29 Nov 2014

ನೆನಪಿನ ಚಳಿಯಲ್ಲಿ!!

     ಎಲ್ಲಿ೦ದಲೋ ತುರಿಬ೦ದ ನಿನ್ನ ಹೆಸರು ನನ್ನ ಮನಸ್ಸಿನೊಳಗೆ ನುಗ್ಗಿ , ಕೊ೦ಚ ಹೊತ್ತಿನಲ್ಲಿ ಆ ಹೆಸರು ವಿಚಾರವಾಗಿ , ಭಾವನೆಯಾಗಿ , ಪ್ರಶ್ನೇಯಾಗಿ ಕಾಲೂರಿ ನಿ೦ತುಬಿಟ್ತು. ನೀನು ಬೇಕು ಅನಿಸ್ತಿಯಾ ನನ್ನ ಮಾತಿಗೆ , ನನ್ನ ಮೌನಕ್ಕೆ , ನನ್ನ ಉಸಿರಿಗೆ , ನನ್ನ ಬದುಕಿಗೆ... ಎಷ್ಟು ತಿಂಗಳಾಯ್ತು ನಿನ್ನ ನೋಡಿ..

   ನಾನು ಇದು ನಿನಗಾಗಿ ಬರೆಯುತ್ತಿರುವ 26ನೇ ಪತ್ರವಿರಬಹುದು.. I know ಇದು ಕೂಡ ನೀನು ಓದಲ್ಲ ಅಂತ , ಆದರೆ ನಾನು ನಿನಗಾಗಿ ಇಂತಹಃ ಎಷ್ಟು ಪತ್ರ ಬೇಕಾದರೂ ಬರೆದು ಕಾಯ್ತ ಇರ‍್ತೀನಿ ಡಿಯಾರ್‌.

    ಯಾಕೋ ಇವತ್ತು ಆ ದಿನ ನಾನು ನೀನು ಆ ಕತ್ತಲ ರಾತ್ರಿಯ ಚುಮು ಚುಮು ಚಳಿಯಲ್ಲಿ ನಾಗರಭಾವಿಯಿಂದ ಕೆಂಗೇರಿವರೆಗೂ ಹೋಗಿದ್ವಲ್ಲ ಆ ಪುಟ್ಟ ರೈಡ್‌ ತುಂಬಾ ನೆನಪಾಗ್ತಯಿದೆ . ಅವತ್ತು SEP 11 ನನ್ನ ಬರ್ತ್‌ಡೇ ಬೆಳಗ್ಗೆನೆ ಯಾಕೋ ಫೋನ್‌ ಮಾಡಿ ಮಲ್ಲೆಶ್ವರಂಗೆ ಬಾ ಅಂದ್ಯಲ್ಲ ಅದಕ್ಕೆ ಕಾಲೇಜ್‌ ಬಂಕ್‌ ಮಾಡಿ ಬಂದು ನಿಂತವನಿಗೆ ಅಷ್ಟು ದೊಡ್ಡ ಶಾಕ್‌ ಕೋಡೊದ ನೀನು ? ತುಂಬಾ ಭಯವಾಗಿತ್ತು ಅವತ್ತು . ಹಳ್ಳಿಮನೆಯ ನುಂದೆ ಸುಮ್ಮನೆ ನಿನಗಾಗಿ ಕಾಯುತ್ತ ನಿಂತಿದ್ದಾಗ ಅಪ್ಪನ ಜೊತೆ ಬಂದಿದ್ಯಲ್ಲ . I was shocked . " ಅಪ್ಪ ಇವನು ನನ್ನ ಕೋತಿಮರಿ ಫ್ರೇಂಡ್‌ ಮಂಜು , ಇವತ್ತು ಇವ್ನ ಬರ್ತ್‌‌‌ಡೇ , Let's make it special " ಅಂತ ಅಪ್ಪನಿಗೆ ಪರಿಚಯಾ ಮಾಡಿಸಿದಲ್ಲಾ . I was surprised!!

   ಅವತ್ತು ಇಡಿ ದಿನ ನಿನ್ನೊಂದಿಗೆ ಕಳೆದುಬಿಟ್ಟಿದ್ದೆ . ಅದೇ ದಿನ ರಾತ್ರಿ 9 ಗಂಟೆಗೆ ಹೋಗಿದ್ವಲ್ಲ ಆ ಪುಟ್ಟ ರೈಡ್‌ ಎಷ್ಟು ಚೆನ್ನಾಗಿತ್ತಲ್ವ . ಎಷ್ಟು ಚಳಿ ಇತ್ತು ಅವತ್ತು . ಆಗ University ಗೇಟ್‌ ಬಳಿ ಇದ್ದ ಗಣೇಶನ ಗುಡಿಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಪೂಜೆ ಮಾಡಿಸಿದಲ್ಲ . I felt blessed . ಪುಟ್ಟ ಮಗುವಂತೆ ನನಗೆ ಕುಂಕುಮ ಇಟ್ಟು " ಕೋತಿ ಯಾವಗಲು ಚೆನ್ನಗೀರೊ , don't forget your dreams.. just chase them . I love you ಕಣೋ " ಅಂತ ಎಷ್ಟು ಪ್ರೀತಿಯಿಂದ ಹೇಳ್ತಯಿದ್ದೆ. ನಿನ್ನ ಆ ಮಾತುಗಳು ಇನ್ನ ನನಗೆ ಹಾಗೇ ನೆನಪಿದೆ.. ಮುದ್ದು ಮುದ್ದುಗಿ ಕಣ್ಣು ಮಿಟುಕಿಸುತ್ತಾ ಪಟಪಟ ಅಂತ ಮಾತಡ್ತಾ ಇದ್ದೆ .  ನಾನು ಮಾತಿಗಿಂತ ನಿನ್ನ ಮೋಡಿದ್ದೆ ಜಾಸ್ತಿ . You were soo affordable that day . universityಯ  ಬೆಳಕಿಲ್ಲದ ಆ ಕತ್ತಲ ರಸ್ತೆಯಲ್ಲಿ " ಹೋಗೊ ನಿನ್ನ bike ಚೆನ್ನಾಗಿಲ್ಲ , Its not comfortable to sit , ನಡೆದುಕೊಂಡು ಹೋಗಣ ಬಾರೋ " ಅಂತ ಹೇಳಿದಲ್ಲ . ನಂಗೊತ್ತು ಪ್ರೀತಿಯ ಆ ಕತ್ತಲ ರಾತ್ರಿಯಲ್ಲಿ ನೀನು ನನ್ನ ಜೊತೆ ನಡೆದುಕೊಂಡು ಹೋಗ ಆಸೆ ಇತ್ತು ಅಂತ. ಅಲ್ಲಿದ್ದದ್ದೂ ನಾನು , ನೀನು , ನಮ್ಮ ಪ್ರೀತಿ , ಅ ಚಂದ್ರ ಮತ್ತು ಹಾಗೊಮ್ಮೆ - ಇಗೊಮ್ಮೆ ವಾಹನಗಳ ಬೆಳಕಿನಲ್ಲಿ ಬೆಳಗುತಿದ್ದ ರಸ್ತೆ . ಅಲ್ಲಿ ಮಾಗಳಿಲ್ಲದ ನಿಚ್ಚಳ ಮೌನ , ಬರೀ ಕಣ್ಣಲ್ಲೆ ಗಂಟೆಗಟ್ಟಲೆ ಮಾತಡಿಸಿದರು ಸಾಲದಷ್ಟು ಭವನೆಗಳು , ಅಲ್ಲಿ ಇದ್ದದ್ದು ನೂರಾರು ದಿನಗಳ ಅರಾಧನೆ , ಮೌನದಲ್ಲೆ ಕೂಡಿದ್ದ ಮಾತುಗಳು , ಭಾವನೆಗಳೇ ತುಂಬಿದ್ದ ಕಣ್ಣುಗಳು . ಸುಮ್ಮನೆ ಅಷ್ಟು ಚಳಿಯ ರಾತ್ರಿಯಲ್ಲಿ ನಡೆದು ಹೋಗಿದ್ದವು . It was just me & You ..

    Woooow!! ಇಗಲು ಅದೇ ರೀತಿ ಚಳಿಯಿದೆ , ನೀನಗಿಷ್ಟವಿಲ್ಲದ ಅ ಬೈಕ್‌‌ ಹಾಗೆ ಇದೇ . ಕತ್ತಲ ರಸ್ತೆ , ಗಣೇಶನ ಗುಡಿ ಎಲ್ಲವೂ ಹಾಗೆ ಇದೆ . Dear let's go far a walk ಅಲ್ವ ;)


ಚಳಿಯ ಬಿಸುಪೋ , ನಿನ್ನ ನೆನಪೋ ;  
ಕಾಡಿಗೆಯ ಕಣ್ಣು ,ಕಾಡುತ್ತಿದೆ ಇನ್ನೂ ;
ನೆನಪಿನ ಚಳಿಯಲ್ಲಿ , ರಾತ್ರಿಯ ಕತ್ತಲಲ್ಲಿ ;
ನಿನ್ನ ನಗುವ ಅಮಲಿನಲ್ಲಿ ;
ಕಾಡುತ್ತಿದೆ ನಿನ್ನದೆ ಬಿಂಬ
ಜನ್ಮದ ಮೈತ್ರಿಯೋ , ಜೀವನ ಪ್ರೀತಿಯೋ
ಕಾಯುತ್ತಿರುವೆ ನಾನಿನ್ನ
ಕಾಡಿಗೆ ಹಚ್ಚಿದ ಮುದ್ದು ಚಿನ್ನ ;)

19 Nov 2014

ಹುಣ್ಣಿಮೆಯ ನಿಶಬ್ಧ ಭಾಗ-9

     ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

     ತಾನು ಪ್ರೀತಿಸಿದ ಹಿಮಾಂಶು ಆಗ ತಾನೇ ತನ್ನ ಪರ ಒಲಿಯುತ್ತಿದ್ದ. ಅದೊಂದು ರಾತ್ರಿ, ಯಾರು ಅವರನ್ನು ಕರೆದಿರಲಿಲ್ಲದಿದ್ದರೆ ಶಾಲಿನಿ ತನ್ನ ಮನಸ್ಸಿನ ಅಷ್ಟು ವಿಚಾರವನ್ನು ಹಿಮಾಂಶುವಿಗೆ ತಿಳಿಸಿಬಿಡುತಿದ್ದಳೇನೊ . It just happened . ಅವನೊಡನೆ ಕಾಡುವ ಮೌನದಲ್ಲೆ ಭರ್ತಿ ಒಂದು ಗಂಟೆ ಕೂತು ಎದ್ದು ಹೋಗಿದ್ದ ಶಾಲಿನಿಯ ಹೃದಯದಲ್ಲಿ ಇಂದೆಂದೂ ಕಾಣದ  ಸಂತೋಷ .  ಕತ್ತಲ ರಾತ್ರಿಯಲ್ಲಿ ಗಡಿಯ ರೇಕೆಯಿಲ್ಲದೆ ಹಕ್ಕಿಯಂತೆ ಇಡೀ ಪ್ರಪಂಚವನ್ನ ಸುತ್ತಿ ಬಂದಿತ್ತು . ಹಿಮಾಂಶು ತನ್ನೊಡನೆ ಕಳೆದಿದ್ದ ಪ್ರತಿ ಸೆಕೆಂಡ್‌ನ್ನು ನೆನಪಿಸಿಕೊಳ್ಳುತ್ತಿದ್ದಳು ಶಾಲಿನಿ. ಆ ರಾತ್ರಿ ಅವಳಿಗೆ ನಿದ್ದೆ ಬಂತೋ ಏನೋ ಅದರೆ ಹಿಮಾಂಶುವಿನೊಡನೆ ಸಾವಿರ ಸಾವಿರ ವರ್ಷ ಕಳೆಯುವ ಕನಸಂತು ಬಿದ್ದಿತ್ತು .ಬೆಳಗಿನ ನಿಚ್ಚಳ ಸೂರ್ಯ ಅದಗಲೇ ತನ್ನ presence  ತೋರಿಸಿದ್ದ.ಎಷ್ಟು ಬೇಗ ಬೆಳಕಾಯಿತು!

    ಇದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಮನೆಗೆ ಹೋಗುವ ಸಂಭ್ರಮ ಅರಣ್ಯವನ್ನು ಬಿಟ್ಟು ಹೊರಡುವ ತಳಮಳದಲ್ಲಿ ಕೂಡಿದ್ದರೆ . ಹಿಮಾಂಶು-ಶಾಲಿನಿಗೆ ಮತ್ತೇನೋ ಸಂಭ್ರಮ!  ಅದು ಮಾತುಗಳಿಲ್ಲದ ನಿಚ್ಚಳ ಮೌನ , ಬರೀ ಕಣ್ಣಲ್ಲೆ ಗಂಟೆಗಟ್ಟಲೇ ಮಾತಾಡಿದರು ಸಾಲದಷ್ಟು ಭವನೆಗಳು ಹೊರಡುತ್ತಿದ್ದವು . ಅಲ್ಲಿ ಇದ್ದದ್ದು ನೂರಾರು ದಿನಗಳ ಆರಾಧನೆ , ಮೌನದಲ್ಲೆ ಕೂಡಿದ್ದ ಮಾತುಗಳು , ಭಾವನೆಗಳು ತುಂಬಿದ್ದ ಕಣ್ಣುಗಳು , ಪ್ರೀತಿ ತುಂಬಿದ್ದ ಹೃದಯಗಳು . ನಲ್ಲಮಲ ಅರಣ್ಯದ ಮರಗಳೇ ಕೆಲಕಾಲ ನಾಚಿ ನಲಿದವು , ಮೌನದಿಂದಲೇ ಅಷ್ಟು ಮರಗಳು ಇವರ ಪ್ರೀತಿ ಫಲಿಸಲಿ ಅನ್ನುತ್ತೀವೆ ಎಂದು ಭಾಸವಾಗಿತ್ತು..

    ಕಾಲ ಸ್ತಬ್ಧವಾಗಿತ್ತು!!

           ಸಮಯ 12 ಗಂಟೆ 10 ನಿಮಿಷ
           ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌ ಶ್ರೀಕಾಕುಳಂ ರೈಲು ನಿಲ್ದಾಣಕ್ಕೆ ಬಂದು ನಿಂತಿತ್ತು . ಹಿಮಾಂಶು - ಶಾಲಿನಿ ಎದುರು ಬದರು ಸೀಟಿನಲ್ಲೆ ಕೂತಿದ್ದರು . ಅವರ ನಾಲಿಗೆಯಿಂದ ಮಾತು ಮರಿಚಿಕೆಯಾಗೆಯಿತ್ತು . ಆಗ ಬಂದವರೇ DYSP ಶಿವರಾಮಪ್ಪ ಹಿಮಾಂಶುನನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರೆ . ಶಾಲಿನಿ ಆಘತದಿಣದ ಕಿರುಚಿದಳು . ಬೆಂಗಳೂರಿಗೆ ಬಂದವಳೇ ತನ್ನ ವೈಭವೋಪೇತ ಮನೆಯ ಬೆಡ್‌ರೂಮಿಗೆ ಹೋದವಳೇ ಒಂದೇ ಸಮನೆ ಆಳುತ್ತಿದ್ದಳು . ಭರ್ತಿ ಐದು ದಿನದ ನಂತರ ತನ್ನ ಹಡಗಿನಂತ BMW  ಕಾರ್‌ ಹತ್ತಿದವಳೇ ಹಿಮಾಂಶುನನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಹೋಗಲು ಅಣಿಯಾದಳು . ಕಾರ್‌ ಮಲ್ಲೆಶ್ವರ ಏಳನೇ ಕ್ರಾಸ್‌ನಿಂದ ಹೊರಬಿದ್ದು ಶೇಶಾದ್ರಿಪುರಂ ರೋಡ್‌ ದಾಟಿ ಮೆಜಸ್ಟಿಕ್‌ ತಲುಪಿತ್ತು ಅಷ್ಟರಲ್ಲಗಲೇ ಶಾಲಿನಿಯ ಮನಸ್ಸು ಬದಲಾಗಿತ್ತು . ಅವಳ ಮನಸ್ಸು ಹಿಮಾಂಶು ಕೊಲೆಗಾರನಲ್ಲ ಇನ್ನು ಕೇಲವೆ ದಿನದಲ್ಲಿ ನನ್ನ ಬಳಿ ಬರುತ್ತಾನೆ ಎಂದು ತೀರ್ಮಾನ ಮಾಡಿದವಳೇ ಯಾವುದೋ ಯೋಚನೆಯಲ್ಲಿ ಅಲ್ಲೆ ಬಳಿಯಿದ್ದ ಪಾರ್ಕ್‌ನಲ್ಲಿ ಮೌನದಿಂದ ಕುಳಿತುಬಿಟ್ಟಳು..

                                                                  **** *** ****
     ( ರವಿ ಬೆಳಗೆರೆಯವರ ಬರಹಗಳ ಪ್ರೇರಣೆಯಲ್ಲಿ)

     ಮೊದಲ ಪೂಜೆ ಆರಂಭಸಿದ್ದ ಮಾಟಗಾತಿಗೆ 14 ವರ್ಷಗಳ ಹಿಂದಿನ ನೆನಪುಗಳು ಕಾಡ ತೋಡಗಿತು.

   ಅಂದು!

  ನಿವೇದಿತಾ ಸತ್ತ ವಿಷಯವನ್ನು ಪ್ರಶಾಂತಿನಿ ಬಂದು ಮಾಟಗಾತಿ ಸುಬ್ಬಮ್ಮನಿಗೆ ಹೇಳಿದ್ದೆ ತಡ . ತನ್ನ ಗುರಿ ಸಾಧನೆಗೆ ಸಮಯ ಬಂದಿದೆ ಎಂದು ತಿಳಿದವಳೆ ಅವಳ ಪ್ರಯಾಣ ಆಂರಭವಾಗಿಬಿಟ್ಟಿತ್ತು!

  ಧೇನಿಸು ತಾಯೇ...! ಎಂದು ಹೇಳುತ್ತಾ ಹೊರಟ ಸುಬ್ಬಮ್ಮ ಅಂಧ್ರದ ಗಡಿ ದಾಟಿ ಒಡಿಶಾದ ಕಾಮಾಕ್ಯ ದೇಗುಲಕ್ಕೆ ಬರುವಷ್ಟರಲ್ಲಿ ಹುಣ್ಣಿಮೆಯಾಗಿತ್ತು . ಅಲ್ಲಿ ಆಕೆಗೆ ಸಿಗುತ್ತಾನೆ ಅಘೋರಿ ಸಾಧನೆಗೈದ ಪ್ರಜ್ವಲನಾಥ . ಕಾಮಕರ್ಣ ಪಿಶಾಚಿಯನ್ನು ಹೋಲಿಸಿ ಕೊಳ್ಳಬೇಕಾದರೆ ಏನು ಮಾಡಬೇಕು ಎಂದು ವಿವರ ನೀಡುತ್ತಿದ್ದ ಪ್ರಜ್ವಲನಾಥನಿಗೂ ಕಾಣಿಸಿದ್ದು ಅದೇ "ಸರ್ವನಾಶ!"

    ಇಲ್ಲೆ ಪಶ್ವಿಮ ಬಂಗಾಳದ ಕಾಡಿನಲ್ಲಿ ಕಾಮಕರ್ಣ ಪಿಶಾಚಿಯನ್ನು ಸಾಧಿಸಿರುವ ಏಕೈಕ ಮಾಂತ್ರಿಕನಿದ್ದಾನೆ . ಅವನ ಬಳಿ ಹೋದರೆ ನಿನ್ನ ಗುರಿ ಮುಟ್ಟ ಬಹುದೆಂದು ಹೇಳುತ್ತಿದ್ದ ಪ್ರಜ್ವಲನಾಥ ಇದ್ದಕ್ಕಿದ್ದಂತೆ ಪಶ್ಚಿಮ ದಿಕ್ಕಿನೆಡೆಗೆ ದಾವಿಸಿ ಬಿಟ್ಟ.. ಅವನಿಗೆ ಸುಬ್ಬಮನ ಭವಿಷ್ಯ ಕಾಣಿಸಿತ್ತಾ..??

    ಅದು ಹುಲಿಗಳಿಗೆ ತಾಣವಾಗಿದ್ದ ಪಶ್ಚಿಮ ಬಂಗಾಳದ ರುದ್ರ ಕಾಡು! 14 ವರ್ಷ ಬಾಬಾ ಹೇಳಿದ ಎಲ್ಲಾ ಪೂಜೆಗಳನ್ನು ಮಾಡಿ ಅವನ ಎದುರಿಗೆ ನಿಲ್ಲುತ್ತಾಳೆ ಮಾಟಗಾತಿ ಸುಬ್ಬಮ್ಮ . ಅವನ ಕಣ್ಣಗಳಲ್ಲೆ ಒಂದು ರುದ್ರ ಭಯಂಕರ ನೋಟ . ಡೊಡ್ಡದಾಗಿ ಬೆಳೆದಿರುವ ಗಡ್ಡ , ಹಸಿರು ಜುಬ್ಬಾ ಧರಿಸಿ ಸಶ್ಮಾನ ಮೌನದಲ್ಲಿ ಕುಳಿತಿರುವವನ ಹೆಸರು ಅಯಾಮಾನ್‌ ಅಲ್‌ ಅರಿಫ್‌ !
    ಅರಿಫ್‌ ಬಾಬಾ!!

 ಮಾಟಗಾತಿ ಸುಬ್ಬಮ್ಮನ ಮುಖದಲ್ಲಿ ಹಿಂದೆಂದೂ ಕಾಣದ ಕಾಟಿಣ್ಯತೆ ಮತ್ತು ಏಕಾಗ್ರಾತೆಗಳು ಜಮೆಯಾಗಿದ್ದವು . ಅದು ಅವಳಲ್ಲಿ ಕಾಣಲರಂಭಿಸಿದ ಮೊದಲ Ruthlessnessನ ಅನುಭವ . ಸತ್ತ ಹೆಂಗಸೊಬ್ಬಳ ಗೋರಿ ಮುಂದೆ ಕುತ್ತಿದ್ದ ಮಾಟಗಾತಿ ಮತ್ತು ಅರಿಫ್‌ ಬಾಬಾ ಇಬ್ಬರಿಗೂ ನಿರ್ದಯತೆ ಜಮೆಯಾಗಿದ್ದವು . ನಿಧಾನವಾಗಿ ಸಣ್ಣ ದನಿಯಲ್ಲಿ ಆರಂಭವಾದ ಮಂತ್ರಗಳು ಹತ್ತು ನಿಮಿಷ ಕಳೆಯುವಷ್ಟರಲ್ಲಿ ಕಿವಿಯ ಟಿಂಪ್ಯಾನಮ್‌ ಒಡೆದು ಹೋಗುವಷ್ಟು ತೀಕ್ಷ್ಣವಾಗಿಬಿಟ್ಟವು . ಹುಣ್ಣಿಮೆಯ ಆ ಕತ್ತಲ ರಾತ್ರಿಯಲ್ಲೆ ಭಯನಕತೆ ಸೃಷ್ಟಿಯಾಗಿತ್ತು .ಬಾಬಾ ಮೊದಲಿಗೆ ಸುಬ್ಬಮ್ಮನಿಂದ ದಿಗ್ಬಂಧನ ಪೂಜೆ ಮಾಡಿಸೊದರು . ಗೋರಿಯ ಮುಂದೆ ಪಶ್ಚಿಮಾಭಿಮುಖವಾಗಿ ಕುಳಿತ ಅವಳ ಹಣೆಗೆ ಬಾಬಾ ತಮ್ಮ ಬಲಗೈ ಬೆರಳಿನಿಂದ ಕತ್ತರಿಸಿದ ರಕ್ತ ಕುಂಕುಮ ತಿಲಕ ವಿವರಿಸಿದರು
.
   " ಧೇನಿಸು ಮಗಳೇ... ಬದುಕುವ ಆಸೆಯನ್ನು ಕೂಡ ಬಿಟ್ಟು ಧೇನಿಸು . ಕ್ಷುದ್ರ ಲೋಕದಲ್ಲಿ ಆಸೆಗಳಿಗೆ ಜಾಗವಿಲ್ಲ . ಕರ್ಣ ಪಿಶಾಚಿಯ ಮುಂದೆ ಕಾಮನೆಗಳಿಗೆ ಸ್ಥಳವಿಲ್ಲ . ಇಲ್ಲಿ ಎಲ್ಲವನ್ನೂ , ಎಲ್ಲರನ್ನೂ ತ್ಯಜಿಸಬಲ್ಲೆ . ಆಕೆಯ ಪಾದಗಳಿಗೆ ಶಿರವಿಟ್ಟು ಅದನ್ನೂ ಒಪ್ಪಿಸಿಕೋ ಅನ್ನಬಲ್ಲೆ ಎಂಬಂತಹ ಮುಕ್ತತೆ ಬೇಕು .ನೀನು ನೀನೆಂಬುದನ್ನೂ ಮರೆತು ಕರ್ಣಪಿಶಾಚಿಯನ್ನು ಪ್ರಾರ್ಥಿಸು .ಹೇಳು ಮಗಳೇ... ನನ್ನೊಂದಿಗೆ ಹೇಳು..."

    ಆರಿಫ್‌ ಬಾಬಾ ದೊಡ್ಡ ದನಿಯಲ್ಲಿ ಸುಬ್ಬಮ್ಮನಿಗೆ ಆದೇಶ ನೀಡುತ್ತ ಮಂತ್ರ ಪಠಣ ಮುಂದುವರೆಸಿದರು .ಆದರೆ ದೊಡ್ಡ ದನಿಯಲ್ಲಿ ಅವರು ಹೇಳುತ್ತಿದ್ದ ಮಂತ್ರಗಳ ಪೈಕಿ ಒಂದೇ ಒಂದು ಚಿಕ್ಕ ಶಬ್ದವೂ ಅರ್ಥವಾಗಿರಲಿಲ್ಲ . ಆಗ ಇದ್ದಕ್ಕಿದಂತೆ ನೆಲೆಗೊಂಡ ಮೌನ , ಆ ಸ್ಮಶಾನದ ಕಾವಳದಲ್ಲಿ ಮತ್ತೂ ಭಯಾನಕವೆನ್ನಿಸತೊಡಗಿತು . ಗೋರಿಯ ಮೈ ಬಿರುಕು ಬಿಡತೊಡಗಿದೆ . ಬಾಬಾ ಯಾವುದನ್ನೂ ಗಮನಿಸಿದಂತೆ ಮಂತ್ರಪಠಣ ಮಾಡುತ್ತಲೇ ಇದ್ದಾರೆ . ಗೋರಿಯ ಆಳದಲ್ಲಿ ಅದು ಕದಲತೊಡಗಿದೆ... ಕದಲುತ್ತಿರುವುದು ಹಸೀ ಬಾಣಂತಿಯ ದೇಹ ಎಂಬುದು ಗೊತ್ತಾಗುತ್ತಿದ್ದಂತೆಯೇ ಸುಬ್ಬಮ್ಮನ ದೇಹದಲ್ಲಿ ಕೆಲವು ಬದಲಾವಣೆಗಳಾದವು . ಕೈ ಬೆರಳುಗಳಿಗೆ ದೇಹದ ನೆತ್ತರೆಲ್ಲ ಹರಿದು ಬಂತೇನೋ ಎಂಬಂತೆ ಅವೆಲ್ಲವೂ ರಕ್ತವರ್ಣಕ್ಕೆ ತಿರುಗಿದವು . ನಾಲಗೆ ಕಳಚಿಕೊಂಡು ಹೊರ ಚಾಚಿಕೊಂಡಿತು . ಕಣ್ಣ ದೇದೀಪ್ಯಮಾನವಾದ ಪ್ರಕಾಶದಿಂದ ಪ್ರಜ್ವಲಿಸತೊಡಗಿತು , ಹಣೆಯ ಕುಂಕುಮ ಈಶ್ವರನ ಫಾಲನೇತ್ರದಂತೆ ಉರಿಯತೊಡಗಿತು .

   ಆಕಾಶದಲ್ಲಿ ಎರಡು ಬಾರಿ ಕೋಲ್ಮಿಂಚು ಕಾಣಿಸಿಕೊಂಡು , ಆಗಷ್ಟೆ ಬೀಸತೊಡಗಿದ್ದ ಚಿಕ್ಕ ಮಾರುತವೂ ಸ್ತಬ್ಧವಾಗಿ ಹೋಗಿ, ಸ್ಮಶಾನದಲ್ಲಿ ಆಘಾತಕರ ಮೌನ ಸ್ಥಾಪಿತವಾಗುತ್ತಿದ್ದಂತೆಯೇ ಗೋರಿಯೊಳಗಿನ ಬಾಣಂತಿಯ ಹೆಣ ಅತ್ಯಂತ ಸ್ಪಷ್ಟವಾಗಿ , ನಿಖರವಾಗಿ ಮತ್ತು ನೆಟ್ಟಗೆ ನಿಟಾರಾಗಿ ಎದ್ದು ಕುಳಿತುಕೊಂಡಿತ್ತು!
   ಅದು ಸುಬ್ಬಮ್ಮನ ಕಡೆ ಮುಖ ಮಾಡಿತ್ತು.

 ಶಾಸ್ತ್ರಿಗಳ ಮಂತ್ರಗಳು ಮತಷ್ಟು ಉಧೃತವಾದವು . ಎರಡನೇ ಆವೃತ್ತಿಯ ಆರಂಭವಾದವು . ಮಾಟಗಾತಿ ಸುಬ್ಬಮ್ಮ ಶವದ ಕೊರಳಿಗೆ ದೇವ ಕಣಗಲೆಯ ರಕ್ತಗೆಂಪು ಬಣ್ಣದ ಹಾರವನ್ನು ತೊಡಿಸಿ ತನ್ನ ಬಲ ಮುಂಗೈನ ನರವನ್ನು ಸಟಕ್ಕನೆ ಕುಯ್ದುಕೊಂಡು , ಶವದ ಅಂಗೈಗಳ ಮೇಲಕ್ಕೆ ರಕ್ತ ತರ್ಪಣ ನೀಡಿ ಮಂತ್ರ ಪಠಣ ಮಾಡುತ್ತಿದ್ದಂತೆಯೇ...

      ಹೊತ್ತಿಕೊಂಡಿತು ಜ್ವಾಲೆ !  

       ಆಗ ಬಿತ್ತು ಒಂದು ಹನಿ ಜ್ವಾಲೆ...
       ಅವಳ ಅಂಗೈ ಮಧ್ಯದ ಗೆರೆಯ ಮೇಲೆ!


      ಕಾಮಕರ್ಣ ಪಿಶಾಚಿನಿ ಮಾಟಗಾತಿ ಸುಬ್ಬನಿಗೆ ಹೋಲಿದಗಿತ್ತು... ಕ್ಷುದ್ರ ಸಾಧನೆಯ ಉತ್ಕೃಷ್ಟ ಅಂತ ಸಾಧಿಸಿಯಾಗಿತ್ತು!! ಕ್ಷುದ್ರ ಲೋಕದ ಅತಿದೊಡ್ಡ ಮಾಟಗಾತಿ ಬೆಂಗಳೂರಿಗೆ ಹಿಂತಿರುಗಿದವಳೇ ಮೊದಲಿಗೆ ಭೇಟಿನೀಡಿದ್ದು ಹಿಮಾಂಶುವಿನ ತಾಯಿ ಪ್ರಶಾಂತಿನಿ ಮನೆಗೆ!
        ಪ್ರಶಾಂತಿನಿ!!?
                                                           (ಮುಂದುವರೆಯುತ್ತದೆ-To be continued)

15 Nov 2014

ಹುಣ್ಣಿಮೆಯ ನಿಶಬ್ಧ ಭಾಗ-8

    ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



       ಅದು ಮಾರ್ಚ್ ೩!
 
          ಹಿಮಾಂಶು ಬಂಧನವಾಗಿ ಅದಗಲೇ ೯೫ ದಿನಗಳು ಉರುಳಿದ್ದವು . ಪೋಲಿಸರು ನಿಯಮದಂತೆ ೯೦ ದಿನಗಳಲ್ಲಿ ಚಾರ್ಚ್‌ಶೀಟ್‌ ಸಲ್ಲಿಸಿ ಆಗಿತ್ತು . ಆತನ ಸೌಮ್ಯ ಕಣ್ಣುಗಳನ್ನು ಗಮನಿಸಿದ್ದ DYSP ಶಿವರಾಮಪ್ಪ ಆ ರಾತ್ರಿಯೆಲ್ಲ ಅವನೊಂದಿಗೆ ಮಾತಾಡಿದ್ದರು . ಎಷ್ಟು ಕೇಳಿದರು ಹಿಮಾಂಶು ತಾನೇ ಕೊಲೆ ಮಾಡಿರುವುದಾಗಿ ಹೇಳುತ್ತಿದ್ದನೆ . ಅದಕ್ಕೆ ಸಕ್ಷಿ ಎಂಬಂತೆ ಹಿಮಾಂಶು ಕೊಲೆಯಾಗಿದ್ದ ೧೬ ಜನರ ವಿವರದ ಸಮೇತ ಹೇಗೆ ಕೊಲೆಯಾಗಿತ್ತೆಂದು ಎತವತ್ತು forensic report ನೀಡಿದ ಆಗೆ ಹೇಳುತ್ತಿದ್ದ . ಮಾತು ಎರಡು ಗಂಟೆಗೂ ಹೆಚ್ಚು ನಡೆದಿತ್ತು ತೀರ ಹೋಗುವ ಮುನ್ನ ಶಿವರಾಮಪ್ಪ , ಹಿಮಾಂಶು ಕಡೆ ತಿರುಗಿ " ಹಿಮಾಂಶು, ಕೊಲೆ ನೀನು ಮಾಡಿರಲು ಸಾಧ್ಯವೆ ಇಲ್ಲ ಎಂದು ನಿನ್ನ ಕಣ್ಣುಗಳು ಸಾರಿ ಸಾರಿ ಹೇಳುತ್ತಿವೆ!, ನೀನು ನೆನಪಿಟ್ಟುಕೋ ಹಿಮಾಂಶು ' I'm not an ordinary Police ಅದು ನಿನಗೂ ಗೊತ್ತು , ನಿಜವಾದ ಹಂತಕನನ್ನು ನಾನು ತಂದು ನಿನ್ನ ಮುಂದೆ ನಿಲ್ಲಿಸುತ್ತೇನೆ.. Take it as a challenge " ಎಂದವರೆ ಅವನ ಉತ್ತರಕ್ಕೂ ಕಾಯದೆ ನಡೆದು ಹೋದರು . ಗಂಟೆ ಬೆಳಗಿನ ಜಾವ ನಾಲ್ಕಗಿತ್ತು .

   ಅದು ಅವನ ಪ್ರಕರಣಕ್ಕೆ ತೀರ್ಪು ನೀಡುವ ದಿನ . ಹಿಮಾಂಶು ಇದಗಾಲೆ ಇಂಡಿಯನ್‌ ಪಿನಲ್‌ ಕೊಡ್‌ ಸೇರಿದಂತೆ ಹಲವಾರು ಬುಕ್‌ಗಳನ್ನು ಓದಿ ಅರಿತಿದ್ದ. ಈ ಕೊಲೆಗಳಿಗೆ ಅವನಿಗೆ ನೂರಕ್ಕೆ ನೂರರಷ್ಟು ಜೀವವಾದಿ ಇಲ್ಲವೇ ಮರಣದಂಡನೆ ! ಅದರೂ ಅವನಿಗೆ ಆಳುಕಿರಲಿಲ್ಲ.

   ಗಾಢ ನಿಲಿಬಣ್ಣದ ಬಸ್ಸಿಗೆ ಹಿಮಾಂಶುನನ್ನು ಹತ್ತಿಸಿಕೊಂಡದ್ದೆ ಬಸ್ಸು ಪರಪ್ಪನ ಅಗ್ರಹಾರ ಡಾಟಿ ಅದಗಲೇ ಹೊಸುರು ಮೇನ್‌ ರೋಡ್‌ ಹೊಕ್ಕಿತ್ತು . ಸುಮಾರು ಎರಡು ಗಂಟೆಗಲ ಬೆಂಗಳೂರು ಟ್ರಾಫಿಕ್‌ ಸರಿಸಿ ಬರುತ್ತಿದ್ದರೆ BTM ಲೇವೊಟ್‌ನ ಅಡ್ಡರಸ್ತೆಯಲ್ಲಿ ಕಾಫಿ ಕುಡಿಯುತ್ತಿದ್ದ ಸೂರಿಯನ್ನ ಕಣ್ಣಲ್ಲೆ ಗಮನಿಸಿದ್ದ ಹಿಮಾಂಶು! ಬಸ್ಸು ಕೆಂಪೇಗೌಡ ರಸ್ತೆಯ ಕಾವೇರಿ ಭವನದ ಹಿಂಭಾಗದಲ್ಲಿದ್ದ ಹೆಚ್ಚುವರಿ ಸಿವಿಲ್‌ ಕೋರ್ಟ್‌ ಗೆ ಬಂದು ನಿಂತಿತ್ತು. ಎರಡು ಗಂಟೆಯಲ್ಲಿ ಹಿಮಾಂಶುವಿನ ಮನಸ್ಸು ಕರ್ನಾಟಕದ ಗಾಡಿ ದಾಟಿ ಪಶ್ಚಿಮ ಬಂಗಾಲದ ಆ ದಾಟ್ಟ ಕಾಡುಗಳನ್ನು ಸುತ್ತಿ ಬಂದಿತ್ತು!!
  
   ಮಾಧ್ಯಮಗಳಲ್ಲಿ ಬ್ರೇಕಿಂಗ್‌ ನ್ಯೂಸ್‌!!

 "೧೬ ಬರ್ಬರ ಕೊಲೆಗಳನ್ನು ಮಾಡಿದ ಹಂತಕನ ಪ್ರಕರಣಕ್ಕೆ ಇಂದು ತೀರ್ಪು ಬಾರುವ ಸಾಧ್ಯತೆ , ಸೌಮ್ಯ ಕಣ್ಣುಗಳ ಹಿಮಾಂಶು ನಿಜಕ್ಕೂ ಕೊಲೆಗಾರನ?!"

  ಆತ ಇದೇ ಮೊದಲ ಬಾರಿಗೆ ಕೊರ್ಟಿಗೆ ಬಂದದ್ದು , ಇಷ್ಟು ದಿನ ಅವನ ವಿಚಾರಣೆ ಸ್ವತಃ ನ್ಯಾಯಧೀಶರ ಮನೆಯಲ್ಲೆ ನಡೆಯುತ್ತಿತ್ತು , ಕೊರ್ಟ್ ಹಾಲ್‌ನಲ್ಲಿ ಜನ ಕಿಕ್ಕಿರಿದು ಸೇರಿದ್ದರು , ಅದು ಮಾಧ್ಯಮಗಳ ಪಾಲಿಗೆ ದೊಡ್ಡ ಸುದ್ದಿ! ರಾಜ್ಯದ ಎಲ್ಲಾ ದಿನ ಪತ್ರಿಕೆಗಳ ಮುಖಪುಟವನ್ನು ಅವರಿಸಿಕೊಂಡಿತ್ತು ಹಿಮಾಂಶುವಿನ ಭಾವಚಿತ್ರ . ಪ್ರತಿಯೊಬ್ಬರು ಆ ಕೇಸಿನ ಬಗ್ಗೆ ಕುತೂಹಲ ಹೊಂದಿದ್ದರು . ಒಬ್ಬ ಶಾಲಿನಿಯನ್ನು ಹೊರತುಪಡಿಸಿ!!!

   ಹಿಮಾಂಶು ಕಟಕಟೆಗೆ ಬಂದು ನಿಂತ. ಗ್ಯಾಲರಿಯಲ್ಲಿ ಕೇವಲ ಮಾಧ್ಯಮ ಲೋಕದ ದಿಗ್ಗಜರು . ಅಷ್ಟು ಆಗಿದ್ದರು ಹಿಮಾಂಶುವಿನ ಕಣ್ಣಿನಲ್ಲಿ ಸೌಮ್ಯತೆ ಮಾಯಾವಾಗಿರಲಿಲ್ಲ. ನ್ಯಾಯಧೀಶರು ಬಂದದ್ದೆ ತಡ ಕೋಟ್‌ ನಿಶಬ್ಧವಾಗಿತ್ತು . ಮೊದಲು ಯಾರು ಮಾತಾಡಬೇಕು ನಾನಾ? ಪಬ್ಲಿಕ್‌ ಪ್ರಸಿಕ್ಯೂಟರ? ಅಥವಾ ನ್ಯಾಯಧೀಶರ? ಅವನಿಗೆ ತಿಳಿಯಾದಾದಿತು , ಚಾರ್ಚ್‌ಶೀಟ್‌ನಲ್ಲದ್ದ ಭರ್ತಿ ೩೧೫ ಪುಟವನ್ನು ನ್ಯಾಯಧೀಶರು ಅದಗಲೆ ಓದಿ ಬಂದಿದ್ದರು . ಹಿಮಾಂಶು ನ್ಯಾಯಧೀಶರುನ್ನು ನೋಡುತ್ತಾ ಒಂದೇ ಸಮನೇ ಅಷ್ಟು ವಿವರವನ್ನು ಸ್ಫುಟವಾಗಿ ನೀಡಿದ್ದ. ಎಲ್ಲೊ ಮರೆಯಾಗಿದ್ದ ಮಳೆ ಗುಡುಗಿನ ಸಮೇತ ಬಂದು ನಿಂತಂತೆ ಭಾಸವಾಗಿತ್ತು .

   ಹಿಮಾಂಶು ಹಂತಕನೆಂದು ಸಾಕ್ಷಿಗಳು ಸಾರಿ ಸಾರಿ ಹೇಳಿದ್ದವು. ಅದಗಲೇ ದೃಶ್ಯ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗಿತ್ತು "  ರೈಲ್‌ ರೋಡ್‌ ಹಂತಕನಿಗೆ ಕಠಿಣ ಶಿಕ್ಷೆ!" ನ್ಯಾಯಧೀಶರು ತಮ್ಮ ಪೆನ್‌ ತೆಗೆದು ತೀರ್ಪಿನ ಕಾಪಿ ಬರೆಯುತ್ತಿದ್ದರೆ.... ಕಡುಕಪ್ಪು ಸ್ಯೂಟ್‌ ಧರಿಸಿದ ಆಕೃತಿ ನ್ಯಾಯಾಲಯದ ಹೊಳ ಹೊಕ್ಕು ಜಡ್ಜ್‌ಗೆ ಯಾವುದೊ ಒಂದು ಫೈಲ್‌ ನೀಡಿ ಹಿಮಾಂಶುವೆಡೆಗೆ ಸೌಜನ್ಯಕ್ಕೂ ಕೂಡ ತಲೆಯತ್ತದೆ  
     " ಇತ ನಿರಪರಾಧಿ!!"
   ಎಂದು ಹೇಳುತ್ತಿದ್ದಾರೆ ಕೋರ್ಟ್‌ನಲ್ಲಿದ್ದ ಅಚ್ಟು ಮಂದಿಗೂ ಒಂದು ಕ್ಷಣ ಅಚ್ಚರಿ! ಆ ಗಾಡ ಕಡು ಕಪ್ಪು ಕೊಟ್‌ ಧರಿಸಿ ಮಾತಿಗಿಳಿದವರು ಕೀಶೊರ್‌ಚಂದ್ರ ಕರ್ನಾಟಕ ರಾಜ್ಯ ಕಂಡ ಹಿರಿಯ ಕ್ರೀಮಿನಲ್‌ ಲಾಯಾರ್‌ " ಟಿ ಎನ್‌  ಕೀಶೊರ್‌ಚಂದ್ರ ವಾರ್ಮ"
                                   *    *   *

    "ಸರ್ವನಾಶ ಕಂಡು ಬರುತ್ತಿದೆ"
  ಆ ಹುಣ್ಣಿಮೆಯ ರಾತ್ರಿ ಬೆಂಗಳೂರಿನ ತಲಘಟ್ಟಪುರದ ಸ್ಮಶಾನದಲ್ಲಿ ಮಾಟಗಾತಿ ಪೂಜೆ ಆರಂಭಿಸುತ್ತಿದ್ದರೆ , ಪುತ್ತೂರು ಜಮ್ಮ ಮಸೀದಿಯಲ್ಲಿ ಕುತ್ತಿದ್ದ ಮಾಂತ್ರಿಕ ಎದ್ದು ನಿಂತು ಕಿರುಚಿದ್ದ.

  ಆ ನಡುರಾತ್ರಿ ತಾನು ಮರೆತುಹೋಗಿರುವ ಕೆಲಸಗಳು ನೆನಪಿಗೆ ಬಂದದ್ದೆ ತಡ ಕಾಬಕ ಕ್ರಾಸ್‌ ಹೊಕ್ಕು ಆಳಿಕೆ ದಾಟಿ ಕಾರಂಜಿಮಳೆ ಕಾಡಿಗೆ ನಡೆದು ಬರುತ್ತಾನೆ . ಅವನದು ಮನಸ್ಸಿನ ವೇಗ . ಉತ್ತಿಟ್ಟಿದ್ದ ಶವವನ್ನು ಹೊರತೆಗೆದು ಮಾಟಗಾತಿಗೆ ಪ್ರತಿರೊದವಾಗಿ ಮತ್ತೊಂದು ಪೂಜೆ ಪ್ರಾರಂಭಿಸಿದ್ದ (ಹಿಂದೂ ಮತ್ತು ಮಸ್ಲಿಂ ಮಾಂತ್ರಿಕರ ಮಾಮಾಚರ ಜಗತ್ತಿನ ಶೈಲಿ  ಬೇರೆಯಿದ್ದರು ಅವರ ಅಂತಿಮ ಗುರಿ ಒಂದೇ ಶುದ್ರ ಸಾಧನೆ!) ತನ್ನ ಗುರುವನ್ನೂ ನೆನಪಿಸಿಕೊಂಡಿದ್ದೆ ತಡ ನೂರಾರು ಕೀಲೊ ದೂರದಲ್ಲಿದ್ದ ಮಾಟಗಾತಿ ಸುಬ್ಬಮ್ಮನ ಮೈ ನಡುಗಿತ್ತು . ಬೆಚ್ಚಿಬಿದ್ದಳು . ಅವಳಿಗೆ ತಾನು ಮಾಡಿದ ೧೪ ವರ್ಷದ ಶುದ್ರ ಸಾಧನೆಯಿಂದ ಅವಳಿಗೆ ಗೋತ್ತಾಗಿದ್ದು ಅವನು ಬಾಬಾ ಶೇಕ್‌ ಕರೀಂ ಎಂದು .

    ಪೂಜೆ ಮಾಡುತ್ತಿದ್ದ ಸುಬ್ಬಮ್ಮ ಅದೇಕೊ ಒಮ್ಮೆಲೆ ತನ್ನ ೧೪ ವರ್ಷಗಳ ಹಿಂದಿನ ಜೀವನಕ್ಕೆ ಮಾರೆಯಾಗಿದ್ದಳು . ದೂರದಲ್ಲಿದ್ದ ಕರೀಂ ಬಾಬಾ ತನ್ನ ಗುರುವನ್ನು ನೆನೆಯುತ್ತಾ ಅದೇ ಪಶ್ಚಿಮ ಬಂಗಾಳದ ಕಾಡಿಗೆ ಹೋಗಿದ್ದ!

  ಅದು  ಅದೇ ದಿನ  ಬೆಳಗಿನ ಜಾವ ೪ ಗಂಟೆ ೫ ನಿಮಿಷ . ಹಿಮಾಂಶು ಭೇಟೆಯಾಡಬೇಕೆಂದು ಕಾಯುತ್ತಿದ್ದ ಹಕ್ಕಿ ತಾನಗೆ ಪಂಜರದೊಳಗೆ ಬಂದಿತ್ತು . ಶಾಲಿನಿಯೇ ಹಿಮಾಂಶುನನ್ನು ಪ್ರೀತಿಸಿ ಅವನ ಪಂಜರದೊಳಕ್ಕೆ ಬಿದ್ದಿದ್ದಳು. ಹಿಮಾಂಶು ತನ್ನ ಗುರಿಯನ್ನು ಸಾಧಿಸೆ ಬಿಟ್ಟ ಎಂದು ಅಂದು ಕೊಳ್ಳುವ ಸಮಯದಲ್ಲಿ ಶಿವರಾಮಪ್ಪ GUN POINT   ಮಾಡಿ ಅವನ ಮುಂದೆ ನಿಂತಿದ್ದ . ಶಾಲಿನಿ ಜಸ್ಟ್‌ ಮೀಸ್‌ ಆಗಿದ್ದಳು.!!!  
                                                                  
( ಮಂದುವರೆಯುತ್ತದೆ)

13 Nov 2014

ಹುಣ್ಣಮೆಯ ನಿಶಬ್ಧ ಭಾಗ-7

          ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
  ಹುಣ್ಣಿಮೆಯ ನಿಶಬ್ಧ ಭಾಗ -1 
 ಹುಣ್ಣಿಮೆಯ ನಿಶಬ್ಧ ಭಾಗ -5
 ಹುಣ್ಣಿಮೆಯ ನಿಶಬ್ಧ ಭಾಗ-6
           ಹಿಮಾಂಶು ತಲೆಗೆ ತನ್ನ ಗನ್‌ ಪಯಿಂಟ್‌ ಮಾಡಿ ಅದಗಲೇ 16 ಗಂಟೆ ಕಳೆದಿತ್ತು . ಮಾಧ್ಯಮಗಳಲ್ಲಿ ರೈಲ್‌ ರೋಡ್‌ ಹಂತಕ ಸೇರೆಯಾದ ಯಶಸ್ಸು, ವಿಜಯೋತ್ಸವದ ವರದಿಗಳು ಬರತೊಡಗಿದವು . ಒಮ್ಮೆಲೆ DYSP ಶಿವರಾಮಪ್ಪರಿಗೆ ಗೊತ್ತಾಗಿದ್ದು ತಾನು ನಿದ್ದೆ ಮಾಡಿ ಭರ್ತಿ 34 ಗಂಟೆಗಳಗಿವೆ ಎಂದು . 'ಎಷ್ಟು ದೊಡ್ಡ ಕಾರ್ಯಚರಣೆಗೆ ಅಣಿಯಾಗಿದ್ದವುನಾವು ಆದರೆ ಹಿಮಾಂಶು ಇಷ್ಟು ಸಲೀಸಾಗಿ ಸಿಕ್ಕಿಬಿಟ್ಟನ??' No... ಅವರ ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿ ಪುಟ್ಟ ಅನುಮಾನ , ಕಾಲ ಉರಿಳಿದಂತೆ ಅ ಅನುಮಾನ ಡೊಡ್ಡದಗ್ತ ಹೊಯ್ತು.. ಹೆಮ್ಮರವಾಗಿ ಸ್ವತಃ ತಮ್ಮನ್ನೆ ನುಂಗಿಬಿಡುತ್ತೇನೋ ಅಂದುಕೊಂಡರು . ಆಗ ಮಾಧ್ಯಹ್ನ 2 ಗಂಟೆ 30 ನಿಮಿಷ.

     ನಿಶಬ್ಧವಾಗಿದ್ದ ಉಪ್ಪಾರಪೇಟೆ ಪೋಲಿಸ್‌ ಠಾಣೆಯ ಸೆಲ್‌ನೊಳಕ್ಕೆ ಕಾಲಿಟ್ಟರು ಶಿವರಾಮಪ್ಪ. ಭರ್ತಿ 16 ಕೊಲೆಗಳನ್ನು . ಅದು ಬರ್ಬರ ಕೊಲೆಗಳನ್ನು ತಾನೇ ಮಾಡಿದ್ದೇನೆ ಎಂದು ಹೇಳಿ ಒಂದಿಷ್ಟು ಅಳುಕಿಲ್ಲದೆ, ಭಯವಿಲ್ಲದೆ ಹಿಮಾಂಶುವಿನ ಕಣ್ಣುಗಳನ್ನು ನೋಡಿ ಸ್ವತಃ ಶಿವರಾಮಪ್ಪರೆ ಬೆಚ್ಚಿಬಿದ್ದರು , ಆತ ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ . ತನ್ನೊಂದಿಗೆ ತಂದಿದ್ದ ಗೋಪಲಕೃಷ್ಣ ಅಡಿಗರ ಕಾವ್ಯವನ್ನು ಸ್ಪುಟವಾಗಿ ಓದುತ್ತಾ . ಯಾವುದೋ ಯೊಚನೆಯಲ್ಲಿ ತೊಡಗಿದ್ದಾನೆ .

                                    ಹಾಡಿ ಹಾಡಿ ಬೇಸರಾಗಿ
                                   ನೆಲಕೆಸೆದಳು ಕೊಳಲನು;
                                 ಇಂದು ಮೌನದುಸುಬಿನಲ್ಲಿ
                                  ಹುಗಿದಳೆನ್ನ ಮನವನು.


ನಾಲ್ಕು ಸಾಲುಗಳಲ್ಲಿ ಸಾವಿರ ಸಾವಿರ ಅರ್ಥ!!

       ಆತನ ಕಣ್ಣಗಳನ್ನು ಗಮನಿಸಿದ ಶಿವರಾಮಪ್ಪ "ಹಿಮಾಂಶು ನಿಜಕ್ಕೂ ಕೊಲೆಗಾರನೆ?" ಅವರೊಬ್ಬರಿಗೆ ಕೇಳುವಂತೆ ಅಚ್ಚರಿಯಿಂದ , ಆತಂಕದಿಂದ , ಅನುಮಾನದಿಂದ ಕೇಳಿಕೊಂಡರು . ಅಂದು ಸಂಜೆ ನಾಲ್ಕನೆ ಹೆಚ್ಚುವರಿ ನ್ಯಾಯಧೀಶರ ಮುಂದೆ ಅಜರುಪಡಿಸಿ ಅವರ ಆಜ್ಞೆಯಂತೆ ಕೇಂದ್ರ ಕಾರಗೃಹಕ್ಕೆ ಕರೆದೊಯ್ಯುವಷ್ಟರಲ್ಲಿ ಹಿಮಾಂಶು ಕುಸಿದುಬಿದ್ದಿದ್ದ!!
                                                      ** ** **

         14 ವರ್ಷಗಳ ಸಾಧನೆಯ ನಂತರ ಮಾಟಗಾತಿ ಸುಬ್ಬಮ್ಮ ಬೆಂಗಳೂರಿಗೆ ಹಿಂತಿರುಗಿದ್ದಳು . ಅವಳು ಈಗ ಕೇವಲ ವಶೀಕರಣ ಮಾಡುವ ಮಾಟಗಾತಿಯಲ್ಲ ಅವಳು ಕಾಮಕರ್ಣ ಪಿಶಾಚಿಯನ್ನು ಒಲಿಸಿಕೊಂಡಿರುವ , ವಾಮಾಚಾರ ಲೋಕದ ಅತಿದೊಡ್ಡ ಮಾಟಗಾತಿ! ಮಾಟಗಾತಿ ಸುಬ್ಬಮ್ಮ . ಬೆಂಗಳೂರಿಗೆ ಬಂದವಳೆ ತನ್ನ ಗುರಿಯ ಬಗ್ಗೆ ನೆನೆಯುತ್ತಾಳೆ . ಅದರಲ್ಲಿ ಒಂದು ಸಾಧಿಸಿ ಆಗಿತ್ತು ಅದರೆ ಅವಳ ಹೊಟ್ಟೆಯ ಆಳದಲ್ಲೆಲ್ಲೊ ಮತ್ತೊಂದು ಗುರಿ ನೆನಪಿಗೆ ಬಂದದ್ದೆ ಕ್ರೂರಿಯಾಗಿದ್ದಳು ಅದು Alexander ರಾಜನಾಥ ಚಟರ್ಜಿಯ ಸಾವು! ಕೇವಲ ಸಾವಲ್ಲ ತಾನು ಸಾಧಿಸಿರುವ ಕರ್ಣಪಿಶಾಚಿಗೆ ನಿಡುತ್ತಿರುವ ಅತ್ಯಂತ ಕ್ರೂರ ಬಲಿ .ಹುಣ್ಣಿಮೆಯನ ನಿಶಬ್ಧ ರಾತ್ರಿಯಲ್ಲಿ ಬನಶಂಕರಿ ಸಮೀಪವಿರುವ ತಲಘಟ್ಟಪುರ ರಸ್ತೆಯ ಎಡ ಭಾಗದಲ್ಲಿದ್ದ ಸಶ್ಮಾನ ಹೊಕ್ಕಿದಳು . ತನ್ನ ಯುದ್ಧದ ಮೊದಲ ಪೂಜೆಯ ಆರಂಭ. ನಡು ವಯಸ್ಸಿನ ಹೆಂಗಸ ನೆತ್ತರಿಂದ ತಾನು ಸಾಧಿಸಿ ತಂದ ತಲೆ ಬೂರುಡೆಗಡ ಅಭಿಷೇಕ ಮಾಡಿ ಯುದ್ಧಕ್ಕೆ ಆಣಿಯಾಗುತ್ತಿದ್ದರೆ ಅದೆಲ್ಲೊ ದೂರದ ಪುತ್ತೂರಿನ ಕಾಬಕ ಕ್ರಾಸ್‌ನ ದಾಟಿದೊಡನೆ ಬಲಕ್ಕೆ ಕಾಣುವ ಜಮ್ಮ ಮಸೀದಿಯ ಕಾಳೇಗದಲ್ಲಿ ಕುತ್ತಿದ್ದ ಮುಸ್ಲಿಂ ಮಾಂತ್ರಿಕ ಅದೇಕೊ ಎರಡು ನಿಮಿಷ ನಿಶಬ್ಧವಾಗಿ ಕಣ್ಣು ಮುಚ್ಚಿದ್ದ.
  "ತಬಾಹೀ ನಜರ್‌ ಆ ರಹಾಹೈ " ಅಂತ ತನಗೊಬ್ಬನಿಗೆ ಕೇಳಿಸುವಂತೆ ಹೇಳಿಕೊಂಡ!
"ತಬಾಹೀ ನಜರ್‌ ಆ ರಹಾಹೈ " ಎರಡನೇ ಬಾರಿ ನಿಶಬ್ಧದಿಂದ ಹೊರಬಂದು ಉಗ್ರಕೋಪದಿಂದ ಇಡೀ ಮಸಿದೀಯೆ ನಡುಗುವಂತೆ ಕಿರಿಚಿಕೊಂಡ . ಬೆಂಗಳೂರಿನ ಹುಣ್ಣಮೆ ಕತ್ತಲಲ್ಲಿ ಮಾಟಗಾತಿ ತನ್ನ ಮೊದಲ ಪೂಜೆ ಪ್ರಾರಂಬಿಸಿ್ದದಳೆ . ಯುದ್ಧದ ಆರಂಭ! ತನ್ನ ಕೆಲಸ ಶುರುವಾಯ್ತು ಅಂದುಕೊಂಡವನೆ ಕಣ್ಣಮುಚ್ಚಿ ಒಂದೇ ಸಮ ಯಾವುದೋ ಮಂತ್ರವನ್ನು ಸ್ಫುಟವಾಗಿ ಹೇಳಿ ಎದ್ದು ನಿಂತು ಮತ್ತೊಮ್ಮೆ ಹೇಳಿಕೊಂಡ

 "ತಬಾಹೀ ನಜರ್‌ ಆ ರಹಾಹೈ "

   "ಸರ್ವನಾಶ ಕಂಡು ಬರ‍್ತಿದೆ!!" 

                                                                                               ( ಮುಂದುವರೆಯುತ್ತದೆ-to be continued)

11 Nov 2014

ಹುಣ್ಣಮೆಯ ನಿಶಬ್ಧ ಭಾಗ- 6

        ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡ   ಹುಣ್ಣಿಮೆಯ ನಿಶಬ್ಧ ಭಾಗ -1  
 ಹುಣ್ಣಿಮೆಯ ನಿಶಬ್ಧ ಭಾಗ -5

        ಓಲವೇ ಜೀವನ ಸಾಕ್ಷತ್‌ಕಾರ...! ಹಾಡು ಕೇಳಿದೊಡನೆ ದಶಕಗಳ ಹಿಂದಿನ ನೆನಪಿಗೆ ಹೋಗಿದ್ದ ಹಿಮಾಂಶು ಪುನಃ ವಾಸ್ತವಕ್ಕೆ ಇಳಿಯುತ್ತಾನೆ , ರೌದ್ರ ರಮಣೀಯವಾಗಿದ್ದ ನಲ್ಲಮಲ ಅರಣ್ಯದಲ್ಲಿ ರಾತ್ರಿ 11 ಗಂಟೆ 15 ನಿಮಿಷದ ಕತ್ತಲೆಯಲ್ಲಿ ಅವರಿಬ್ಬರು ಕರಗಿ ಹೋಗಿದ್ದರು..

   ಇತ್ತ ರಾತ್ರಿ 11  ಗಂಟೆ 17 ನಿಮಿಷ ನಿದ್ದೆಯಿಲ್ಲದ ಕಣ್ಣುಗಳಲ್ಲೆನೊ ಯಶಸ್ಸು ಸಿಕ್ಕಿದ ಸಂತೋಷ ನಲಿಯುತ್ತಿತ್ತು.. ಕೇವಲ 22 ಗಂಟೆ.. Just 22 hours! ಇಡೀ ಅಂಧ್ರ-ಕರ್ನಾಟಕ ಪೋಲಿಸರಿಗೆ ತಲೆ ನೋವಗಿದ್ದ ಹಂತಕ ಸೆರೆಯಾಗುತ್ತಾನೆ ಅಂತ ACP ಪ್ರತಾಪ್‌ ಕುಮಾರ್‌ ಯೋಚಿಸುತ್ತಿದ್ದರೆ ಎದುರಿಗೆ ಕುತ್ತಿದ್ದ ಬೆಂಗಳೂರು ಇತಿಹಾಸ ಕಂಡ ಅತ್ಯಂತ ಟಾಫ್‌ ಕಾಪ್‌ DYSP ಶಿವರಾಮಪ್ಪ ನಾಳಿನ ಪ್ಲೆನ್‌ಗಳ ಸಂಪೂರ್ಣ ವಿವರಗಳನ್ನು ನೀಡುತ್ತಿದ್ದರು.. ಕೇವಲ ಇನ್ನು 7 ಗಂಟೆಯಲ್ಲಿ ಪೋಲಿಸರೆಲ್ಲ ತಮ್ಮ ಕಾರ್ಯಚರಣೆಗೆ ಸಜ್ಜಗಬೇಕು . ಅದರೆ  DYSP ಶಿವರಾಮಪ್ಪ  ಬೇರೆನೊ ಪ್ಲೆನ್‌ನಲ್ಲಿದ್ದರು. ಅದು ಕೇವಲ ACP ಪ್ರತಾಪ್‌ ಕುಮಾರ್‌ ಮತ್ತು ಅವರು ಈ ಕಾರ್ಯಚರಣೆಯಲ್ಲಿ ತೊಡಗುವುದು ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮುಂದೆ ವಿವರಿಸುತ್ತಿದ್ದರೆ . ಮುಖ್ಯಮಂತ್ರಿಗಳಿಗೆ ಒಂದು ಕ್ಷಣ ದಿಗಿಲು ಬಡಿದಿತ್ತು... ಕೇಲವೆ ನಿಮಿಷದಲ್ಲಿ ಅವರ ಕಾರ್ಯಚರಣೆಯ ಶೈಲಿ ಬದಲಾಗಿತ್ತು.. DYSP ಶಿವರಾಮಪ್ಪ ಎಲ್ಲಾರ ಊಹೆಗೂ ನಿಲುಕದ ದೊಡ್ಡ ಕಾರ್ಯಚರಣೆಗೆ ಅಣಿಯಾಗಿದ್ದರು..

     ತಮಗೆ ಸಿಕ್ಕಿದ ಸಿಸಿ-ಟಿವಿ ದೃಶ್ಯಗಳಲ್ಲಿ ಅವರು ಕಂಡಿದ್ದು ಒಂದು ನಾಯಿ.. ಹುಲಿ ಗಾತ್ರದ ನಾಯಿ ಕೊಲೆಯಾದ ದಿನವೆಲ್ಲ ರೈಲ್ವೆ ನಿಲ್ದಾಣದಲ್ಲಿ ಓಡಡುತ್ತಿತ್ತು... ಸಿಸಿ-ಟಿವಿಯಲ್ಲಿ ಅವರಿಗೆ ಸಿಕ್ಕ ಮತ್ತೊಂದು ದೃಶ್ಯದಲ್ಲಿ ಕಂಡಿದ್ದು ಒಂದು ಆಕೃತಿ.. ಮತ್ತೆ ಮತ್ತೆ ಹಲವು ಸಿಸಿ-ಟಿವಿಯಲ್ಲಿ ಕೊಲೆಯಾದ  ಅಷ್ಟು ದಿನದಲ್ಲಿ ರೈಲಿನಲ್ಲಿ ಕಾಣಿಸಿಕೊಂಡಿದ್ದ ಆಕೃತಿ ಯಾರು ಎಂದು ತಿಳಿಯಲು ಕಷ್ಟವಾಗಿರಲಿಲ್ಲ.. ಅ ಆಕೃತಿಯ ಹೆಸರು "ಹಿಮಾಂಶು!!"
  
                    ಒಡೆದು ಬಿದ್ದ ಕೊಳಲು ನಾನು
                    ನಾದ ಬರದು ನನಲ್ಲಿ..!!

       ವಾಸ್ತವಕ್ಕೆ ಇಳಿದ ಹಿಮಾಂಶುವಿಗೆ ಆಗ ತಾನೇ ತಾನು ಓದುತ್ತಿದ್ದ ಅಡಿಗರ ಕಾವ್ಯ ನೆನಪಾಗಿ ಗದ್ಗತಿತನಾದ.. ಅಷ್ಟು ರುದ್ರ ನಲ್ಲಮಲ ಅರಣ್ಯದಲ್ಲೆನೊ ನೀರವ ಮೌನ..! ಅಲ್ಲಿ ಇದ್ದದ್ದು ಹಿಮಾಂಶು , ಶಾಲಿನಿ ಮತ್ತು ಮೊಡದ ಮರೆಯಲ್ಲಿ ಮರೆಯಾಗಿ ನಾಳಿನ ಹುಣ್ಣಿಮೆಗೆ ಸಿದ್ದನಾಗಿದ್ದ ಚಂದ್ರ! ಹಿಮಾಂಶುವಿಗೆ ಭಾವನೆಗಳು ಉಕ್ಕಿ ಸುನಾಮಿ ಅಲೆಗಳು ಅಪ್ಪಳಿಸುವ ಹಾಗೆ ಒಮ್ಮೆಲೆ ಅಪ್ಪಳಿಸಿದವು... ತನಗೆ ತಿಳಿಯದಂತೆ ಹಿಮಾಂಶು ಶಾಲಿನಿಯನ್ನು ಅ ಕತ್ತಲ ಕಠೋರ ರಾತ್ರಿಯಲ್ಲಿ ತಬ್ಬಿ ಅತ್ತುಬಿಟ್ಟಿದ್ದ. ನಲ್ಲಮಲ ಅರಣ್ಯದಲ್ಲಿ ಕಾಲ ಸ್ತಭ್ದಗೊಂಡಿತ್ತು..!    ನಿರವ ಮೌನ ಅವರಿಸಿತು . ಅದು ಅವರು ಶೈಕ್ಷಣಿಕ ಪ್ರವಾಸಕ್ಕೆ ಬಂದ ಕೊನೆಯದಿನ . ಮರುದಿನ ಅವರು ಪುನಃ ಟ್ರೇನ್‌ನಲ್ಲಿ ಬೆಂಗಳೂರಿಗೆ ತಲುಪಬೇಕಿತ್ತು .

   ಅ ಕತ್ತಲ ರಾತ್ರಿಯಲ್ಲಿ ಅವರೇನು ಮಾತಾಡದೆ ಸುಮ್ಮನೆ ಕುಳಿತುಬಿಟ್ಟರು . ಕಣ್ಣಗಳೊಳಗಿನ ಅವನ ಮೃದುತ್ವ ಶಾಲಿನಿಯ ಅಪರೂಪ ಸೌಂದರ್ಯವನ್ನು ಸುಮ್ಮನೆ ದಿಟ್ಟಿಸುತ್ತಿತ್ತು . ಅದರಲ್ಲಿ ಆಸೆಯಿರಲಿಲ್ಲ , ಅವಸರದ ಛಾಯೆ ಇರಲಿಲ್ಲ . ಆಸಲು ಪ್ರಶ್ನೆಗಳೇ ಇರಲಿಲ್ಲ.. ಅಲ್ಲಿ ಇದ್ದಿದ್ದು ಕೇವಲ ಆರಾದನೆ.. ಶಾಲಿನಿಯ ಆರಾದನೆ... ಅವಳ ಪ್ರೀತಿಯ ಆರಾದನೆ. ಮಾತೆ ಮರೆಸುವ ನೀರವ ಮೌನ ರಾತ್ರಿ 12:10 ರವರೆಗು ಸುಮ್ಮನೆ ಕುಳಿತು ಒಬ್ಬರನೊಬ್ಬರು ನೋಡುತ್ತಿದ್ದರು . ನಂತರ ಅವರಿದ್ದ ರೂಮಿನಿಂದ ಬಂದ ಶಬ್ದದಿಂದಾಗಿ ಇಬ್ಬರು ಆತುರಾತುರವಾಗಿ ಕಣ್ಣಿನಲ್ಲೆ ಬೆಳಗ್ಗೆ ಸಿಗುತ್ತೆನೆಂದು ಮಿಂಚಂತ್ತೆ ಮಾಯಾವಾಗುತ್ತಾರೆ
..
    ಸಾಲು ಸಾಲು ಸಾವುಗಳಿಗೆ ಸಾಕ್ಷಿಯಾಗಿದ್ದ ಪ್ರಶಾಂತಿ ಎಕ್ಸ್‌ಪ್ರೇಸ್‌ ಒಡಿಶಾದ ಭುಭನೇಶ್ವರದಿಂದ ಅಂಧ್ರದ ಮೂಲಕ ಬೆಂಗಳೂರಿಗೆ ಬರಲು ಸಜ್ಜಗುತ್ತಿತ್ತು . ಸಮಯ ಬೆಳಗ್ಗೆ 8 ಗಂಟೆ 30 ನಿಮಿಷ ಕಪ್ಪು ಸುಂದರಿ  ಪ್ರಶಾಂತಿ ಎಕ್ಸ್‌ಪ್ರೇಸ್‌ ಹೊಗೆಯನ್ನು ಹೊರಹಾಕುತ್ತ ಬೆಂಗಳೂರಿನೆಡೆಗೆ ಬರುತ್ತಿತ್ತು .ಅಷ್ಟು ಜನರ ಮಧ್ಯ ಶಾಲಿನಿ ಮತ್ತು ಹಿಮಾಂಶು ನಿಚ್ಚಳ ಮೌನದಿಂದ ಏನು ಮಾತಾಡಿರಲಿಲ್ಲ . ಭುಭನೇಶ್ವರದಿಂದ ಟ್ರೇನ್‌ ಬಿಟ್ಟೊಡನೆ ಪೋಲಿಸರು ಆಲರ್ಟ್ ಆಗುತ್ತಾರೆ . ಮಫ್ತಿಯಲ್ಲಿದ್ದ ಪೋಲಿಸರು ಕ್ಷಣ ಕ್ಷಣದ ಮಾಹಿತಿಯನ್ನು ವಿಶಾಕಪಟ್ಟಣದಲ್ಲಿದ್ದ ಇಬ್ಬರು ದೈತ್ಯ ಪೋಲಿಸರಿಗೆ ನೀಡುತ್ತಾ ಅವರ ಗಮನಕ್ಕೆ ಬಂದದ್ದು ಇಂದು ಹುಣ್ಣಿಮೆಯಂತ! ಭುಭನೇಶ್ವರದಿಂದ ಭ್ರಮ್ಮಪುರ ದಾಟಿ ಅಂಧ್ರದ ಗಡಿಹೊಕ್ಕು ಸುಮಾರು ಮದಾಹ್ನ 12:10ಕ್ಕೆ ಶ್ರೀಕಾಕುಳಂಗೆ ಟ್ರೇನ್‌ ಬಂದು ನಿಂತಿತ್ತು , ಅದೇ ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಬೆಂಗಳೂರಿನ ಸೆಂಟ್‌ ಡೇವಿಡ್‌ ಕಾಲೇಜು ವಿದ್ಯಾರ್ಥಿಗಳಲ್ಲೆ ಪ್ರಯಾಣ ಬೆಳೆಸಿದರು.. ಅದರಲ್ಲಿ ಹಿಮಾಂಶು ಅಂತ ಒಬ್ಬ ಹಂತಕನಿದ್ದ ಎಂದು ಗೊತ್ತಿದ್ದು ಕೇವಲ ಇಬ್ಬರಿಗೆ ACP ಪ್ರತಾಪ್‌ ಕುಮಾರ್‌ ಮತ್ತು DYSP ಶಿವರಾಮಪ್ಪ ! 

   ಟ್ರೇನ್‌ ಶ್ರೀಕಾಕುಳಂನಿಂದ ಒಂದು ಗಂಟೆಯೊಳಗೆ ವಿಶಾಕಪಟ್ಟಣಕ್ಕೆ ಬಂದಿತ್ತು . ಅಷ್ಟು ಹೀನಾಯ ಕೊಲೆಗಳನ್ನು ಕಂಡಿದ್ದ ಟ್ರೇನ್‌  ಒಳಕ್ಕೆ ಆಗ ಹತ್ತುತ್ತಾರೆ ACP ಪ್ರತಾಪ್‌ ಕುಮಾರ್‌ ಮತ್ತು DYSP ಶಿವರಾಮಪ್ಪ . ಟ್ರೇನ್‌ ನಿಚ್ಚಳವಾಗಿ ತನ್ನ ಪಥದಲ್ಲಿ ಸಮುದ್ರ ಗಾಂಭಿರ್ಯ ಮರೆಯುತ್ತಾ ಹೋಗುತ್ತಿದ್ದರೆ ಅಲ್ಲಿದ್ದ ನಾಲ್ಕು ಜನರ ತಲೆಯಲ್ಲಿ ಲಕ್ಷ ಲಕ್ಷ ಯೋಚನೆ.. ಪ್ರಶಾಂತಿ ಎಕ್ಸ್‌ಪ್ರೇಸ್‌ ಗುಂಟುರು ತಲುಪುವಷ್ಟರಲ್ಲಿ ಕತ್ತಲು ಕವಿದಿತ್ತು . ಹುಣ್ಣಿಮೆಯ ಚಂದ್ರ ತನ್ನ ಸೌಂದರ್ಯವನ್ನು ಬಿರುತ್ತಿದ್ದ . ಕತ್ತಲ ರಾತ್ರಿಯಲ್ಲಿ ಟ್ರೇನ್‌ ಗುಂಟುರು ದಾಟಿದರು ಶಾಲಿನಿ-ಹಿಮಾಂಶುವಿನ ನಡುವೆ ಒಂದೇ ಒಂದು ಮಾತಿರಲಿಲ್ಲ . ನಿಶಬ್ಧವಾಗಿದ್ದ ಹಿಮಾಂಶು . ಅವನೊಳಗಿದ್ದ ಹಂತಕ ಸತ್ತುಹೋಗಿದ್ದಾನ.?? ಟ್ರೇನ್‌ ಧರ್ಮವರಂ ಜಂಕ್ಷಣ್‌ ದಾಟಿ ಅನಂತಪುರಕ್ಕೆ ತಲುಪಲು ಐದು ನಿಮಿಷ ಬಾಕಿಯಿತ್ತು. ಹಿಮಾಂಶುವಿನ ತಲೆಗೆ ತನ್ನ ಗನ್‌ point ಮಾಡ್ತ ನಿಂತುಬಿಟ್ಟಿದ್ದರು DYSP ಶಿವರಾಮಪ್ಪ.. ತಾವು ಊಹಿಸಿದಂತೆ ಹಿಮಾಂಶು ಮರು ಹೊರಟ ಮಾಡುತ್ತಿಲ್ಲ ಅಂತ ಹೊತ್ತಗಿದ್ದೆ ತಡ ಅವನನ್ನು ನಯಾವಾಗಿ ಅರೆಷ್ಟ್ ಮಾಡಿದ್ದರು ACP ಟೈಗರ್‌ ಪ್ರತಾಪ್‌ ಕುಮಾರ್‌ . ರಣಹದ್ದಿನಂತೆ ಕಾಯುತ್ತಿದ್ದ ಮಾಧ್ಯಮಗಳಲ್ಲಿ ಬ್ರೇಕಿಂಗ್‌ ನ್ಯೂಸ್‌  ಬರುತ್ತಿದ್ದರೆ ಪ್ರಶಾಂತಿ ಎಕ್ಸ್‌ಪ್ರೇಸ್‌ ಖುಷಿಪಡುತ್ತಿತ್ತೆನೋ...??

 Gun point ಮಾಡಿಸಿಕೊಂಡು ಕುಳಿತ್ತಿದ್ದ ಹಿಮಾಂಶುನನ್ನು ನೋಡಿ ಶಾಲಿನಿ ಬೆಚ್ಚಿಬಿದ್ದಿದ್ದಳು! "ಹಿಮು...." ಅಂತ ಚಿರಲು ಪ್ರಯತ್ನಿಸಿದಳಾದರು ಅವಳ ಬಾಯಿಯಿಂದ ಶಬ್ದ ಹೊರಬರಲಿಲ್ಲ . ಶಾಲಿನಿಯ ಹಿಮು ಅರೆಷ್ಟ್‌ ಆಗಿದ್ದ . ಎರಡು ಕೈಗಳನ್ನು ಮೆಲೆತ್ತಿ ಶಾರಣಾಗಿ ಬಿಟ್ಟಿದ್ದ ಹಿಮಾಂಶು..! ಅಷ್ಟು ಕೊಲೆಗಳನ್ನು ತಾನೆ ಮಾಡಿದ್ದು ಎಂದು ಮೇಜಸ್ಟಿಕ್‌ನ ಕೂಗಳತೆಯಲ್ಲೆ ಇದ್ದ ಉಪ್ಪಾರಪೇಟೆ ಪೋಲಿಸ್‌ ಸ್ಟೇಷನ್‌ನ ಸೆಲ್‌ನಲ್ಲಿ ಮೌನದಿಂದಲೆ ಹೇಳುತ್ತಿದ್ದಾನೆ ..

  ಹಿಮಾಂಶು ನಿಜಕ್ಕೂ ಕೊಲೆಮಾಡಿದ್ದನಾ..? ಹಿಮಾಂಶು ನಿಜಕ್ಕೂ ಹಂತಕನ...? ಹಿಮಾಂಶು ಶಾರಣಾಗಿದ್ದಾದ್ದರು ಏಕೆ..??


   ನಡೆದಿದ್ದ 16 ಬಲಿಗೆ ಆ ಒಂದು ನಾಯಿ ಸಾಕ್ಷಿಯಾಗಿತ್ತು . 17ನೇ ಬಲಿ ಏಕೋ ಮಾಟಗಾತಿ ಸುಬ್ಬಮ್ಮನಿಗೆ ದೊರೆಯುವಂತಿಲ್ಲ ಅ ಹುಣ್ಣಿಮೆಯಲ್ಲಿ ಆಕೆ ನಡುವಯಸ್ಸಿನ ಹೆಂಗಸ ಬಲಿ ಪಡೆದಿಲ್ಲವೆಂದರೆ ತಾನು  14 ವರ್ಷಗಳಿಂದ ಮಾಡಿದ ಪೂಜೆ ವ್ಯರ್ತವಾಗಿ ಹೋಗಲಿದೆ ಎಂಬುದು ಅವಳಿಗೆ ಅರ್ಥವಾಗಿತ್ತು.. ಹುಲಿಯಂತಿದ್ದ ನಾಯಿ ಶಾಲಿನ ಅಂಧ್ರಕ್ಕೆ ಹೊದಗಲಿಂದಲು ಅವಳ ಮನೆಯ ಮುಂದೆಯೆ ಇತ್ತು..ಇದು ಶಾಲಿನಿ  17ನೇ ಬಲಿಯಾಗುವ ಸೂಚನೆಯಾ...???
                                                                                               (ಮುಂದುವರೆಯುತ್ತದೆ-To be continued)

7 Nov 2014

ನೆನಪುಗಳ ನಡುವೆ..

      ಜಿಡಿ ಜಿಡಿ ಮಳೆ ಬಿಟ್ಟುಬಿಡದೇ ತನ್ನ ಸೌಂದರ‍್ಯವನ್ನು ತೋರುತ್ತಿತ್ತು. ಮಳೆಯ ನಡುವೆ ಕಾಲೇಜಿನಿಂದ ಮನೆಗೆ ಬರಲು ಅದೇ ೬೧ 'ಬಿ' ಬಸ್ಸ್ ಹತ್ತಿದ್ದೆ ತಡ ಯಾಕೋ ನಿನ್ನ ನೆನಪುಗಳು ಸಮುದ್ರ ಅಲೆಯಂತೆ ಒಂದೆ ಸಮ ತುರಿಬಂದು ನನ್ನ ಮನಸ್ಸಿನಲ್ಲಿ ನೆಲೆಸಿತು . ನಿನ್ನ ನೋಡಿ ಭರ್ತಿ ಒಂದು ವರ್ಷವಾಗಿತ್ತು ಎಂದು ಅರಿತ್ತದ್ದೆ ತಡ ನನ್ನ ಕಣ್ಣಹನಿ ನೆಲದ ಮೇಲೆ ಬಿದ್ದು ಹಿಂಗುಹೋಗಿತ್ತು . ಅದೆಕೋ ಗೊತ್ತಿಲ್ಲ ತುಂಬಾ ಭಾವುಕನಾಗಿಬಿಟ್ಟೆ . ಬಸ್ಸಿನಲ್ಲಿ ಪುಟ್ಟ ಮಗು ಅಳುವಂತೆ ಕಣ್ಣಿರಾಕುತ್ತಾ ಈ ಜಗತ್ತಿಗೆ ನಾಚಿ ತಲೆತಗ್ಗಿಸಿದೆ.....

      ನಿನ್ನ ಮುದ್ದು ಮದ್ದು ನಗು , ಕೆನ್ನೆಯ ಮೇಲೆ ಬಿಳುತ್ತಿದ್ದ ಪುಟ್ಟ ಗುಳಿ , ನಿನ್ನ ಮುಂಗುರುಳು , ನಿನ್ನ ಹಣೆಯಮೇಲೆ ಇದ್ದ ಪುಟ್ಟ ಬಿಂದಿ ನನ್ನ ಕಣ್ಣಮುಂದೆ ಬಂದು ಅಣಕಿಸುತ್ತಿದ್ದವು . ಭಾವನೆಗಳ ಮಹಾಪೂರ ತಡೆಯಾಲಾಗದೆ ಬಸ್ಸಿನಲ್ಲೆ ಈ ಪತ್ರ ಬರೆಯಲು ಶುರುಮಾಡಿದೆ.. ನೀನು ಓದುತ್ತೀಯಾ ? No , never.. ನಾನು ನಿನಗಾಗಿ ಬರೆದ ಒಂದು ಪತ್ರ , ಒಂದೇ ಒಂದು ಕವನವನ್ನು ಕೂಡ ಓದಲಿಲ್ಲ ನೀನು... ಬರೆಯುವುದುಬಿಟ್ಟು ನನಗೇನು ಗೋತ್ತು ಜಸ್ಟ್ ನನಗಾಗಿ(?) ಬರೆಯಬೇಕಷ್ಟೆ . ಆರು ವರ್ಷಗಳ ಹಿಂದೆ ಇಂತಹುದೆ ಜಿಡಿ ಜಿಡಿ ಮಳೆ ಬರುತ್ತಿತ್ತೇನೊ, ಸ್ಕೂಲ್ ಬಿಟ್ಟು ಇದೇ ೬೧'ಬಿ' ಬಸ್ ಹತ್ತಿ ಮನೆಗೆ ಬರುತ್ತಿದ್ದಾಗ ನೀ ಕಂಡಿದ್ದೆ . ಇದೆ ಡಿಸೆಂಬರ್‍ ಬಂದರೆ ನನ್ನ ನಿನ್ನ ಈ ಅಪೂರ್ವವಾದ ಹಂಬಲಕ್ಕೆ ಆರು ವರ್ಷ ತುಂಬು ಹರಿಯ.. ಅದರೆ ನಿನಗೊಂದು Thnaks ಹೇಳಲೆಬೇಕು ನಾನು ಮೊದಲಬಾರಿಗೆ ಇಂತಹುದೇ ಒಂದು ಪತ್ರ ಕೇವಲ ನಿನಗಾಗಿ ಬರೆದಿದ್ದೆ , ಈಗ ಇಂತಹುದೇ ೨೦ ಪತ್ರ ಬರೆದಿರಬಹುದು ಅದರಲ್ಲಿ ಒಂದು ಕೂಡ ನೀನು ಓದಿಲ್ಲ.

      ಈ ಜಡಿ ಮಳೆ ಯಾಕೋ ಒಂದೇ ಸಮನೇ ಬಿಳುತ್ತಿತ್ತು, ವಿಜಯನಗರದಲ್ಲಿ ಇಳಿಯಬೇಕಾದ ನಾನು ಅದೇಕೊ ಇಂದು ಇಳಿಯಲಿಲ್ಲ , ಬಸ್ಸು ಸೀದ ನಾವಿಬ್ಬರು ಕೂತು ಮಾತಾಡುತ್ತಿದ್ದ ಸರಸ್ವತಿ ನಗರ್‌ ಬಸ್‌ಸ್ಟಾಪಿಗೆ ಬಂದು ನಿಂತಿತು. ಅದೇ ಬಸ್‌ಸ್ಟಾಪ್ , ಅದೇ ಮರ , ಅದೇ ಬೇಂಚೂ ಅದೆಷ್ಟು ಸಾಲಿ ಈ ಹಿಂದೆ ನೋಡಿದ್ದೆನೋ , ಅದರೇ ಇಂದೆಕೋ ಅವುಗಳ ಮೇಲೆ ಭಾವನೆಗಳು ಉಕ್ಕಿ ಬರುತ್ತಿತ್ತು . ನಿನ್ನ ಸಾವಿರ ಸಾವಿರ ನೆನಪುಗಳು ಒಂದೇ ಸಮನೇ ಕಾಡುತ್ತಿತ್ತು .

                                             ಕಾಡುವ ಗೆಳತಿ ಕಾದಿರುವೆ ನಿನಗಾಗಿ,
                                       ಕಾದು ಕಾದು ಸಾಕಾಯ್ತು ಮನದ ಮಾಯಾವಿ..


 -ಮಳೆಯನ್ನೂ ಲೆಕ್ಕಿಸದೆ ನಾವಿಬ್ಬರೂ ನಡೆದುಹೋಗುತ್ತಿದ್ದ ಖಾಲಿ ರಸ್ತೆಯಲ್ಲಿ ನಿನ್ನ ನೆನಪಿನ ಭಾವಗಳ ಜೊತೆ ಹೆಜ್ಜೆ ಹಾಕುತ್ತಿದ್ದೆ . ಅದೆಲ್ಲೊ ನನ್ನ ಮನಸ್ಸಿನಲ್ಲಿ ಕಳೆದುಹೋಗಿದ್ದ ಕವಿತೆ ನೆನಪಿಗೆ ಬಂದದ್ದೆ ತಡ ಮತ್ತಷ್ಟು ಭಾವುಕನಾದೆ , ಮಳೆಯ ಜೊತೆ ನನ್ನ ಕಣ್ಣಹನಿ ನೆಲಕ್ಕೆ ಬಿದ್ದು ಮರೆಯಾಗಿತ್ತು... ಅದರೇ ನಿನ್ನ ನೆನಪುಗಳು????

ಹೇಳದೇ ಉಳಿದ ಮಾತುಗಳು
ಬರೆಯದೇ ಉಳಿದ ಪದಗಳು
ಜೋಡಿಸಿ ಬರೆಯಲೇ ನಾಕು ಸಾಲು
ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು 

ಬರೆದು ಬಿಟ್ಟ ಕವಿತೆ ಇದು..
ಹೇಗೆ ನಿಡಲಿ ನಿನಗೆ!!
ಎಲ್ಲಿ ಮರೆಯಾಗಿದ್ದಿ ಹುಡುಗಿ ನನ್ನ ಬಿಟ್ಟು..
ನನ್ನೀ ಕವಿತೆಗಳ ಬಿಟ್ಟು!!

ಕಾಡೋ ಚಳಿಗೂ ಅರೆಪಾವು
ಹೆಚ್ಚು ಕಾಡುವ ನಿನ್ನ ನೆನಪುಗಳಿಗೆ
ರೂಪ ನೀಡಿ ಬರೆಯುತ್ತಿದ್ದೆನೆ ಈ ಕವಿತೆಗಳನ್ನು...

                                                                      -ಮಂಜುನಾಥ್

5 Nov 2014

Someone...!

There is someone, made only for you,
To guide you on a small journey called life.

There is someone, to take care of you,
That will walk with you for whole life.

There is someone, which thinks of time shared with you,
And always leave you with loving words.

There is someone, that can read your mind very well,
Even though you are unable to express it.

There is someone, more trust worthy,
To share your feelings, happiness, sorrow…..

There is someone, which will always treat you alike
Putting aside the differences in character.

There is someone that will always be inspiration for you,
Like a ray of light cutting the black stratum of sky whilst dawn.

Words will fall short to write about someone,
But I feel everyone should have the experience of someone;
To state someone
Dedicated to someone ;)
close