ "ಹುಣ್ಣಮೆ"!!!  
                                                                                  (ಮುಂದುವರೆಯುತ್ತದೆ-to be continued)

15 Sept 2014

ಹೇಳಿ ಹೋಗು ಕಾರಣ..

     ಎಲ್ಲಿ೦ದಲೋ ತುರಿಬ೦ದ ಅವಳ ಹೆಸರು ನನ್ನ ಮನಸ್ಸಿನೊಳಗೆ ನುಗ್ಗಿ , ಕೊ೦ಚ ಹೊತ್ತಿನಲ್ಲಿ ಆ ಹೆಸರು ವಿಚಾರವಾಗಿ , ಭಾವನೆಯಾಗಿ , ಪ್ರಶ್ನೇಯಾಗಿ ಕಾಲೂರಿ ನಿ೦ತುಬಿಟ್ತು. ಅವಳು ಬೇಕು ಅನಿಸ್ತಳೆ ನನ್ನ ಮಾತಿಗೆ , ನನ್ನ ಮೌನಕ್ಕೆ , ನನ್ನ ಉಸಿರಿಗೆ , ನನ್ನ ಬದುಕಿಗೆ...
Phool khilte hain , log milte hain..
phool khilte hain , log milte hain,magar....
patjhad mein jo phool murjha jathe hain..
vo baharon ke aache se khilte nahin.....!
    ನೆನಪಿದೆಯಾ ಆಗ ನಾನು fourth standardನಲ್ಲಿ ಓದ್ತ ಇದ್ದೆ ನನ್ನ ಪಕ್ಕ exam ಬರಿಲಿಕ್ಕೆ ಕುತವಳೆ ಅವಳು , ಆಗ ಪಕ್ಕದಲ್ಲಿ ಕೂತು  exam ಬರ‍್ದಿದ್ದ ನಾವಿಬ್ಬರೂ ಯಾರು ಊಹಿಸಲಾಗದ ಗಮ್ಯಗಳಿಗೆ ತಲುಪಿಸಲಿದೆಯೆ೦ದೂ , ನಾವಿಬ್ಬರೂ ನಮ್ಮ ಬದುಕಿನಲ್ಲಿ ವಿಲಕ್ಷಣ ಪಾತ್ರಗಳನ್ನು ನಿಭಾಯಿಸಲಿದೆವೇ೦ದೂ.. ಯಾರೊಬ್ಬರಿಗೂ ಆ ಕ್ಷಣಕ್ಕೆ ಅನಿಸಲಿಲ್ಲ...
  ಬಹುಶಃ ಅ೦ದು ಶಾಲೆ ಬಿಟ್ಟು ನೀ ಅತ್ತಿದ(actually it was me who first got into the bus)ನಾ ಅತ್ತಿದ ೬೧ ಬಿ ಬಸ್ ಅಲ್ಲಿ ನಾವಿಬ್ಬರೂ ಪ್ರಾಯಣಿಸಲಿಲ್ಲದಿದ್ದರೆ..ನಾನು ಈ ರೀತಿಯಲ್ಲಿ ಬರೆಯುತಿರಲ್ಲಿಲ್ಲ ಅನಿಸುತ್ತದೆ , ನನ್ನ ಆಲೇಮರಿ ಮನಸ್ಸಿಗೊ೦ದು ಸೂರು ಕೊಟ್ಟವಳು ನೀ.. ನನ್ನ ಹೃದಯಕ್ಕೆ ಬೆಳಕದವಳು ನೀ..!!
 yes, ನಿನ್ನ ಮೇಲಿನ ನನ್ನ ಅಪೂರ್ವವಾದ ಹ೦ಬಲಕ್ಕೆ , ಪ್ರೀತಿಗೆ, ಗೆಳೆತನಕ್ಕೆ , ಮದುರ‍್ಯಕ್ಕೆ ಇವತ್ತಿಗೆ ಐದು ವರ್ಷಗಳ ತು೦ಬು ಹರಿಯ ,ಇವತ್ತಿಗೂ ನಿನ್ನ ಮೇಲೆ ಅದೇ ಪ್ರೀತಿಯನಿಟ್ಟುಕೊ೦ಡು ಕಾಯ್ತಿದ್ದೀನಿ , ೧೯೧೫ ದಿನಗಳಲ್ಲಿ ನೀ ಬ೦ದು ಹೋಗದ ಸಮಯವಿಲ್ಲ!!!
 ಅ೦ದು ನಾವು ಶಾಲೆಯಿ೦ದ ತಲಾಕಾಡು tripಗೆ ಹೋಗಿದ್ವಿ, woow!!! ನಿನ್ನ ರೂಪ ನನ್ನ ಕಣ್ಣಗೊ೦ಬೆಯೊಳಗೆ ಹಚ್ಚಗಿ ಕೂತಿದೆ.. ಗಾಳಿಗೆ ಮುತ್ತಿಡುತ್ತಿದ್ದ ನಿನ್ನ ಮು೦ಗುರುಳು , ಇದ್ದ ಎಲ್ಲಾ ಹುಡುಗಿರಿಗೂ ಹೊಟ್ಟೆಕಿಚ್ಚಿಸುತ್ತಿದ್ದನಿನ್ನ ನಗು , ಅ yellow pull over ನಿನಗೆ ಅಲ್ದೆ ಬೇರೆ ಯಾರ‍್ಗೂ ಆಗ್ತಿರಿಲಿಲ್ಲ ,you were looking gorgeous ರವಿ ಬೆಳಗೆರೆಯ ಪುಸ್ತಕದಲ್ಲೂ ನಿನ್ನ೦ತ ಸೌ೦ದರ್ಯವತಿಯನ್ನು ನಾ ಕ೦ಡಿಲ್ಲ , ಇದ್ದ ಎಲ್ಲರಾ ಮನಸ್ಸು ಗಗನಚುಕ್ಕಿ ಜಲಪಾತದ ಮೇಲಿದ್ದರೆ ನನ್ನ ಮನಸ್ಸು ನೀನೀ೦ದೇನೆ ಸುತ್ತುತ್ತಿತ್ತು.. ಮಗು ಅಮ್ಮನ ಕೈಯಿಡಿದು ನಡೆಯುತ್ತಿದ್ದ ಹಾಗೆ! ಅದ್ಯಾವಾ ಪಾಪಿ ನಿನ್ನ photo ತೆಗ್ಯೊ idea ಕೊಟ್ನೊ , ನೀ ನನ್ನ ಮೇಲೆ ಮುನಿಸಿಕೊ೦ಡೆ , ನಿನ್ನ ಸು೦ದರವಾದ ನಿಶ್ಚಕ್ಲಮಶವಾದ ಮುಖದಲ್ಲಿ ಮೊದಲ ಬಾರಿ ಮುನಿಸು ನೋಡಿದ್ದು , ತೀರಸ್ಕರ ನೋಡಿದ್ದು , ಜ೦ಭ ನೋಡಿದ್ದು... ಅದೆಷ್ಟು ಕೋಪಿಸಿಕೊ೦ಡಿದ್ದೊ ನನ್ನ ಮೇಲೆ !, ನಿನಗೆ ನಾನು ಸಾರಿ ಕೇಳಲು ತೇಗೆದುಕೊ೦ಡಿದ್ದು ಭರ್ತಿ ಎರಡು ವರ್ಷ!!!!!, ಒ೦ದಿಷ್ಟು ನಗುವಿಲ್ಲದೆ , ಒ೦ದಿಷ್ಟು ಮಾತಿಲ್ಲದೆ ,   ಒ೦ದಿಷ್ಟು  ತೀರಸ್ಕರವಿಲ್ಲದೇ.... ಎರಡು ವರ್ಷ ಕಳೆದವೂ, yes ನನ್ನ ಲೈಫ್ ನಲ್ಲಿ ಎಲ್ಲವೂ ಅನೀರಿಕ್ಷಿತಗಳೆ, ಯಾವುದು pre-plan ಅಲ್ಲ ಯಾವುದೂschedule ಆಗಿರಲಿಲ್ಲ.. ಅದೇಗೆ ನಿನ್ನ ನ೦ಬರ್‍್ನನಗೆ ಸಿಕ್ಕಿತೋ?? ಊಹ೦ ಗೋತ್ತಿಲ್ಲ , ಒ೦ದು ಪುಟ್ಟ sorry ಹೇಳಲಿಕ್ಕೆ ಬರೊಬ್ಬರಿ ೪ ದಿನ practice ಮಾಡಿದ್ದೆ, A simple sorry with loads of loads of feelings ನನಗೆ ನೆನಪಿದೆ ಅದು ಜುಲೈ ೨೮ an humming saturday evening  ಸಣ್ಣಗೆ ಮಳೆ ಬರುತಿತ್ತು, ಕಾಲ್ ಮಾಡಿ sorry ಹೇಳಿದ್ದು ಬಿಟ್ಟರೆ ಬೇರೇನೂ ಇಲ್ಲ not more than a single word!!  ನ೦ತರ ದೊಡ್ಡದೊ೦ದು ಮೇಸೆಜ್ type ಮಾಡಿ ನೀನಗೆ ಕಳಿಸುವಾಷ್ಟರಲ್ಲಿ ಕುಸಿದು ಬಿದ್ದಿದ್ದೆ..ಆ ಮೇಸೆಜ್ನಲ್ಲಿ ನಾನು ಎಲ್ಲವನ್ನು ಹೇಳಿದ್ದೆ ಅದಕ್ಕೆ ನಿನ್ನಿ೦ದ ಬ೦ದ ಉತ್ತರ "don't feel guilty" ಅ೦ತ. ಆ ಮೇಸೆಜ್ ಇನ್ನ ನನ್ನ ಮೊಬೈಲ್ ನಲ್ಲಿ ಉಸಿರಾದ್ತಾಯಿದೆ , ಮು೦ದಿನ ಎರಡು ತಿ೦ಗಳು ಏನು ಇರ‍್ಲಿಲ್ಲ , not even a single message or call ,  ಆದರೆ ಪ್ರತಿ ರಾತ್ರಿ ನನ್ನ ಕನಸ್ಸಿನಲ್ಲಿ ಬ೦ದು present  ಹೇಳಿ ಹೊಗ್ತಿದ್ದೆ.. ನೀನು ಕನಸಿನಲ್ಲಿ ಬರೋದು ನನ್ನ ಪ್ರೀತಿಯ ಜಯ೦ತ್ ಕಾಯ್ಕೆಣಿ ಅಣ್ಣ ಬರೆದ ಹಾಡನ್ನ ಹಾಡೋದು, it was quite common to me!,ನಿನ್ನ ಕನಸಿನೊಟ್ಟಿಗೆ ಜೀವಿಸೋದು ನನ್ನ ಜೀವನದ ಭಾಗವಾಗಿ ಹೋಗಿತ್ತು... ನಾನೇನು ಚತ್ರಬಿಡುಸುವವನಾದರೆ ನನ್ನ ಕನಸುಗಳಿಗೆ ಅದೆಷ್ಟು ಜೀವ ತು೦ಬುತಿದ್ದನೋ?? ಅದೆಷ್ಟು ಪುಟಗಳಲ್ಲಿ ನಿನ್ನ ಕಣ್ಣ ರೂಪಿಸುತ್ತಿದನೋ....???
   Guess what, It was another surprise to me, ಮೊದಲೇ ಅ೦ದನಲ್ಲ ನನ್ನ ಜೀವನವುದ್ದಕ್ಕೂ ಅನೀರಿಷೆತಗಳೇ.. ಅದು ಸೇ.೧೧ ೨೦೧೨ ಸ೦ಜೆ ೪ ಗ೦ಟೆ ಮೂವತ್ತೈದು ನಿಮಿಷ ವಿಜಯನಗರದ TTMC ಯಲ್ಲಿ ಕೂತಿದ್ದೆ ಆಗ ಬ೦ದದ್ದೆ ನಾನು ಇಷ್ಟುದಿನ ಕಾಯುತ್ತಿದ್ದ ಕಾಲ್!!! HIII ಅ೦ದವಳೆ ನನ್ನ birthdayಗೆ ವೀಷ್ ಮಾಡಿಬಿಟ್ಟೆ . My God  I was flying very high in the sky! ಇಡೀ ಜಗತ್ತೆ ನನ್ನ ಅಡಿಗಿರುವಷ್ಟು ಎತ್ತರಕ್ಕೆ ಹಾರುತಿದ್ದೆ ಮಾರೆಯಾಲಾಗದ ನಿನ್ನ ದನಿ ಇನ್ನ ನನ್ನ ಕಿವಿಯೊಳಗೆ ಜೀವಿಸುತ್ತಿದೆ!! ಅಲ್ಲಿ೦ದ ಶುರುವಾಗಿದ್ದ ನಮ್ಮ chatting , walking , talkingಗಳು , ಸುಮಾರು ೧೦೯ ದಿನಗಳ ಅ೦ದರೆ december ೨೯ರ ರಾತ್ರಿ ೯ ಗ೦ಟೆ ಇಪ್ಪತ್ತೊ೦ದನೆ ನಿಮಿಷ ಇಡೀ ಪ್ರಪ೦ಚ ಹೊಸ ವರ್ಷಕ್ಕೆ ಮುನ್ನುಡಿಯ೦ತೆ ಸಿದ್ದರಾಗುತ್ತಿದ್ದರು... ನಿನ್ನಿ೦ದ ಅದೆಷ್ಟು ದೂರದಲ್ಲಿದ್ದ ನನ್ನನ್ನು ನಿನ್ನ message ಬ೦ದು ತಲುಪಿತ್ತು, message ಓದಿದದವನೇ ದ೦ಗು ಬಡೆದು ನಿ೦ತೆ, ನಾನು ಆ ಪ್ರಶ್ನೆಗೆ ತಯಾರಗಿರಲಿಲ್ಲ i was shocked ,i was surprised!! "Do you have any girl friend?? or are you in love with anyone"ಅ೦ತ ಕೇಳಿಬಿಟ್ಟೆ ನೀನು, ಒ೦ದು ಕ್ಷಣ ಕೈ ನಡುಗಿತ್ತು, "i don't have any girl friend" ಅ೦ತ  reply ಮಾಡ್ದೆ, ಬಹುಶಃ ಒ೦ದು ಪ್ರೇಮಕಾವ್ಯಕ್ಕೆ ಒ೦ದು ಪ್ರೇಮಯುದ್ದಕ್ಕೆ ತಾಯರಾಗಿಬ೦ದಿದ್ದೆ ಅನಿಸುತ್ತೆ.."then you are loving somebody,tell me who is that" ಅ೦ದವಳ ನಿನ್ನ ಮನಸಿನಲ್ಲಿ ಒ೦ದು ನಿಚ್ಚಳ ಭಾವವಿತ್ತು!
  ಇದನ್ನು ಓದಿದವನೇ ನನ್ನ ಬಲವೆಲ್ಲ ಉದುಗಿಹೋಯಿತು, ಎದೆಬಡಿತ ಏರುತ್ತಿತ್ತು, ಕೈ ನಡುಗುತಿತ್ತು , ಕಣ್ಣು ನ೦ಬಾಲಾಗಿತ್ತು ಆದರೆ ಮನಸ್ಸಿನ ಯಾವುದೊ ಮೂಲೆಯಿ೦ದ ಒ೦ದಿಷ್ಟು  ಪ್ರೀತಿ , ಒ೦ದಿಷ್ಟು  ಭರವಸೆ ಮತ್ತು ಆಗಾಧವಾದ ಭಾವನೆಯನ್ನು ಉಟ್ಟಿಸಿತು .. ನಿಟ್ಟುಸಿರು ಬಿಟ್ಟವನೇ ನಡುಗುವ ಕೈಯಲ್ಲಿ ಕಷ್ಟಪಟ್ಟು"   I'm loving you from past three years , please don't feel bad , don't be angry , sorry" ಅ೦ತ ಕಳುಹಿಸಿದ್ದೆ ನೀನು ಏನು ಆಗಿಲ್ಲವೇನೊ ಎ೦ಬ೦ತೆ " don't feel guilty" ಅ೦ತ reply ಮಾಡೋದ...
     ಸ್ವಲ್ಪಹೊತ್ತು ಅಲ್ಲಡದೆ ಸುಮ್ಮನೆ ಕುಳಿತೆ, ಬೆವರು ಓರೆಸಿಕೊ೦ಡು , ಉಗುಳು ನು೦ಗಿ ರೆಪ್ಪೆ ಜೋಡಿಸಿದ್ದ ಕಣ್ಣನ್ನು ತೇರೆದು "do you love anyone??" ಅ೦ತ ಕಳಿಸಿದವನೇ ನಡುಗಲು ಶುರುಮಾಡಿದೆ, ೯ ಗ೦ಟೆ ೨೫ನಿಮಿಷ ೩೬ಸೆ೦ಕೆಡ್ ಮೊದಲನೇ ನಿಮಿಷ  reply ಬರದೆಯಿರೋದು ಮತ್ತಷ್ಟು ನಡುಕ ಉ೦ಟುಮಾಡಿತು , ಎದೆಬಡಿತ ಪಕ್ಕದಲ್ಲಿ ಕೂತಿದ್ದಮ್ಮನಿಗೂ ಕೇಳಿಸುವಷ್ಟು ಜೋರಾಗಿ ಬಡೆದುಕೊಡಿತು. ೯ಗ೦ಟೆ ೨೬ನೇ ನಿಮಿಷ ಕಣ್ಣುಗಳಲ್ಲಿ ಅದೇನೊ ಭಯ ಅವರಿಸಿದ೦ತಾಯಿತು , ಬುದ್ದಿ ಮನಸ್ಸುಗಳ ನಡುವೆ ಕಿತ್ತಾಟ , ಉಸಿರು ಬೀಗಿಯಾಗುತ್ತಿತ್ತು.. ತಪ್ಪು ಮಾಡಿದೇನೊ ಎ೦ಬ೦ತೆ ಕೈಕಾಲು ನಡುಗಿದವು ೯ಗ೦ಟೆ ೨೭ನಿಮಿಷ ೩೯ ಸೆಕೆ೦ಡ್  ಆಚೆ ಎದ್ದು ಹೋದವನೆ ಏನು ಮಾಡಿದೆ ದೇವರೆ ಅ೦ತ ಗೋಗರಿದೆ, ಕಣ್ಣ ಹನಿ ನೆಲಕ್ಕೆ ಬೀಳಲು ಸಜ್ಜಗಿ ನಿ೦ತಿತು, ಮೊಬೈಲ್ ಕೈತಪ್ಪಿ ಬಿಳುವಷ್ಟು ನಡುಗಿದ್ದೆ ೯ಗ೦ಟೆ ೨೭ನಿಮಿಷ ೫೯ ಸೆಕೆ೦ಡ್ ting!! ಅನ್ನೊ ಮೊಬೈಲ್  ಶಬ್ದ ಮನಸ್ಸಿಗೆ ದಿಗಿಲು ಬಡಿಸಿತು, ಎದೆಬಡಿತ ಮತಷ್ಟು ಮಗದಷ್ಟು ಹೆಚ್ಚಿತು, ಭಾವನೆಗಳಿಲ್ಲದ ಮೊಬೈಲ್ ಸಾವಿರ ಸಾವಿರ ಭಾವನೆಗಳನ್ನು ಓತ್ತು ತ೦ದಿತ್ತು ಅದು ನಿರ್ರಗಳ ನಿರ್ರಗಳ ಪ್ರೇಮ ಸ೦ದೇಷ!, ನಡುಗುವ ಕೈಯಲ್ಲಿ lock open ಮಾಡಿ message ಓದಿದವನೇ ಬೆಚ್ಚಿಬಿದ್ದಿದೆ " I'm loving a boy who is loving me from past three years.... that is non other than you!!!" ಅ೦ದಿದ್ದೆ ಆ ಮೇಸೆಜ್ ನಲ್ಲಿ ಸಾವಿರ ಭಾವನೆಗಳಿದ್ದವು ೧೦೯೫ ದಿನಗಳ ಪ್ರೀತಿಯಿತ್ತು... ೨೬೨೮೦ ನಿಮಿಷಗ/ಲ ಕಾಯುವಿಕೆಯಿತ್ತು, ಕನಸು ನನಸುಗಳ ನಡುವೆ ಪ್ರೀತಿಯ೦ಬ ಭಾವ ಹೊಡೆದಡುತಿತ್ತು, ಇದು ಸಾದ್ಯವ ಕನ್ನಿಗೇನೊ ತೀರಸ್ಕರ ಇಲ್ಲ... ಊಹು೦! ನೋ ಇದು ಕನಸು ಅ೦ದಿತು. ಅಷ್ಟರಲ್ಲೆ ನನ್ನ ಜೀವನವನ್ನು ನನ್ನ ಮನಸ್ಸನ್ನು ಸ೦ತೋಷಗೊಳಿಸುವ ಮತ್ತೊ೦ದು message ೯ಗ೦ಟೆ ೩೦ ನಿಮಿಷ ೩೯ ಸೆಕೆ೦ಡ್ " even i'm loving you from past two years" ಇಷ್ಟಗಲ ಬಾಯಿಬಿಟ್ಟು ಕಣ್ಣಾಗಲಿಸಿ ನೋಡಿದೆ ನನಗೆ, ಬರೆಯಲಿಕ್ಕೆಆಸಾದ್ಯವಾದ ಸ೦ತೋಷವಾಯಿತು, ಮೊದಲ ಪ್ರೀತಿ... ಮೂರು ವರ್ಷಗಳ ಪ್ರೀತಿ, ನೂರಾರು ಕನಸುಗಳನ್ನು ಕಟ್ಟಿರುವ ಪ್ರೀತಿ... ನನಗೆ ಸಿಕ್ಕಿತು!!! uffff!!!  ಇನ್ನ ಆ ದಿನದ ಆ shock ನನ್ನ ನೆನಪಿನಲ್ಲಿ ಅಚ್ಚ ಹಸಿರಗಿದೆ ,
                                                                                                       ಚಿತ್ರ ಕೃಪೆ:ರವಿ ಬೆಳಗೆರೆ
      ಅ೦ದು ರಾತ್ರಿ ೧.೩೦ ರವರೆಗೂ ನಮ್ಮ chatting  ಮು೦ದುವರೆಯಿತು ಕನಸು-ಕನವರೆಕೆಗಲೂ,ಆಸೆ-ದುಖಃಗಳು, ಹೀಗೆ ಅಲ್ಲಾವನ್ನೂ ಹ೦ಚೆಕೊಳ್ತ ಹೋದ್ವಿ, ಅಪ್ಪ-ಅಮ್ಮನ ಬಗ್ಗೆ ಮಾತಾಡ್ತಯಿದ್ಬಿ, ಕೇವಲ ೪ ಗ೦ಟೆಯಲ್ಲಿ ಬದುಕು ಸು೦ದರವೆನಿಸಿತು, ಜೀವನಕ್ಕೊ೦ದು ಅರ್ಥಸಿಕ್ಕಿತೆನಿಸಿತು   ರಾತ್ರಿ ೧.೩೧ನಿಮಿಷ "good night hubby" ಅ೦ದಾಗ ಭಾವಪೂರ್ಣವಾದ ನಗೆ ಮುಖವನನ್ನು ಅವರಿಸಿತು.ಇಡೀ ರಾತ್ರಿ ಅದೇ ಅಮಲಿನಲ್ಲಿ ಮಲಗಿದ್ದೆ, ಬೆಳಗ್ಗೆ ೧೦:೩೦ ಸಾಮಾನ್ಯವಾಗಿ ಯಾರು ಕಾಲ್ ಮಾಡದ ನನ್ನ ಫೋನ್ ರಿ೦ಗ್ ಗಾಗಿತ್ತು....ನಿನ್ನದಿರಲಿ ಅ೦ದುಕೊ೦ಡೆ!! yes it was you, ಮೊದಲ ಬಾರಿ ಕಾಲ್ ಮಾಡಿ ಏನು ಬಡಬಡಯಿಸಿದೇನೋ ಗೊತ್ತಿಲ್ಲ!? ನಾನು ಮಾತನಡುವುದಕ್ಕಿ೦ತ ನೀಡುಸುಯ್ದದ್ದೆ ಜಾಸ್ತೀ ....ಬೆಚ್ಚಿಬಿದ್ದದ್ದು ಫೋನಿಗೂ ಗೋತ್ತಗುತ್ತಿತ್ತು, ಹೀಗೆ ಒ೦ದು ವಾರದಲ್ಲಿ ಭರ್ತಿ ೪೮ ಗ೦ಟೆ ಮಾತಾಡಿದ್ವಿ without any topics,without any boundries, ನಮ್ಮ ಮಾತು visa passport ಇಲ್ಲದೆ ಇಡೀ ಜಗತ್ತನ್ನು ಸುತ್ತಿ ಬ೦ದಿತ್ತು.. ಬಹುಶಃ ಮೋಬೈಲ್ ಏನಾದರೂ ಜೀವವಿದ್ದರೆ ಅವು ನಮ್ಮನ್ನು ಬಿಟ್ಟು ಹೋಡಿಹೋಗುತ್ತಿತ್ತೆನೇ?! ಅಷ್ಟು ಮಾತಡ್ದಿ ನಿರ೦ತರ ೩-೩ ಗ೦ಟೆಗಳ ಸ೦'ಭಾಷಣೆ' ಪ್ರೀತಿ ಹೆಚ್ಚಿತ್ತು , ಭಾವನೆಗಳು ಅಲಿದಾಡುತ್ತಿದ್ದವು , ಶೃ೦ಗಾರ ಅಗೋಮ್ಮೆ ಇಗೊಮ್ಮೆ ತನ್ನ ಇರುವಿಕೆಯನ್ನು ನೆನಪಿಸಿತು, ಊಟ-ಆಟಗಳು ಮಾತು,ಜೀವ-ಜಗ್ಗತಿನ ಮಾತು , ಕನಸು-ಕನವರಿಕೆಗಳ ಮಾತು , ಪ್ರೀತಿ- ಭಾವಗಳ ಮಾತು ಅದಗಿತ್ತು.. ಮು೦ದಿನ ನಾಲ್ಕುತಿ೦ಗಳು ಅದೆಷ್ಟು ಬೇಗ ಕಳೆಯಿತು ಕಾಲವು ನಮ್ಮೊಡನೆ ಪೈಪೋಟಿಗೆ ಇಳಿದ೦ತೆ...
  ಆಗ ಬ೦ದದ್ದೆ ನಿನ್ನ ಬೋರ್ಡ್ exam ಅದಕ್ಕೆ ತೊಡಗಿದೆ.. ನಾವು ಎಷ್ಟೊ ತಿ೦ಗಳಿಗೊಮ್ಮೆ ಭೇಟಿಯಾಗುತ್ತಿದ್ದೆವೊ?? ವಾರಕೊಮ್ಮೆ ಫೋನ್ ಮಾಡಿದರು ಹೆಚ್ಚಗಿತ್ತು..   ಫೋನ್ ಮಾಡಿದಾಗ ಬೀಸಿಲಿನ ಬೇಗೆಗೆ ತ್ತತ್ತರಿಸಿ ಹೋಗಿದ್ದ ಭೂಮಿ ಮಳೆಯಾಗಿ ಕಾದು ನೀರನ್ನು ಹೀರುವ ಹಾಗೆ ಒ೦ದೇ ಸಮ ಮಾತಡ್ತಯಿದ್ವಿ, ಇನ್ನೂ ಭೇಟಿಯಾದಗಾ ನಿನ್ನ ನೋಡುತ್ತಲೆ ಮಾತಡ್ತಯಿದ್ದ ಕಣ್ಣು ಮೆಟುಕಿಸಿದರೆ ಸಾಕು ಆ split secondನಷ್ಟು ಹೊತ್ತು ಮರೆಯಾಗಿತಿಯಲ್ಲ ಅನ್ನೊ ಹಪಹಪಿ...ಇಷ್ಟು ಚೆನ್ನಗಿದ್ದ ನಮ್ಮ ನಡುವೆ ಜಗಳಕ್ಕೆ , ಮುನಿಸಿಗೆ , ಕೊಪಕ್ಕೆ ಕಾರಣವೇ ಇರಲಿಲ್ಲ.. ಅದು ಫೇ.೧೨ ೨೦೧೪ ಮದ್ಯಾನ ೦೧:೪೫ ನಿನ್ನ ಕೊನೆ ಬಾರಿ ನೊಡಿದ್ದು.. ೧೦ ತಿ೦ಗಳಾಯಿತು ನಿನ್ನನ್ನು ನೋಡಿ,ನಿನ್ನ ಮಾತಡಿಸಿ, ನನ್ನ ಭಾವನೆ ಹ೦ಚಿಕೊ೦ಡು.. ಏಣಾಯ್ತು(((?)))..............................ಗೊತ್ತಿಲ್ಲ , ಉತ್ತರಸಿಗದ ಪ್ರಶ್ನೆಯನ್ನು ಇಟ್ಟಿಕೊ೦ಡು ನಿನಗಾಗಿ ಕಾಯ್ತಯಿದ್ದಿನಿ...


ಹೇಳಿ ಹೋಗು ಕಾರಣವ ಹೋಗುವ ಮೊದಲು
ಹೇಳಿ ಹೋಗು ಕಾರಣವ ಹೋಗುವ ಮೊದಲು
ನನ್ನ ಬಾಳಿನಿ೦ದ ದೂರವಾಗುವ ಮೊದಲು
ಹೇಳಿ ಹೋಗು ಕಾರಣವ ಹೋಗುವ ಮೊದಲು..!!

ಬಲವೆ೦ದ ಹಣತೆಯ ಎದೆಯಲ್ಲಿ ಬೆಳಗಿ ಬೆಳಖದೆ ಬಾಳಿಗೆ
ಇ೦ದೆಕೆ ಹೀಗೆ ಬೆಳಕನ್ನು ತೊರೆದು ನೀನೆಕೆ ಸರಿದೆ ನೆರಳಿಗೆ
ಸುಡುಬೆ೦ಕಿ ಬೆಳಕು ಉಳುಯಿತು ನನ್ನ ಪಾಲಿಗೆ
ಹೇಳಿ ಹೋಗು ಕಾರಣವ ಹೋಗುವ ಮೊದಲು

ನನ್ನ ಬಾಳಿಗೆ ಬೆಳಕದವಳು ನೀ
ನನ್ನ ಜೀವನಕ್ಕೆ ಉಸಿರಾದವಳು ನೀ
ಏಕೇ ಮರೆಯಾದೆ ನೀ
ಒಮ್ಮೆ ಹೇಳಿ ಹೋಗು ಕಾರಣವ
ನನ್ನ ಬಾಳಿ೦ದ ದೂರವಾಗುವ ಮೊದಲು..!!
                                                                                                                      -  ಮ೦ಜುನಾಥ್

10 Sept 2014

18!!!!

  Well,looking at the time I realized that one more hour & I'll b 18!!
woow...18 years of absolute awesome life! what more can I except from this! Happiness , sorrow, parties , experience , first love , travel & what not!
 Life kept surprising me & I still feel like exploring it more ,experimenting more & extracting more off it, what a drasting change I had from last birthday to this I have turned from playfull\ , cheerful to responsblities in a race where I can achieve my goals, in a day where I can break my dreams to turn true and best of all got a prettiest n cheerful friends in my new college Shedy's ;)
 Life gave me 10+ years of childhood , 13+ years of students life, Every phase needs a transition & I kept respecting it & changing myself!! and with each transmission , I miss the previous ones!! All these phase were beyond my expectations..
  Defnately I can't remember my first day on this lovely world but I feel the protection when i slept on the laps of my angel,My MOM
 amma you are my helpmate , my friend , my love , my angel you are everythin the word mom to me, thanks for everything you gave to me , My Dad really a friend to me I can't remember the day the second you scolded to me ,not even a single time , you belived me , you were with me with all my up's n down's  DAD , I love you too....
  ನನ್ನಮ್ಮ ದೇವರಲ್ಲ....
ಅವಳಿಗಾಗಿ ಗುಡಿ ಗೋಪುರಗಳನು ಕಟ್ಟಿಸಲಿಲ್ಲ, ನೈವೇದ್ಯವಿಡಲಿಲ್ಲ, ಹೂ ಹಾರ ಹಾಕಲಿಲ್ಲ, ಗ೦ಟೆ ನಿನಾದವ ಮೊಳಗಿಸಲಿಲ್ಲ..
ಅವಳೂ ದೇವರ೦ತೆ ಸುಮ್ಮನೆ ಕೂರಲಿಲ್ಲ... ಉಸಿರ ತೇಯ್ದು, ಹೃದಯ ಬೆಸೆದು, ಪ್ರೀತಿ ಉಣಿಸಿ , ಬಾಳ ಸವೆಸಿಬಿಟ್ಟಳು.. ಆ ದೇವರಿಗಿ೦ತಾ ನೂರ್ಪಾಲು ಹೆಚಗಚಾಗಿಬಿಟ್ಟಳು..
ನನ್ನಮ್ಮ ದೇವರಲ್ಲ...

Many people thinks about the goals in this life but forget's the short term goals which leads to the big goal!! yes i'm thinking about my short term goal My dream of writing my best seller is on!! from tomorrow ... love to bring it in a year
  well , I realise , these 18 years I have spent enjoying every moment of it!! And , now it's time . Time to build my future... build myself as a man i should be proud of. I want this phase of my life also to be awesome as previous ones. This phase should be missed just like i miss the previous ones,
Hmmmm...
I'm 18!
whoaaaaa................. I,m 18

8 Sept 2014

The Importance of being ತೇಜಸ್ವಿ – ಜೋಗಿ ಬರೀತಾರೆ

   ಗಾಳ ಹೆಗಲಿಗಿಟ್ಟುಕೊಂಡು ನದಿದಡಕ್ಕೆ ನಡೆದುಹೋಗಿ ಮೌನಕ್ಕೆ ಶರಣಾಗುತ್ತಾ, ಹಳದಿ ಬಣ್ಣವನ್ನು ಅಷ್ಟಾಗಿ ಮೆಚ್ಚುತ್ತಾ,  ಕಂಪ್ಯೂಟರಿನೊಳಗೆ ತಲೆಹಾಕಿ ಕೂತು ಬೆರಗಾಗುತ್ತಾ, ಜಗತ್ತಿನ ಅಸಂಖ್ಯ ಪ್ರಯೋಗಶೀಲತೆಗೆ ಅಚ್ಚರಿಗೊಳ್ಳುತ್ತಾ, ತಾನೂ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಇದ್ದ ತೇಜಸ್ವಿ ನಮ್ಮೊಳಗಿರುವುದು ಕೇವಲ ಲೇಖಕರಾಗಿ ಅಲ್ಲ. ಅವರು ಕೂಡ ಕಾಡಿನಂತೆ, ಚಿಟ್ಟೆಯಂತೆ, ಫ‌ಳಕ್ಕನೆ ಮಿಂಚಿ ಮಾಯವಾಗುವ ಮಿಂಚುಳ್ಳಿಯಂತೆ, ಚಾರ್ಮಾಡಿಯ ಅನೂಹ್ಯ ತಿರುವಿನಂತೆ,ಕಣಿವೆಯಂತೆ, ಮಂಜಿನಂತೆ ಮತ್ತು ನಮ್ಮ ವಿಲಕ್ಷಣ ಲಹರಿಯಂತೆ.
1. ಭಾಷಣ ಮಾಡೋಲ್ಲ ಅನ್ನುತ್ತಿದ್ದರು.
2. ತುಂಬ ಓದುತ್ತಿರಲಿಲ್ಲ.
3. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು.
4. ವಿಮರ್ಶೆಗಳನ್ನು ನೆಚ್ಚಿಕೊಳ್ಳಲಿಲ್ಲ.
5. ಸಂದರ್ಶನ ಕೊಡುತ್ತಿರಲಿಲ್ಲ.
6. ಬರಹಕ್ಕಿಂತ ಬದುಕುವುದು ಮುಖ್ಯ ಎಂದು ನಂಬಿಕೊಂಡಿದ್ದರು.
7. ತನಗಿಷ್ಟವಾಗದೇ ಹೋದರೆ ತನ್ನ ಪುಸ್ತಕಗಳನ್ನೂ ಪ್ರಕಟಿಸುತ್ತಿರಲಿಲ್ಲ.
8. ಮುನ್ನುಡಿ ಎಲ್ಲಾ ಬರೆಯೋಲ್ಲ ಹೋಗ್ರೋ ಅಂತ ರೇಗುತ್ತಿದ್ದರು.
9. ಸಾಹಿತ್ಯಕ್ಕಿಂತ ಹೆಚ್ಚು ಪರಿಸರ, ತೋಟ, ಆರೋಗ್ಯ, ಅಡುಗೆ ಕುರಿತು ಮಾತಾಡುತ್ತಿದ್ದರು.
10. ಪುಸ್ತಕಗಳ ಜೊತೆ ಬಂದಿಯಾಗುವ ಬದಲು, ಕಾಡಿನಲ್ಲಿ ಲೀನವಾಗಲು ಇಷ್ಟಪಡುತ್ತಿದ್ದರು.
ಪೂರ್ಣಚಂದ್ರ ತೇಜಸ್ವಿ ಅವರಿಗೆ ಅರವತ್ತು ವರ್ಷ ಆದಾಗ ಅವರದೊಂದು ಅಭಿನಂದನಾ ಗ್ರಂಥ ತರಬೇಕೆಂದು ಕೆಲವರು ಅವರ ಬಳಿ ಅನುಮತಿ ಕೇಳಿದ್ದರಂತೆ. ಸನ್ಮಾನ ಮಾಡುವುದಾಗಿ ಹೆದರಿಸಿದ್ದರಂತೆ. ತೇಜಸ್ವಿ ಅವರನ್ನೆಲ್ಲ ಬೈದು ಝಾಡಿಸಿದ್ದರು. ಮಾಡಕ್‌ ಕೆಲ್ಸ ಇಲ್ಲ ಕಣಯ್ಯ ನಿಮಗೆಲ್ಲ, ಅರವತ್ತಾಗೋದೇ ಕಾಯ್ತಿರ್ತೀರಿ ಅಂತ ಛೇಡಿಸಿದ್ದರು. ಈಗ ಅವರಿಲ್ಲದ ಹೊತ್ತಲ್ಲಿ, ಅವರಿಗೆ ಎಪ್ಪತ್ತೈದು ತುಂಬಿದ ಸಮಾರಂಭ ಅದ್ದೂರಿಯಾಗಿ ನಡೆದೇ ಹೋಗಿದೆ.
ಒಬ್ಬ ಲೇಖಕ ಕೇವಲ ಲೇಖಕನಾಗಿ ಉಳಿಯುವುದು ಎಷ್ಟು ಕಷ್ಟ ಅನ್ನುವುದನ್ನು ತೇಜಸ್ವಿ ಅರಿತುಕೊಂಡಿದ್ದರು. ಅವರು ಮೂಡಿಗೆರೆಯನ್ನು ಪ್ರಜ್ಞಾಪೂರ್ವಕವಾಗಿಯೇ ಆರಿಸಿಕೊಂಡಿದ್ದರು ಅನ್ನುವುದು ಅವರ ಮಾತು ಕೇಳಿದವರಿಗೆಲ್ಲ ಗೊತ್ತು. ಬೆಂಗಳೂರಿನಂಥ ಮಹಾನಗರ, ಬದಲಾವಣೆ ಇಲ್ಲದ ಊರು. ಎಂದೂ ಅರಳದ ಊರು ಎನ್ನುತ್ತಿದ್ದ ಅವರು, ಅದೇ ದಾರಿ, ಅದೇ ರಸ್ತೆ, ಅದೇ ಟ್ರಾಫಿಕ್ಕಲ್ಲಿ ಕೂತು ಯಾರಾದರೂ ಏನಾದರೂ ಬರೆಯೋದಕ್ಕೆ ಸಾಧ್ಯವಾ? ಮನಸ್ಸು ಮುದುಡಿ ಹೋಗೋದಕ್ಕೆ ಒಂದು ಗಂಟೆ ಅಲ್ಲಿದ್ರೆ ಸಾಕು ಎನ್ನುತ್ತಿದ್ದರು.
ತೇಜಸ್ವಿ ಹೇಗಿದ್ದರು ಅನ್ನುವುದನ್ನು ಹತ್ತಿರದಿಂದ ನೋಡಿದವರಿಗೆ ಅಚ್ಚರಿಯಾಗುತ್ತದೆ. ಒಬ್ಬ ಲೇಖಕ ಹೀಗೇ ಇರುತ್ತಾನೆ ಎಂದು ನಂಬಿಕೊಂಡು ಹೋದವರ ಅನಿಸಿಕೆಗಳು ಸುಳ್ಳಾಗುವಂತೆ ಬದುಕಿದವರು ಅವರು. ತಮಗೆ ಏನು ಬೇಕು ಮತ್ತು ಏನು ಬೇಡ ಅನ್ನುವುದು ಅವರಿಗೆ ಗೊತ್ತಿತ್ತು. ತಾನು ಯಾರನ್ನು ಓದಬೇಕು ಅನ್ನುವುದು ಅವರಿಗೆ ಸ್ಪಷ್ಟವಿತ್ತು. ಫೋನ್‌ ಮಾಡಿದಾಗೆಲ್ಲ, ನಾನು ಇಂಥ ಲೇಖಕನ ಇಂಥಾ ಪುಸ್ತಕವನ್ನು ಓದಿದೆ ಅಂತ ಹೇಳುವ ಚಟವಂತೂ ಅವರಿಗೆ ಇರಲೇ ಇಲ್ಲ. ಹಾಗೆ ನೋಡಿದರೆ ಅವರು ಅಷ್ಟಾಗಿ ಓದುತ್ತಲೂ ಇರಲಿಲ್ಲ. ಕೂತು ಓದುವುದಕ್ಕಿಂತ ಬೇರೆಯವರ ಜೊತೆ ಸುತ್ತಾಡುವುದರಲ್ಲಿ, ಹರಟುವುದರಲ್ಲಿ ಅವರಿಗೆ ಆಸಕ್ತಿ. ಮೂಡಿಗೆರೆಯ ಪೇಟೆಯಲ್ಲಿ ಅಡ್ಡಾಡುತ್ತಾ, ಯಾರ್ಯಾರದೋ ತರಲೆ ತಾಪತ್ರಯದ ಮೂಲ ತಿಳಿದುಕೊಳ್ಳುತ್ತಾ, ತೋಟಕ್ಕೆ ಬರುವ ಹೊಸ ಹಕ್ಕಿಗಳಿಗಾಗಿ ಕಾಯುತ್ತಾ, ಯಾವ ಹೊಂಡಕ್ಕೆ ಯಾವ ಕಾಲಕ್ಕೆ ಯಾವ ಮೀನು ಬರುತ್ತದೆ ಎಂದು ಊಹಿಸುತ್ತಾ ಇದ್ದವರು ಅವರು.

ಚಿತ್ರ ಕೃಪೆ : ಪಂಜು ಗಂಗೊಳ್ಳಿ
ತೇಜಸ್ವಿ ಅವರ ಥರ ಬದುಕುವುದು ಒಬ್ಬ ಲೇಖಕನ ಅನಿವಾರ್ಯತೆಯೂ ಹೌದೇನೋ? ಒಂದು ರಾಶಿ ಪುಸ್ತಕವನ್ನು ಮನೆಯಲ್ಲಿ ತಂದು ಒಟ್ಟಿಕೊಂಡು, ಯಾವುದನ್ನೂ ಓದಲಾಗದೇ, ಓದಿದ ಪುಸ್ತಕಗಳು ಕೊಡುವ ಸಿಟ್ಟನ್ನು ತಾಳಿಕೊಂಡು, ತನ್ನ ಸಹನೆಯನ್ನು ಕಳಕೊಳ್ಳುವುದು ಯಾರಿಗೆ ಬೇಕೋ ಮಾರಾಯಾ ಎಂದು ಹೇಳುತ್ತಿದ್ದ ತೇಜಸ್ವಿ, ಬಹುಶಃ ಒಂದೇ ಒಂದು ಪುಸ್ತಕಕ್ಕೂ ಮುನ್ನುಡಿ ಬರೆದು ಕೊಟ್ಟಂತಿಲ್ಲ. ಪುಸ್ತಕ ಕಳಿಸೋದು ಕಳಿಸಿ, ಓದು ಅಂತ ಮಾತ್ರ ಹೇಳಬೇಡ ಅಂತ ನೇರವಾಗಿಯೇ ಹೇಳುತ್ತಿದ್ದ ಅವರು, ಲೇಖಕ ನಿಜಕ್ಕೂ ಪಡಕೊಳ್ಳುವುದೇನಾದರೂ ಇದ್ದರೆ, ಅದು ತನ್ನ ಪರಿಸರದಿಂದ ಎಂಬುದನ್ನು ಅರ್ಥಮಾಡಿಕೊಂಡಂತೆ ಬರೆದವರು. ಕೊಟ್ಟಿಗೆಹಾರಕ್ಕೆ ಬಂದೊಡನೆ ಅಲ್ಲೊಂದು ಜುಗಾರಿ ಕ್ರಾಸ್‌ ಅವರಿಗೆ ಕಾಣಿಸಿಬಿಡುತ್ತಿತ್ತು. ಆ ನಿರ್ಜನ ಏಕಾಂತದ ಊರಿಗೆ ಯಾರಾದರೂ ಯಾಕೆ ಬಂದು ನೆಲೆಸುತ್ತಾರೆ ಎಂಬ ಪ್ರಶ್ನೆ ಮೂಡುತ್ತಿತ್ತು. ಪ್ಲಾಸ್ಟಿಕ್ಕು ಬಂದದ್ದೇ ತಡ ಮೇದರಹಳ್ಳಿಯಂಥ ಒಂದು ಹಳ್ಳಿಯೂ ಅಲ್ಲಿದ್ದ ಸಮುದಾಯವೂ ನಾಶವಾದ ಚಿತ್ರ ಅವರ ಕಣ್ಮುಂದೆ ಸುಳಿಯುತ್ತಿತ್ತು.
ತೇಜಸ್ವಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡವರಲ್ಲ. ತೀರಾ ಒತ್ತಾಯ ಮಾಡಿದರೆ, ತಮಗೆ ಆಪ್ತರಾದವರ ಕಾರ್ಯಕ್ರಮಗಳಿಗೆ ಹೋಗಿ, ಹಿಂದೆ ಕೂತು ಬರುತ್ತಿದ್ದರು. ವೇದಿಕೆಯ ಮೇಲಿಂದ ಮಾತಾಡುತ್ತಿದ್ದುದಂತೂ ತೀರಾ ಕಡಿಮೆ. ಸಂದರ್ಶನ ಕೊಡಿ ಅಂತ ಕೇಳಿದಾಗೆಲ್ಲ, ಹಾಳಾಗಿ ಹೋಗೋ.. ಎಂದು ತಮಾಷೆಯಾಗಿ ಬೈಯುತ್ತಿದ್ದ ತೇಜಸ್ವಿ, ಅಂಥ ಖ್ಯಾತಿಯನ್ನು ಬಯಸಿದವರೂ ಅಲ್ಲ. ಹಾಗೆ ನೋಡಿದರೆ ಅವರ ಪುಸ್ತಕಗಳ ಬಗ್ಗೆ ವಿಮರ್ಶೆ ಕೂಡ ಬರುತ್ತಿರಲಿಲ್ಲ. ಒಂದಿಬ್ಬರು ವಿಮರ್ಶಕರನ್ನು ಬಿಟ್ಟರೆ, ಯಾರೂ ಕೂಡ ಅವರ ಬಗ್ಗೆ ಬರೆಯುವ ಪ್ರಯತ್ನ ಕೂಡ ಮಾಡಲಿಲ್ಲ.
ತರುಣ ಓದುಗರನ್ನು ಅವರಂತೆ ಸೆಳೆದವರು, ಓದಿಗೆ ಹಚ್ಚಿದವರು ಮತ್ತೂಬ್ಬರಿಲ್ಲ ಎಂದೇ ಹೇಳಬೇಕು. ಪರಿಸರದ ಕತೆ, ಕರ್ವಾಲೋ ಮತ್ತಿತರ ಕೃತಿಗಳನ್ನು ಅವರು ಬರೆದದ್ದು ಕಂತು ಕಂತಾಗಿಯೇ. ವಾರ ವಾರ ಎಷ್ಟು ಬೇಕೋ ಬರೆದು ಕಳುಹಿಸುತ್ತಿದ್ದರು. ಬರೆದದ್ದನ್ನು ಮತ್ತೂಮ್ಮೆ ತಿದ್ದುವ ಗೋಜಿಗೆ ಹೋಗುತ್ತಿರಲಿಲ್ಲ. ಒಂದೇ ಒಂದು ಅಚ್ಚಿನ ದೋಷ ಇಲ್ಲದಂತೆ ಎಚ್ಚರ ವಹಿಸುತ್ತಿದ್ದರು. ಅವರೊಳಗೆ ಕತೆ ಹುಟ್ಟುತ್ತಲೇ ಹೋಗುತ್ತಿತ್ತು, ನದಿಯಂತೆ ಹರಿಯುತ್ತಿತ್ತು.
ಕಾಫಿ ಬೆಲೆ, ಸೆಪ್ಟೆಂಬರ್‌ ಮಳೆ, ಹಾರುವ ಓತಿ, ಮನೆ ಹಿಂದಿನ ಕೆರೆ, ಕಿವಿ ಎಂಬ ನಾಯಿ, ಪ್ಯಾರ ಎಂಬ ಹುಡುಗ, ಸಾಬಿ ಅಂಗಡಿಯ ಬಿರಿಯಾನಿ, ಪೋಸ್ಟ್‌ ಮ್ಯಾನ್‌ನ ಸೈಕಲ್ಲು, ಹಾವುಗೊಲ್ಲರ ತರಲೆಗಳನ್ನೆಲ್ಲ ನೋಡುತ್ತಾ, ಗಾಳ ಹೆಗಲಿಗಿಟ್ಟುಕೊಂಡು ನದಿದಡಕ್ಕೆ ನಡೆದುಹೋಗಿ ಮೌನಕ್ಕೆ ಶರಣಾಗುತ್ತಾ, ಹಳದಿ ಬಣ್ಣವನ್ನು ಅಷ್ಟಾಗಿ ಮೆಚ್ಚುತ್ತಾ, ಕಂಪ್ಯೂಟರಿನೊಳಗೆ ತಲೆಹಾಕಿ ಕೂತು ಬೆರಗಾಗುತ್ತಾ, ಜಗತ್ತಿನ ಅಸಂಖ್ಯ ಪ್ರಯೋಗಶೀಲತೆಗೆ ಅಚ್ಚರಿಗೊಳ್ಳುತ್ತಾ, ತಾನೂ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಇದ್ದ ತೇಜಸ್ವಿ ನಮ್ಮೊಳಗಿರುವುದು ಕೇವಲ ಲೇಖಕರಾಗಿ ಅಲ್ಲ. ಅವರು ಕೂಡ ಕಾಡಿನಂತೆ, ಚಿಟ್ಟೆಯಂತೆ, ಫ‌ಳಕ್ಕನೆ ಮಿಂಚಿ ಮಾಯವಾಗುವ ಮಿಂಚುಳ್ಳಿಯಂತೆ, ಚಾರ್ಮಾಡಿಯ ಅನೂಹ್ಯ ತಿರುವಿನಂತೆ,ಕಣಿವೆಯಂತೆ, ಮಂಜಿನಂತೆ ಮತ್ತು ನಮ್ಮ ವಿಲಕ್ಷಣ ಲಹರಿಯಂತೆ.
                                                                                          ಕೃಪೆ:ಅವಧಿ

3 Sept 2014

ಒ೦ದು ಪ್ರೇಮ ಕಥೆಯು ಭಾಗ-೨

ನನಗೆ ಪುಸ್ತಕ ಓದೊ ಆಸೆ ಹುಟ್ಟಿಸಿದ ರವಿ ಬೆಳಗೆರೆ‍ sirನ ಮಾ೦ಡೋವಿಯಿ೦ದ ಪ್ರೇರಿತ.. 
ಒ೦ದು ಪ್ರೇಮ ಕಥೆಯು ಭಾಗ-೧ನ್ನು ಓದಲು ಇಲ್ಲಿ click ಮಾಡಿ ..
(ಹಿ೦ದಿನ ಭಾಗದಲ್ಲಿ)
ಐಶ್ವರ‍್ಯಳನ್ನು ನೋಡಿದ ವಿಶಾಲ್ ಅವಳಿಗಾಗಿ ಭರ್ತಿ ಐದು ಪುತದ ಪತ್ರವನ್ನು ಬರೆದು ಆಕೆಗೆ ಕೊಟ್ಟನು.. ಅದನ್ನು ಓದಿದ ಐಶ್ವರ‍್ಯಳ ಹೃದಯದಲ್ಲೆನೋ ತಳಮಳ ಬಹುಶಃ ಐಶ್ವರ‍್ಯ ವಿಶಾಲ್ ಗೌಡನನ್ನು ಪ್ರೀತಿಸತೋಡಗಿದಳು..
 


   ನನ್ನ ಪತ್ರ ಓದಿದ ನ೦ತರ ಅದಕ್ಕೆ ಉತ್ತರವಾಗಿ ಪತ್ರ ಬರಿ ಎ೦ದು ಸೂಚಿಸಿದ್ದ ವಿಶಾಲ್.. ಮು೦ದಿನ ದಿನ ಬ೦ದವರೆ ಅವಳ ಬರುವಿಕೆಗಾಗಿ ಪಾರ್ಕ್ ನಲ್ಲಿಕಾದು ಕೂತರು.. no she did not arrived, ಎರಡನೇ ದಿನ  no ಬ೦ದಿಲ್ಲ .. ಹೀಗೆ ಒ೦ದಾದ ಮೇಲೊ೦ದು ದಿನಗಳು ಉರುಳಿದವು ಆದರೆ ಯಾವುದೇ ಉತ್ತರ ಬರಲ್ಲಿಲ್ಲ.. ತನ್ನ ಮನಸ್ಸುಸೀಮಿತ ಕಳೆದುಕೊ೦ಡದ್ದು ವಿಶಾಲ್ ಗೌಡನಿಗೂ ಗೊತ್ತಗಲಿಲ್ಲ, ರಾತ್ರಿ ಒಬ್ಬನೆ ತನ್ನ roomನೊಳಗೆ ಸೇರಿಕೊ೦ಡು ಆಳ ತೊಡಗಿದ್ದನು.. ತಾಯಿ ನೇಮಿಲಾರ ಸೀತಮ್ಮ ಊಟಕ್ಕೆ ಬಾ ಎ೦ದು ಕೂಗಿದರು ಅವನ ಮನಸ್ಸಿಗೆ ತಗಾಲಿಲ್ಲ. ಸುಮಾರು   ಅರ್ಧಗ೦ಟೆ ತಾಯಿ ಕೂಗಿದಾಗ ಬ೦ದ೦ಥ ಉತ್ತರ "ಹಸಿವಿಲ್ಲ" ಎ೦ದು ಸೀತಮ್ಮ ತಟ್ಟೆಯಲ್ಲಿ ಅನ್ನ ಕಲಿಸಿ ಮಗನ ಬಳಿ ಬ೦ದವಾಳೆ , ನೀಚ್ಛೆತವಾದ ಮುಖ ನೋಡಿ ತಾಯಿಗೆ ತನ್ನ ಮಗನ ನೋವು ಏನೆ೦ದು ತಿಳಿಯಿತು ...

  "ಪ್ರಿತಿಸ್ತ ಇದ್ಯಾ" ಕೇಳೆಬಿಟ್ಟಳೂ ತಾಯಿ.. ಅದಾ ಕೇಳಿಸಿಕೊ೦ಡವನೆ ತನ್ನ ಪ್ರೀತಿಯಾ ಐಶ್ವರ‍್ಯಳಿಗೆ ರಚಿಸಿದ್ದ ಸುಮಾರು ೪೦ ಪುಟಗಳ  ಖ೦ಡಕಾವ್ಯವನ್ನು ಅವಳ ಕೈಗಿಟ್ಟ.. ತಾಯಿಯ ಮನಸ್ಸು ಸ೦ತೋಷದೊಡನೆ ನೋವುಪಟ್ಟಿತು... ತಾಯಿ ನೇಮಿಲಾರ ಸೀತಮ್ಮ ತನ್ನ ಜೀವನದ ಅತ್ಯ೦ತ ಸು೦ದರವಾದ ಭಾಗಕ್ಕೆ.. ತಾನು ಸ೦ತಸದಿ೦ದ ಕೂಡಿದ್ದ ಕಾಲಕ್ಕೆ ಜಾರಿದಳು.. ಕನಸ್ಸುಗಳಿಲ್ಲಿದ ರಾತ್ರಿಗಳು, ಅಸಿವಾಗದ ದಿನಗಳು.. ಪ್ರಿತಿಸಿದಾತ ಸಿಕ್ಕಾರೆ ಸಾಕೆ೦ಬ ಮನೋಭವ....!!

  "ಹುಡುಗಿಗೆ ತಿಳಿಸಿದ್ಯಾ ಮಗು" ಪ್ರೀತಿಯಿ೦ದ ಕೇಳಿದಳು ತಾಯಿ ನೇಮಿಲಾರ ಸೀತಮ್ಮ , ವಿಶಾಲ್ ಒ೦ದು ಕಳ್ಳ ನಗೆ ಬೀರುತ್ತಾ ಪತ್ರ ಕೊಟ್ಟು ೧೪ ದಿನವಾಯ್ತು ಎ೦ದು ಸಪ್ಪಗಾದ , ಮಗು ಅವಳ ಉತ್ತರಕ್ಕಾಗಿ ಕಾದು ಕೂಡುವುದು ಬೇಡ.. ಆಕೆಯನ್ನು ನೇರವಾಗಿ ಮಾತನಡಿಸು ಎ೦ದಳು ಸೀತಮ್ಮ

ಮರುದಿನ ಐಶ್ವರ‍್ಯಳನ್ನು ಕೇಳಿಯೆಬಿಟ್ಟ ವಿಶಾಲ್.. ಅವನು ಅವಳ ಬಳಿ ಹೋದೊಡನೆ ಐಶ್ವರ‍್ಯ ಕುಳಿತಲ್ಲೆ ಕ೦ಪಿಸಿದಳು..
ಅದು ನೀಷಿದ್ದ ಪ್ರೇಮದ ಶಾಪಕ್ಕೆ  ತುತ್ತಾದ ಪ್ರೇಮಿಗಳ ಕಣ್ಣುಗಳು ಕಲಿಯುವ ನೀರಕ್ಷರ ಭಾಷೆ ... ಕಣ್ಣಲ್ಲೆ ಮಾತು ನೋಟದಲ್ಲೆ ಭರವಸೆ, ನಡಿಗೆಯಲ್ಲೆ ಅನುಸ೦ದಾನ, ವಿಶಾಲ್ ಏನು ಕೇಳಬೆಕೊ ತೋಚದೆ ಬೆಪ್ಪನೆ ನಿ೦ತಾ..

   "ಇಷ್ಟು ದಿನ ಯಾಕೆ ಬರಲಿಲ್ಲ?" ಅ೦ದುಬಿಟ್ಟಳು.
 ಅ೦ಥ ಪ್ರಶ್ನೆಯೆದುರಿಸಲು ಸಿದ್ದವಾಗಿ ಬರಲು ವಿಶಾಲ್ ಗೌಡನಿಗೆ ಕಾರಣವೇ ಇರಲಿಲ್ಲ. ನಿ೦ತಲ್ಲೆ ಹೆಜ್ಜೆ ತುಳಿದಾಡಿದ.
 "ಅಲ್ಲ.... ನನ್ನ ಪತ್ರಕ್ಕೆ ಉತ್ತರ ಕೊಡಲಿಲ್ಲ?" ಸಿದ್ದವಾಗಿ ಬ೦ದಿದ್ದ ಪ್ರಶ್ನೆ ಕೇಳಿದ.
"ಕೊಡೋದು ಹೇಗ೦ತಾ ಗೊತ್ತಗಲಿಲ್ಲ!" ಉತ್ತರಿಸಿದವಳ ಕಣ್ಣಲ್ಲಿ ಸತ್ಯವಿತ್ತು..
"ಕೊಡಬೇಕಾದ್ದು ಮನುಷ್ಯತ್ವ" ಸಿಡುಕಿದ ವಿಶಾಲ್.
"ರಜೆ ಮುಗಿಯೋದರೊಳಗೆ!" ಭರವಸೆ ಮಾತಗಿ ಮೊಳೆದಿತ್ತು. ಮತ್ತು ಐಶ್ವರ‍್ಯ ನೀಡಿದ ಭರವಸೆ ಈಡೇರಿಸಿದಳು..
                                                                                    (ಮು೦ದುವರೆಯುತ್ತದೆ-to be continued)

2 Sept 2014

ಪ್ರೀತಿಯ ಹೂಗಳಿಗೆ ಕವನಗಳ ಜಾತ್ರೆ

   ಬರೆಯ ಬಯಸಿದೆ ಕವನವ
ಏನೆ೦ದು ತಿಳಿಯದೆ ವಿ‍‍ಷಯವ
ಶೂನ್ಯವಾಗಿಹುದು ಈ ಮನವು
ಇನ್ನೆಲ್ಲಿ ನನ್ನ ಕವನಗಳಿಗೆ ಉಳಿವು

ಅ೦ದಿನ ಕವನಗಳಿಗೆ ಉತ್ತರವಾದವಳು
ಇ೦ದಿನ ಖಾಲಿ ಹಾಳೆಗೆ ಪ್ರಶ್ನೆಯಾದವಳು
ನನ್ನೀ ಬದುಕ ಶೂನ್ಯವಾಗಿಸಿಹಳು
ಈ ಬಡ ಜೀವನ ಶವವ೦ತಾಗಿಸಿಹಳು

ಈ ಶವದ ಮು೦ದಿಹುದು ಬೆಳಕು
ಆದರೆ ಬೆಳಕ ನೋಡಳು ಅದಕಳುಕು
ಕಾರಣ ಶವದ ಜೀವನ ಕೆಲ ಘ೦ಟೆಗಳು ಮಾತ್ರ
ಒಮ್ಮೆ ಬೆಳಕಿಗೆ ಮುಗಿಬಿದ್ದೊಡೆ ಕೇವಲ ಕ್ಷಣಿಕ
         

1 Sept 2014

Tunnel vission

The tunnel smelled like death.

That was the first thought that went through Pratap Kulkarni’s mind as he stood in front of it. The tunnel gaped in front of him like the maw of an ancient monster. The inner walls, once yellow, were now a dark, rusty brown. The ceiling was lined with cobwebs, and the cool night breeze brought its scent to Pratap’s nose. The smell of old rubber tires and the sickly-sweet scent of dead leaves.

The tunnel had been closed down for a year now. It had been a disaster. The lighting had been poor from the start. Half the bulbs that had been installed went defunct in a month.  The rest had flickered dimly, causing a spate of violent accidents. Finally, with the death of a businessman last year, the tunnel had been out of commission.

The route of the cars had been changed, so the cars had to go around the mountain to get into the city. It took 40 minutes. The tunnel would have taken 5. But nobody objected to the tunnel being closed off. Everyone agreed that the thing was plain spooky.

Pratap gazed at the mouth of the tunnel. His legs were shivering, but not from the cold. He had heard enough ghost stories about this tunnel to last him a lifetime. Rumours about the ghosts of the accident victims ran wild and he wasn’t very anxious to see if they were true. But he had no choice.

He sighed and looked at the parcel in his hand. A toy car, gift wrapped in yellow paper for his son. It was Christmas Eve. His wife would be staying up to see him. They always prayed at midnight on Christmas. It was more of a necessity than a tradition. He looked at his watch. 11.30pm. He had to get home soon. The normal way into the city took an hour to go by. The tunnel would be much faster. He could get home before Christmas.

The solitary lamppost next to him flickered, the dancing beams casting frightening shadows at the foot of the tunnel, not helping the gnawing fear in his chest. He glanced at the post, noticing a piece of paper stuck at the bottom, like a pamphlet of some sort. It looked new.

He took a deep breath. “There are no such things as ghosts,” He said to himself. The tunnel seemed to be laughing at him, the shadows beckoning him forward. He took his phone out of his pocket to call his wife, and cursed softly.

The display was shattered. He had forgotten that he’d broken it earlier in the day. It had fallen to the floor from the second floor office window, all smashed up. He threw the pieces into the bushes nearby and looked at the tunnel again; his face contorted in a grimace, and started to walk.

He stood a couple of feet from the tunnel now, and peered inside. It was completely dark. Not a single source of light was visible anywhere. He couldn’t even see the lights at the other end. His heart beat quickened. “Stupid,” He told himself, setting foot inside the tunnel. He wasn’t claustrophobic. There was nothing to be scared of.

That was precisely when an old story about the tunnel came to his mind. This was the one that had given him nightmares for weeks. He heard it from the people who worked with him. A year ago, on Christmas Eve, a pizza delivery boy had tried to walk through the tunnel, but he was killed in an accident. A truck had run over him, crushing every bone in his body, and decapitating him. They said the head was never found, and the ghost of the pizza boy was the one most people had reported seeing, searching for its missing head.

“Old wives tales,” He thought. He had to get home. Tonight was special. Very special. He stepped inside the tunnel.

He walked slowly, his feet echoing with every step. His eyes darted left and right, trying to get accustomed to the darkness. A single line of sweat was running down his back, tracing a perfect line down his spine. His breathing was getting shallow and ragged by the second, his heart still thumping in his chest.

The darkness of the tunnel seemed to press down on his face. He seemed to be suffocating under the absence of light, his breath coming out in wheezes. He turned around, looking for the way he had come, but there was no light there as well. He seemed to have been trapped in a vortex of darkness.

His hands were trembling as he patted his pockets for his cell phone. Too late, he remembered how he had thrown the pieces away. It was broken anyway, there was no way he could have used it. He blinked furiously, trying to get rid of the sweat creeping down his forehead and into his eyes. His ears strained for some noise- the chirping of insects or the rumble of cars from the outside- but he could hear none, save for his own heart, which was sprinting in his chest, the sound as though magnified ten times.

He was close to tears now, the numerous accounts of ghost stories coming back to him, as he imagined one ghostly form to another, passing before his eyes, his feet staggering wildly, trying to find the exit. There seemed to be no way out. He moved slowly, his hand desperately searching for some kind of hold on the tunnel wall, but only finding empty air.

Then suddenly, he heard a noise. He stopped, his senses sharper. His ears strained to recognise what the sound was. Tap-Tap-Tap-Tap. Someone was coming!

He went perfectly rigid, not moving a muscle. He wasn’t even breathing, his heart rate now doubled. His nose took in the musty scent of the tunnel, now with a small scent of something else. Something like… was that pizza?

His eyes went wide. He was the faintest outline of a man, coming towards him. Only a rippling shape, just about decipherable in the inky darkness. The man was shorter than Pratap, approaching slowly. Pratap looked at him fearfully, as the man’s hand went to his pocket, and took something out.

A faint light appeared in the man’s hand. It was a cell phone, and the time showed 11.50 pm. The man was dressed in a red shirt and blue jeans, holding a pizza delivery bag. The hands were wheatish in complexion, with short fingers.

“Just a pizza delivery boy. Probably making a late night delivery,” Thought Pratap, relief filling his heart. That was when he looked up to the Pizza boy’s face.

He had no head.

Where there should have been a head, there was nothing. A portion of empty, black space, under which the neck and body hovered, lit by the faint blue light of the cellphone.

Pratap stiffened. His whole body shook as he backed away, a finger pointed at the ghost. He was trembling violently, trying to scream. But no sound came out. It was as if the sight had frozen his vocal cords, rendering him unable to speak. The headless man stood calmly, phone in one hand. And he reached out with the other, going for Pratap’s face.

Pratap ran. He turned the other way and ran for his life. The headless man watched him run until he became part of the shadows of the cave, and was not visible anymore.

The headless man stood there for another moment, trying to hear the footsteps of the man who had just ran. He heard nothing. And then he started to laugh. He laughed hard, doubling over and clutching his stomach. He straightened up and took off the pitch-black towel which was covering his face and wrapped it around his neck like a scarf.

“Wish the guys from work had seen that!” he thought to himself.

He walked slowly, holding the mobile phone in front of him, grinning to himself. He had planned to dress up like the headless pizza boy and scare someone for ages. He had finally tried it out today, and the result had been fantastic! He chuckled again, as he came out of the tunnel, breathing in the cool night air.

He stretched his arms, and ran his fingers through his air, thinking about the dude who had run away.

“Nice,” He thought. “Maybe I’ll do this some other time,” He looked at his surroundings, and saw the old lamppost, the old bulb inside it flickering away. It was time for him to go home. He walked a couple of paces and looked down, cursing. His shoe had come undone.

He looked around and went across to the lamppost and put his foot on it, tying the laces. His eyes wandered over the rusty post, and fell upon a piece of paper stuck to the bottom. It looked new. He bent down and read it. The text was small, but not hard to make out. It was like an obituary, the kind you see in newspapers. It said:

“First death anniversary. Died inside the tunnel on Christmas Eve last year, hit by a car. Mourned by his wife and son. You will live on in our hearts.”

It sounded cheesy, like the people who had printed it hadn’t wanted to spend a lot of money on it. He glanced at the name under the black and white photograph of the dead guy which was under the text.

“Pratap Kulkarni.”

The picture of the man seemed vaguely familiar. Like someone you once knew but now forgotten. He gazed at the picture intently, hoping for some flash of recognition. None came.

He sighed and got up again, dusting his knees.

“Ghosts,” he said to himself and smiled. Ghosts didn’t exist.

He started to walk slowly, away from the tunnel, towards home, the solitary lamppost winking behind him; like they shared some dark secret.

close