25 Dec 2014

ಪ್ರೀತಿಯ ಹೂಗಳಿಗೆ ಕವನಗಳ ಜಾತ್ರೆ!

ಹೂ ಅರಳುತ್ತೆ ಎಂದು
ರಾತ್ರಿಯಿಡಿ ಕಾದು ಕೂತ ಆ ಹುಡುಗ;
ಹೂ ಕೋಡುತನೆಂದು
ನಿದ್ದೆಗೆಟ್ಟು ಕಾದು ಕೂತಲು ಈ ಹುಡುಗಿ;

ಅತ್ತ ಅವನು ಎಷ್ಟು ಕಾದರು
ಅರಳಲೇ ಇಲ್ಲ ಹೂ..
ಇತ್ತ ಇವಳು ಎಷ್ಟು ಕಾದರು
ತರಲೇ ಇಲ್ಲ ಹೂ..

ಅವಳದೊಂದು ಹೆಸರು
ಹೇಳಿದನಷ್ಟೆ..! ಮೊಗ್ಗು
ಅರಳಿ ಹೂವಾಯ್ತು..
ಇವಳು ಅವನಿಗಾಗಿ ಕವನ
ಉಸುರಿದಳಷ್ಟೆ..! ಹೂ
ತಂದು ಇವಳಿಗಿಟ್ಟ
ಅವನು ಕನಸಿನ ಹುಡುಗ..
ಇವಳು ಹೂ ಹುಡುಗಿ..
                                                                                                             -ಮಂಜುನಾಥ್‌

24 Dec 2014

ನನ್ನ ಪ್ರೀತಿಯ ಹುಡುಗನಿಗೆ!

                 ಹುಡುಗಾ, ಹೇ ಹುಡುಗಾ ಹೇಗಿದ್ದಿ? ನಾನು ಕಣೋ.... ಗುರ್ತು ಸಿಗಲಿಲ್ಲವಾ ?   ಜಲಪಾತದ ಕೆಳಗೆ ನಿಂತು ನಿನ್ನ ಜತೆ ಆಡಿದವಳು. ಕಡಲ ತೀರದ ಹಸಿ ಮರಳಿನ ಮೇಲೆ ಬೆರಳಿಟ್ಟುನಿನ್ನ ಹೆಸರು ಬರೆದವಳು. ತೆರೆಗಳುರುಳಿ ನಿನ್ನ ಹೆಸರು ಅಳಿಸಿದಾಗ ಆತಂಕಪಟ್ಟವಳು. ನಾನು ಕಣೋ ಹುಡುಗಾ. ನಾನು ನಿನ್ನ ಹುಡುಗಿ..

     ಹುಡುಗಾ........ ಹೇಗಿದ್ದಿ? ಕೆನ್ನೆಯ ಕೆಂಪೇನಾಯಿತೋ? ನಂಗೊತ್ತು ನೀನು blush  ಮಾಡ್ತಯಿರುತ್ತಿ. I love that ಕಣೋ...  ಅವತ್ತು ಹೀಗೆ ಬೆಳಬೆಳಗೆ ವಿಜಯನಗರದಲ್ಲಿ ನಂಗೊಂದು ವಾಕ್‌ ಕರೆದ್‌ಕೊಂಡು ಹೋಗ್ತ ಹೀಗೆನೆ ಬ್ಲಷ್‌ ಮಾಡ್ತಯಿದ್ದೆ.. ಎಷ್ಟು ಮುದ್ದು ಮದ್ದಾಗಿ ಕಂಡಿದ್ದೆ ನೀನು. ನಿನ್ನೊಂದಿಗೆ ಅದೆಷ್ಟು ಸ್ಥಿರವಾಗಿ ಬಂದಿದ್ದೆ. ನಿನ್ನ ಜತೆ ನಡೆಯುವದರಲ್ಲೆ ಅತಿದೊಡ್ಡ ಕಂಫರ್ಟ್‌ ಅನುಭವಿಸುತ್ತಿದ್ದೆ. ನನಗೆ ಮತ್ತೆನೇನೂ ಬೇಕಿರಲಿಲ್ಲ. I love you! ಅನ್ನಬೇಕಿರಲಿಲ್ಲ. ಮಾತನಾಡಿ react ಮಾಡಬೇಕಿರಲಿಲ್ಲ. ನಿನ್ನ ಕಣ್ಣುಗಳು ನನಗೊಂದು ಭದ್ರತಾ ಭಾವ ನೀಡಿತ್ತು. ಅದು ಶಾಶ್ವತ ಪ್ರೀತಿಯ ಕಣ್ಣು!

    ಜಗತ್ತಿನ ಪ್ರತಿ ಹುಡುಗಿಯೂ ಬಯಸುವ ಕಂಫರ್ಟ್ ಇದೇ ಕಣೋ Genius! ಕಾಮವಿಲ್ಲದ ಸಾಮೀಪ್ಯ. ಅವಸರವಿಲ್ಲದ ಅಪ್ಪುಗೆ. ಇಲ್ಲದಿದ್ದರೂ ಇದೆ ಎಂಬಂತೆ feel ಆಗುವ space. "ಪ್ರೀತಿಸ್ತಿಯಾ?" ಅಂತ ಬಾಯಿಬಿಟ್ಟು ಕೇಳದೆ "ಪ್ರೀತಿಸ್ತಾನೆ ಬಿಡು" ಅಂತ ತನಗೆ ತಾನೇ ತಂದುಕೊಳ್ಳುವ confidence ಮಾತೇ ಆಡದೆ ಸಾವಿರ ಭಾವ ತಿಳಿಸಿಕೊಡುವ ಸೌಮ್ಯ ಉಸಿರಾಟ.

    ಹುಡುಗಾ, ಇದೀಷ್ಟು ಭಾವವನ್ನೂ ಮತ್ತೆ ಅನಿಭವಿಸಬೇಕು ಕಣೋ.. ನೀನು I love you ಅಂತ ಹೇಳಲ್ಲ. ಅಸಲಿಗೆ ಮಾತೇ ಆಡಲ್ಲ ನೀನು. ದೇವಾಸ್ಥನದಲ್ಲಿ ಇರೋ ದೇವರ ಮೌನ ಕಣೋ ನಿಂದು.. ದೇವನಾದರು ಕಾದು ಕಾದು ಬೇಸರಾಗಿ ಮಾತಿಗಿಳಿದು ಹೊರಟೆ ಹೋಗುತ್ತಾನೆ, ಆದರೆ ನೀನಗಲ್ಲ. ನನ್ನ ಪ್ರೀತಿಯ ಹುಡುಗ ನೀನು. ನಾನು ಬರುವವರೆಗೂ ಕಾಯುತ್ತಿ. ಒಂದಿಷ್ಟು ಮಾತು ಆಡದೇ ಕಾಯುತ್ತಿ. ಬಂದ ಮೇಲಾದರೂ ಮಾತನಾಡುತ್ತಿ ತಾನೇ...?

  ಹೇ ಹುಡುಗಾ ನನಗೆ ನಿನ್ನ ಮೇಲೆ ತುಂಬಾ ಕೋಪವಿದೆ ಕಣೋ. ಅಷ್ಟು ವರ್ಷ ನಿನ್ನ ಜೊತೆಗಿದ್ದಿನಿ, ನಿನ್ನೊಂದಿಗೆ ಗಂಡೆಗಟ್ಟಲೆ ಮಾತಡಿದ್ದೀನಿ ಏರ್‌ಟೆಲ್‌ ಕಾಂಪನಿನ ಉದ್ದಾರ ಮಾಡುತ್ತಾ ಪ್ರತಿ ಮೇಸೆಜ್‌ಗೆ ಒಂದು ರೂಪಾಯಿ ಕೊಟ್ಟಿ ಮಾಡಿದ್ದೀನೊ.. ಒಮ್ಮೆ ಅದರೂ just once.... I love you ಅಂತ ಹೇಳಿದ್ಯೆನೋ.. At least ಪ್ರಯತ್ನ ಅದರೂ ಮಾಡಿದ್ದಿಯಾ? ನಂಗೊತ್ತು You never tried, ನಾನು ಹೇಳೊವರೆಗೂ ನೀ ಹೇಳಲ್ಲ.. ನೀ ಕೇಳೊವರೆಗೂ ನಾ ಹೇಳಲ್ಲ.. Let's wait ಕಣೋ..

   ನಂಗೊತ್ತು ನೀನು ನನ್ನದೆ ಸ್ಥಿತಿಯಲ್ಲಿದ್ದಿಯಾ. ಪ್ರೀತಿಸ್ತಿದೀನಿ ಅಂತ ಇಬ್ಬರೂ ಹೇಳಿಕೊಳ್ಳದೆ ಇರುವ, ಆದರೆ ಇಬ್ಬರಿಗೂ ಅದುಗೊತ್ತಾಗಿರುವ, ಅಲ್ಲಿ ಹೇಳಿಕೊಂಡು ಬಿಡುತ್ತೇವೋ ಅಂತ ಇಬ್ಬರೂ ಆತಂಕ ಪಡುವ ವಿಚಿತ್ರ ಸ್ಥಿಯಿದೆಯಲ್ಲ? ಪ್ರೇಮದಲ್ಲಿ ಅದಕ್ಕಿಂತ ಮಧುರವಾದುದು ಮತ್ತೊಂದಿಲ್ಲ. ಮಾತು ಆಡಿದರೇ ಹೋಯ್ತು ಎಂಬ ಭಯ. ಆಡಿಬಿಡುತ್ತೇನೇನೋ ಎಂಬ ಆತಂಕ. ಆಡದೆ ಹೀಗೆ ದಿನ ಕಳೆದು ಬಿಡುತ್ತೀನೇನೋ ಎಂಬ ದುಗುಡ. ಅದೂ ಆಡಿಬಿಟ್ಟರೆ, ಅದೆಲ್ಲ ಮಾಧುರ್ಯ ಮುಗಿದು ಹೋದಿತು ಎಂಬ ಎಚ್ಚರಿಕೆ! ಎಂತ ಮಧುರಭಾವ ಅಲ್ವೆನೋ ಇದು. ನಾನಿನ್ನೂ ಕಾಯಲ್ಲ "I LOVE YOU" ಅಂತಹೇಳುತ್ತೀಯಾ ತಾನೇ.. Yes, ಹೊಸ ವರ್ಷ ಬರುತ್ತಿದೆ..  get ready for a surprise ಹುಡುಗಾ..
                                                                                                            ನಿನ್ನ ಪತ್ರವನ್ನು ಕಾಯುತ್ತಾ,
                                                                                                                      ನಿನ್ನವಳು 

22 Dec 2014

ನನ್ನ ಪ್ರೀತಿಯ ಹುಡುಗಿ

ನನ್ನ ಬದುಕಿನ ಬದುಕೇ,

      ಬೆಳಗಿನ ಜಾವದ ಮೊದಲ ಸೂರ್ಯ ಕಿರಣ ಇನ್ನೂ ಭೂಮಿಗೆ ತಲುಪಿರಲಿಲ್ಲ, ಎಷ್ಟೊ ವರ್ಷಗಳ ನಂತರ ಇಷ್ಟು ಬೇಗನೆ long walk ಹೋಗ್ತಯಿದ್ದಿನಿ. ಅದೂ ಒಬ್ಬಂಟಿಯಾಗಿ! ಅಲ್ಲಿ ನೀನು ನೆನಪಾದೆ ಅಂದರೆ ಹೇಗೆ ಸರಿ? ನೀನು ನನ್ನೊಳಗೆ ಜೀವಿಸುವ ಜೀವತಂತು, ಕರುಳ ವೀಣೆ, ಬದುಕಿನ ಮಾತು, ಎದೆಯ ಡವಡವ. "ನೆನಪು ಮಾಡಿಕೊಳ್ಳುವ" outsider ಅಲ್ಲ ಕಣೇ ನೀನು. ನನಗೆ ನೆನಪಾಗಿದ್ದು ಇವತ್ತಿನ ತಾರೀಕು dec 29. ನನ್ನ ನಿನ್ನ ಈ ಅಪೂರ್ವವಾದ ಹಂಬಲಕ್ಕೆ, ಮಾತಿಗೆ, ಮೌನಕ್ಕೆ, ಕನಿಸಿಗೆ, ಪ್ರೀತಿಗೆ ಭರ್ತಿ 7 ವರ್ಷ.   ಒಂದು ಹಬ್ಬದಂತೆ, ಒಂದು ಉತ್ಸವದಂತೆ, ಒಂದು ಮೆರವಣಿಗೆಯಂತೆ, ಒಂದು ಮಳೆಯಂತೆ, ಒಂದು ವಸಂತ ಋತುವಿನಂತೆ ನನ್ನ ಬದುಕಿನಲ್ಲಿದ್ದ ನೀನು ಅದೃಶ್ಯಳಾಗಿಬಿಟ್ಟೆ. But I know, ನಂಗೊತ್ತು! ನೀನು ಪುನಃ ಬರುತ್ತಿ, ನೀನಗಿಷ್ಟವಿಲ್ಲದ ನನ್ನ ಬೈಕ್‌‌ನಲ್ಲೆ ಕುರುತ್ತಿ, ನಾನು ಜಗತ್ತಿನ ಅಷ್ಟು ಯೋಚನೆ ಬಿಟ್ಟು ನಿನ್ನೊಂದಿಗೆ ಬರುತ್ತೀನಿ. ನಿನ್ನೊಂದಿಗೆ ಹೆಜ್ಜೆಯಿಡುತ್ತ ಹೃದಯದ ಕೋಟೆಯೊಳಗೆ ಸಾವಿರ ಸಾವಿರ ಕನಸುಗಳನ್ನು ಕಾವಲಿಡುತ್ತೀನಿ. ಮತ್ತೆ ನನ್ನಿಂದ ದೂರ ಆಗಲ್ಲ ತಾನೇ......??
    
       ಸುಮ್ಮನೆ ಒಬ್ಬಂಟಿಯಾಗಿ ಇನ್ನೂ ಬೆಳಕಾರಿಯಾದ ರಸ್ತೆಯಲ್ಲಿ ನಡೆಯುತ್ತಾ, ನಡೆಯುತ್ತಾ ಅವತ್ತು ನಾವು New year ದಿನ ಹೋಗಿದ್ವಲ್ಲ ಅ ಪುಟ್ಟ walk. ಅದೇ ರಸ್ತೆಗೆ ನನಗೆ ಅರಿವಿಲ್ಲದಂತೆ ಬಂದುಬಿಟ್ಟೆ. ಯಾಕೋ ನೆನಪಿನ Idiot box.... Dec 29ರ ಅ ರಾತ್ರಿಗೆ ಕರೆದುಕೊಂಡು ಹೋಗ್ತಿದೆ. ಸುಮ್ಮನೆ ನಡೆದುಕೊಂಡು ಹೋಗ್ತಯಿರುವ ನನಗೆ ಅದೊಂದು ಮೇಸೆಜ್‌‌ ಕಾಡುತ್ತಿದೆ.

   " I'm in love with a young smart intelligent guy
        who is loving me from past 3 years.
            That is none other than you
"

      ಆಗ ರಾತ್ರಿ 9 ಗಂಟೆ 12 ನಿಮಿಷ!

         ನನ್ನ ಕಣ್ಣಿಗಲ್ಲ, ನನ್ನ ಮನಸ್ಸಿಗೂ ಅದೊಂದು ಮೇಸೆಜ್‌ ಮರೆಯಲು ಸಾಧ್ಯವೇ ಇಲ್ಲ. ನೆನಪಿದಿಯಾ ಅವಾಗ ನೀನು call ಮಾಡಿದ್ದೆ, ನಾನು ಮಾತಾಡಿದಕ್ಕಿಂತ ನಿಡುಸ್ಯುದದ್ದೆ ಜಾಸ್ತಿ. ಬೆಚ್ಚಿಬಿದ್ದಿದ್ದೂ phoneಗೂ ಗೋತ್ತಾಗಿತ್ತು. ಆಗ " ಎನ್‌ಮಾಡ್ತಿದಿಯ್ಯಾ?" ಅಂತ ನೀನು ಕೇಳಿದಾಗ. ನಾನು ಕೊಟ್ಟಂತ funny answer ನೆನಪಿದಿಯಾ "................." ಬೇಡ ಬೀಡು ಈ ಪತ್ರದಲ್ಲಿ ಹೇಳೊದು. I was in cloudnine for a week. ಮತ್ತೆ ನಾವು ಮೀಟ್‌ ಮಾಡಿದ್ದು ಹೊಸ ವರ್ಷದ ದಿನ. ಡಿಸೆಂಬರ್‌ನ ಚಳಿ ಸ್ವಲ್ಪ ಹೆಚ್ಚೆ ಇತ್ತು. ಸುತ್ತ universityಯ ಸಾಲು ಸಾಲು ಮರಗಳು.  ಬೆಂಗಳೂರಂತ ಬೆಂಗಳೂರಿನಲ್ಲಿ ಇಬ್ಬನಿ ಬಿಳುತ್ತಿದ್ದ ರಸ್ತೆಯದು, ಬೆಳಗಿನ ಮೊದಲ ಸೂರ್ಯ ಕಿರಣ ಆಗ ತಾನೇ ತನ್ನ ಇರುವಿಕೆಯನ್ನು ತೋರ್ಪಡಿಸಿದ್ದ ನಿರ್ಮಾನುಷ್ಯ ರಸ್ತೆಯಲ್ಲಿ ನಡೆದು ಹೋಗ್ತಯಿದದ್ದು ಕೇವಲ ನಾವಿಬ್ಬರೇ. wooow!  ಆ ಚಳಿಯಲ್ಲು you were looking gorgeous!!

   Yes, ಇವತ್ತು ಕೂಡ ನಡೆಯುತ್ತಾ ನಡೆಯುತ್ತಾ...  ಇದೇ ರಸ್ತೆಗೆ ಬಂದ್ದಿದಿನಿ. ಚಳಿ ಇನ್ನೂ ಸ್ವಲ್ಪ ಹೆಚ್ಚೆ ಇದೆ, ಆದರೆ ಜೊತೆಗೆ ನೀನಿಲ್ಲ. ನಿನ್ನ ನೆನಪಿದೆ! ನೀನಿಲ್ಲದ ನೀರವ ಗಳಿಗೆಯನ್ನು ಕೂಡ ನಾನು enjoy ಮಾಡಿಲ್ಲ ಕಾಣೇ. ನನ್ನ ನಗುವಿನಲ್ಲೂ ನೀ ಇರುತ್ತಿ. ನನ್ನ ದುಃಖದಲ್ಲೂ ನೀ ಹಾದು ಹೋಗುವೇ. Let it be... ಈ ಸಂತೋಷದ ದಿನದಂದು ದುಃಖ ಏಕೆ ಅಲ್ವ..

     ...... ನಿನ್ನ ಧ್ಯಾನಿಸಲು ಕುಳಿತು 7ನೇ ವರ್ಷಕ್ಕೆ ಬಂದಿದ್ದೇನೆ.. ಅಂದರೆ 314 ವಾರ , 2190 ದಿನಗಳು , 52560 ಗಂಟೆಗಳು ಅಲ್ಲಿಗೆ ನಿನ್ನನ್ನು ಧ್ಯಾನಿಸಿದ ನಿಮಿಷಗಳು 3153600!!

     ನಾಗತಿಹಳ್ಳಿ ಚಂದ್ರಶೇಖರಣ್ಣ ಹಾಡಿದ್ದು. " ನೂರು ಜನ್ಮಕು... ನೂರಾರು ಜನ್ಮಕು" ಎಂದು... ಅದರೆ ಇದೊಂದು ಜನ್ಮದಲ್ಲೇ ಪೂರ್ಣನನ್ನವಳಾಗದ ನಿನಗೆ ನೂರು ಜನ್ಮಕ್ಕಾಗಿ ಆರ್ಜಿಕೊಡುವ ಹಟಮಾರಿ ಭಕ್ಷುಕ ಕಣೇ ನಾನು.! ಆ ರಾತ್ರಿ ನೆನಪಿದೆಯೆ? ನಿನ್ನ ಎರಡೂ ಕೈಗಳಿಗೆ ಮೆಹಂದಿ ಹಾಕಿದ್ದು? ನೀನು  ಹಾಗೆ ಹಸ್ತವನ್ನೊಪ್ಪಿಸಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೂತಿದ್ದು. ನೀನು ಕೂತ ಭಂಗಿಯಿಂದ ಹಿಡಿದು ನಿನ್ನ ಹಸ್ತದ ಮಾಯಾವಿ ರೇಖೆಗಳ ಆಳ ಉದ್ದಗಳ ಜಾಡಿನಿಂದ ಹಿಡಿದು, ಅವುಗಳ ನಡುವೆ ಸಣ್ಣಗೆ ಒಸರಿದ ಬೆವರ ಹನಿಗಳಿಂದ ಹಿಡಿದು, ನನ್ನ ಹಿಡಿತಕ್ಕೆ ಹಸ್ತದ ಕಂಪನದ ಸವಿ ಅನುಭವದಿಂದ ಹಿಡಿದು..... ಹೌದು, ನನಗೆ ಎಲ್ಲ ನೆನಪಿದೆ. ಅದು ಹೊಸವರುಷದ ಮುನ್ನಾದಿನ. ಯಾರೋ ಹಾಡುತ್ತಿದ್ದರು. ಇನ್ನಾರೋ ತೂಕಡಿಸುತ್ತಿದ್ದರು. ಅದಾರೋ ಕುಡಿಯುತ್ತಿದ್ದರು. ಅದಿನ್ನಾರದೋ ಗೊರಕೆ. ಜನಜಂಗುಳಿಯಲ್ಲಿ ರಾತ್ರಿ ಅರಳುತ್ತಾ ಹೋಗುತ್ತಿತ್ತು. ಸುತ್ತ ಜನರಿದ್ದರೂ ನಮ್ಮಿಬ್ಬರದೇ ಒಂದು ಲೋಕ ನಿರ್ಮಾಣವಾಗಿತ್ತು. ಇಡೀ ರಾತ್ರಿ ಮೆಹಂದಿ ಹಾಕುತ್ತ, ಹಾಗೆ ಹಾಕುತ್ತಲೇ ನಿನ್ನ ಸಂಗದಲ್ಲಿ, ನಿನ್ನ ಸ್ಪರ್ಶದಲ್ಲಿ ಕುಳಿತು ಬಿಡುವ ಆಸೆ! ಈ ಕ್ಷಣಗಳು ಅನಂತವಾಗಬಾರದೆ ಎಂದು ಹಲುಬುತ್ತಿದ್ದೆ. ಕ್ಷಣ ಎಂಬ ಶಬ್ದದ ಮೂಲಭಾವವೇ ಕ್ಷಣಿಕ. 'ಕ್ಷಣಿಕ'ವೆಂಬುದು ಹೇಗೆ 'ಅನಂತ'ವಾದೀತು?

   ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ
ಸುತ್ತೆಳು ಲೋಕದಲಿ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೆ!!


    ನನ್ನ ಕತೆಯೊಳಡಗಿದ ಕಾವ್ಯವೇ ಹೇಗಿದ್ದಿ ಈಗ. ನಿನ್ನ 'ಅನು'ರೂಪವನ್ನು ನನ್ನ ಕಣ್ಣಗೊಂಬೆಯೊಳಗೆ ತುಂಬಿಕೊಂಡು ಭರ್ತಿ ವರ್ಷವಾಗೊಯ್ಯು ಕಾಣೇ. ನೀನಿಲ್ಲದೆ ನೀನಿರುವ ಎರಡು ಹುಟ್ಟುಹಬ್ಬ ಆಚರಿಸಿದೆನೇ(?) ಆಚರಿಸಿದ್ದಿನಾ ಗೊತ್ತಿಲ್ಲ. ಬೇಗನೆ ಬಂದು ನನ್ನೆದೆಗೆ ಅವಚಿ  ಕುಳಿತುಕೊಳ್ಳೆ. ಬೆಳಗಿನ ಜಾವದ sweet ನಿದ್ದೆಯಲ್ಲಿ ಕನಸು ಕಣೋಣ. ನಮ್ಮಿಬ್ಬರ ಕನಸುಗಳಿಗೆ ಬಣ್ಣ ತುಂಬೋಣ. ಹೊಸ ವರುಷದಿಂದ ಒಟ್ಟಾಗಿ ಕಾಲೇಜಿಗೆ ಹೋಗೊಣ, ಚಳಿಯಿಂದ ಕೂಡಿದ್ದ university roadನ ಸಂಜೆಯಲ್ಲಿ ಮಾತಿಲ್ಲದೆ ಮೌನದಿಂದ ನಡೆಯೋಣ,  Get ready for a surprise ಹುಡುಗಿ,

  ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗು ಕಣ್ಣಾಗಿ


   ಎಂದೋ ನಿನಗಾಗಿ , ನಿನ್ನ ನೆನಪಲ್ಲಿ ಬರೆದ ಶುಭಾಶಯ ಅಂತಾದರೂ ಅಂದುಕೋ; ಮತ್ತೊಂದು ಕಾಗದ ಅಂತಾದರೂ ಅಂದುಕೋ ನಿನ್ನ ಮಡಿಲಿಗೆ ಹಾಕಿ ಸುಮ್ಮನಾಗುತ್ತೇನೆ;  ಬೆಚ್ಚಗಿರಿಸಿಕೋ ಇದನ್ನ!

                                                                                                   -   ಸಾಯುವವರೆಗೂ ಕಾಯುತ್ತಾ 
                                                                                                                                ನಿನ್ನ ಮಂಜು

20 Dec 2014

ನನ್ನ ಪ್ರೀತಿಯ ಹುಡುಗಿಗೆ!

     ಹುಡುಗೀ,

                 ರಾತ್ರಿ ಮನೆಗೆ ಲೇಟಾಗಿ ಬಂದೆ, ಆಚೆ ಆಕಾಶವನ್ನು ದಿಟ್ಟಿಸುತ್ತ ಕುಳಿತವನಿಗೆ... ನಿನಗೆ ಪತ್ರ ಬರೆದು ಎಷ್ಟು ದಿನವಾಗೊಯ್ತು ಅಂತ ಅನ್ನಿಸದೆ ತಡ. ಬರೆಯುತ್ತ ಬರೆಯುತ್ತ ಅಕ್ಷರಗಳಲ್ಲಿ ಕಳೆದುಹೋಗಿ ಬಿಟ್ಟಿದ್ದಿನಿ. ಹೊರಗೆ ಕತ್ತಲು ಬಿದ್ದು ಬೆಳಕಾರೆಯುತ್ತಿರುವುದೂ ಅರಿವಿಗೆ ಬಂದಿಲ್ಲ. ಈಗ ಬೆಳಗಿನ ಜಾವ 4 ಗಂಟೆ . ಸಣ್ಣ ದನಿಯಲ್ಲಿ ಹಾಡುತ್ತಿದ್ದ ರೇಡಿಯೋ ಯಾವಾಗಲೋ ನಿಂತು ಹೋಗಿದೆ. ಸೂತಕದ ಮನೆಯಂತಹ ಆಕಾಶದಲ್ಲಿ ಎಲ್ಲೋ ಒಂದು ಮಿಣುಕು ನಕ್ಷತ್ರ: ನಿನ್ನ ಕಣ್ಣು ಹೊಳೆದಂತೆ. ನ್ನ ಸಣಿವು , ನನ್ನ ನೋವು ಹಂಚಿಕೊಳ್ಳಬಹುದಾದ್ದಲ್ಲ. ಅದು ಪುರಾತನ ವಿಷಾದದಂತಹುದು . ಒಬ್ಬನೆ ಅನುಭವಿಸಬೇಕು.

ಮನ್‌ ರೇ ತೂ
ಕಾಹೇ ನ ಧೀರ್‌ ಧರೆ.....


             ಇವತ್ತು ನೀನು ನನಗಾಗಿ ಗಾಂಧಿಬಜಾರ್‌ ಬಸ್‌ಸ್ಟಾಪ್‌ನಲ್ಲಿ ಸುಮ್ಮನೆ ಕಾಯುತ್ತ ನಿಂತುರಿತ್ತಿ. ಆಟೋಗೆ ಕೈ ತೋರುವುದಿಲ್ಲ . ಬಸ್ಸು ಕಂಡರೆ ನಿನಗೆ ತಿರಸ್ಕಾರ. ಎಷ್ಟು ಹೊತ್ತದಾರೂ ನನಗಗಾನಿ ಕಾಯುತ್ತಿ ಅಲ್ವ . ಅವತ್ತು ಕೂಡ ನಿನ್ನ ಮೊದಲ ಬಾರಿ ಅಲ್ಲೆ ನೋಡಿದ್ದು. ಗಾಂಧಿಬಜಾರ್‌ನ ಗಿಜಿಗುಡುವ ರಸ್ತೆಯ ಸಾವಿರಾರು ಮಂದಿಯ ಮಧ್ಯದಲ್ಲಿ . ಎಷ್ಟು ಚೆಂದ ಕಂಡಿದ್ದೆ ಅವತ್ತು , Black jeans  ಮೇಲೆ yellow color top. ಕಿವಿಯಲ್ಲಿ ಆಕರ್ಶಿಸುತ್ತಿದ್ದ ಬ್ಲೆಕ್‌ ಮೆಟಲ್‌ ಓಲೆ , ಇದಿಯೋ ಇಲ್ಲವೋ ಎನ್ನುವಷ್ಟಿದ್ದ ಪುಟ್ಟ ಬಿಂದಿ... My God! , ಮೊದಲ ನೋಟದಲ್ಲೆ ನನ್ನ ಅಷ್ಟು Attention ಕದ್ದೆಬಿಟ್ಯಲ್ಲ. ನಿನ್ನ ಕಣ್ಣು ನನ್ನ ಕಣ್ಣ ಗೊಂಬೆಯೊಳಗೆ ಅಚ್ಚೆಯಾಗಿ ಕುಳಿತುಬಿಟ್ಟಿದೆ.
 ಅದು ಅದ ಮೇಲೆ ಎಷ್ಟು ಬಾರಿ ನಿನ್ನ ನೋಡಿರಬೇಕು I tink its just 3 times... ನಿನ್ನ ಕಾಲೇಜ್‌ ಡೇನಲ್ಲಿ , ಮತ್ತದೆ ಗಾಂಧಿಬಜಾರ್‌ ಬಸ್‌ಸ್ಟಾಪಿನಲ್ಲಿ 2 ಬಾರಿ.... ನನ್ನದು ಮಾತಿಲ್ಲದ ನೀರವ ಮೌನ ಎಷ್ಟು ರೇಗಿಸಿದ್ದೆ " ಏನು ಮಾತಾಡೋದೆ ಇಲ್ವ ನೀನು" ಅಂತ ಕೇಳಿದಾಗ ಬಸ್‌ಸ್ಟಾಪಿನಲ್ಲಿ ಆಕಿದ್ದ ಪಾರ‍್ಲೆ ಜಿ ಆಡ್‌‌ನ ಪುಟ್ಟ ಹುಡುಗಿ ನನ್ನ ನೋಡಿ ನಕ್ಕಂತೆ ಭಾಸವಾಗಿತ್ತು. ಅವತ್ತು ಇಡೀಯಾಗಿ ವಿದ್ಯಾರ್ಥಿ ಭವನ್‌ನಲ್ಲಿ ದೋಸೆ ತಿಂದಿದ್ದೆ ಕಡೆ ಮತ್ತೆ ನಾನು ನೀನು ಒಮ್ಮೆಯು ಭೇಟಿಯಾಗಿಲ್ಲ...
  
                ಈ ರಾತ್ರಿ ಎಷ್ಟೋ ಹೊತ್ತಿಗೆ ಸೋತ ಕಙಯಗಳಲ್ಲಿ ಚಹ ಮಾಡಿಕೊಂಡು ಕುಡಿಯುತ್ತಿದ್ದೇನೆ. ಆಸೆಗಳು ಕೆರಳುವ ಮಧ್ಯರಾತ್ರಿ ಇದು. ಮನಸು ನಿನಗೋಸ್ಕರ ಚಡಪಡಿಸುತ್ತಿದೆ. ನನಗೆ ಬೇಳಕು ಹರಿದು , ಹಗಲು ಬೀದಿಗೆ ಬೀಳುವ ಹೊತ್ತಾದರೂ ನಿನ್ನೊಂದಿಗೆ ಮಾತುಬೇಕು. ನಿನ್ನೊಂದಿಗೆ ಮೌನ ಬೇಕು. ಜೊತೆಗೆ ಕೂತು ಕೇಳುವ ಹಾಡು ಬೇಕು. ಉಳಿದೆಲ್ಲರೂ ಎದ್ದು ಬದುಕಿನತ್ತ ಹೆಜ್ಜೆಯಿಡುವ ಹೊತ್ತಿಗೆ ನನಗೊಂದು ಸಾವು ಬೇಕು. ಆಗಷ್ಟೆ ಮಾತು ಕಲಿತ ಮಗು ಓಡಿ ಬಂದು ಅಮ್ಮನನ್ನಾ, ಅಮ್ಮನ ಮಡಿಲನ್ನಾ? ನಂಗೆ ನೀನು ಇಡಿಯಾಗಿ ಬೇಕು.

ಮುಝೆ ಜಾ ನ ಕಹೋ
ಮೇರೀ ಜಾನ್‌‌....


              ಇವತ್ತು ಮತ್ತದೆ ಸಂಕಲ್ಪ; ನಂಗೊತ್ತು, ನೀನು ಮತ್ತದೆ ರಸ್ತೆಯಲ್ಲಿ ನಿಂತಿತುತ್ತಿ. ಕಣ್ಣು ಕಾಯುತ್ತಿರುತ್ತವೆ. ರಸ್ತೆಯುದ್ದಕ್ಕೂ ಓಡುವ ನೋಟಕ್ಕೆ ಗೆಜ್ಜೆಯೊಂದೇ ಕಡಿಮೆ. ಒಂದು ಸಾಯಂಕಾಲ ಒಟ್ಟಿಗೆ ಕಳೆಯೋಣ. ನಿನಗಿಷ್ಟವಾಗುವ ಜಾಗವೇ ಆಗಲಿ. ಹನಿಯುವ ಗಾಂಧಿಬಜಾರ್‌ ಸಂಜೆಯಲ್ಲಿ ಭುಜ ತಾಕಿಸುತ್ತ ನಡೆಯೋಣ. ಸುಟ್ಟ ಮುಸುಕಿನ ಜೋಳ, ರುಚಿಯಾದ ಪಾನಿಪುರಿ , ವಿದ್ಯಾರ್ಥಿ ಭವನಿನ ದೋಸೆ, ಕಲ್ಮನೆ ಹೌಸ್‌ನಲ್ಲಿ ಅದ್ಭುತ ಕಾಫಿ! ನಿನ್ನ ಕಡುಗಪ್ಪು ಕಣ್ಣುಗಳ ತೀವ್ರತೆ ಕೊಂಚ ಕಡಿಮೆ ಮಾಡಿ ನನ್ನ ಪ್ರೀತಿಸೆ ಹುಡುಗೀ....

ತುಮ್‌ಸೇ ಮಿಲ್‌ ಕೇ
ನಾ ಜಾನೇ ಕ್ಯೂಂಮ, ಔರ್‌
ಬೀ ಕುಚ್‌ ಯಾದ್‌ ಆತಾ ಹೇನ್‌.....

                                       
                                                                                                       -ನಿನ್ನವನು

12 Dec 2014

ಹುಣ್ಣಿಮೆಯ ನಿಶಬ್ಧ ಕೊನೆಯ ಭಾಗ!

 " ಹಿಮು, ನನ್ನ ಜೊತೆ ಜೀವನ ಪೂರ್ತಿ ಇರುತ್ತಿಯಾ?" ಶಾಲಿನಿ ತನ್ನ ಮೌನ ಮುರಿದು ಈ ಮಾತು ಹೇಳುತ್ತಿದಂತೆ ಸ್ತಂಭಿಭೂತನಾಗಿ , ಅಚ್ಚರಿಯಾಗಿ , ರೊಮಾಂಚನವಾಗಿ ಶಾಲಿನಿಯನ್ನು ನೋಡುತ್ತಾ ನಿಂತುಬಿಟ್ಟ.

    ಆಗ ರಾತ್ರಿ 10 ಗಂಟೆ!

    ಹುಣ್ಣಿಮೆಯ ಚಂದ್ರ ತನ್ನ ಸೌಂದರ್ಯವನ್ನು ಕೇವಲ ಮಲ್ಲೇಶರಂನ 7ನೇ ಕ್ರಾಸ್‌ನ ಆ ಮನೆಯ ಮೇಲೆಯೆ ಬೀರುತ್ತಿದ್ದನೆನೋ ಎಂದು ಭಾಸವಾಗುತ್ತಿತ್ತು. ಅದು ಡಿಸೆಂಬರ್‌ನ ಆರಂಭದ ದಿನಗಳು ಚಳಿ ಮೈ ಕೊರೆಸುತ್ತಿತ್ತು . ಬೆಳಗ್ಗೆಯಿಂದ ಗಿಜಿಗುಡುತ್ತಿದ್ದ ಮಲ್ಲೇಶರಂನ ರಸ್ತೆಗಳು ಶಾಂತವಾಗಿತ್ತು , ಸಂಪಿಗೆ ಹೂವಿನ ಘಮ ಮುಗಿಗೆ ನಾಟುತ್ತಿತ್ತು , ಅಲ್ಲಿ ಶಾಲಿನಿ-ಹಿಮುವಿನ ನಡುವೆ ಮೌನ ಮಾತಡಿತ್ತು , ತನ್ನ ನಗುವಿನಲ್ಲೆ ,ಕಣ್ಣಲ್ಲೆ ಒಪ್ಪಿಗೆ ಸೂಚಿಸಿದ್ದ ಹಿಮಾಂಶು.

   ಆಗ ಶಾಲಿನಿಗೆ ನೆನಪುಗಳ ಸೊನೆಮಳೆ ಬಂದಂತ್ತಿತ್ತು . ಸೇಂಟ್‌ ಡೇವಿಡ್‌ ಕಾಲೇಜಿನಲ್ಲಿ ಮೃದುವಾದ ಕಣ್ಣುಗಳಲ್ಲಿ ಆಸೆಯನ್ನು ಹೊತ್ತು ಬಂದಿದ್ದ ಹಿಮಾಂಶು ನೆನಪಾದ , " can you mind your own work " ಅಂತ ರೇಗಿದ್ದ ಹಿಮಾಂಶು ನೆನಪಾದ, ಸ್ಯಾಂಕಿ ರಸ್ತೆಯ ಬದಿಯಲ್ಲಿ ಕಾಫಿ ಕೊಡಿಸಿದ್ದ ಹಿಮು ನೆನಪಾದ , ನಲ್ಲಮಲ ಅರಣ್ಯದ ಅ ಕತ್ತಲಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ ಪ್ರೀತಿಯ ಹಿಮು ನೆನಪಾಗಿಬಿಟ್ಟ . ಶಾಲಿನಿಯ ಮನಸ್ಸು ಒಮ್ಮೆಲೆ ತುಂಬಿ ಬಂದಿತ್ತು . 96 ದಿನಗಳಿಂದ ನೋಡದೆ ಅವನನ್ನು ಪ್ರೀತಿಸಿದ ಹಿಮಾಂಶು ಪಕ್ಕದಲ್ಲಿದ್ದಾನೆ . ಅವಳ ಕಣ್ಣುಗಳಲ್ಲಿ ಪ್ರೀತಿ ಬೆರೆತ ಆಶರ್ಯ!!

   ಶಾಂತವಾದ ಆ ರಸ್ತೆಯಲ್ಲಿ ಮೌನ ಮಾತಾಗಿ , ಮಾತು ಪ್ರೀತಿಯಾಗಿ ಹಿಮಾಂಶುವಿನ ಹೆಗಲ ಮೇಲೆ ತನ್ನ ತಲೆಯಿಟ್ಟು  ಶಾಲಿನಿ ಕನಸ್ಸಿನ ಕೋಟೆ ಕಟ್ಟತ್ತ ಅವರಿಬ್ಬರು ನಡೆಯುತ್ತಾ ನಡೆಯುತ್ತಾ ಕನಸ್ಸಿನ ಕೋಟೆಯೊಳಗೆ ಕಣ್ಮರೆಯಾಗಿ ಬಿಟ್ಟರು.
   ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತು.....

                                        ******************************

  ಸುಬ್ಬಮ್ಮನೆಂಬ ಅತಿ ಕ್ರೂರ ಮಾಟಗಾತಿ ತನ್ನ ಶಕ್ತಿ , ಸಾಧನೆಯಾದ ಕಾಮಕರ್ಣ ಪಿಶಾಚಿಯನ್ನು ಬಳಸಿ ಸರ್ವನಾಶಕ್ಕೆ ಅಣಿಯಾಗಿ , ಆಲ್ಗೆಜಂಡರ್‌ ರಾಜನಾಥ ಚಟರ್ಜಿ ನಾಶಕ್ಕೆ ನಿಂತಾಗ ಕರ್ಣ ಪಿಶಾಚಿ ಕೋಪಗೊಂಡಿದ್ದಳು . ಅದು ಕರ್ಣ ಪಿಶಾಚಿಯ ಸಾಧನೆಯ ವಿರುದ್ಧದ ಬಳಕೆ . ಬೆಂಗಳೂರು ತಲಘಟ್ಟಪುರದ ಸ್ಮಶಾನದಲ್ಲಿ ಮಾಟಗಾತಿ ಪೂಜೆ ಆರಂಭಿಸಿದರೆ ಪ್ರಶಾಂತಿನಿ ಅದೆಲ್ಲೊ ದೂರದಲ್ಲಿ ಕೊಲೆ ಮಾಡುವ ಹೊತ್ತಿಗೆ ಕರ್ಣ ಪಿಶಾವಿನಿ ತಿರುಗಿ ಬಿಳುತ್ತಾ ಬಂದಳು ಅದರ ಜೊತೆಗೆ ಕರೀಂ ಬಾಬಾ ಎಂಬ ಮುಸ್ಲಿಂ ಮಾಂತ್ರಿಕ ಸೇಡಿಗಾಗಿ ಆತೊರೆದ . ಸುಬ್ಬಮ್ಮ ಯಾರದೋ ಸರ್ವನಾಶಕ್ಕೆ ನಿಂತವಾಳು ಅವಳ ಸರ್ವನಾಶಕ್ಕೆ ಬೇರೊಬ್ಬರು ನಿಂತಿದಿದ್ದಾರೆಂನುದು ಮರೆತೆ ಬಿಟ್ಟಳು . 8ನೇ ವಾರದಲ್ಲಿ ಸುಬ್ಬಮ್ಮನ ಅಷ್ಟು ಬಲವು ಉದುಗಿ ಹೋಗಿತ್ತಿತ್ತು.
                                                               *  * *
   
    ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌  ತನ್ನ ಇಂಜಿನ್‌ ಆನ್‌ ಮಾಡಿಕೊಂಡು ಡಿಸೇಂಬರ್‌ನ ಚಳಿಯಲ್ಲಿ ಸಾಧಾರಣ ಎನ್ನಿಸುವಷ್ಟು ಪ್ರಯಾಣಿಕರನ್ನು ಬೆಂಗಳೂರಿನಿಂದ ಹೊತ್ತೊಯ್ತಿತ್ತು . ಆ ಕೊಲೆಗಳ ಭಯ ಇನ್ನ ಪೋಲಿಸರಿಗೆ ಹಾಗೇಯೆ ಇತ್ತು , ಬೋಗಿ ಬೋಗಿಯಲ್ಲು ಪೋಲಿಸರ ಸದ್ದು , ಹುಣ್ಣಿಮೆಯೆ ದಿನವದು ಟ್ರೇನ್‌‌ ಬೆಂಗಳೂರು ಅಂಧ್ರ ದಾಟಿ ಒಡಿಶಾದ ಭುಭನೇಶ್ವರ ತಲುಪಿತ್ತು . ಕಪ್ಪು ಸುಂದರಿ ಮತ್ತೆ ಮತ್ತೆ ತನ್ನ ಸೌಂದರ್ಯ ಸೂಚಿಸುತ್ತಿದ್ದಳು. ಹುಣ್ಣಿಮೆಯ ರಾತದರಿಯಲ್ಲಿ ಕರ್ಬೊಗೆಯು ಆಕಾಶಕ್ಕೆ ಸೇರುವ ಅ  ಕಪ್ಪು ಬಿಳುಪು ಆಟ ಮನಮೋಹಕವಾಗುತ್ತಿತ್ತು . 16 ಭರ್ಬರ ಹತ್ಯೆ ಕಂಡಿದ್ದ ಪ್ರಶಾಂತಿ ಎಕ್ಸ್‌ಪ್ರೇಸ್‌ ಭರ್ತಿ 3 ತಿಂಗಳ ನಂತರ ಶಾಂತವಾಗುತ್ತಾ ಬಂತು . ಅಷ್ಟು ಹತ್ಯೆಗಳನ್ನು ಮರೆತು ತನ್ನ ದೈನಿಕ ಓಡಾಟ ಪ್ರಾರಂಭಿಸಿತ್ತು ಕರ್ನಾಟಕ-ಅಂಧ್ರದ ಜೀವನಾಡಿ ಪ್ರಶಾಂತಿ ಎಕ್ಸ್‌ಪ್ರೇಸ್‌.
  ಪ್ರಶಾಂತಿ  ಎಕ್ಸ್‌ಪ್ರೇಸ್‌‌‌ನಲ್ಲಿ ಹಿಂದಿನ ಪ್ರಶಾಂತತೆ ಕಾಣಿಸಿತ್ತು !ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತ್ತು......

                                                               *****************


    ಸುಬ್ಬಮ್ಮ ತನ್ನ ಮೊದಲ ಪೂಜೆ ಆರಂಭಿಸಿದ ದಿನದಿಂದಲೇ ಗೆಲುವು ಸಾಧಿಸುತ್ತಾ ಹೋದಳು , ಅದು ಸ್ವತಃ ಕರ್ಣ ಪಿಶಾಚಿಯನ್ನು ಬಳಸಿ ಪಡೆಯುತ್ತಿದ್ದ ಗೆಲುವು .ಕರ್ಣ ಪಿಶಾಚಿಗೆ ಅಷ್ಟು ವಾರಗಳು ನೆತ್ತರು ಅರ್ಪಿಸಿ ತಣಿಸಿದ್ದಳು ಅದರೂ ಕರ್ಣ ಪಿಶಾಚಿಯ ಉಗ್ರರೂಪ ತಣಿಸಲಾಗಲಿಲ್ಲ ಅವಳಿಗೆ, ಜೊತೆಗೆ ಕರೀಂ ಬಾಬಾನ ಶಕ್ತಿ , ಮುಸ್ಲಿಂ ವಾಮಾಚಾರ ಲೋಕವೇ ಹಾಗೆ ಅದು ತಕ್ಷಣ ತನ್ನ ಕಾರ್ಯ ಶುರುಮಾಡದೆಯಿದ್ದರು . ಭರ್ತಿ ತನ್ನೆಲ್ಲ ಶಕ್ತಿಯನ್ನು ತೋರಿಸಲು ಹಪಹಪಿಸುತ್ತದೆ . ಕೇವಲ ಎಂಟೊಂಬತ್ತು ವಾರದಲ್ಲಿ ಮಾಟಗಾತಿ ಸುಬ್ಬಮ್ಮ 16 ಬಲಿ ಪಡೆದು ಬೀಗುತ್ತಿದ್ದಳು . ಆಗಲೇ ನೋಡಿ ಕರೀಂ ಬಾಬಾ ಹಿಮಾಂಶುವಿನ ನೆರವು ಪಡೆದಿದ್ದು . ಹಿಮು ಅರೆಷ್ಟ್‌ ಆಗಿ , 17ನೇ ಬಲಿಯಾಗಲು ಅವಕಾಶ ನೀಡದೆ ಇದ್ದದ್ದು . ಅದು ಹುಣ್ಣಿಮೆಯ ದಿನ ಕರ್ಣ ಪಿಶಾಚಿಗೆ ಒಂದು ಬಲಿ ಅರ್ಪಿಸಿಲ್ಲವೆಂದರೆ ಉಗ್ರರೂಪಿಯಾಗಿ ತನ್ನೆನ್ನೆ ಬಲಿ ಪಡೆಯುತ್ತಾಳೆ ಎಂದು ಗೊತ್ತಾಗುತ್ತೆ . ಮುಸ್ಲಿಂ ಮಾಂತ್ರಿಕ ಕರೀಂ ಬಾಬಾ ಪುತ್ತೂರಿನಿಂದಲೇ ತನ್ನ ಪೂಜೆ ಆರಂಭಿಸಿದ್ದ . ಮೆಲ್ಲನೆ ಧ್ವನಿಯಲ್ಲಿ ಆರಂಭವಾಗಿದ್ದ ಈ ಸಾಲು ಮುಗಿಯುವಷ್ಟರಲ್ಲಿ ಕಿವಿ ಹೊಡೆದು ಹೋಗುವಷ್ಟು ಜೋರಾಗುತ್ತಿತ್ತು .

   "ಯೋಮಾಯುನ್‌ ಪಿಕ್ಕ್‌ ಫಿಸೂರಿ ಪತುತೂನಾ ಆಫ್‌ ವಾಜಾ!"

  " ಈ ದಿನವೂ ಶಂಕವು ಊದಲಾಗುತ್ತದೆ . ಆಕಾಶ ತೆರೆಯಲ್ಪಡುತ್ತದೆ , ಆಗ ಶವಗಳು ಗುಂಪು ಗುಂಪಾಗಿ ಎದ್ದು ಬರುತ್ತವೆ "


   ತಾನು ಸಾದಿಸಿದ್ದ ಕರ್ಣ ಪಿಶಾಚಿಯಿಂದಲೇ ಸುಬ್ಬಮ್ಮನ ಅಂತಿಮದ ಆರಂಭವಾಗಿತ್ತು . 16 ಶವಗಳು ಗುಂಪು ಗುಂಪಾಗಿ ಎದ್ದು ಬಂದು ಸುಬ್ಬಮ್ಮನೆಂಬ ಅತಿಕ್ರೂರ ಮಾಟಗಾತಿಯನ್ನು ಅಷ್ಟೆ ಕ್ರೂರವಾಗಿ ಬಲಿ ಪಡೆದುಬಿಟ್ಟವು.

  ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ  ನಿಶಬ್ಧ ಅವರಿಸಿಕೊಳ್ಳುತ್ತಾಲೆ ಅದೆಲ್ಲೊ  ದೂರದ ಪುತ್ತೂರಿನ ಜಮೀಯ ಮಸೀದಿಯ ಪಕ್ಕದಲ್ಲಿದ್ದ ಶವ ಕಂಪಿಸಿದಂತಾಯ್ತು. ಮಲ್ಲೇಶರಂ ಏಳನೇ ಕ್ರಾಸ್‌ನ ಬೀದಿಯ ತಿರುವಿನಲ್ಲಿ ಪ್ರಶಾಂತಿನಿ ಕಾಣಿಸಿಕೊಳ್ಳುತ್ತಾಳೆ . ಅದನ್ನು ಗಮನಿಸಿದ ಕರೀಂ ಬಾಬಾ ಬೆಚ್ಚಿಬಿದ್ದ .
ಅಲ್ಲಿಂದ ಆರಂಭವಾದದ್ದೆ ಮತ್ತೊಂದು ಕಥೆ

"ಹುಣ್ಣಿಮೆಯ ರಹಸ್ಯ!"

                                                                                    (ಮುಗಿಯುತ್ತದೆ)

6 Dec 2014

ಹುಣ್ಣಿಮೆಯ ನಿಶಬ್ಧ ಭಾಗ-10

      ಹಿಮಾಂಶು ಬಂಧನವಾಗಿ ಅದಗಲೇ 95 ದಿನಗಳಾಗಿದ್ದವು , ಕೋರ್ಟ್‌‌ನಲ್ಲಿ ವಿಚಾರಣೆ ನಡೆಯುತ್ತಿತ್ತು... ಇನ್ನೇನೂ ನ್ಯಾಯಧೀಶರು ತೀರ್ಪು ನೀಡಬೇಕು ಆಗ ಬಂದವರೆ ಕ್ರೀಮಿನಲ್‌ ಲಾಯರ್‌   ಟಿ.ಎನ್‌. ಕೀಶೊರ್‌ ಚಂದ್ರ.. "ಇತ ನಿರಪರಾಧಿ" ಅಂದಕ್ಷಣ ಕೋರ್ಟ್‌‌ನಲ್ಲಿದ್ದ ಅಷ್ಟು ಜನಕ್ಕೆ ಅಚ್ಚರಿಯಾಗಿತ್ತು  ಒಬ್ಬ ಶಿವರಾಮಪ್ಪರನ್ನು ಬಿಟ್ಟು. DYSP ಶಿವರಾಮಪ್ಪ !
 ಸ್ವತಃ ಹಿಮಾಂಶುವೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು ನಿಜ ಏನೆಂಬುದು ಶಿವರಾಮಪ್ಪರಿಗೆ ಗೊತ್ತಿತ್ತು..!! ಆಗ ಸಿಗುತ್ತೆ ಕತೆಗೆ ಹೊಸ ತಿರುವು..

       ವಕೀಲ ಕೀಶೊರ್‌ ಚಂದ್ರ ತಮ್ಮ ವಾದ ಪ್ರಾರಂಭಿಸಿದ್ದೆ ತಡ ಕೋರ್ಟ್‌ನೊಳಕ್ಕೆ ಹೊಕ್ಕಿದ ಒಬ್ಬ Constable ಮುಖದಲ್ಲಿ ಅಚ್ಚರಿ ಬೇರೆತ ಭಯ ಅವರಿಸಿರುತ್ತೆ.
"ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಮತ್ತೊಂದು ಕೊಲೆ" ಬೆಚ್ಚಿಬಿದ್ದರು ಪೋಲಿಸರು . ಹಿಮಾಂಶು ಕಣ್ಣಲ್ಲಿ ದುಃಖ, ಭಯ ಮತ್ತು ನಿರಾಕರಣೆ!.. ಭರ್ತಿ ಒಂದು ಗಂಟೆಯ ವಿಚಾರಣೆಯ ಬಳಿಕ ಹಿಮಾಂಶುವಿಗೆ ಜಾಮೀನು ಮಂಜುರಾಗಿತ್ತು . ಕೀಶೊರ್‌ ಚಂದ್ರರ ಮುಖದಲ್ಲಿ ಗೆಲುವು ಸಾಧಿಸಿದ ನಗೆ!

   ಅಂದು ಸಂಜೆ 5 ಗಂಟೆ!
    ಹಿಮಾಂಶೂ ಜೈಲಿನಿಂದ ಹೊರಬಂಧವನೇ ಆ ನಿರ್ಮನುಷ್ಯ ರಸ್ತಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವಾಗ ಅವನಿಗೆ ಆ 14 ವರ್ಷದ ಹಿಂದಿನ ಕ್ರೂರ ನೆನಪುಗಳು ಕಣ್ಣಮುಂದೆ ಬಂತು. ಅದು ಮಾಟಗಾತಿ ಸುಬ್ಬಮ್ಮ ದೊಡ್ಡ ಸಾಧನೆಗೈದ ದಿನ . ಕಾಮಕರ್ಣ ಪಿಶಾಚಿಯನ್ನು ಓಲಿಸಿಕೊಂಡ ದಿನ . ಕ್ಷುದ್ರ ಲೋಕದಲ್ಲೆ ಅತಿದೊಡ್ಡ ಸಾಧನೆಯದು ಅದ್ಕೆ ತನ್ನ ಗುರುವಾದ ಅರೀಫ್‌ ಬಾಬಾನ ಆರ್ಶಿವಾದ ಎಷ್ಟಿತೆಂದರೆ ಆತ ತನ್ನ ಬದುಕನ್ನ ಆರ್ಪಿಸಿಬಿಟ್ಟಿದ್ದ.
* "ಧೇನಿಸು ಮಗಳೇ .... ಬದುಕುವ ಆಸೆಯನ್ನು ಕೂಡ ಬಿಟ್ಟು ಧೇನಿಸು . ಕ್ಷುದ್ರ ಲೋಕದಲ್ಲಿ ಆಸೆಗಳಿಗೆ ಜಾಗವಿಲ್ಲ . ಕರ್ಣ ಪಿಶಾಚಿಯನ ಮುಂದೆ ಕಾಮನೆಗಳಿಗೆ ಸ್ಥಳವಿಲ್ಲ . ಇಲ್ಲಿ ಎಲ್ಲವನ್ನೂ , ಎಲ್ಲರನ್ನೂ ತ್ಯಜಿಸಬಲ್ಲೆ. ಆಕೆಯ ಪಾದಗಳಿಗೆ ಶಿರವಿಟ್ಟು ಅದನ್ನೂ ಒಪ್ಪಿಸಿಕೋ ಅನ್ನಬಲ್ಲೆ ಎಂಬತಹ ಮುಕ್ತತೆ ಬೇಕು . ನೀನು ನೀನೆಂಬುದನ್ನೂ ಮರೆತು ಆಸೆಗಳನ್ನು ತೆಜಿಸು "* ಎಂದು ಬಾಬಾ ಹೇಳಿದ್ದರು. ಅದರೆ ಅವಳು ಆಸೆಯನ್ನು ತೇಜಿಸಿರಲಿಲ್ಲ . ಕೋಪವನ್ನು ತೆಜಿಸಿರಲಿಲ್ಲ . ದ್ವೇಷವನ್ನು ಕೂಡ.. ಅವಳ ಗುರಿ ಸರ್ವನಾಶ ಮಾಡುವುದಿತ್ತು..  ಕಾಮಕರ್ಣ ಪಿಶಾಚಿಯನ್ನು ಹೋಲಿಸಿಕೊಂಡ ಮೇಲೆ ಅದು ಅವಳ ಸರ್ವನಾಶಕ್ಕೆ ದಾರಿಯಾಗುತ್ತೆ ಅಂತ ಅವಳು ಕೂಡ ಊಹಿಸಿರಲಿಲ್ಲ . ಅದು ಉರ್ಗ ಕೋಪಿಯಾದ ಕರ್ಣ ಪಿಶಾಚಿಯ ಶಕ್ತಿ!
  
ಸರ್ವನಾಶದ ಮೊದಲ ಬಲಿ ಸ್ವತಃ ಅರೀಫ್‌ ಬಾಬಾ. ತನ್ನ ಗುರುವನ್ನು ಬಲಪಡೆದು ಉಗ್ರವಾಗಿ ನಗಲಾರಂಭಿಸಿದಳು ಸುಬ್ಬಮ್ಮ . ಅಂದೆ ಸರ್ವನಾಶದ ಮುನ್ನುಡಿಯಾಗಿ ಆಕೆ ಪ್ರಶಾಂತಿನಿ ಮನೆಗೆ ಬರುತ್ತಾಳೆ..... ತನ್ನ ತಾಯಿಯ ಮನೆಗೆ ಎಂದು ನೆನೆಯುತ್ತಾ ಒಮ್ಮೆಲೆ ಗದ್ಗತಿತನಾಗುತ್ತಾನೆ .

   ಅಷ್ಟರಲ್ಲಗಲೇ ಹಿಮಾಂಶು ಮಲ್ಲೇಶರಂ 7ನೇ ಕ್ರಾಸ್‌ಗೆ ತಲುಪಿದ್ದ. ವೈಭವೊಪೇತ ಮೊಲ ಬಿಳುಪಿನ ಬಂಗಲೆ ನೋಡುತ್ತಿದಂತೆ ಆ ಶ್ರೀಮಂತಿಕೆ ಕಣ್ಣು ಕುಕ್ಕುತ್ತಿತ್ತು. ಬಂಗಲೇ ಮುಂದೆಯೆ ಸಾಲು ಸಾಲು ಕಾರುಗಳು ಆದರೆ ಅದ್ಯವುದನ್ನು ಗಮನಿಸಿರಲಿಲ್ಲ ಆತನ ಮನಸ್ಸು ಆ ಬಂಗಲೇಯ ಎರಡನೇ ಮಹಡಿಯ ಕೊಣೆಯತ್ತ ನೆಟ್ಟಿತ್ತು . ಅದು ಶಾಲಿನಿಯ ರೂಮ್‌ . ಅವನು ಬರುವುದು ಅವಳಿಗೆ ಹೇಗೆ ತಿಳಿಯಿತೊ ಗೊತ್ತಿಲ್ಲ ಒಮ್ಮೆಲೆ ಓಡಿ ಬಂದು ಹಿಮಾಂಶುವಿನ ಮುಂದೆ ಬಿಕ್ಕಿ ಬಿಕ್ಕಿ ಆತ್ತುಬಿಟ್ಟಳು ಶಾಲಿನಿ . ಅದು 96 ದಿನಗಳಿಂದ ಬಚ್ಚಿಟ್ಟಿದ್ದ ಕಣ್ಣಿರು. ನಲ್ಲಮಲ ಅರಣ್ಯದ ಆ ಕತ್ತಲ ರಾತ್ರಿಯಲ್ಲಿ ಅಂದು ಅವರಿಸಿದ ಮೌನ ಇಲ್ಲು ಅವರಿಸಿತು . ಅವರಿಬ್ಬರಲ್ಲೂ ಮಾತು ಹೊರಡಲಿಲ್ಲ . ನಿಶಬ್ಧವೇ ನಾಚುವಂತಹ ನಿಚ್ಚಳ ಮೌನ . ಅವರಿಬ್ಬರು ಅದೊಂದು ಮಾತು ಹೇಳದಿದ್ದರು ಇಬ್ಬರ ಮನಸ್ಸಿಗೂ ಅದು ತಿಳಿದೆ ಇತ್ತು . ಅರಣ್ಯದ ಆ ಕತ್ತಲ ರಾತ್ರಿಯಲ್ಲಿ ಬಚ್ಚಿಟ್ಟಿದ್ದ ಮಾತು ಅವರಿಸುತ್ತಾ ಬಂತು . ಅವರಿಬ್ಬರು ದೂರದಲ್ಲಿದ್ದರಿಂದ ಪ್ರೀತಿ ಸಾವಿರ ಪಟ್ಟು ಹೆಚ್ಚಗಿತ್ತು . ಆಗ ಮೊಳೆಯಿತು ಮಾತು .
 "ಹಿಮು , ನನ್ನೊಂದಿಗೆ ಜೀವನ ಪೂರ್ತಿ ಇರುತ್ತೀಯಾ???" ಎಂದು ಶಾಲಿನಿ ಕೇಳುತ್ತಿದ್ದಂತೆ ಸ್ತಂಭೀಭೂತನಾದ ಹಿಮಾಂಶು.
ಅಲ್ಲಿ ಕಾಲ ಸ್ತಬ್ದವಾಯಿತು!!

                                                   *  *  *  *

    ಮಾಟಗಾತಿ ಸುಬ್ಬಮ್ಮ ಅರೀಫ್‌ ಬಾಬಾನನ್ನು ಬಲಿ ಪಡೆದ ಮರುಕ್ಷಣ ಪುತ್ತೂರಿನ ಜಮ್ಮಿಯ ಮಸೀದಿಯಲ್ಲಿದ್ದ ಅರೀಫ್‌ ಬಾಬಾನ ಶಿಷ್ಯ ಎಚ್ಚೆತ್ತ. ಅವನಿಗೆ ಸಾವಿರರು ಕೀಲೊ ಮೀಟರ್‌ ದೂರದಿಂದಲೇ ಗುರುವಿನ ಮಾತು ಕೇಳಿಸಿತ್ತು . " ನಾಶ ಮಾಡು ಅವಳನ್ನ , ಇಲ್ಲದಿದ್ದರೆ ಸರ್ವನಾಶಕ್ಕೆ ಅಣಿಯಾಗುತ್ತಾಳೆ " ಆಗಲೇ  ಮಾಟಗಾತಿ ಬೆಂಗಳೂರಿನಲ್ಲಿ ಪೂಜೆ ಪ್ರಾರಂಭಿಸಿದ್ದು . ಆಗಲೇ " ಸರ್ವನಾಶ ಕಂಡು ಬರುತ್ತಿದೆ " ಎಂದು ಕರೀಂ ಬಾಬಾ ಎದ್ದು ಕೂಗಿದ್ದು . 
ಮತ್ತು ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಹಿಮಾಂಶುವಿನ ತಾಯಿ ಪ್ರಶಾಂತಿನಿ ಹುಣ್ಣಿಮೆಯ ದಿನ ಮೊದಲ ಬಲಿ ಪಡೆದಿದ್ದು...

   ಹಿಮಾಂಶುವಿನ ತಾಯಿ ಪ್ರಶಾಂತಿನಿ ಬರ್ಬರ ಹತ್ಯಗೆ ರೂಪಿಸಿ ಬಿಟ್ಟಿದ್ದಳು ಮಾಟಗಾತಿ. ಟ್ರೇನ್‌ಗೆ ಹೊಕ್ಕವಳೇ ಮಧ್ಯವಯಸ್ಕ ಹೆಂಗಸಿನ ಗಂಟಲ ಭಾಗವನ್ನು ಕಿತ್ತು ಹೋಗಿದ್ದಳು ಅದು ಕರ್ಣ ಪಿಶಾಚಿಯಾ ಅರ್ಪಣೆಗೆ! . ಪ್ರಶಾಂತಿನಿಯ ಮೊದಲ Ruthlessness ಆರಂಭವಾಗಿದ್ದೆ ಅವಾಗ. ಆಗಲೇ ಕಾಲೇಜಿನಲ್ಲಿ  ಹಿಮಾಂಶು ನಿಗೂಢನಾಗಿದ್ದು . ತಾಯಿಯನ್ನು ಹುಣ್ಣಿಮೆಯ ದಿನ ನೋಡಿ ಬೆಚ್ಚಿಬಿದ್ದದ್ದು. ಭರ್ತಿ 16 ಕೊಲೆಗಳನ್ನು ಮಾಡಿದ್ದಳು ಪ್ರಶಾಂತಿನಿ.... And that is only because of black magic.. ಅದೆಲ್ಲ ಕಾಮಕರ್ಣ ಪಿಶಾಚಿನಿಗೆ ಎಂದು ನಂಬಿಸುತ್ತಾ ಬಂದಳು ಮಾಟಗಾತಿ ಸುಬ್ಬಮ್ಮ . 17ನೇ ಬಲಿ ಶಾಲಿನಿಯೆಂದು ತಿಳಿದಿದ್ದೆ ತಡ ಹಿಮಾಂಶು ತನ್ನ ಆಟ ಪ್ರಾರಂಭಿಸಿದ್ದ.
   " Himamshu played an intellectual game!"

  ಸ್ವತಃ ತಾನೇ ಕೊಲೆಗಾರನೆಂದು ಪೋಲಿಸರಿಗೆ ತಿಳಿಸಿ ಬಂಧನಕ್ಕೊಳಗಾಗುವಂತೆ ಮಾಡಿಕೊಳ್ಳುತ್ತಾನೆ . ಅದು ಶಾಲಿನಿಯನ್ನು ರಕ್ಷಿಸುವ ತಂತ್ರ ಎಂದು ಸ್ವತಃ ಮಾಟಗಾತಿಗೂ ತಿಳಿದಿರಲಿಲ್ಲ . ಹಿಮಾಂಶು ಶಾಲಿನಿಯನ್ನು ಉಳಿಸಿಕೊಳ್ಳಲು ಸ್ವತಃ ತಾನೇ ಜೈಲಿಗೆ ಹೋಗಿಬಿಟ್ಟಿದ್ದ .... ಹಿಮಾಂಶು ತನ್ನ ಪ್ಲಾನ್‌ನಲ್ಲಿ ಗೆಲುವು ಸಾಧಿಸಿದ್ದನಾ?????? 
                                                                     -(ಮುಂದುವರೆಯುತ್ತದೆ-To be continued)

4 Dec 2014

A humming wednesday evening

Amazing and beautiful
not a flower or a tree
Much prettier than that
and only I can see

Loving and caring
right down to the core
Filling me with happiness
and so much more

Eyes are so stunning
cannot look away
Gorgeous and shining
all throughout the day

Here in your arms
is where I belong
The beating of your heart
is like a beautiful song

     Yes, It was the day I was waiting for, It was the day even she waited for . I was waiting  for her arrival in the bus stop.. with lots of joy and happiness in my heart coz I'm seeing her after 10 loooooooog days.

    while waiting my mind went back to the day.. the day she sent that text to me "Shall we go together for the function ,  will you be with me"...... yeaaaa definitely I replied . From that movement to now we both were curiously waited for this day and guess what she arrived .

    In her best black attire which I love the most . She was like the first sun ray in the morning of mid winter morning . She was like the lightning in the humming wednesday evening . She was so beautifully beautiful that I could take my eyes of her. She took all my attention . She attracted my attention that I just loved her in that black beautiful dress.

    It was the third ride with her but this one is something special for both of us . Actually it was the ride which we both waited for.. She sat in my bike behind me , we just went  talking something , something and everything . When we reached the function hall we thought of a walk . The walk which we loved the most that day . She was sooo beautiful that all the people around us was staring at her . Did he recognized (?) . I don't know . The short walk was soo long ;) . I enjoyed every second of it! . The cool breeze in the evening added still more lovely moment to us . She still looked much more attractive under the light in that dark chill and lovely evening..


   She was with me throughout the function . She talked with me , she sat with me , she laughed with me , hope she enjoyed with me & I still  remember her small dimple which adds more beauty when she smiles . I just love to see her smile .It was 9:15 I think she was getting late & again it was my favorite part . THE RIDE WITH HER . The weather was very chill . The evening breeze was killing both of us . I was cursing the time ."Why today its racing very fastly .


    Yes, time was running very fastly , I thought why don't this day , this evening , this moment remains the same forever & ever... The same chill evening , same ride , me & she nothing else other than that . but it was 10 I dropped her in a hard heart we both went home by keeping the lovely memories in heart which would last forever... LOVED THE DAY WITH YOU... Thank you :)

29 Nov 2014

ನೆನಪಿನ ಚಳಿಯಲ್ಲಿ!!

     ಎಲ್ಲಿ೦ದಲೋ ತುರಿಬ೦ದ ನಿನ್ನ ಹೆಸರು ನನ್ನ ಮನಸ್ಸಿನೊಳಗೆ ನುಗ್ಗಿ , ಕೊ೦ಚ ಹೊತ್ತಿನಲ್ಲಿ ಆ ಹೆಸರು ವಿಚಾರವಾಗಿ , ಭಾವನೆಯಾಗಿ , ಪ್ರಶ್ನೇಯಾಗಿ ಕಾಲೂರಿ ನಿ೦ತುಬಿಟ್ತು. ನೀನು ಬೇಕು ಅನಿಸ್ತಿಯಾ ನನ್ನ ಮಾತಿಗೆ , ನನ್ನ ಮೌನಕ್ಕೆ , ನನ್ನ ಉಸಿರಿಗೆ , ನನ್ನ ಬದುಕಿಗೆ... ಎಷ್ಟು ತಿಂಗಳಾಯ್ತು ನಿನ್ನ ನೋಡಿ..

   ನಾನು ಇದು ನಿನಗಾಗಿ ಬರೆಯುತ್ತಿರುವ 26ನೇ ಪತ್ರವಿರಬಹುದು.. I know ಇದು ಕೂಡ ನೀನು ಓದಲ್ಲ ಅಂತ , ಆದರೆ ನಾನು ನಿನಗಾಗಿ ಇಂತಹಃ ಎಷ್ಟು ಪತ್ರ ಬೇಕಾದರೂ ಬರೆದು ಕಾಯ್ತ ಇರ‍್ತೀನಿ ಡಿಯಾರ್‌.

    ಯಾಕೋ ಇವತ್ತು ಆ ದಿನ ನಾನು ನೀನು ಆ ಕತ್ತಲ ರಾತ್ರಿಯ ಚುಮು ಚುಮು ಚಳಿಯಲ್ಲಿ ನಾಗರಭಾವಿಯಿಂದ ಕೆಂಗೇರಿವರೆಗೂ ಹೋಗಿದ್ವಲ್ಲ ಆ ಪುಟ್ಟ ರೈಡ್‌ ತುಂಬಾ ನೆನಪಾಗ್ತಯಿದೆ . ಅವತ್ತು SEP 11 ನನ್ನ ಬರ್ತ್‌ಡೇ ಬೆಳಗ್ಗೆನೆ ಯಾಕೋ ಫೋನ್‌ ಮಾಡಿ ಮಲ್ಲೆಶ್ವರಂಗೆ ಬಾ ಅಂದ್ಯಲ್ಲ ಅದಕ್ಕೆ ಕಾಲೇಜ್‌ ಬಂಕ್‌ ಮಾಡಿ ಬಂದು ನಿಂತವನಿಗೆ ಅಷ್ಟು ದೊಡ್ಡ ಶಾಕ್‌ ಕೋಡೊದ ನೀನು ? ತುಂಬಾ ಭಯವಾಗಿತ್ತು ಅವತ್ತು . ಹಳ್ಳಿಮನೆಯ ನುಂದೆ ಸುಮ್ಮನೆ ನಿನಗಾಗಿ ಕಾಯುತ್ತ ನಿಂತಿದ್ದಾಗ ಅಪ್ಪನ ಜೊತೆ ಬಂದಿದ್ಯಲ್ಲ . I was shocked . " ಅಪ್ಪ ಇವನು ನನ್ನ ಕೋತಿಮರಿ ಫ್ರೇಂಡ್‌ ಮಂಜು , ಇವತ್ತು ಇವ್ನ ಬರ್ತ್‌‌‌ಡೇ , Let's make it special " ಅಂತ ಅಪ್ಪನಿಗೆ ಪರಿಚಯಾ ಮಾಡಿಸಿದಲ್ಲಾ . I was surprised!!

   ಅವತ್ತು ಇಡಿ ದಿನ ನಿನ್ನೊಂದಿಗೆ ಕಳೆದುಬಿಟ್ಟಿದ್ದೆ . ಅದೇ ದಿನ ರಾತ್ರಿ 9 ಗಂಟೆಗೆ ಹೋಗಿದ್ವಲ್ಲ ಆ ಪುಟ್ಟ ರೈಡ್‌ ಎಷ್ಟು ಚೆನ್ನಾಗಿತ್ತಲ್ವ . ಎಷ್ಟು ಚಳಿ ಇತ್ತು ಅವತ್ತು . ಆಗ University ಗೇಟ್‌ ಬಳಿ ಇದ್ದ ಗಣೇಶನ ಗುಡಿಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಪೂಜೆ ಮಾಡಿಸಿದಲ್ಲ . I felt blessed . ಪುಟ್ಟ ಮಗುವಂತೆ ನನಗೆ ಕುಂಕುಮ ಇಟ್ಟು " ಕೋತಿ ಯಾವಗಲು ಚೆನ್ನಗೀರೊ , don't forget your dreams.. just chase them . I love you ಕಣೋ " ಅಂತ ಎಷ್ಟು ಪ್ರೀತಿಯಿಂದ ಹೇಳ್ತಯಿದ್ದೆ. ನಿನ್ನ ಆ ಮಾತುಗಳು ಇನ್ನ ನನಗೆ ಹಾಗೇ ನೆನಪಿದೆ.. ಮುದ್ದು ಮುದ್ದುಗಿ ಕಣ್ಣು ಮಿಟುಕಿಸುತ್ತಾ ಪಟಪಟ ಅಂತ ಮಾತಡ್ತಾ ಇದ್ದೆ .  ನಾನು ಮಾತಿಗಿಂತ ನಿನ್ನ ಮೋಡಿದ್ದೆ ಜಾಸ್ತಿ . You were soo affordable that day . universityಯ  ಬೆಳಕಿಲ್ಲದ ಆ ಕತ್ತಲ ರಸ್ತೆಯಲ್ಲಿ " ಹೋಗೊ ನಿನ್ನ bike ಚೆನ್ನಾಗಿಲ್ಲ , Its not comfortable to sit , ನಡೆದುಕೊಂಡು ಹೋಗಣ ಬಾರೋ " ಅಂತ ಹೇಳಿದಲ್ಲ . ನಂಗೊತ್ತು ಪ್ರೀತಿಯ ಆ ಕತ್ತಲ ರಾತ್ರಿಯಲ್ಲಿ ನೀನು ನನ್ನ ಜೊತೆ ನಡೆದುಕೊಂಡು ಹೋಗ ಆಸೆ ಇತ್ತು ಅಂತ. ಅಲ್ಲಿದ್ದದ್ದೂ ನಾನು , ನೀನು , ನಮ್ಮ ಪ್ರೀತಿ , ಅ ಚಂದ್ರ ಮತ್ತು ಹಾಗೊಮ್ಮೆ - ಇಗೊಮ್ಮೆ ವಾಹನಗಳ ಬೆಳಕಿನಲ್ಲಿ ಬೆಳಗುತಿದ್ದ ರಸ್ತೆ . ಅಲ್ಲಿ ಮಾಗಳಿಲ್ಲದ ನಿಚ್ಚಳ ಮೌನ , ಬರೀ ಕಣ್ಣಲ್ಲೆ ಗಂಟೆಗಟ್ಟಲೆ ಮಾತಡಿಸಿದರು ಸಾಲದಷ್ಟು ಭವನೆಗಳು , ಅಲ್ಲಿ ಇದ್ದದ್ದು ನೂರಾರು ದಿನಗಳ ಅರಾಧನೆ , ಮೌನದಲ್ಲೆ ಕೂಡಿದ್ದ ಮಾತುಗಳು , ಭಾವನೆಗಳೇ ತುಂಬಿದ್ದ ಕಣ್ಣುಗಳು . ಸುಮ್ಮನೆ ಅಷ್ಟು ಚಳಿಯ ರಾತ್ರಿಯಲ್ಲಿ ನಡೆದು ಹೋಗಿದ್ದವು . It was just me & You ..

    Woooow!! ಇಗಲು ಅದೇ ರೀತಿ ಚಳಿಯಿದೆ , ನೀನಗಿಷ್ಟವಿಲ್ಲದ ಅ ಬೈಕ್‌‌ ಹಾಗೆ ಇದೇ . ಕತ್ತಲ ರಸ್ತೆ , ಗಣೇಶನ ಗುಡಿ ಎಲ್ಲವೂ ಹಾಗೆ ಇದೆ . Dear let's go far a walk ಅಲ್ವ ;)


ಚಳಿಯ ಬಿಸುಪೋ , ನಿನ್ನ ನೆನಪೋ ;  
ಕಾಡಿಗೆಯ ಕಣ್ಣು ,ಕಾಡುತ್ತಿದೆ ಇನ್ನೂ ;
ನೆನಪಿನ ಚಳಿಯಲ್ಲಿ , ರಾತ್ರಿಯ ಕತ್ತಲಲ್ಲಿ ;
ನಿನ್ನ ನಗುವ ಅಮಲಿನಲ್ಲಿ ;
ಕಾಡುತ್ತಿದೆ ನಿನ್ನದೆ ಬಿಂಬ
ಜನ್ಮದ ಮೈತ್ರಿಯೋ , ಜೀವನ ಪ್ರೀತಿಯೋ
ಕಾಯುತ್ತಿರುವೆ ನಾನಿನ್ನ
ಕಾಡಿಗೆ ಹಚ್ಚಿದ ಮುದ್ದು ಚಿನ್ನ ;)

19 Nov 2014

ಹುಣ್ಣಿಮೆಯ ನಿಶಬ್ಧ ಭಾಗ-9

     ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

     ತಾನು ಪ್ರೀತಿಸಿದ ಹಿಮಾಂಶು ಆಗ ತಾನೇ ತನ್ನ ಪರ ಒಲಿಯುತ್ತಿದ್ದ. ಅದೊಂದು ರಾತ್ರಿ, ಯಾರು ಅವರನ್ನು ಕರೆದಿರಲಿಲ್ಲದಿದ್ದರೆ ಶಾಲಿನಿ ತನ್ನ ಮನಸ್ಸಿನ ಅಷ್ಟು ವಿಚಾರವನ್ನು ಹಿಮಾಂಶುವಿಗೆ ತಿಳಿಸಿಬಿಡುತಿದ್ದಳೇನೊ . It just happened . ಅವನೊಡನೆ ಕಾಡುವ ಮೌನದಲ್ಲೆ ಭರ್ತಿ ಒಂದು ಗಂಟೆ ಕೂತು ಎದ್ದು ಹೋಗಿದ್ದ ಶಾಲಿನಿಯ ಹೃದಯದಲ್ಲಿ ಇಂದೆಂದೂ ಕಾಣದ  ಸಂತೋಷ .  ಕತ್ತಲ ರಾತ್ರಿಯಲ್ಲಿ ಗಡಿಯ ರೇಕೆಯಿಲ್ಲದೆ ಹಕ್ಕಿಯಂತೆ ಇಡೀ ಪ್ರಪಂಚವನ್ನ ಸುತ್ತಿ ಬಂದಿತ್ತು . ಹಿಮಾಂಶು ತನ್ನೊಡನೆ ಕಳೆದಿದ್ದ ಪ್ರತಿ ಸೆಕೆಂಡ್‌ನ್ನು ನೆನಪಿಸಿಕೊಳ್ಳುತ್ತಿದ್ದಳು ಶಾಲಿನಿ. ಆ ರಾತ್ರಿ ಅವಳಿಗೆ ನಿದ್ದೆ ಬಂತೋ ಏನೋ ಅದರೆ ಹಿಮಾಂಶುವಿನೊಡನೆ ಸಾವಿರ ಸಾವಿರ ವರ್ಷ ಕಳೆಯುವ ಕನಸಂತು ಬಿದ್ದಿತ್ತು .ಬೆಳಗಿನ ನಿಚ್ಚಳ ಸೂರ್ಯ ಅದಗಲೇ ತನ್ನ presence  ತೋರಿಸಿದ್ದ.ಎಷ್ಟು ಬೇಗ ಬೆಳಕಾಯಿತು!

    ಇದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಮನೆಗೆ ಹೋಗುವ ಸಂಭ್ರಮ ಅರಣ್ಯವನ್ನು ಬಿಟ್ಟು ಹೊರಡುವ ತಳಮಳದಲ್ಲಿ ಕೂಡಿದ್ದರೆ . ಹಿಮಾಂಶು-ಶಾಲಿನಿಗೆ ಮತ್ತೇನೋ ಸಂಭ್ರಮ!  ಅದು ಮಾತುಗಳಿಲ್ಲದ ನಿಚ್ಚಳ ಮೌನ , ಬರೀ ಕಣ್ಣಲ್ಲೆ ಗಂಟೆಗಟ್ಟಲೇ ಮಾತಾಡಿದರು ಸಾಲದಷ್ಟು ಭವನೆಗಳು ಹೊರಡುತ್ತಿದ್ದವು . ಅಲ್ಲಿ ಇದ್ದದ್ದು ನೂರಾರು ದಿನಗಳ ಆರಾಧನೆ , ಮೌನದಲ್ಲೆ ಕೂಡಿದ್ದ ಮಾತುಗಳು , ಭಾವನೆಗಳು ತುಂಬಿದ್ದ ಕಣ್ಣುಗಳು , ಪ್ರೀತಿ ತುಂಬಿದ್ದ ಹೃದಯಗಳು . ನಲ್ಲಮಲ ಅರಣ್ಯದ ಮರಗಳೇ ಕೆಲಕಾಲ ನಾಚಿ ನಲಿದವು , ಮೌನದಿಂದಲೇ ಅಷ್ಟು ಮರಗಳು ಇವರ ಪ್ರೀತಿ ಫಲಿಸಲಿ ಅನ್ನುತ್ತೀವೆ ಎಂದು ಭಾಸವಾಗಿತ್ತು..

    ಕಾಲ ಸ್ತಬ್ಧವಾಗಿತ್ತು!!

           ಸಮಯ 12 ಗಂಟೆ 10 ನಿಮಿಷ
           ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌ ಶ್ರೀಕಾಕುಳಂ ರೈಲು ನಿಲ್ದಾಣಕ್ಕೆ ಬಂದು ನಿಂತಿತ್ತು . ಹಿಮಾಂಶು - ಶಾಲಿನಿ ಎದುರು ಬದರು ಸೀಟಿನಲ್ಲೆ ಕೂತಿದ್ದರು . ಅವರ ನಾಲಿಗೆಯಿಂದ ಮಾತು ಮರಿಚಿಕೆಯಾಗೆಯಿತ್ತು . ಆಗ ಬಂದವರೇ DYSP ಶಿವರಾಮಪ್ಪ ಹಿಮಾಂಶುನನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರೆ . ಶಾಲಿನಿ ಆಘತದಿಣದ ಕಿರುಚಿದಳು . ಬೆಂಗಳೂರಿಗೆ ಬಂದವಳೇ ತನ್ನ ವೈಭವೋಪೇತ ಮನೆಯ ಬೆಡ್‌ರೂಮಿಗೆ ಹೋದವಳೇ ಒಂದೇ ಸಮನೆ ಆಳುತ್ತಿದ್ದಳು . ಭರ್ತಿ ಐದು ದಿನದ ನಂತರ ತನ್ನ ಹಡಗಿನಂತ BMW  ಕಾರ್‌ ಹತ್ತಿದವಳೇ ಹಿಮಾಂಶುನನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಹೋಗಲು ಅಣಿಯಾದಳು . ಕಾರ್‌ ಮಲ್ಲೆಶ್ವರ ಏಳನೇ ಕ್ರಾಸ್‌ನಿಂದ ಹೊರಬಿದ್ದು ಶೇಶಾದ್ರಿಪುರಂ ರೋಡ್‌ ದಾಟಿ ಮೆಜಸ್ಟಿಕ್‌ ತಲುಪಿತ್ತು ಅಷ್ಟರಲ್ಲಗಲೇ ಶಾಲಿನಿಯ ಮನಸ್ಸು ಬದಲಾಗಿತ್ತು . ಅವಳ ಮನಸ್ಸು ಹಿಮಾಂಶು ಕೊಲೆಗಾರನಲ್ಲ ಇನ್ನು ಕೇಲವೆ ದಿನದಲ್ಲಿ ನನ್ನ ಬಳಿ ಬರುತ್ತಾನೆ ಎಂದು ತೀರ್ಮಾನ ಮಾಡಿದವಳೇ ಯಾವುದೋ ಯೋಚನೆಯಲ್ಲಿ ಅಲ್ಲೆ ಬಳಿಯಿದ್ದ ಪಾರ್ಕ್‌ನಲ್ಲಿ ಮೌನದಿಂದ ಕುಳಿತುಬಿಟ್ಟಳು..

                                                                  **** *** ****
     ( ರವಿ ಬೆಳಗೆರೆಯವರ ಬರಹಗಳ ಪ್ರೇರಣೆಯಲ್ಲಿ)

     ಮೊದಲ ಪೂಜೆ ಆರಂಭಸಿದ್ದ ಮಾಟಗಾತಿಗೆ 14 ವರ್ಷಗಳ ಹಿಂದಿನ ನೆನಪುಗಳು ಕಾಡ ತೋಡಗಿತು.

   ಅಂದು!

  ನಿವೇದಿತಾ ಸತ್ತ ವಿಷಯವನ್ನು ಪ್ರಶಾಂತಿನಿ ಬಂದು ಮಾಟಗಾತಿ ಸುಬ್ಬಮ್ಮನಿಗೆ ಹೇಳಿದ್ದೆ ತಡ . ತನ್ನ ಗುರಿ ಸಾಧನೆಗೆ ಸಮಯ ಬಂದಿದೆ ಎಂದು ತಿಳಿದವಳೆ ಅವಳ ಪ್ರಯಾಣ ಆಂರಭವಾಗಿಬಿಟ್ಟಿತ್ತು!

  ಧೇನಿಸು ತಾಯೇ...! ಎಂದು ಹೇಳುತ್ತಾ ಹೊರಟ ಸುಬ್ಬಮ್ಮ ಅಂಧ್ರದ ಗಡಿ ದಾಟಿ ಒಡಿಶಾದ ಕಾಮಾಕ್ಯ ದೇಗುಲಕ್ಕೆ ಬರುವಷ್ಟರಲ್ಲಿ ಹುಣ್ಣಿಮೆಯಾಗಿತ್ತು . ಅಲ್ಲಿ ಆಕೆಗೆ ಸಿಗುತ್ತಾನೆ ಅಘೋರಿ ಸಾಧನೆಗೈದ ಪ್ರಜ್ವಲನಾಥ . ಕಾಮಕರ್ಣ ಪಿಶಾಚಿಯನ್ನು ಹೋಲಿಸಿ ಕೊಳ್ಳಬೇಕಾದರೆ ಏನು ಮಾಡಬೇಕು ಎಂದು ವಿವರ ನೀಡುತ್ತಿದ್ದ ಪ್ರಜ್ವಲನಾಥನಿಗೂ ಕಾಣಿಸಿದ್ದು ಅದೇ "ಸರ್ವನಾಶ!"

    ಇಲ್ಲೆ ಪಶ್ವಿಮ ಬಂಗಾಳದ ಕಾಡಿನಲ್ಲಿ ಕಾಮಕರ್ಣ ಪಿಶಾಚಿಯನ್ನು ಸಾಧಿಸಿರುವ ಏಕೈಕ ಮಾಂತ್ರಿಕನಿದ್ದಾನೆ . ಅವನ ಬಳಿ ಹೋದರೆ ನಿನ್ನ ಗುರಿ ಮುಟ್ಟ ಬಹುದೆಂದು ಹೇಳುತ್ತಿದ್ದ ಪ್ರಜ್ವಲನಾಥ ಇದ್ದಕ್ಕಿದ್ದಂತೆ ಪಶ್ಚಿಮ ದಿಕ್ಕಿನೆಡೆಗೆ ದಾವಿಸಿ ಬಿಟ್ಟ.. ಅವನಿಗೆ ಸುಬ್ಬಮನ ಭವಿಷ್ಯ ಕಾಣಿಸಿತ್ತಾ..??

    ಅದು ಹುಲಿಗಳಿಗೆ ತಾಣವಾಗಿದ್ದ ಪಶ್ಚಿಮ ಬಂಗಾಳದ ರುದ್ರ ಕಾಡು! 14 ವರ್ಷ ಬಾಬಾ ಹೇಳಿದ ಎಲ್ಲಾ ಪೂಜೆಗಳನ್ನು ಮಾಡಿ ಅವನ ಎದುರಿಗೆ ನಿಲ್ಲುತ್ತಾಳೆ ಮಾಟಗಾತಿ ಸುಬ್ಬಮ್ಮ . ಅವನ ಕಣ್ಣಗಳಲ್ಲೆ ಒಂದು ರುದ್ರ ಭಯಂಕರ ನೋಟ . ಡೊಡ್ಡದಾಗಿ ಬೆಳೆದಿರುವ ಗಡ್ಡ , ಹಸಿರು ಜುಬ್ಬಾ ಧರಿಸಿ ಸಶ್ಮಾನ ಮೌನದಲ್ಲಿ ಕುಳಿತಿರುವವನ ಹೆಸರು ಅಯಾಮಾನ್‌ ಅಲ್‌ ಅರಿಫ್‌ !
    ಅರಿಫ್‌ ಬಾಬಾ!!

 ಮಾಟಗಾತಿ ಸುಬ್ಬಮ್ಮನ ಮುಖದಲ್ಲಿ ಹಿಂದೆಂದೂ ಕಾಣದ ಕಾಟಿಣ್ಯತೆ ಮತ್ತು ಏಕಾಗ್ರಾತೆಗಳು ಜಮೆಯಾಗಿದ್ದವು . ಅದು ಅವಳಲ್ಲಿ ಕಾಣಲರಂಭಿಸಿದ ಮೊದಲ Ruthlessnessನ ಅನುಭವ . ಸತ್ತ ಹೆಂಗಸೊಬ್ಬಳ ಗೋರಿ ಮುಂದೆ ಕುತ್ತಿದ್ದ ಮಾಟಗಾತಿ ಮತ್ತು ಅರಿಫ್‌ ಬಾಬಾ ಇಬ್ಬರಿಗೂ ನಿರ್ದಯತೆ ಜಮೆಯಾಗಿದ್ದವು . ನಿಧಾನವಾಗಿ ಸಣ್ಣ ದನಿಯಲ್ಲಿ ಆರಂಭವಾದ ಮಂತ್ರಗಳು ಹತ್ತು ನಿಮಿಷ ಕಳೆಯುವಷ್ಟರಲ್ಲಿ ಕಿವಿಯ ಟಿಂಪ್ಯಾನಮ್‌ ಒಡೆದು ಹೋಗುವಷ್ಟು ತೀಕ್ಷ್ಣವಾಗಿಬಿಟ್ಟವು . ಹುಣ್ಣಿಮೆಯ ಆ ಕತ್ತಲ ರಾತ್ರಿಯಲ್ಲೆ ಭಯನಕತೆ ಸೃಷ್ಟಿಯಾಗಿತ್ತು .ಬಾಬಾ ಮೊದಲಿಗೆ ಸುಬ್ಬಮ್ಮನಿಂದ ದಿಗ್ಬಂಧನ ಪೂಜೆ ಮಾಡಿಸೊದರು . ಗೋರಿಯ ಮುಂದೆ ಪಶ್ಚಿಮಾಭಿಮುಖವಾಗಿ ಕುಳಿತ ಅವಳ ಹಣೆಗೆ ಬಾಬಾ ತಮ್ಮ ಬಲಗೈ ಬೆರಳಿನಿಂದ ಕತ್ತರಿಸಿದ ರಕ್ತ ಕುಂಕುಮ ತಿಲಕ ವಿವರಿಸಿದರು
.
   " ಧೇನಿಸು ಮಗಳೇ... ಬದುಕುವ ಆಸೆಯನ್ನು ಕೂಡ ಬಿಟ್ಟು ಧೇನಿಸು . ಕ್ಷುದ್ರ ಲೋಕದಲ್ಲಿ ಆಸೆಗಳಿಗೆ ಜಾಗವಿಲ್ಲ . ಕರ್ಣ ಪಿಶಾಚಿಯ ಮುಂದೆ ಕಾಮನೆಗಳಿಗೆ ಸ್ಥಳವಿಲ್ಲ . ಇಲ್ಲಿ ಎಲ್ಲವನ್ನೂ , ಎಲ್ಲರನ್ನೂ ತ್ಯಜಿಸಬಲ್ಲೆ . ಆಕೆಯ ಪಾದಗಳಿಗೆ ಶಿರವಿಟ್ಟು ಅದನ್ನೂ ಒಪ್ಪಿಸಿಕೋ ಅನ್ನಬಲ್ಲೆ ಎಂಬಂತಹ ಮುಕ್ತತೆ ಬೇಕು .ನೀನು ನೀನೆಂಬುದನ್ನೂ ಮರೆತು ಕರ್ಣಪಿಶಾಚಿಯನ್ನು ಪ್ರಾರ್ಥಿಸು .ಹೇಳು ಮಗಳೇ... ನನ್ನೊಂದಿಗೆ ಹೇಳು..."

    ಆರಿಫ್‌ ಬಾಬಾ ದೊಡ್ಡ ದನಿಯಲ್ಲಿ ಸುಬ್ಬಮ್ಮನಿಗೆ ಆದೇಶ ನೀಡುತ್ತ ಮಂತ್ರ ಪಠಣ ಮುಂದುವರೆಸಿದರು .ಆದರೆ ದೊಡ್ಡ ದನಿಯಲ್ಲಿ ಅವರು ಹೇಳುತ್ತಿದ್ದ ಮಂತ್ರಗಳ ಪೈಕಿ ಒಂದೇ ಒಂದು ಚಿಕ್ಕ ಶಬ್ದವೂ ಅರ್ಥವಾಗಿರಲಿಲ್ಲ . ಆಗ ಇದ್ದಕ್ಕಿದಂತೆ ನೆಲೆಗೊಂಡ ಮೌನ , ಆ ಸ್ಮಶಾನದ ಕಾವಳದಲ್ಲಿ ಮತ್ತೂ ಭಯಾನಕವೆನ್ನಿಸತೊಡಗಿತು . ಗೋರಿಯ ಮೈ ಬಿರುಕು ಬಿಡತೊಡಗಿದೆ . ಬಾಬಾ ಯಾವುದನ್ನೂ ಗಮನಿಸಿದಂತೆ ಮಂತ್ರಪಠಣ ಮಾಡುತ್ತಲೇ ಇದ್ದಾರೆ . ಗೋರಿಯ ಆಳದಲ್ಲಿ ಅದು ಕದಲತೊಡಗಿದೆ... ಕದಲುತ್ತಿರುವುದು ಹಸೀ ಬಾಣಂತಿಯ ದೇಹ ಎಂಬುದು ಗೊತ್ತಾಗುತ್ತಿದ್ದಂತೆಯೇ ಸುಬ್ಬಮ್ಮನ ದೇಹದಲ್ಲಿ ಕೆಲವು ಬದಲಾವಣೆಗಳಾದವು . ಕೈ ಬೆರಳುಗಳಿಗೆ ದೇಹದ ನೆತ್ತರೆಲ್ಲ ಹರಿದು ಬಂತೇನೋ ಎಂಬಂತೆ ಅವೆಲ್ಲವೂ ರಕ್ತವರ್ಣಕ್ಕೆ ತಿರುಗಿದವು . ನಾಲಗೆ ಕಳಚಿಕೊಂಡು ಹೊರ ಚಾಚಿಕೊಂಡಿತು . ಕಣ್ಣ ದೇದೀಪ್ಯಮಾನವಾದ ಪ್ರಕಾಶದಿಂದ ಪ್ರಜ್ವಲಿಸತೊಡಗಿತು , ಹಣೆಯ ಕುಂಕುಮ ಈಶ್ವರನ ಫಾಲನೇತ್ರದಂತೆ ಉರಿಯತೊಡಗಿತು .

   ಆಕಾಶದಲ್ಲಿ ಎರಡು ಬಾರಿ ಕೋಲ್ಮಿಂಚು ಕಾಣಿಸಿಕೊಂಡು , ಆಗಷ್ಟೆ ಬೀಸತೊಡಗಿದ್ದ ಚಿಕ್ಕ ಮಾರುತವೂ ಸ್ತಬ್ಧವಾಗಿ ಹೋಗಿ, ಸ್ಮಶಾನದಲ್ಲಿ ಆಘಾತಕರ ಮೌನ ಸ್ಥಾಪಿತವಾಗುತ್ತಿದ್ದಂತೆಯೇ ಗೋರಿಯೊಳಗಿನ ಬಾಣಂತಿಯ ಹೆಣ ಅತ್ಯಂತ ಸ್ಪಷ್ಟವಾಗಿ , ನಿಖರವಾಗಿ ಮತ್ತು ನೆಟ್ಟಗೆ ನಿಟಾರಾಗಿ ಎದ್ದು ಕುಳಿತುಕೊಂಡಿತ್ತು!
   ಅದು ಸುಬ್ಬಮ್ಮನ ಕಡೆ ಮುಖ ಮಾಡಿತ್ತು.

 ಶಾಸ್ತ್ರಿಗಳ ಮಂತ್ರಗಳು ಮತಷ್ಟು ಉಧೃತವಾದವು . ಎರಡನೇ ಆವೃತ್ತಿಯ ಆರಂಭವಾದವು . ಮಾಟಗಾತಿ ಸುಬ್ಬಮ್ಮ ಶವದ ಕೊರಳಿಗೆ ದೇವ ಕಣಗಲೆಯ ರಕ್ತಗೆಂಪು ಬಣ್ಣದ ಹಾರವನ್ನು ತೊಡಿಸಿ ತನ್ನ ಬಲ ಮುಂಗೈನ ನರವನ್ನು ಸಟಕ್ಕನೆ ಕುಯ್ದುಕೊಂಡು , ಶವದ ಅಂಗೈಗಳ ಮೇಲಕ್ಕೆ ರಕ್ತ ತರ್ಪಣ ನೀಡಿ ಮಂತ್ರ ಪಠಣ ಮಾಡುತ್ತಿದ್ದಂತೆಯೇ...

      ಹೊತ್ತಿಕೊಂಡಿತು ಜ್ವಾಲೆ !  

       ಆಗ ಬಿತ್ತು ಒಂದು ಹನಿ ಜ್ವಾಲೆ...
       ಅವಳ ಅಂಗೈ ಮಧ್ಯದ ಗೆರೆಯ ಮೇಲೆ!


      ಕಾಮಕರ್ಣ ಪಿಶಾಚಿನಿ ಮಾಟಗಾತಿ ಸುಬ್ಬನಿಗೆ ಹೋಲಿದಗಿತ್ತು... ಕ್ಷುದ್ರ ಸಾಧನೆಯ ಉತ್ಕೃಷ್ಟ ಅಂತ ಸಾಧಿಸಿಯಾಗಿತ್ತು!! ಕ್ಷುದ್ರ ಲೋಕದ ಅತಿದೊಡ್ಡ ಮಾಟಗಾತಿ ಬೆಂಗಳೂರಿಗೆ ಹಿಂತಿರುಗಿದವಳೇ ಮೊದಲಿಗೆ ಭೇಟಿನೀಡಿದ್ದು ಹಿಮಾಂಶುವಿನ ತಾಯಿ ಪ್ರಶಾಂತಿನಿ ಮನೆಗೆ!
        ಪ್ರಶಾಂತಿನಿ!!?
                                                           (ಮುಂದುವರೆಯುತ್ತದೆ-To be continued)

15 Nov 2014

ಹುಣ್ಣಿಮೆಯ ನಿಶಬ್ಧ ಭಾಗ-8

    ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



       ಅದು ಮಾರ್ಚ್ ೩!
 
          ಹಿಮಾಂಶು ಬಂಧನವಾಗಿ ಅದಗಲೇ ೯೫ ದಿನಗಳು ಉರುಳಿದ್ದವು . ಪೋಲಿಸರು ನಿಯಮದಂತೆ ೯೦ ದಿನಗಳಲ್ಲಿ ಚಾರ್ಚ್‌ಶೀಟ್‌ ಸಲ್ಲಿಸಿ ಆಗಿತ್ತು . ಆತನ ಸೌಮ್ಯ ಕಣ್ಣುಗಳನ್ನು ಗಮನಿಸಿದ್ದ DYSP ಶಿವರಾಮಪ್ಪ ಆ ರಾತ್ರಿಯೆಲ್ಲ ಅವನೊಂದಿಗೆ ಮಾತಾಡಿದ್ದರು . ಎಷ್ಟು ಕೇಳಿದರು ಹಿಮಾಂಶು ತಾನೇ ಕೊಲೆ ಮಾಡಿರುವುದಾಗಿ ಹೇಳುತ್ತಿದ್ದನೆ . ಅದಕ್ಕೆ ಸಕ್ಷಿ ಎಂಬಂತೆ ಹಿಮಾಂಶು ಕೊಲೆಯಾಗಿದ್ದ ೧೬ ಜನರ ವಿವರದ ಸಮೇತ ಹೇಗೆ ಕೊಲೆಯಾಗಿತ್ತೆಂದು ಎತವತ್ತು forensic report ನೀಡಿದ ಆಗೆ ಹೇಳುತ್ತಿದ್ದ . ಮಾತು ಎರಡು ಗಂಟೆಗೂ ಹೆಚ್ಚು ನಡೆದಿತ್ತು ತೀರ ಹೋಗುವ ಮುನ್ನ ಶಿವರಾಮಪ್ಪ , ಹಿಮಾಂಶು ಕಡೆ ತಿರುಗಿ " ಹಿಮಾಂಶು, ಕೊಲೆ ನೀನು ಮಾಡಿರಲು ಸಾಧ್ಯವೆ ಇಲ್ಲ ಎಂದು ನಿನ್ನ ಕಣ್ಣುಗಳು ಸಾರಿ ಸಾರಿ ಹೇಳುತ್ತಿವೆ!, ನೀನು ನೆನಪಿಟ್ಟುಕೋ ಹಿಮಾಂಶು ' I'm not an ordinary Police ಅದು ನಿನಗೂ ಗೊತ್ತು , ನಿಜವಾದ ಹಂತಕನನ್ನು ನಾನು ತಂದು ನಿನ್ನ ಮುಂದೆ ನಿಲ್ಲಿಸುತ್ತೇನೆ.. Take it as a challenge " ಎಂದವರೆ ಅವನ ಉತ್ತರಕ್ಕೂ ಕಾಯದೆ ನಡೆದು ಹೋದರು . ಗಂಟೆ ಬೆಳಗಿನ ಜಾವ ನಾಲ್ಕಗಿತ್ತು .

   ಅದು ಅವನ ಪ್ರಕರಣಕ್ಕೆ ತೀರ್ಪು ನೀಡುವ ದಿನ . ಹಿಮಾಂಶು ಇದಗಾಲೆ ಇಂಡಿಯನ್‌ ಪಿನಲ್‌ ಕೊಡ್‌ ಸೇರಿದಂತೆ ಹಲವಾರು ಬುಕ್‌ಗಳನ್ನು ಓದಿ ಅರಿತಿದ್ದ. ಈ ಕೊಲೆಗಳಿಗೆ ಅವನಿಗೆ ನೂರಕ್ಕೆ ನೂರರಷ್ಟು ಜೀವವಾದಿ ಇಲ್ಲವೇ ಮರಣದಂಡನೆ ! ಅದರೂ ಅವನಿಗೆ ಆಳುಕಿರಲಿಲ್ಲ.

   ಗಾಢ ನಿಲಿಬಣ್ಣದ ಬಸ್ಸಿಗೆ ಹಿಮಾಂಶುನನ್ನು ಹತ್ತಿಸಿಕೊಂಡದ್ದೆ ಬಸ್ಸು ಪರಪ್ಪನ ಅಗ್ರಹಾರ ಡಾಟಿ ಅದಗಲೇ ಹೊಸುರು ಮೇನ್‌ ರೋಡ್‌ ಹೊಕ್ಕಿತ್ತು . ಸುಮಾರು ಎರಡು ಗಂಟೆಗಲ ಬೆಂಗಳೂರು ಟ್ರಾಫಿಕ್‌ ಸರಿಸಿ ಬರುತ್ತಿದ್ದರೆ BTM ಲೇವೊಟ್‌ನ ಅಡ್ಡರಸ್ತೆಯಲ್ಲಿ ಕಾಫಿ ಕುಡಿಯುತ್ತಿದ್ದ ಸೂರಿಯನ್ನ ಕಣ್ಣಲ್ಲೆ ಗಮನಿಸಿದ್ದ ಹಿಮಾಂಶು! ಬಸ್ಸು ಕೆಂಪೇಗೌಡ ರಸ್ತೆಯ ಕಾವೇರಿ ಭವನದ ಹಿಂಭಾಗದಲ್ಲಿದ್ದ ಹೆಚ್ಚುವರಿ ಸಿವಿಲ್‌ ಕೋರ್ಟ್‌ ಗೆ ಬಂದು ನಿಂತಿತ್ತು. ಎರಡು ಗಂಟೆಯಲ್ಲಿ ಹಿಮಾಂಶುವಿನ ಮನಸ್ಸು ಕರ್ನಾಟಕದ ಗಾಡಿ ದಾಟಿ ಪಶ್ಚಿಮ ಬಂಗಾಲದ ಆ ದಾಟ್ಟ ಕಾಡುಗಳನ್ನು ಸುತ್ತಿ ಬಂದಿತ್ತು!!
  
   ಮಾಧ್ಯಮಗಳಲ್ಲಿ ಬ್ರೇಕಿಂಗ್‌ ನ್ಯೂಸ್‌!!

 "೧೬ ಬರ್ಬರ ಕೊಲೆಗಳನ್ನು ಮಾಡಿದ ಹಂತಕನ ಪ್ರಕರಣಕ್ಕೆ ಇಂದು ತೀರ್ಪು ಬಾರುವ ಸಾಧ್ಯತೆ , ಸೌಮ್ಯ ಕಣ್ಣುಗಳ ಹಿಮಾಂಶು ನಿಜಕ್ಕೂ ಕೊಲೆಗಾರನ?!"

  ಆತ ಇದೇ ಮೊದಲ ಬಾರಿಗೆ ಕೊರ್ಟಿಗೆ ಬಂದದ್ದು , ಇಷ್ಟು ದಿನ ಅವನ ವಿಚಾರಣೆ ಸ್ವತಃ ನ್ಯಾಯಧೀಶರ ಮನೆಯಲ್ಲೆ ನಡೆಯುತ್ತಿತ್ತು , ಕೊರ್ಟ್ ಹಾಲ್‌ನಲ್ಲಿ ಜನ ಕಿಕ್ಕಿರಿದು ಸೇರಿದ್ದರು , ಅದು ಮಾಧ್ಯಮಗಳ ಪಾಲಿಗೆ ದೊಡ್ಡ ಸುದ್ದಿ! ರಾಜ್ಯದ ಎಲ್ಲಾ ದಿನ ಪತ್ರಿಕೆಗಳ ಮುಖಪುಟವನ್ನು ಅವರಿಸಿಕೊಂಡಿತ್ತು ಹಿಮಾಂಶುವಿನ ಭಾವಚಿತ್ರ . ಪ್ರತಿಯೊಬ್ಬರು ಆ ಕೇಸಿನ ಬಗ್ಗೆ ಕುತೂಹಲ ಹೊಂದಿದ್ದರು . ಒಬ್ಬ ಶಾಲಿನಿಯನ್ನು ಹೊರತುಪಡಿಸಿ!!!

   ಹಿಮಾಂಶು ಕಟಕಟೆಗೆ ಬಂದು ನಿಂತ. ಗ್ಯಾಲರಿಯಲ್ಲಿ ಕೇವಲ ಮಾಧ್ಯಮ ಲೋಕದ ದಿಗ್ಗಜರು . ಅಷ್ಟು ಆಗಿದ್ದರು ಹಿಮಾಂಶುವಿನ ಕಣ್ಣಿನಲ್ಲಿ ಸೌಮ್ಯತೆ ಮಾಯಾವಾಗಿರಲಿಲ್ಲ. ನ್ಯಾಯಧೀಶರು ಬಂದದ್ದೆ ತಡ ಕೋಟ್‌ ನಿಶಬ್ಧವಾಗಿತ್ತು . ಮೊದಲು ಯಾರು ಮಾತಾಡಬೇಕು ನಾನಾ? ಪಬ್ಲಿಕ್‌ ಪ್ರಸಿಕ್ಯೂಟರ? ಅಥವಾ ನ್ಯಾಯಧೀಶರ? ಅವನಿಗೆ ತಿಳಿಯಾದಾದಿತು , ಚಾರ್ಚ್‌ಶೀಟ್‌ನಲ್ಲದ್ದ ಭರ್ತಿ ೩೧೫ ಪುಟವನ್ನು ನ್ಯಾಯಧೀಶರು ಅದಗಲೆ ಓದಿ ಬಂದಿದ್ದರು . ಹಿಮಾಂಶು ನ್ಯಾಯಧೀಶರುನ್ನು ನೋಡುತ್ತಾ ಒಂದೇ ಸಮನೇ ಅಷ್ಟು ವಿವರವನ್ನು ಸ್ಫುಟವಾಗಿ ನೀಡಿದ್ದ. ಎಲ್ಲೊ ಮರೆಯಾಗಿದ್ದ ಮಳೆ ಗುಡುಗಿನ ಸಮೇತ ಬಂದು ನಿಂತಂತೆ ಭಾಸವಾಗಿತ್ತು .

   ಹಿಮಾಂಶು ಹಂತಕನೆಂದು ಸಾಕ್ಷಿಗಳು ಸಾರಿ ಸಾರಿ ಹೇಳಿದ್ದವು. ಅದಗಲೇ ದೃಶ್ಯ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗಿತ್ತು "  ರೈಲ್‌ ರೋಡ್‌ ಹಂತಕನಿಗೆ ಕಠಿಣ ಶಿಕ್ಷೆ!" ನ್ಯಾಯಧೀಶರು ತಮ್ಮ ಪೆನ್‌ ತೆಗೆದು ತೀರ್ಪಿನ ಕಾಪಿ ಬರೆಯುತ್ತಿದ್ದರೆ.... ಕಡುಕಪ್ಪು ಸ್ಯೂಟ್‌ ಧರಿಸಿದ ಆಕೃತಿ ನ್ಯಾಯಾಲಯದ ಹೊಳ ಹೊಕ್ಕು ಜಡ್ಜ್‌ಗೆ ಯಾವುದೊ ಒಂದು ಫೈಲ್‌ ನೀಡಿ ಹಿಮಾಂಶುವೆಡೆಗೆ ಸೌಜನ್ಯಕ್ಕೂ ಕೂಡ ತಲೆಯತ್ತದೆ  
     " ಇತ ನಿರಪರಾಧಿ!!"
   ಎಂದು ಹೇಳುತ್ತಿದ್ದಾರೆ ಕೋರ್ಟ್‌ನಲ್ಲಿದ್ದ ಅಚ್ಟು ಮಂದಿಗೂ ಒಂದು ಕ್ಷಣ ಅಚ್ಚರಿ! ಆ ಗಾಡ ಕಡು ಕಪ್ಪು ಕೊಟ್‌ ಧರಿಸಿ ಮಾತಿಗಿಳಿದವರು ಕೀಶೊರ್‌ಚಂದ್ರ ಕರ್ನಾಟಕ ರಾಜ್ಯ ಕಂಡ ಹಿರಿಯ ಕ್ರೀಮಿನಲ್‌ ಲಾಯಾರ್‌ " ಟಿ ಎನ್‌  ಕೀಶೊರ್‌ಚಂದ್ರ ವಾರ್ಮ"
                                   *    *   *

    "ಸರ್ವನಾಶ ಕಂಡು ಬರುತ್ತಿದೆ"
  ಆ ಹುಣ್ಣಿಮೆಯ ರಾತ್ರಿ ಬೆಂಗಳೂರಿನ ತಲಘಟ್ಟಪುರದ ಸ್ಮಶಾನದಲ್ಲಿ ಮಾಟಗಾತಿ ಪೂಜೆ ಆರಂಭಿಸುತ್ತಿದ್ದರೆ , ಪುತ್ತೂರು ಜಮ್ಮ ಮಸೀದಿಯಲ್ಲಿ ಕುತ್ತಿದ್ದ ಮಾಂತ್ರಿಕ ಎದ್ದು ನಿಂತು ಕಿರುಚಿದ್ದ.

  ಆ ನಡುರಾತ್ರಿ ತಾನು ಮರೆತುಹೋಗಿರುವ ಕೆಲಸಗಳು ನೆನಪಿಗೆ ಬಂದದ್ದೆ ತಡ ಕಾಬಕ ಕ್ರಾಸ್‌ ಹೊಕ್ಕು ಆಳಿಕೆ ದಾಟಿ ಕಾರಂಜಿಮಳೆ ಕಾಡಿಗೆ ನಡೆದು ಬರುತ್ತಾನೆ . ಅವನದು ಮನಸ್ಸಿನ ವೇಗ . ಉತ್ತಿಟ್ಟಿದ್ದ ಶವವನ್ನು ಹೊರತೆಗೆದು ಮಾಟಗಾತಿಗೆ ಪ್ರತಿರೊದವಾಗಿ ಮತ್ತೊಂದು ಪೂಜೆ ಪ್ರಾರಂಭಿಸಿದ್ದ (ಹಿಂದೂ ಮತ್ತು ಮಸ್ಲಿಂ ಮಾಂತ್ರಿಕರ ಮಾಮಾಚರ ಜಗತ್ತಿನ ಶೈಲಿ  ಬೇರೆಯಿದ್ದರು ಅವರ ಅಂತಿಮ ಗುರಿ ಒಂದೇ ಶುದ್ರ ಸಾಧನೆ!) ತನ್ನ ಗುರುವನ್ನೂ ನೆನಪಿಸಿಕೊಂಡಿದ್ದೆ ತಡ ನೂರಾರು ಕೀಲೊ ದೂರದಲ್ಲಿದ್ದ ಮಾಟಗಾತಿ ಸುಬ್ಬಮ್ಮನ ಮೈ ನಡುಗಿತ್ತು . ಬೆಚ್ಚಿಬಿದ್ದಳು . ಅವಳಿಗೆ ತಾನು ಮಾಡಿದ ೧೪ ವರ್ಷದ ಶುದ್ರ ಸಾಧನೆಯಿಂದ ಅವಳಿಗೆ ಗೋತ್ತಾಗಿದ್ದು ಅವನು ಬಾಬಾ ಶೇಕ್‌ ಕರೀಂ ಎಂದು .

    ಪೂಜೆ ಮಾಡುತ್ತಿದ್ದ ಸುಬ್ಬಮ್ಮ ಅದೇಕೊ ಒಮ್ಮೆಲೆ ತನ್ನ ೧೪ ವರ್ಷಗಳ ಹಿಂದಿನ ಜೀವನಕ್ಕೆ ಮಾರೆಯಾಗಿದ್ದಳು . ದೂರದಲ್ಲಿದ್ದ ಕರೀಂ ಬಾಬಾ ತನ್ನ ಗುರುವನ್ನು ನೆನೆಯುತ್ತಾ ಅದೇ ಪಶ್ಚಿಮ ಬಂಗಾಳದ ಕಾಡಿಗೆ ಹೋಗಿದ್ದ!

  ಅದು  ಅದೇ ದಿನ  ಬೆಳಗಿನ ಜಾವ ೪ ಗಂಟೆ ೫ ನಿಮಿಷ . ಹಿಮಾಂಶು ಭೇಟೆಯಾಡಬೇಕೆಂದು ಕಾಯುತ್ತಿದ್ದ ಹಕ್ಕಿ ತಾನಗೆ ಪಂಜರದೊಳಗೆ ಬಂದಿತ್ತು . ಶಾಲಿನಿಯೇ ಹಿಮಾಂಶುನನ್ನು ಪ್ರೀತಿಸಿ ಅವನ ಪಂಜರದೊಳಕ್ಕೆ ಬಿದ್ದಿದ್ದಳು. ಹಿಮಾಂಶು ತನ್ನ ಗುರಿಯನ್ನು ಸಾಧಿಸೆ ಬಿಟ್ಟ ಎಂದು ಅಂದು ಕೊಳ್ಳುವ ಸಮಯದಲ್ಲಿ ಶಿವರಾಮಪ್ಪ GUN POINT   ಮಾಡಿ ಅವನ ಮುಂದೆ ನಿಂತಿದ್ದ . ಶಾಲಿನಿ ಜಸ್ಟ್‌ ಮೀಸ್‌ ಆಗಿದ್ದಳು.!!!  
                                                                  
( ಮಂದುವರೆಯುತ್ತದೆ)

13 Nov 2014

ಹುಣ್ಣಮೆಯ ನಿಶಬ್ಧ ಭಾಗ-7

          ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
  ಹುಣ್ಣಿಮೆಯ ನಿಶಬ್ಧ ಭಾಗ -1 
 ಹುಣ್ಣಿಮೆಯ ನಿಶಬ್ಧ ಭಾಗ -5
 ಹುಣ್ಣಿಮೆಯ ನಿಶಬ್ಧ ಭಾಗ-6
           ಹಿಮಾಂಶು ತಲೆಗೆ ತನ್ನ ಗನ್‌ ಪಯಿಂಟ್‌ ಮಾಡಿ ಅದಗಲೇ 16 ಗಂಟೆ ಕಳೆದಿತ್ತು . ಮಾಧ್ಯಮಗಳಲ್ಲಿ ರೈಲ್‌ ರೋಡ್‌ ಹಂತಕ ಸೇರೆಯಾದ ಯಶಸ್ಸು, ವಿಜಯೋತ್ಸವದ ವರದಿಗಳು ಬರತೊಡಗಿದವು . ಒಮ್ಮೆಲೆ DYSP ಶಿವರಾಮಪ್ಪರಿಗೆ ಗೊತ್ತಾಗಿದ್ದು ತಾನು ನಿದ್ದೆ ಮಾಡಿ ಭರ್ತಿ 34 ಗಂಟೆಗಳಗಿವೆ ಎಂದು . 'ಎಷ್ಟು ದೊಡ್ಡ ಕಾರ್ಯಚರಣೆಗೆ ಅಣಿಯಾಗಿದ್ದವುನಾವು ಆದರೆ ಹಿಮಾಂಶು ಇಷ್ಟು ಸಲೀಸಾಗಿ ಸಿಕ್ಕಿಬಿಟ್ಟನ??' No... ಅವರ ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿ ಪುಟ್ಟ ಅನುಮಾನ , ಕಾಲ ಉರಿಳಿದಂತೆ ಅ ಅನುಮಾನ ಡೊಡ್ಡದಗ್ತ ಹೊಯ್ತು.. ಹೆಮ್ಮರವಾಗಿ ಸ್ವತಃ ತಮ್ಮನ್ನೆ ನುಂಗಿಬಿಡುತ್ತೇನೋ ಅಂದುಕೊಂಡರು . ಆಗ ಮಾಧ್ಯಹ್ನ 2 ಗಂಟೆ 30 ನಿಮಿಷ.

     ನಿಶಬ್ಧವಾಗಿದ್ದ ಉಪ್ಪಾರಪೇಟೆ ಪೋಲಿಸ್‌ ಠಾಣೆಯ ಸೆಲ್‌ನೊಳಕ್ಕೆ ಕಾಲಿಟ್ಟರು ಶಿವರಾಮಪ್ಪ. ಭರ್ತಿ 16 ಕೊಲೆಗಳನ್ನು . ಅದು ಬರ್ಬರ ಕೊಲೆಗಳನ್ನು ತಾನೇ ಮಾಡಿದ್ದೇನೆ ಎಂದು ಹೇಳಿ ಒಂದಿಷ್ಟು ಅಳುಕಿಲ್ಲದೆ, ಭಯವಿಲ್ಲದೆ ಹಿಮಾಂಶುವಿನ ಕಣ್ಣುಗಳನ್ನು ನೋಡಿ ಸ್ವತಃ ಶಿವರಾಮಪ್ಪರೆ ಬೆಚ್ಚಿಬಿದ್ದರು , ಆತ ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ . ತನ್ನೊಂದಿಗೆ ತಂದಿದ್ದ ಗೋಪಲಕೃಷ್ಣ ಅಡಿಗರ ಕಾವ್ಯವನ್ನು ಸ್ಪುಟವಾಗಿ ಓದುತ್ತಾ . ಯಾವುದೋ ಯೊಚನೆಯಲ್ಲಿ ತೊಡಗಿದ್ದಾನೆ .

                                    ಹಾಡಿ ಹಾಡಿ ಬೇಸರಾಗಿ
                                   ನೆಲಕೆಸೆದಳು ಕೊಳಲನು;
                                 ಇಂದು ಮೌನದುಸುಬಿನಲ್ಲಿ
                                  ಹುಗಿದಳೆನ್ನ ಮನವನು.


ನಾಲ್ಕು ಸಾಲುಗಳಲ್ಲಿ ಸಾವಿರ ಸಾವಿರ ಅರ್ಥ!!

       ಆತನ ಕಣ್ಣಗಳನ್ನು ಗಮನಿಸಿದ ಶಿವರಾಮಪ್ಪ "ಹಿಮಾಂಶು ನಿಜಕ್ಕೂ ಕೊಲೆಗಾರನೆ?" ಅವರೊಬ್ಬರಿಗೆ ಕೇಳುವಂತೆ ಅಚ್ಚರಿಯಿಂದ , ಆತಂಕದಿಂದ , ಅನುಮಾನದಿಂದ ಕೇಳಿಕೊಂಡರು . ಅಂದು ಸಂಜೆ ನಾಲ್ಕನೆ ಹೆಚ್ಚುವರಿ ನ್ಯಾಯಧೀಶರ ಮುಂದೆ ಅಜರುಪಡಿಸಿ ಅವರ ಆಜ್ಞೆಯಂತೆ ಕೇಂದ್ರ ಕಾರಗೃಹಕ್ಕೆ ಕರೆದೊಯ್ಯುವಷ್ಟರಲ್ಲಿ ಹಿಮಾಂಶು ಕುಸಿದುಬಿದ್ದಿದ್ದ!!
                                                      ** ** **

         14 ವರ್ಷಗಳ ಸಾಧನೆಯ ನಂತರ ಮಾಟಗಾತಿ ಸುಬ್ಬಮ್ಮ ಬೆಂಗಳೂರಿಗೆ ಹಿಂತಿರುಗಿದ್ದಳು . ಅವಳು ಈಗ ಕೇವಲ ವಶೀಕರಣ ಮಾಡುವ ಮಾಟಗಾತಿಯಲ್ಲ ಅವಳು ಕಾಮಕರ್ಣ ಪಿಶಾಚಿಯನ್ನು ಒಲಿಸಿಕೊಂಡಿರುವ , ವಾಮಾಚಾರ ಲೋಕದ ಅತಿದೊಡ್ಡ ಮಾಟಗಾತಿ! ಮಾಟಗಾತಿ ಸುಬ್ಬಮ್ಮ . ಬೆಂಗಳೂರಿಗೆ ಬಂದವಳೆ ತನ್ನ ಗುರಿಯ ಬಗ್ಗೆ ನೆನೆಯುತ್ತಾಳೆ . ಅದರಲ್ಲಿ ಒಂದು ಸಾಧಿಸಿ ಆಗಿತ್ತು ಅದರೆ ಅವಳ ಹೊಟ್ಟೆಯ ಆಳದಲ್ಲೆಲ್ಲೊ ಮತ್ತೊಂದು ಗುರಿ ನೆನಪಿಗೆ ಬಂದದ್ದೆ ಕ್ರೂರಿಯಾಗಿದ್ದಳು ಅದು Alexander ರಾಜನಾಥ ಚಟರ್ಜಿಯ ಸಾವು! ಕೇವಲ ಸಾವಲ್ಲ ತಾನು ಸಾಧಿಸಿರುವ ಕರ್ಣಪಿಶಾಚಿಗೆ ನಿಡುತ್ತಿರುವ ಅತ್ಯಂತ ಕ್ರೂರ ಬಲಿ .ಹುಣ್ಣಿಮೆಯನ ನಿಶಬ್ಧ ರಾತ್ರಿಯಲ್ಲಿ ಬನಶಂಕರಿ ಸಮೀಪವಿರುವ ತಲಘಟ್ಟಪುರ ರಸ್ತೆಯ ಎಡ ಭಾಗದಲ್ಲಿದ್ದ ಸಶ್ಮಾನ ಹೊಕ್ಕಿದಳು . ತನ್ನ ಯುದ್ಧದ ಮೊದಲ ಪೂಜೆಯ ಆರಂಭ. ನಡು ವಯಸ್ಸಿನ ಹೆಂಗಸ ನೆತ್ತರಿಂದ ತಾನು ಸಾಧಿಸಿ ತಂದ ತಲೆ ಬೂರುಡೆಗಡ ಅಭಿಷೇಕ ಮಾಡಿ ಯುದ್ಧಕ್ಕೆ ಆಣಿಯಾಗುತ್ತಿದ್ದರೆ ಅದೆಲ್ಲೊ ದೂರದ ಪುತ್ತೂರಿನ ಕಾಬಕ ಕ್ರಾಸ್‌ನ ದಾಟಿದೊಡನೆ ಬಲಕ್ಕೆ ಕಾಣುವ ಜಮ್ಮ ಮಸೀದಿಯ ಕಾಳೇಗದಲ್ಲಿ ಕುತ್ತಿದ್ದ ಮುಸ್ಲಿಂ ಮಾಂತ್ರಿಕ ಅದೇಕೊ ಎರಡು ನಿಮಿಷ ನಿಶಬ್ಧವಾಗಿ ಕಣ್ಣು ಮುಚ್ಚಿದ್ದ.
  "ತಬಾಹೀ ನಜರ್‌ ಆ ರಹಾಹೈ " ಅಂತ ತನಗೊಬ್ಬನಿಗೆ ಕೇಳಿಸುವಂತೆ ಹೇಳಿಕೊಂಡ!
"ತಬಾಹೀ ನಜರ್‌ ಆ ರಹಾಹೈ " ಎರಡನೇ ಬಾರಿ ನಿಶಬ್ಧದಿಂದ ಹೊರಬಂದು ಉಗ್ರಕೋಪದಿಂದ ಇಡೀ ಮಸಿದೀಯೆ ನಡುಗುವಂತೆ ಕಿರಿಚಿಕೊಂಡ . ಬೆಂಗಳೂರಿನ ಹುಣ್ಣಮೆ ಕತ್ತಲಲ್ಲಿ ಮಾಟಗಾತಿ ತನ್ನ ಮೊದಲ ಪೂಜೆ ಪ್ರಾರಂಬಿಸಿ್ದದಳೆ . ಯುದ್ಧದ ಆರಂಭ! ತನ್ನ ಕೆಲಸ ಶುರುವಾಯ್ತು ಅಂದುಕೊಂಡವನೆ ಕಣ್ಣಮುಚ್ಚಿ ಒಂದೇ ಸಮ ಯಾವುದೋ ಮಂತ್ರವನ್ನು ಸ್ಫುಟವಾಗಿ ಹೇಳಿ ಎದ್ದು ನಿಂತು ಮತ್ತೊಮ್ಮೆ ಹೇಳಿಕೊಂಡ

 "ತಬಾಹೀ ನಜರ್‌ ಆ ರಹಾಹೈ "

   "ಸರ್ವನಾಶ ಕಂಡು ಬರ‍್ತಿದೆ!!" 

                                                                                               ( ಮುಂದುವರೆಯುತ್ತದೆ-to be continued)

11 Nov 2014

ಹುಣ್ಣಮೆಯ ನಿಶಬ್ಧ ಭಾಗ- 6

        ಕತೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡ   ಹುಣ್ಣಿಮೆಯ ನಿಶಬ್ಧ ಭಾಗ -1  
 ಹುಣ್ಣಿಮೆಯ ನಿಶಬ್ಧ ಭಾಗ -5

        ಓಲವೇ ಜೀವನ ಸಾಕ್ಷತ್‌ಕಾರ...! ಹಾಡು ಕೇಳಿದೊಡನೆ ದಶಕಗಳ ಹಿಂದಿನ ನೆನಪಿಗೆ ಹೋಗಿದ್ದ ಹಿಮಾಂಶು ಪುನಃ ವಾಸ್ತವಕ್ಕೆ ಇಳಿಯುತ್ತಾನೆ , ರೌದ್ರ ರಮಣೀಯವಾಗಿದ್ದ ನಲ್ಲಮಲ ಅರಣ್ಯದಲ್ಲಿ ರಾತ್ರಿ 11 ಗಂಟೆ 15 ನಿಮಿಷದ ಕತ್ತಲೆಯಲ್ಲಿ ಅವರಿಬ್ಬರು ಕರಗಿ ಹೋಗಿದ್ದರು..

   ಇತ್ತ ರಾತ್ರಿ 11  ಗಂಟೆ 17 ನಿಮಿಷ ನಿದ್ದೆಯಿಲ್ಲದ ಕಣ್ಣುಗಳಲ್ಲೆನೊ ಯಶಸ್ಸು ಸಿಕ್ಕಿದ ಸಂತೋಷ ನಲಿಯುತ್ತಿತ್ತು.. ಕೇವಲ 22 ಗಂಟೆ.. Just 22 hours! ಇಡೀ ಅಂಧ್ರ-ಕರ್ನಾಟಕ ಪೋಲಿಸರಿಗೆ ತಲೆ ನೋವಗಿದ್ದ ಹಂತಕ ಸೆರೆಯಾಗುತ್ತಾನೆ ಅಂತ ACP ಪ್ರತಾಪ್‌ ಕುಮಾರ್‌ ಯೋಚಿಸುತ್ತಿದ್ದರೆ ಎದುರಿಗೆ ಕುತ್ತಿದ್ದ ಬೆಂಗಳೂರು ಇತಿಹಾಸ ಕಂಡ ಅತ್ಯಂತ ಟಾಫ್‌ ಕಾಪ್‌ DYSP ಶಿವರಾಮಪ್ಪ ನಾಳಿನ ಪ್ಲೆನ್‌ಗಳ ಸಂಪೂರ್ಣ ವಿವರಗಳನ್ನು ನೀಡುತ್ತಿದ್ದರು.. ಕೇವಲ ಇನ್ನು 7 ಗಂಟೆಯಲ್ಲಿ ಪೋಲಿಸರೆಲ್ಲ ತಮ್ಮ ಕಾರ್ಯಚರಣೆಗೆ ಸಜ್ಜಗಬೇಕು . ಅದರೆ  DYSP ಶಿವರಾಮಪ್ಪ  ಬೇರೆನೊ ಪ್ಲೆನ್‌ನಲ್ಲಿದ್ದರು. ಅದು ಕೇವಲ ACP ಪ್ರತಾಪ್‌ ಕುಮಾರ್‌ ಮತ್ತು ಅವರು ಈ ಕಾರ್ಯಚರಣೆಯಲ್ಲಿ ತೊಡಗುವುದು ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮುಂದೆ ವಿವರಿಸುತ್ತಿದ್ದರೆ . ಮುಖ್ಯಮಂತ್ರಿಗಳಿಗೆ ಒಂದು ಕ್ಷಣ ದಿಗಿಲು ಬಡಿದಿತ್ತು... ಕೇಲವೆ ನಿಮಿಷದಲ್ಲಿ ಅವರ ಕಾರ್ಯಚರಣೆಯ ಶೈಲಿ ಬದಲಾಗಿತ್ತು.. DYSP ಶಿವರಾಮಪ್ಪ ಎಲ್ಲಾರ ಊಹೆಗೂ ನಿಲುಕದ ದೊಡ್ಡ ಕಾರ್ಯಚರಣೆಗೆ ಅಣಿಯಾಗಿದ್ದರು..

     ತಮಗೆ ಸಿಕ್ಕಿದ ಸಿಸಿ-ಟಿವಿ ದೃಶ್ಯಗಳಲ್ಲಿ ಅವರು ಕಂಡಿದ್ದು ಒಂದು ನಾಯಿ.. ಹುಲಿ ಗಾತ್ರದ ನಾಯಿ ಕೊಲೆಯಾದ ದಿನವೆಲ್ಲ ರೈಲ್ವೆ ನಿಲ್ದಾಣದಲ್ಲಿ ಓಡಡುತ್ತಿತ್ತು... ಸಿಸಿ-ಟಿವಿಯಲ್ಲಿ ಅವರಿಗೆ ಸಿಕ್ಕ ಮತ್ತೊಂದು ದೃಶ್ಯದಲ್ಲಿ ಕಂಡಿದ್ದು ಒಂದು ಆಕೃತಿ.. ಮತ್ತೆ ಮತ್ತೆ ಹಲವು ಸಿಸಿ-ಟಿವಿಯಲ್ಲಿ ಕೊಲೆಯಾದ  ಅಷ್ಟು ದಿನದಲ್ಲಿ ರೈಲಿನಲ್ಲಿ ಕಾಣಿಸಿಕೊಂಡಿದ್ದ ಆಕೃತಿ ಯಾರು ಎಂದು ತಿಳಿಯಲು ಕಷ್ಟವಾಗಿರಲಿಲ್ಲ.. ಅ ಆಕೃತಿಯ ಹೆಸರು "ಹಿಮಾಂಶು!!"
  
                    ಒಡೆದು ಬಿದ್ದ ಕೊಳಲು ನಾನು
                    ನಾದ ಬರದು ನನಲ್ಲಿ..!!

       ವಾಸ್ತವಕ್ಕೆ ಇಳಿದ ಹಿಮಾಂಶುವಿಗೆ ಆಗ ತಾನೇ ತಾನು ಓದುತ್ತಿದ್ದ ಅಡಿಗರ ಕಾವ್ಯ ನೆನಪಾಗಿ ಗದ್ಗತಿತನಾದ.. ಅಷ್ಟು ರುದ್ರ ನಲ್ಲಮಲ ಅರಣ್ಯದಲ್ಲೆನೊ ನೀರವ ಮೌನ..! ಅಲ್ಲಿ ಇದ್ದದ್ದು ಹಿಮಾಂಶು , ಶಾಲಿನಿ ಮತ್ತು ಮೊಡದ ಮರೆಯಲ್ಲಿ ಮರೆಯಾಗಿ ನಾಳಿನ ಹುಣ್ಣಿಮೆಗೆ ಸಿದ್ದನಾಗಿದ್ದ ಚಂದ್ರ! ಹಿಮಾಂಶುವಿಗೆ ಭಾವನೆಗಳು ಉಕ್ಕಿ ಸುನಾಮಿ ಅಲೆಗಳು ಅಪ್ಪಳಿಸುವ ಹಾಗೆ ಒಮ್ಮೆಲೆ ಅಪ್ಪಳಿಸಿದವು... ತನಗೆ ತಿಳಿಯದಂತೆ ಹಿಮಾಂಶು ಶಾಲಿನಿಯನ್ನು ಅ ಕತ್ತಲ ಕಠೋರ ರಾತ್ರಿಯಲ್ಲಿ ತಬ್ಬಿ ಅತ್ತುಬಿಟ್ಟಿದ್ದ. ನಲ್ಲಮಲ ಅರಣ್ಯದಲ್ಲಿ ಕಾಲ ಸ್ತಭ್ದಗೊಂಡಿತ್ತು..!    ನಿರವ ಮೌನ ಅವರಿಸಿತು . ಅದು ಅವರು ಶೈಕ್ಷಣಿಕ ಪ್ರವಾಸಕ್ಕೆ ಬಂದ ಕೊನೆಯದಿನ . ಮರುದಿನ ಅವರು ಪುನಃ ಟ್ರೇನ್‌ನಲ್ಲಿ ಬೆಂಗಳೂರಿಗೆ ತಲುಪಬೇಕಿತ್ತು .

   ಅ ಕತ್ತಲ ರಾತ್ರಿಯಲ್ಲಿ ಅವರೇನು ಮಾತಾಡದೆ ಸುಮ್ಮನೆ ಕುಳಿತುಬಿಟ್ಟರು . ಕಣ್ಣಗಳೊಳಗಿನ ಅವನ ಮೃದುತ್ವ ಶಾಲಿನಿಯ ಅಪರೂಪ ಸೌಂದರ್ಯವನ್ನು ಸುಮ್ಮನೆ ದಿಟ್ಟಿಸುತ್ತಿತ್ತು . ಅದರಲ್ಲಿ ಆಸೆಯಿರಲಿಲ್ಲ , ಅವಸರದ ಛಾಯೆ ಇರಲಿಲ್ಲ . ಆಸಲು ಪ್ರಶ್ನೆಗಳೇ ಇರಲಿಲ್ಲ.. ಅಲ್ಲಿ ಇದ್ದಿದ್ದು ಕೇವಲ ಆರಾದನೆ.. ಶಾಲಿನಿಯ ಆರಾದನೆ... ಅವಳ ಪ್ರೀತಿಯ ಆರಾದನೆ. ಮಾತೆ ಮರೆಸುವ ನೀರವ ಮೌನ ರಾತ್ರಿ 12:10 ರವರೆಗು ಸುಮ್ಮನೆ ಕುಳಿತು ಒಬ್ಬರನೊಬ್ಬರು ನೋಡುತ್ತಿದ್ದರು . ನಂತರ ಅವರಿದ್ದ ರೂಮಿನಿಂದ ಬಂದ ಶಬ್ದದಿಂದಾಗಿ ಇಬ್ಬರು ಆತುರಾತುರವಾಗಿ ಕಣ್ಣಿನಲ್ಲೆ ಬೆಳಗ್ಗೆ ಸಿಗುತ್ತೆನೆಂದು ಮಿಂಚಂತ್ತೆ ಮಾಯಾವಾಗುತ್ತಾರೆ
..
    ಸಾಲು ಸಾಲು ಸಾವುಗಳಿಗೆ ಸಾಕ್ಷಿಯಾಗಿದ್ದ ಪ್ರಶಾಂತಿ ಎಕ್ಸ್‌ಪ್ರೇಸ್‌ ಒಡಿಶಾದ ಭುಭನೇಶ್ವರದಿಂದ ಅಂಧ್ರದ ಮೂಲಕ ಬೆಂಗಳೂರಿಗೆ ಬರಲು ಸಜ್ಜಗುತ್ತಿತ್ತು . ಸಮಯ ಬೆಳಗ್ಗೆ 8 ಗಂಟೆ 30 ನಿಮಿಷ ಕಪ್ಪು ಸುಂದರಿ  ಪ್ರಶಾಂತಿ ಎಕ್ಸ್‌ಪ್ರೇಸ್‌ ಹೊಗೆಯನ್ನು ಹೊರಹಾಕುತ್ತ ಬೆಂಗಳೂರಿನೆಡೆಗೆ ಬರುತ್ತಿತ್ತು .ಅಷ್ಟು ಜನರ ಮಧ್ಯ ಶಾಲಿನಿ ಮತ್ತು ಹಿಮಾಂಶು ನಿಚ್ಚಳ ಮೌನದಿಂದ ಏನು ಮಾತಾಡಿರಲಿಲ್ಲ . ಭುಭನೇಶ್ವರದಿಂದ ಟ್ರೇನ್‌ ಬಿಟ್ಟೊಡನೆ ಪೋಲಿಸರು ಆಲರ್ಟ್ ಆಗುತ್ತಾರೆ . ಮಫ್ತಿಯಲ್ಲಿದ್ದ ಪೋಲಿಸರು ಕ್ಷಣ ಕ್ಷಣದ ಮಾಹಿತಿಯನ್ನು ವಿಶಾಕಪಟ್ಟಣದಲ್ಲಿದ್ದ ಇಬ್ಬರು ದೈತ್ಯ ಪೋಲಿಸರಿಗೆ ನೀಡುತ್ತಾ ಅವರ ಗಮನಕ್ಕೆ ಬಂದದ್ದು ಇಂದು ಹುಣ್ಣಿಮೆಯಂತ! ಭುಭನೇಶ್ವರದಿಂದ ಭ್ರಮ್ಮಪುರ ದಾಟಿ ಅಂಧ್ರದ ಗಡಿಹೊಕ್ಕು ಸುಮಾರು ಮದಾಹ್ನ 12:10ಕ್ಕೆ ಶ್ರೀಕಾಕುಳಂಗೆ ಟ್ರೇನ್‌ ಬಂದು ನಿಂತಿತ್ತು , ಅದೇ ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ಬೆಂಗಳೂರಿನ ಸೆಂಟ್‌ ಡೇವಿಡ್‌ ಕಾಲೇಜು ವಿದ್ಯಾರ್ಥಿಗಳಲ್ಲೆ ಪ್ರಯಾಣ ಬೆಳೆಸಿದರು.. ಅದರಲ್ಲಿ ಹಿಮಾಂಶು ಅಂತ ಒಬ್ಬ ಹಂತಕನಿದ್ದ ಎಂದು ಗೊತ್ತಿದ್ದು ಕೇವಲ ಇಬ್ಬರಿಗೆ ACP ಪ್ರತಾಪ್‌ ಕುಮಾರ್‌ ಮತ್ತು DYSP ಶಿವರಾಮಪ್ಪ ! 

   ಟ್ರೇನ್‌ ಶ್ರೀಕಾಕುಳಂನಿಂದ ಒಂದು ಗಂಟೆಯೊಳಗೆ ವಿಶಾಕಪಟ್ಟಣಕ್ಕೆ ಬಂದಿತ್ತು . ಅಷ್ಟು ಹೀನಾಯ ಕೊಲೆಗಳನ್ನು ಕಂಡಿದ್ದ ಟ್ರೇನ್‌  ಒಳಕ್ಕೆ ಆಗ ಹತ್ತುತ್ತಾರೆ ACP ಪ್ರತಾಪ್‌ ಕುಮಾರ್‌ ಮತ್ತು DYSP ಶಿವರಾಮಪ್ಪ . ಟ್ರೇನ್‌ ನಿಚ್ಚಳವಾಗಿ ತನ್ನ ಪಥದಲ್ಲಿ ಸಮುದ್ರ ಗಾಂಭಿರ್ಯ ಮರೆಯುತ್ತಾ ಹೋಗುತ್ತಿದ್ದರೆ ಅಲ್ಲಿದ್ದ ನಾಲ್ಕು ಜನರ ತಲೆಯಲ್ಲಿ ಲಕ್ಷ ಲಕ್ಷ ಯೋಚನೆ.. ಪ್ರಶಾಂತಿ ಎಕ್ಸ್‌ಪ್ರೇಸ್‌ ಗುಂಟುರು ತಲುಪುವಷ್ಟರಲ್ಲಿ ಕತ್ತಲು ಕವಿದಿತ್ತು . ಹುಣ್ಣಿಮೆಯ ಚಂದ್ರ ತನ್ನ ಸೌಂದರ್ಯವನ್ನು ಬಿರುತ್ತಿದ್ದ . ಕತ್ತಲ ರಾತ್ರಿಯಲ್ಲಿ ಟ್ರೇನ್‌ ಗುಂಟುರು ದಾಟಿದರು ಶಾಲಿನಿ-ಹಿಮಾಂಶುವಿನ ನಡುವೆ ಒಂದೇ ಒಂದು ಮಾತಿರಲಿಲ್ಲ . ನಿಶಬ್ಧವಾಗಿದ್ದ ಹಿಮಾಂಶು . ಅವನೊಳಗಿದ್ದ ಹಂತಕ ಸತ್ತುಹೋಗಿದ್ದಾನ.?? ಟ್ರೇನ್‌ ಧರ್ಮವರಂ ಜಂಕ್ಷಣ್‌ ದಾಟಿ ಅನಂತಪುರಕ್ಕೆ ತಲುಪಲು ಐದು ನಿಮಿಷ ಬಾಕಿಯಿತ್ತು. ಹಿಮಾಂಶುವಿನ ತಲೆಗೆ ತನ್ನ ಗನ್‌ point ಮಾಡ್ತ ನಿಂತುಬಿಟ್ಟಿದ್ದರು DYSP ಶಿವರಾಮಪ್ಪ.. ತಾವು ಊಹಿಸಿದಂತೆ ಹಿಮಾಂಶು ಮರು ಹೊರಟ ಮಾಡುತ್ತಿಲ್ಲ ಅಂತ ಹೊತ್ತಗಿದ್ದೆ ತಡ ಅವನನ್ನು ನಯಾವಾಗಿ ಅರೆಷ್ಟ್ ಮಾಡಿದ್ದರು ACP ಟೈಗರ್‌ ಪ್ರತಾಪ್‌ ಕುಮಾರ್‌ . ರಣಹದ್ದಿನಂತೆ ಕಾಯುತ್ತಿದ್ದ ಮಾಧ್ಯಮಗಳಲ್ಲಿ ಬ್ರೇಕಿಂಗ್‌ ನ್ಯೂಸ್‌  ಬರುತ್ತಿದ್ದರೆ ಪ್ರಶಾಂತಿ ಎಕ್ಸ್‌ಪ್ರೇಸ್‌ ಖುಷಿಪಡುತ್ತಿತ್ತೆನೋ...??

 Gun point ಮಾಡಿಸಿಕೊಂಡು ಕುಳಿತ್ತಿದ್ದ ಹಿಮಾಂಶುನನ್ನು ನೋಡಿ ಶಾಲಿನಿ ಬೆಚ್ಚಿಬಿದ್ದಿದ್ದಳು! "ಹಿಮು...." ಅಂತ ಚಿರಲು ಪ್ರಯತ್ನಿಸಿದಳಾದರು ಅವಳ ಬಾಯಿಯಿಂದ ಶಬ್ದ ಹೊರಬರಲಿಲ್ಲ . ಶಾಲಿನಿಯ ಹಿಮು ಅರೆಷ್ಟ್‌ ಆಗಿದ್ದ . ಎರಡು ಕೈಗಳನ್ನು ಮೆಲೆತ್ತಿ ಶಾರಣಾಗಿ ಬಿಟ್ಟಿದ್ದ ಹಿಮಾಂಶು..! ಅಷ್ಟು ಕೊಲೆಗಳನ್ನು ತಾನೆ ಮಾಡಿದ್ದು ಎಂದು ಮೇಜಸ್ಟಿಕ್‌ನ ಕೂಗಳತೆಯಲ್ಲೆ ಇದ್ದ ಉಪ್ಪಾರಪೇಟೆ ಪೋಲಿಸ್‌ ಸ್ಟೇಷನ್‌ನ ಸೆಲ್‌ನಲ್ಲಿ ಮೌನದಿಂದಲೆ ಹೇಳುತ್ತಿದ್ದಾನೆ ..

  ಹಿಮಾಂಶು ನಿಜಕ್ಕೂ ಕೊಲೆಮಾಡಿದ್ದನಾ..? ಹಿಮಾಂಶು ನಿಜಕ್ಕೂ ಹಂತಕನ...? ಹಿಮಾಂಶು ಶಾರಣಾಗಿದ್ದಾದ್ದರು ಏಕೆ..??


   ನಡೆದಿದ್ದ 16 ಬಲಿಗೆ ಆ ಒಂದು ನಾಯಿ ಸಾಕ್ಷಿಯಾಗಿತ್ತು . 17ನೇ ಬಲಿ ಏಕೋ ಮಾಟಗಾತಿ ಸುಬ್ಬಮ್ಮನಿಗೆ ದೊರೆಯುವಂತಿಲ್ಲ ಅ ಹುಣ್ಣಿಮೆಯಲ್ಲಿ ಆಕೆ ನಡುವಯಸ್ಸಿನ ಹೆಂಗಸ ಬಲಿ ಪಡೆದಿಲ್ಲವೆಂದರೆ ತಾನು  14 ವರ್ಷಗಳಿಂದ ಮಾಡಿದ ಪೂಜೆ ವ್ಯರ್ತವಾಗಿ ಹೋಗಲಿದೆ ಎಂಬುದು ಅವಳಿಗೆ ಅರ್ಥವಾಗಿತ್ತು.. ಹುಲಿಯಂತಿದ್ದ ನಾಯಿ ಶಾಲಿನ ಅಂಧ್ರಕ್ಕೆ ಹೊದಗಲಿಂದಲು ಅವಳ ಮನೆಯ ಮುಂದೆಯೆ ಇತ್ತು..ಇದು ಶಾಲಿನಿ  17ನೇ ಬಲಿಯಾಗುವ ಸೂಚನೆಯಾ...???
                                                                                               (ಮುಂದುವರೆಯುತ್ತದೆ-To be continued)

7 Nov 2014

ನೆನಪುಗಳ ನಡುವೆ..

      ಜಿಡಿ ಜಿಡಿ ಮಳೆ ಬಿಟ್ಟುಬಿಡದೇ ತನ್ನ ಸೌಂದರ‍್ಯವನ್ನು ತೋರುತ್ತಿತ್ತು. ಮಳೆಯ ನಡುವೆ ಕಾಲೇಜಿನಿಂದ ಮನೆಗೆ ಬರಲು ಅದೇ ೬೧ 'ಬಿ' ಬಸ್ಸ್ ಹತ್ತಿದ್ದೆ ತಡ ಯಾಕೋ ನಿನ್ನ ನೆನಪುಗಳು ಸಮುದ್ರ ಅಲೆಯಂತೆ ಒಂದೆ ಸಮ ತುರಿಬಂದು ನನ್ನ ಮನಸ್ಸಿನಲ್ಲಿ ನೆಲೆಸಿತು . ನಿನ್ನ ನೋಡಿ ಭರ್ತಿ ಒಂದು ವರ್ಷವಾಗಿತ್ತು ಎಂದು ಅರಿತ್ತದ್ದೆ ತಡ ನನ್ನ ಕಣ್ಣಹನಿ ನೆಲದ ಮೇಲೆ ಬಿದ್ದು ಹಿಂಗುಹೋಗಿತ್ತು . ಅದೆಕೋ ಗೊತ್ತಿಲ್ಲ ತುಂಬಾ ಭಾವುಕನಾಗಿಬಿಟ್ಟೆ . ಬಸ್ಸಿನಲ್ಲಿ ಪುಟ್ಟ ಮಗು ಅಳುವಂತೆ ಕಣ್ಣಿರಾಕುತ್ತಾ ಈ ಜಗತ್ತಿಗೆ ನಾಚಿ ತಲೆತಗ್ಗಿಸಿದೆ.....

      ನಿನ್ನ ಮುದ್ದು ಮದ್ದು ನಗು , ಕೆನ್ನೆಯ ಮೇಲೆ ಬಿಳುತ್ತಿದ್ದ ಪುಟ್ಟ ಗುಳಿ , ನಿನ್ನ ಮುಂಗುರುಳು , ನಿನ್ನ ಹಣೆಯಮೇಲೆ ಇದ್ದ ಪುಟ್ಟ ಬಿಂದಿ ನನ್ನ ಕಣ್ಣಮುಂದೆ ಬಂದು ಅಣಕಿಸುತ್ತಿದ್ದವು . ಭಾವನೆಗಳ ಮಹಾಪೂರ ತಡೆಯಾಲಾಗದೆ ಬಸ್ಸಿನಲ್ಲೆ ಈ ಪತ್ರ ಬರೆಯಲು ಶುರುಮಾಡಿದೆ.. ನೀನು ಓದುತ್ತೀಯಾ ? No , never.. ನಾನು ನಿನಗಾಗಿ ಬರೆದ ಒಂದು ಪತ್ರ , ಒಂದೇ ಒಂದು ಕವನವನ್ನು ಕೂಡ ಓದಲಿಲ್ಲ ನೀನು... ಬರೆಯುವುದುಬಿಟ್ಟು ನನಗೇನು ಗೋತ್ತು ಜಸ್ಟ್ ನನಗಾಗಿ(?) ಬರೆಯಬೇಕಷ್ಟೆ . ಆರು ವರ್ಷಗಳ ಹಿಂದೆ ಇಂತಹುದೆ ಜಿಡಿ ಜಿಡಿ ಮಳೆ ಬರುತ್ತಿತ್ತೇನೊ, ಸ್ಕೂಲ್ ಬಿಟ್ಟು ಇದೇ ೬೧'ಬಿ' ಬಸ್ ಹತ್ತಿ ಮನೆಗೆ ಬರುತ್ತಿದ್ದಾಗ ನೀ ಕಂಡಿದ್ದೆ . ಇದೆ ಡಿಸೆಂಬರ್‍ ಬಂದರೆ ನನ್ನ ನಿನ್ನ ಈ ಅಪೂರ್ವವಾದ ಹಂಬಲಕ್ಕೆ ಆರು ವರ್ಷ ತುಂಬು ಹರಿಯ.. ಅದರೆ ನಿನಗೊಂದು Thnaks ಹೇಳಲೆಬೇಕು ನಾನು ಮೊದಲಬಾರಿಗೆ ಇಂತಹುದೇ ಒಂದು ಪತ್ರ ಕೇವಲ ನಿನಗಾಗಿ ಬರೆದಿದ್ದೆ , ಈಗ ಇಂತಹುದೇ ೨೦ ಪತ್ರ ಬರೆದಿರಬಹುದು ಅದರಲ್ಲಿ ಒಂದು ಕೂಡ ನೀನು ಓದಿಲ್ಲ.

      ಈ ಜಡಿ ಮಳೆ ಯಾಕೋ ಒಂದೇ ಸಮನೇ ಬಿಳುತ್ತಿತ್ತು, ವಿಜಯನಗರದಲ್ಲಿ ಇಳಿಯಬೇಕಾದ ನಾನು ಅದೇಕೊ ಇಂದು ಇಳಿಯಲಿಲ್ಲ , ಬಸ್ಸು ಸೀದ ನಾವಿಬ್ಬರು ಕೂತು ಮಾತಾಡುತ್ತಿದ್ದ ಸರಸ್ವತಿ ನಗರ್‌ ಬಸ್‌ಸ್ಟಾಪಿಗೆ ಬಂದು ನಿಂತಿತು. ಅದೇ ಬಸ್‌ಸ್ಟಾಪ್ , ಅದೇ ಮರ , ಅದೇ ಬೇಂಚೂ ಅದೆಷ್ಟು ಸಾಲಿ ಈ ಹಿಂದೆ ನೋಡಿದ್ದೆನೋ , ಅದರೇ ಇಂದೆಕೋ ಅವುಗಳ ಮೇಲೆ ಭಾವನೆಗಳು ಉಕ್ಕಿ ಬರುತ್ತಿತ್ತು . ನಿನ್ನ ಸಾವಿರ ಸಾವಿರ ನೆನಪುಗಳು ಒಂದೇ ಸಮನೇ ಕಾಡುತ್ತಿತ್ತು .

                                             ಕಾಡುವ ಗೆಳತಿ ಕಾದಿರುವೆ ನಿನಗಾಗಿ,
                                       ಕಾದು ಕಾದು ಸಾಕಾಯ್ತು ಮನದ ಮಾಯಾವಿ..


 -ಮಳೆಯನ್ನೂ ಲೆಕ್ಕಿಸದೆ ನಾವಿಬ್ಬರೂ ನಡೆದುಹೋಗುತ್ತಿದ್ದ ಖಾಲಿ ರಸ್ತೆಯಲ್ಲಿ ನಿನ್ನ ನೆನಪಿನ ಭಾವಗಳ ಜೊತೆ ಹೆಜ್ಜೆ ಹಾಕುತ್ತಿದ್ದೆ . ಅದೆಲ್ಲೊ ನನ್ನ ಮನಸ್ಸಿನಲ್ಲಿ ಕಳೆದುಹೋಗಿದ್ದ ಕವಿತೆ ನೆನಪಿಗೆ ಬಂದದ್ದೆ ತಡ ಮತ್ತಷ್ಟು ಭಾವುಕನಾದೆ , ಮಳೆಯ ಜೊತೆ ನನ್ನ ಕಣ್ಣಹನಿ ನೆಲಕ್ಕೆ ಬಿದ್ದು ಮರೆಯಾಗಿತ್ತು... ಅದರೇ ನಿನ್ನ ನೆನಪುಗಳು????

ಹೇಳದೇ ಉಳಿದ ಮಾತುಗಳು
ಬರೆಯದೇ ಉಳಿದ ಪದಗಳು
ಜೋಡಿಸಿ ಬರೆಯಲೇ ನಾಕು ಸಾಲು
ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು 

ಬರೆದು ಬಿಟ್ಟ ಕವಿತೆ ಇದು..
ಹೇಗೆ ನಿಡಲಿ ನಿನಗೆ!!
ಎಲ್ಲಿ ಮರೆಯಾಗಿದ್ದಿ ಹುಡುಗಿ ನನ್ನ ಬಿಟ್ಟು..
ನನ್ನೀ ಕವಿತೆಗಳ ಬಿಟ್ಟು!!

ಕಾಡೋ ಚಳಿಗೂ ಅರೆಪಾವು
ಹೆಚ್ಚು ಕಾಡುವ ನಿನ್ನ ನೆನಪುಗಳಿಗೆ
ರೂಪ ನೀಡಿ ಬರೆಯುತ್ತಿದ್ದೆನೆ ಈ ಕವಿತೆಗಳನ್ನು...

                                                                      -ಮಂಜುನಾಥ್

5 Nov 2014

Someone...!

There is someone, made only for you,
To guide you on a small journey called life.

There is someone, to take care of you,
That will walk with you for whole life.

There is someone, which thinks of time shared with you,
And always leave you with loving words.

There is someone, that can read your mind very well,
Even though you are unable to express it.

There is someone, more trust worthy,
To share your feelings, happiness, sorrow…..

There is someone, which will always treat you alike
Putting aside the differences in character.

There is someone that will always be inspiration for you,
Like a ray of light cutting the black stratum of sky whilst dawn.

Words will fall short to write about someone,
But I feel everyone should have the experience of someone;
To state someone
Dedicated to someone ;)

26 Oct 2014

ಬರೆದೆನು ನಾನು ಕವಿತೆಯನು..!

ನಿನನ್ನು ಕಂಡು,
ನಿನನ್ನು ನೆನೆದು,
ನಾನಾದೆ ಅಂದು ಕವಿಯು!

ನಿನನ್ನು ಪ್ರೀತಿಸಿ,
ನಿನನ್ನು ಭ್ರಮಿಸಿ,
ಬರೆದೆ ನಾನು ಕವಿತೆಯನು!

ನಿನನ್ನು ನೆನೆದು,
ನಿನಗಾಗಿ ಬರೆದು,
ಕೊಡುವೆನು ನನ್ನ ಕವಿತೆಯನು!

ನಿನನ್ನು ನೋಡಿ,
ನಿನನ್ನು ಕೂಡಿ,
ಬರೆಯುವೆನು ನಾನು ಪ್ರೇಮ ಗೀತೆಯನು!

ನಿನನ್ನು ಕಾಡಿ,
ನಿನನ್ನು ಬೇಡಿ,
ಆಗುವೆನು ನಾನು ಪ್ರೇಮಿಯು!!
                                                    -ಮಂಜುನಾಥ್

ಅವಳ ನೆನಪಲ್ಲಿ - 9

ನನ್ನ ಕವಿತೆಗಳಿಗೆ ಸ್ಪೂರ್ತಿಯು ನೀ..
ನನ್ನ ಮನಸ್ಸಿಗೆ ರಾಣಿಯೂ ನೀ..
ನಿನಗಾಗಿ ಬರೆಯಲೇ ನಾಲ್ಕು ಸಾಲು
ನನ್ನದೆಯಲಿ ಮುಡಿನಿಂತ ಪ್ರತಿ ಸಾವಲು!!

ನೀನು ನನಗೆ ಮರೆಯಾಲಗದ ಹೂವು
ಬಣ್ಣಿಸಲಾಗದ ನೋವು
ಕಾಣಿಸಿದ್ದು ವರ್ಷದ ಹಿಂದೆ
ಮುಗ್ನಗೆ ಸುಸುತ್ತಾ ನನ್ನ ಮುಂದೆ!!

ಕವಿತೆಯೊಳಗು ನಿನ್ನ ಛಾಯೆ
ನಿನ್ನ ಪ್ರೀತಿ ಬರೀಮಾಯೆ..
ಬರೆಯಲಾಗುತ್ತಿಲ್ಲ ಕವಿತೆಯ ಸಾಲು
ಬಣ್ಣಿಸಲಾಗಿಲ್ಲ ನನ್ನ ಸಾವಲು!!

ಪ್ರೀತಿಯಿಲ್ಲದ ಕರಿದರೆ ಹೇಗಾದರು ಬಂದೀತೆ ಕವಿತೆ
ಪ್ರೀತಿಯಿಲ್ಲದೆ ಬರಿದರೆ ಅದು ಅದೀತೆ ಕವಿತೆ
ಬರೀ ಭಾವನೆಗಳನ್ನು ಎದೆಯೊಳಗೆ ಬಚ್ಚಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                                                              ನಿನಗಾಗಿ...ನಿನ್ನ ಪ್ರೀತಿಗಾಗಿ..!

25 Oct 2014

ಮನಸ್ಸು ಗಾಂಧಿಬಜಾರು - Manassu Gandhibazaru !!

ಮನಸ್ಸು ಗಾಂಧಿಬಜಾರು
ಅಲ್ಲಿ ಯೋಚನೆಗಳು ನೂರು , ಬ್ರೇಕಿರದ ಕಾರು
.

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ !!
ಗಾಂಧಿಬಜಾರ್‌ನ ಸಂಜೆ ಚುಮು ಚುಮು ಚಳಿ,
ಬಿಸಿ ಬಿಸಿ ಕಾಫಿ , ಗಿಜಿ ಗಿಜಿ ಟ್ರಾಫಿಕ್ಕು , ಲೈಬ್ರರಿಯ ಕಳ್ಳ ನೋಟ .

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಅದು ಕಾಲೇಜು ಹುಡುಗಿಯ ಇಣುಕು ನೋಟ ,
ವಿದ್ಯಾರ್ಥಿ ಭವನ್‌ನ ದೋಸೆ , ರೋಟಿ ಘರ್‌ನ
ಇಡ್ಲಿ , ಕೋಟ್ರೆಶ್ವರನ ಬೆಣ್ಣೆ ಮಸಾಲೆ ; ಪ್ರೇಮಿಗಳ
ಊಸಿ ಊಸಿ ನಗೆ!!

ಗಾಂಧಿಬಜಾರ್‌ನ ಸಂಜೆ ಪ್ರಕೃತಿಯ ವೈಭವವಲ್ಲ
ಅದು ಡಿವಿಜಿ ರಸ್ತೆಯ ಬಿಸ್‌ನೆಸ್ಸು , ಬಿಬಿಸಿಯ ಬ್ಯೂಝಿನೆಸ್ಸು !!
ಗಾಂಧಿಬಜಾರು ನ್ಯಾ‍‍ಷನಲ್ ಕಾಲೇಜು ಹುಡುಗಿಯರನ್ನು
ಕದ್ದು ನೋಡಿದ್ದು , ಬ್ಯೂಗಲ್ ರಾಕ್ ಮೇಲೆ ನಿಂತು ಕೂಗಿದ್ದು !!

ಮನಸ್ಸು ಗಾಂಧಿಬಜಾರು
ಅಲ್ಲಿ ಯೋಚನೆಗಳು ನೂರು , ಬ್ರೇಕಿರದ ಕಾರು  ಮತ್ತು ಅವಳ ನೆನಪು.. !!

24 Oct 2014

ಅವಳ ನೆನಪಿನಲ್ಲಿ - 8

ಅವಳ ನೆನಪಿನಲ್ಲಿ ಬರೆಯಲು ಕೂತೆ ,
ಈ ವಾರದ ಕವಿತೆಗಳ ಕಂತನ್ನ;
ಅವಳ ನೆನಪಿಗೆ ಅಕ್ಷರ ರೂಪ
ಕೊಡುವುದು ಕಷ್ಟವೆನಿಸಲಿಲ್ಲ ;
ಆದರೆ ಅವಳ ನೆನಪೇ ಇಂದು ಭಾರವಾಗಿತ್ತು .

ದೀಪಾವಳಿಯ ಹಣತೆ ಉರಿಯುತ್ತಿತ್ತು ;
ನೆನಪು ಕೆರಳುತ್ತಿತ್ತು ;
ಈ ಜುಮು ಜುಮುಚಳಿಯಲ್ಲಿ
ಅವಳಿದಿದ್ದರೆ ಹೇಗೆ ?! ವಿರಹದಲ್ಲೆ ಮಿಂದೆದ್ದೆ !!

ಅವಳ ನೆನಪಿನಲ್ಲೆ ದಣಿಯುತ್ತಾ
ಬರದೇ ಬಿಟ್ಟೆ ಈ ವಾರದ
ಕವಿತೆ ; ಓದಲು ಅವಳಿಲ್ಲ
ಬರೆದದ್ದನೆಲ್ಲ , ನಾನೇ ಗುನುಗಬೇಕಷ್ಟೆ .
ನಿನ್ನ ಜೊತೆ ಕಳೆದ ದೀಪಾವಳಿಯ ನೆನಪಿನಲ್ಲೆ ಕಾಯುತ್ತಿದ್ದೆನೆ ಹುಡುಗಿ.....
                                                                       ನಿನಗಾಗಿ....ನಿನ್ನ ಪ್ರೀತಿಗಾಗಿ
                                                                                                                          -ಮಂಜುನಾಥ್

                                           **   **  **

ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆ ಎಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು , ನನ್ನ ಮುಖ ನೀನು
ನೋಡಬಹುದೆಂಬ ಓಂದೇ ಓಂದು ಆಸೆಯಿಂದ ,
ಹಣತೆ ಆರಿದ ಮೇಲೆ , ನೀನು ಯಾರೋ , ಮತ್ತೆ ನಾನು ಯಾರೋ .!

                                                                                               

21 Oct 2014

ಅವಳ ನೆನಪಲ್ಲಿ - 7

ಹೇಳದೇ ಉಳಿದ ಮಾತುಗಳು 
ಬರೆಯದೇ ಉಳಿದ ಪದಗಳು 
ಜೋಡಿಸಿ ಬರೆಯಲೇ ನಾಕು ಸಾಲು 
ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು 

ಬರೆದು ಬಿಟ್ಟ ಕವಿತೆ ಇದು..
ಹೇಗೆ ನಿಡಲಿ ನಿನಗೆ!!
ಎಲ್ಲಿ ಮರೆಯಾಗಿದ್ದಿ ಹುಡುಗಿ ನನ್ನ ಬಿಟ್ಟು..
ನನ್ನೀ ಕವಿತೆಗಳ ಬಿಟ್ಟು!!

ಕಾಡೋ ಚಳಿಗೂ ಅರೆಪಾವು
ಹೆಚ್ಚು ಕಾಡುವ ನಿನ್ನ ನೆನಪುಗಳಿಗೆ
ರೂಪ ನೀಡಿ ಬರೆಯುತ್ತಿದ್ದೆನೆ ಈ ಕವಿತೆಗಳನ್ನು...
ನಿನ್ನ ನೆನಪಿನ ಕವಿತೆಗಳನ್ನು ಕೈಲಿಡಿದು ಕಾಯುತ್ತಿದ್ದೆನೆ ಹುಡುಗಿ....
                                              ನಿನಗಾಗಿ...... ನಿನ್ನ ಪ್ರೀತಿಗಾಗಿ!!
                  -ಮಂಜುನಾ

18 Oct 2014

ಹುಣ್ಣಿಮೆಯ ನಿಶಬ್ಧ ಭಾಗ - ೫

          ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ನಡೆಯುತ್ತಿದ್ದ ಸರಣಿ ಕೊಲೆಗಳ ರಹಸ್ಯ ಭೇದಿಸಲು ಸ್ಥಾಪಿಸಿದ special task force ಕೇವಲ ಹತ್ತು ದಿನಗಳಲ್ಲೆ ಮೊದಲ ಯಶಸ್ಸು ಪಡೆದಿತ್ತು , ಹುಣ್ಣಮೆಯ ದಿನದಂದು ನಡೆಯುತ್ತಿದ್ದ ಕೊಲೆಗಳಿಗೆ ಸಂಭದಿಸಿದಂತೆ ನಾಲ್ಕರು ಸಕ್ಷಿ ಸಿಕ್ಕಿತ್ತು.. ಅದಕ್ಕಿಂತ್ತ ಹೆಚ್ಚಾಗಿ ಅವರಿಗೆ ಸಿಸಿಟಿವಿ ದೃಶ್ಯವಳಿಗಳು ಸಿಕ್ಕಿತ್ತು! ಕೂಡಲೇ ಮುಖ್ಯಮಂತ್ರಿ , ಗೃಹಸಚಿವ ಮತ್ತು DGPಗೆ ವರದಿ ಒಪ್ಪಿಸಿ 'operation railroad killer' ಕಾರ್ಯಚರಣೆ ಆರಂಭಿಸಿದರು ಟೈಗರ್‍  ಪ್ರತಾಪ್‌ಕುಮಾರ್‍್ನೇತೃತ್ವದ STF ತಂಡ..
                                                           *  *  *

  ಹಿಮಾಂಶು ಕೊಟ್ಟಿದ್ದ ಪತ್ರವನ್ನು ಮೂರು ನಿಮಿಷದಲ್ಲಿ ಹತ್ತು ಬಾರಿ ಓದಿಕೊಂಡಿದ್ದಳು , ಆ ಪತ್ರದಲ್ಲಿ ಬರೆದ ಪ್ರತಿ ಪದಗಳಿಂದೆ ಅಡಗಿದ್ದ ಭಾವ ಅರಿತಿದ್ದಳು ಶಾಲಿನಿ , ಆಗ ರಾತ್ರಿ ೧೦:೪೫ ನಿಮಿಷ ಆ ನಿರ್ಜನ ನಲ್ಲಮಲ ಅರಣ್ಯ ಪ್ರದೇಶದ ನಡುವೆ ಇದ್ದ ಅಧ್ಯಯನ ಕೇಂದ್ರಲ್ಲಿದ್ದದ್ದು ೧೩ ಮಂದಿ ಮಾತ್ರ . ಆ ಭಯಂಕರ ಕತ್ತಲ ರಾತ್ರಿಯಲ್ಲಿ ಹಿಮಾಂಶು ರೂಮಿಗೆ ನಡೆದು ಹೋದವಳೆ ಬಾಗಿಲು ತಟ್ಟಿದ್ದಳು . ಜಗತ್ತಿನ ಅರಿವಿಲ್ಲದ ಹಾಗೆ ಗೋಪಲ ಕೃಷ್ಣ ಅಡಿಗರ ಕವಿತೆ ಓದಿ ಕುಳಿತ್ತಿದ್ದ ಹಿಮಾಂಶು...
            " ಒಡೆದು ಬಿದ್ದ ಕೊಳಲು ನಾನು
         ನಾದ ಬರದು ನನ್ನಲ್ಲಿ!!"

                                                                                                ಎರಡು ಸಾಲಿನಲ್ಲಿ ಅದೆಷ್ಟು ಅರ್ಥ!!
ಬಾಗಿಲು ತಟ್ಟಿದ ಶಬ್ದ ಕೇಳಿದವನೆ ಪುನಃ ವಾಸ್ತವ ಜಗತ್ತಿಗೆ ಇಳಿದ , ಶಾಲಿನಿ ಬಾಗಿಲಲ್ಲಿ ನಿಂತದ್ದು ನೋಡಿ ಸಂತೋಷದೊಡನೆ ಅಚ್ಚರಿಪಟ್ಟ ಹಿಮಾಂಶು !!!
  " Himu , Shall we go for a walk " ಅಂದಿದ್ದ ಶಾಲಿನಿಯ ಕಣ್ಣುಗಳಲ್ಲಿ ವಿನಂತಿಯಿತ್ತು.
ತಲೆಯಾಡಿಸಿದವನೆ ಅ ನೀರವ ರಾತ್ರಿಯಲ್ಲಿ ಮುದ್ದು ಮುದ್ದು ಹುಡಿಗಿ ಶಾಲಿನಿಯೊಂದಿಗೆ ಹೆಜ್ಜೆ ಇಡುತ್ತ ಹೊರಟ ಹಿಮಾಂಶು.. ೧೦ ನಿಮಿಷ ಯಾವುದೇ ಮಾತಿಲ್ಲದೆ ನಡೆಯುತ್ತಾ ಹೋಗುತ್ತಿದವರಲ್ಲಿ ಶಾಲಿನಿಯು ಹಾಡಿದ ಹಾಡು ಮೌನ ಮುರಿದಿತ್ತು..  "ಓಲವೇ ಜೀವನ ಸಾ‍ಷತ್‌ಕಾರ , ಓಲವೇ ಮರೆಯಾದ ಮಮಾಕರ "
ಶಾಲಿನಿಯೊಂದಿಗೆ ನಲ್ಲಮಲ ಅರಣ್ಯದಲ್ಲಿ ರಾತ್ರಿ ೧೧.೦೦ ಗಂಟೆಗೆ ಆ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನನ್ನು ಹುಡುಕುತ್ತಾ ಹೋಗುತ್ತಿದ್ದ ಹಿಮಾಂಶುವಿಗೆ ಈ ಹಾಡು ೧೪ ವರ್ಷಗಳ ಹಿಂದಕ್ಕೆ ಕರೆದೊಯ್ತು !! ಅದು ಇಂತಹುದೆ ಒಂದು ಹುಣ್ಣಿಮೆಯ ರಾತ್ರಿ ಚಂದ್ರನೇಕೊ ಮರೆಯಾಗಿದ್ದ.. ಸದಾಶಿವನಗರದ ಎರಡನೇ ಕ್ರಾಸಿನ ಮನೆಮೇಲಿನ Terraceನಲ್ಲಿ ಕುತ್ತಿದ್ದ ಹಿಮಾಂಶು ಮತ್ತು ಅವನ ತಾಯಿ ಪ್ರಶಾಂತಿನಿ ಮೌನದಿಂದಲೇ ಈ ಹಾಡು ಕೇಳಿಸಿಕೊಂಡಿದ್ದರು...

      ಓಲವೇ ಜೀವನ ಸಾಷತ್‌ಕಾರ....ಓಲವೇ ಮರೆಯಾದ ಮಮಾಕರ...!!

  ಐದು ವರ್ಷದ ಪುಟ್ಟ ಹಿಮಾಂಶು , ಅಮ್ಮನಿಗೆ ಕೇಳುತ್ತಾನೆ , " ಅಮ್ಮ , ಅಪ್ಪ ಏಲ್ಲಿಗ್‌ಗೊಗಿದ್ದಾನೆ... ನಂಗೆ , ಅಪ್ಪ ಬೇಕು " ಅಂತ ಭಾವಪೂರ್ವಕಾವಾಗಿ ಕೇಳಿದ್ದ.... ಅಪ್ಪ !! ಮರೆತುಹೋಗಿದ್ದ ಪ್ರೋಫೆಸರ್‌ ಪ್ರಶಾಂತಿನಿಗೆ ನೆನಪಾದ , ಅತನ ಪ್ರತಿಯೊಂದು ಭಾವಗಳು ನೆನಪಾಗಿದ್ದವು ನಿಷ್ಕಲಮಶವಾಗಿದ್ದ ತನ್ನ ಅಕ್ಕನ ಮೇಲಾದ ದೌರ್ಜನ್ಯಗಳು ನೆನಪದವು , ಮೋಸ ನೆನಪಾದವು , ನಿವೇಧಿತಾ ನೆನಪದಳು !!!! ಎಲ್ಲದಿಕ್ಕಿಂತ ಮಿಗಿಲಾಗಿ ಮರೆತುಹೋಗಿದ್ದ ತನ್ನ ದ್ವೇಷ ನೆನಪಾಯ್ತು , REVENGE ಎಂಬ ಪದ ನೆನಪಾಗಿತ್ತು...
      ಮೂಡಬಿದರೆಯ ಅಳ್ವಸ್ ಕಾಲೇಜಿನಲ್ಲಿ ಮೊದಲ ಬಿಎ ಓದುತ್ತಿದ್ದ ಹುಡುಗಿ ನಿವೇಧಿತಾ , ಕಪ್ಪು ಕಾಡಿಗೆಗೆ ರೆಪ್ಪೆಯೊಡ್ಡಿ ಇಣಕು ನೋಡುತ್ತಿದ್ದ ಕಣ್ಣುಗಳು ಬೆಳಗಿನ ಜಾವದ ಮೊದಲ ಸೂರ್ಯಕಿರಣಗಳು ಕಿಟಕಿಯ ಮೂಲಕ ಇಣುಕಿ ನೋಡುತ್ತಿದ್ದ ಹಾಗೆ ಕಾಣಿಸಿತು , ಎತ್ತರವಾದ ನಿಲುವು , ಹಾಲು ಬಿಳುಪು ಬಣ್ಣದ ಕೆನ್ನೆ , ಕಾಲೇಜಿನಲ್ಲಿ ಅತೀ ಮುದ್ದು ಮುದ್ದುಗಿದ್ದ ಹುಡುಗಿ ನಿವೇಧಿತಾ... ಬಿಎ ಓದುತ್ತಿದ್ದ ಅವಳು ಅದೇಕೊ ವಾಮಚಾರದ ಬಗ್ಗೆ ಆಸಕ್ತಿ , ಮಾಟಗಾತಿ ಸುಬ್ಬಮ್ಮನ ಬಗ್ಗೆ ಆಸಕ್ತಿ . ಪ್ರತಿ ಅಮಾವಾಸೆ , ಹುಣ್ಣಿಮೆಯ ದಿನ ಸುಬ್ಬಮ್ಮ ಮಾರ್ಕಂಡಿಯನ್ನು ಓಲಿಸಿಕೊಳ್ಳುತ್ತಿದ್ದ ಬಗ್ಗೆ ವಿಪರೀತ ಆಸಕ್ತಿ ತೋರುತ್ತಿದ್ದಳು .. ಯಾರನ್ನು ನಂಬುತ್ತಿರದ , ಭಾವನೆಗಳೇ ಇಲ್ಲದ , ಸೆಂಟಿಮೆಂಟ್ ಅವಳ ಭ್ರೂ ಮಧ್ಯದ ರಕ್ತಕುಂಕುಮದಲ್ಲೂ ಜಾಗವಿಲ್ಲದ ಸುಬ್ಬಮ್ಮ ನಿವೇಧಿತಾಳನ್ನು ಅಚ್ಚುಕೊಂಡಿದ್ದಳು . ಆಕೆಗೆ ಪ್ರತಿವಿದ್ಯಯ ಬಗ್ಗೆಯೂ ಮಾಹಿತಿ ನೀಡುತ್ತಿದ್ದಳು... ಅಷ್ಟು Ruthless ಅಗಿದ್ದ ಮಾಟಗಾತಿ ಸುಬ್ಬಮ್ಮ ಆಕೆಯ ಬದುಕಿನ ಕಟ್ಟಕಡೆಯ ಗುರಿಯನ್ನು ನಿವೇಧಿತಾಗೆ ತಿಳಿಸಿದ್ದಳು.. ಅದು ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು , ಕ್ಷುದ್ರವಿದ್ಯಯಲ್ಲಿ ಪರಂಗತವಾಗುವುದು , ಕಾಮ ಪಿಶಾಚಿಯನ್ನು ಪ್ರತ್ಯಕ್ಷಿಸುವುದು . ಇದೆಲ್ಲ ನೋಡುತ್ತಿದ್ದ ನಿವೇಧಿತಾಗೆ ಭಯವಾಗಲಿ , ಅಳುಕಗಲಿ ಇರಲಿಲ್ಲ ಅದರೆ ಅವಳಿಗೆ ಮತ್ತಷ್ಟು ಅಸಕ್ತಿ ಹೆಚ್ಚುತ್ತಿತ್ತು...
       ತನ್ನ ಓದು , ಮನೆ , ಮಾಟದ ಬಗ್ಗೆ ಆಸಕ್ತಿಯಿದ್ದ ನಿವೇಧಿತಾಗೆ ಹುಡುಗನೊಬ್ಬ ಪ್ರೀತಿಯ ಬಯಕೆಯಿಟ್ಟ ತುಂಬಾ ಸ್ಪುರದೃಪಿಯಾದ ಯುವಕನನ್ನು ನಿವೇಧಿತಾ ಮರುಪ್ರೀತಿಸದೆ ಇರಲಿಲ್ಲ... ಇದು ತನ್ನ ಬದುಕಿಗೆ Brutal ಅಗಬಹುದು , ನನ್ನ destroy ಮಾಡಬಹುದೆಂದು ಊಹೇ ಕೂಡ ಮಾಡಿರಲಿಲ್ಲ ಅವಳು!!
ಪ್ರೀತಿ ಎರಡು ವರ್ಷಗಳ ಕಾಲ ಮುಂದುವರೆದಿತ್ತು , ಮರಗಳನ್ನು ಸುತ್ತಿಯಾಗಿತ್ತು , ಸಿನಿಮಾ long ride ಹೀಗೆ ಎಂಜಾಯ್‌ ಮಾಡಿದ್ದರು... ನಿವೇಧಿತಾ ಅವನನ್ನು ತುಂಬಾ ನಂಬಿದ್ದಳು , ಪ್ರೀತಿಸಿದಳು , ಅರದಿಸಿದ್ದಳು .... ಎರಡು ಧರ್ಮದ ದಂಪತಿಗಳ ಮಗನಗಿದ್ದರಿಂದ ನಿವೇಧಿತಾಳನ್ನು ಅವನೊಂದಿಗೆ ಮದುವೆ ಮಾಡಿಕೊಳ್ಳಲು ಅವಳ ತಂದೆ ಓಪ್ಪಿಕೊಂಡಿರಲಿಲ್ಲ... ಅದರೆ ಶ್ರೀಮಂತರ ಮಗಳಳಾಗಿದ್ದ ನಿವೇಧಿತಾ ಓಡಿ ಹೋಗಿ ಮದುವೆಯಾಗಿದ್ದರು.. ಅದರೆ..?? ಅದರೆ ನಿವೇಧಿತಾಳ ಅಸ್ತಿಯನ್ನು ನೋಡಿ ಪ್ರೀತಿಸಿದ್ದ ಅತ ಅವಳನ್ನ ಜಸ್ಟ್ ಯೂಸ್ ಮಾಡಿ ಎಸೆದಿದ್ದ.. ಕಷ್ಟ ಕೊಟ್ಟ , ಬರುಬರುತ್ತಾ ತುಂಬಾ brutalಅಗಿ behave ಮಾಡಿದ್ದ ಆತ ಅವಳನ್ನ ಕೊಲೆಮಾಡಿಬಿಟ್ಟಿದ್ದ... ಅವನು  Alexander ರಾಜನಾಥ ಚಟರ್ಜಿ...  
  ಆಗ ತಾನೇ national ಕಾಲೇಜಿನಲ್ಲಿ  I pu ಓದುತ್ತಿದ್ದ ಮುಗ್ದ ಹುಡುಗಿ ಪ್ರಶಾಂತಿನಿಗೆ ಈ ವಿಷಯ ತಿಳಿಯದೆ ಇರಲಿಲ್ಲ !! ಅಕ್ಕನನ್ನು ಕೊಂದವನ ಬಗ್ಗೆ ಉಗ್ರ ಕೋಪ ಮಾಡಿಕೊಂಡಳು . ಮನೆಯಲ್ಲಿ ವಿಷಯ ತಿಳಿಸಿದರೆ ಏನು ಆಗದು ಎಂದು ಅರೆತ ಪ್ರಶಾಂತಿನಿ ಮಾಟಗಾತಿ ಸುಬ್ಬಮ್ಮನಿಗೆ ವಿಷಯ ತಿಳಿಸಿಲು ಅಣಿಯದಳು...
   ಅದು ಮೆಜೆಸ್ಟಿಕ್ಕಿನ ಎದುರು , ಆಯುರ್ವೇದದ ಆಸತ್ರೆಯ ಪಕ್ಕ ರಾಜ್‌ಮಹಲ್ ಹೊಟೇಲೆಂಬ ಮುಗಿಲೆತ್ತರದ ಕಟ್ಟಡದ ಮುಂದೆಯೇ , ಮೆಜೆಸ್ಟಿಕ್ಕಿನಿಂದ ಮಲ್ಲೇಸ್ವರಕ್ಕೆ ಹೋಗುವ ಅಂಡರ್‍್ಬ್ರಿಡ್ಜ್ ರಸ್ತೆಯ ಒಂದು ಪಾರ್ಶದ ಮೇಲೆ ಹರಡಿಕೊಂಡಿರುವ ಮಹಾ ಕೊಳಕು ಸ್ಲಮ್ಮೇ ಲಕ್ಷಣಪುರಿ!! ಅದು ಇವತ್ತಿಗೂ ಇದೆ. ಮೆಜೆಸ್ಟಿಕ್ಕಿನ ಎಲ್ಲ ಪಾಪವೂ ಘನೀಭವಗೊಂಡು ಈ ಲಕ್ಷಣಪುರಿ ಸೃಷ್ಟಿಯಾದಂತಿದೆ . ಅಂತಹ ಕೆಟ್ಟಾಕೊಳಕು ಸ್ಲಮ್ಮೆನಲ್ಲಿ ಒಂದೇ ಒಂದು ಬ್ರಾಹ್ಮಣರ ಮನೆ!
   ಅದು ಮಾಟಗಾತಿ ಸುಬ್ಬಮ್ಮನದು !!
 ಜಗತ್ತಿನಲ್ಲಿ ತಾನು ಪ್ರೀತಿಸಿದ , ಗೌರವಿಸಿ , ನಂಬಿದ್ದ ಹುಡುಗಿ ನಿವೇಧಿತಾ ಸಾವು ಮಾಟಗಾತಿ ಸುಬ್ಬಮ್ಮನಿಗೆ ವಿಚಲಿತಗೊಳಿಸಿತು . ಭಾವನೆಗಳೇ ಮರೆತುಹೋಗಿದ್ದ ಸುಬ್ಬಮ್ಮ ಒಂದು ಕ್ಷಣ ನಿವೇಧಿತಾಳಿ ಗೋಸ್ಕರ ಮರುಗಿದ್ದಳು . ತನ್ನ ಬದುಕಿನ ಗುರಿ ಒಂದಲ್ಲ ಎರಡು!! ಎಂದು ತೀರ್ಮಾನ ಮಾಡಿದಳು... ಒಂದು ಕರ್ಣ ಪಿಶಾಚಿ-ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು ಎರಡನೇಯದು alexander ರಾಜನಾಥ ಚಟರ್ಜಿಯನ್ನು ತನ್ನ ದಿವ್ಯ ಶಕ್ತಿಯಿಂದಲೆ ಸಾಯುಸುವುದು.... ಅದು ಮಾರ್ಕಂಡಿಗೆ ಬಲಿ ನಿಡುವುದು!!
     ಹೀಗೆ ೧೪ ವರ್ಷದ ಹಿಂದಿನ ನೆನಪಿಗೆ ಹೋಗಿದ್ದ ಹಿಮಾಂಶು ವಾಸ್ತವಕ್ಕೆ ಇಳಿದಿದ್ದ , ಮಾಟಗಾತಿ ಸುಬ್ಬಮ್ಮ ಈಗಗಲೇ  ಕರ್ಣಪಿಶಾಚಿ *ಯನ್ನು ಒಲಿಸಿಕೊಳ್ಳಲು ದೊಡ್ಡ ಮಾರಣ ಹೋಮ ಶುರುಮಾಡಿ ೮ ತಿಂಗಳಾಗಿತ್ತು.. ೮ ತಿಂಗಳಲ್ಲಿ ೧೬ ಬಲಿ ; ಇನ್ನು ಕೇವಲ ೪ ತಿಂಗಳಲ್ಲಿ ಭಾರತದ ಕೇಲವೆ ಕ್ಷುದ್ರಸಾಧಕರು ಸಾಧಿಸಿಕೊಂಡಿರುವ ಉಗ್ರ ವಿದ್ಯಾಯನ್ನು ಸಾಧಿಸಿಕೊಳ್ಳಲಿದ್ದಳೆ ಮಾಟಗಾತಿ ಸುಬ್ಬಮ್ಮ... ಅವಳ ೨೪ ಬಲಿ alexander ರಾಜನಾಥ ಚಟರ್ಜಿನ......??
                                                                          (ಮುಂದುವರೆಯುತ್ತದೆ-to be continued)
( ವಿ.ಸೂ - * ಕರ್ಣಪಿಶಾಚಿ : ಇದೊಂದು ದೊಡ್ಡ ಗಾತ್ರದ ಶಕ್ತಿಯುಳ್ಳ ಕ್ಷುದ್ರ ದೇವತೆ. ಜನ ಸರಿಯಾದೆ ಹೆಸರು ಗೊತ್ತಿಲ್ಲದೆ ಕರ್ಣಪಿಶಾಚಿ ಎನ್ನುತ್ತಾರೆ . ಅದರೆ ಆಕೆಯ ನಿಜವಾದ ಹೆಸರು ಕಾಮಕರ್ಣ ಪಿಶಾಚಿ . ವಾಮಾಚಾರದ ಆಳ-ಗಲ ಬಲ್ಲವರಿಗೆ ಅವಳ ತಾಕತ್ತು-ಅಪಾಯಗಳೆರಡೂ ಗೊತ್ತು . ಕ್ಷುದ್ರ ಔಪಸನೇಯ ನಂಬಲಿಕ್ಕಾಗದ ವಾಸ್ತವವೋ ಗೊತ್ತಿಲ್ಲ . ಪ್ರತ್ಯಕ್ಷವಾಗುವಕೆ nude goddess !! ಆಕೆ ಬಟ್ಟೆ ಧರಿಸುವುದಿಲ್ಲ . ಆದರೆ ಅವಳ ಶಕ್ತಿ ಊಹೆಗಿಂತಲು ತುಂಬಾ ಹೆಚ್ಚು.. ಕರ್ಣ ಪಿಶಾಚಿನಿಯೆದುರು ಮಗುವಾಗಬೇಕು . ಕೊಂಚ ಆಯತಪ್ಪದರು ಆಕೆ ರಕ್ತ ಕುಡಿಯುತ್ತಾಳೆ.... ನನ್ನ ಮುಂಬರುವ ವಾಮಾಚಾರದ ಭಾಗದಲ್ಲಿ ಇದರ ಬಗ್ಗೆ ಹೆಚ್ಚು ವಿವರಿಸಲು ಪ್ರಯತ್ನಿಸುತ್ತೆನೆ.. ಕರ್ಣ ಪಿಶಾಚಿನಿಯ ಬಗ್ಗೆ ಹೆಚ್ಚು ತಿಳಿಯಲು ೧೯೦೬ರಲ್ಲಿ ಪ್ರಕಟವಾಗಿರುವ ತಮಿಳು ಗ್ರಂಥವೊಂದನ್ನು ಓದಬಹುದು ಅಥವಾ ಅಂಥ್ರದ ಪಶ್ಚಿಮ ಗೋದವರಿಯ ಚುಂಗುರಿ ಮತ್ತು ನರ‍್ಮಿ ಹಳ್ಳಿಗಳಿಗೆ ಬೇಟಿನಿಡಬಹುದು - ಮಂಜುನಾಥ್ )

17 Oct 2014

ಅವಳ ನೆನಪಲ್ಲಿ - 6

ಕಾಡುತ್ತಿರುವುದು ನಿನ್ನ ಕಣ್ಣು
ಕಾಡಿಗೆ ಹಚ್ಚಿದ ಮುದ್ದು ಕಣ್ಣು!
ಕಾಡುತ್ತಿರುವುದು ನಿನ್ನ ಮುಂಗುರುಳು
ಗಾಳಿಗೆ ಹಾರಿ ಹಾರಿ ಮುತ್ತಿಡುತ್ತಿದ್ದ ಮುಂಗುರುಳು!!

ನೆನಪಾಗುತ್ತಿದೆ ನಿನ್ನ ಗುಳಿಕೆನ್ನೆ
ಅ ನಿನ್ನ ಮುದ್ದು ಮದ್ದು ನಗು ನೋಡಲು!
ನೆನಪಾಗುತ್ತಿದೆ ನಿನ್ನ ಪುಟ್ಟ ಕೈಗಳು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಜೊತೆಯಲ್ಲಿಡಿದು ನಡೆಯಲು!!

ಬರೆದು ಬಿಟ್ಟ ಕವಿತೆಯ ಸಾಲುಗಳಿವು
ಹೇಗೆ ನಿಡಲಿ ನನ್ನೊಲವಿನ ಹುಡುಗಿ ನಿನಗೆ!
ನೀನು ನನ್ನ ಜೊತೆಯಿಲ್ಲ;ನೀನು ಬಿಟ್ಟು ಹೋದ ನೆನಪಿದೆ
ಕಾಯುತ್ತಿರುವೆ ಹುಡುಗಿ ಕವಿತೆಯ ಬರೆದಿಟ್ಟುಕೊಂಡು!!
                                    ನಿನಗಾಗಿ..... ನಿನ್ನ ಪ್ರೀತಿಗಾಗಿ!!
                                                          -ಮಂಜುನಾಥ್

ಅವಳ ನೆನಪಲ್ಲಿ - 5

 ಬಸ್ಸಿನ ಮರೆಯಲ್ಲಿ ಮರೆಯಾಲಾಗದ
ನೆನಪುಗಳ ಮೆಲಕು ಹಾಕುತ್ತಿದ್ದೆ,
ನನ್ನ ಕಣ್ಣಿಗೆ ಕಂಡದ್ದು; ನೀನು
ಕುಳಿತ್ತಿದ್ದ ಅದೇ ಸೀಟು..

ನಾವು ಇಳಿದಿದ್ದ ಅ ಸ್ಟಾಪಿಗೆ,
ಬಸ್ಸು ಬಂದು ನಿಂತಿತ್ತು;
ದೇವಾಸ್ಥಾನದ ಪಕ್ಕವಿದ್ದ ಪಾರ್ಕ್ ಹಾಗೇ ಇದೆ,
ಅದರೆ ನನ್ನ ಪಕ್ಕವಿದ್ದ ನೀನು ಮರೆಯಾಗಿದ್ದೆ!

ನಾವಿಬ್ಬರು ನಡೆದು ಹೋಗುತ್ತಿದ್ದ ರಸ್ತೆಕೇಳಿತ್ತು ,
ಎಲ್ಲಿ ನಿನ್ನ ಹೂ ಹುಡುಗಿ ?!
ಈಗ ಅವಳು ನನ್ನ ಜೊತೆಯಿಲ್ಲ ; ಅದರೆ ,
ಬರುತ್ತಾಳೆ , ಬಂದೆ ಬರುತ್ತಾಳೆ ನನ್ನ ಹೂ ಹುಡುಗಿ ; ಎಂದೆ !!
ಕಾಡುವ ಪ್ರಶ್ನೆಗಳನ್ನು ಮನದಲಿಟ್ಟು ಕಾಯುತ್ತಿದ್ದೆನೆ ಹುಡುಗಿ.....
                                               ನಿನಗಾಗಿ....ನಿನ್ನ ಪ್ರೀತಿಗಾಗಿ !!!!
                         -ಮಂಜುನಾಥ್

14 Oct 2014

Working life. Life working!!

This is my 50th post in this blog.. I just wanted to share an e-mail content which i recieved from my friend about life.. Life is really an art!!

"Don't just have career or academic goals. Set goals to give you a balanced, Successful life. I use the word balanced before successful. Balanced means ensuring your health, relationships, mental peace are all in good order. there is no point of getting a promotion on the day of your break up. There is no fun in driving a car if your back hurts. Shopping is not enjoyable if your mind is full of tensions.

Life is one of those races in nursery school where you have to run with a marble in a spoon kept in your mouth. If the marble falls, there is no point coming first. Same is with life where health and relationships are the marble. Your striving is only worth it if there is harmony in your life. Else, You may achieve the success, but this spark, this feeling of being excited and alive, will start to die.

One thing about nurturing the spark - Don't take life seriously. Life is not meant to be taken seriously, as we are temporary here. We are like a pre-paid card with limited validity. If we are lucky, we may last another 50 years. And 50 years is just 2,500 weekends. Do we really need to get so worked up?

It's ok, bunk a few classes, scoring low in couple of papers, goof up a few interviews, take leave from work, Enjoy with your friends, fall in love, little fights with your loved ones - we are people, not programmed devices.

Don't be serious, Be sincere.

-Chetan Bhagat"

11 Oct 2014

ಹುಣ್ಣಿಮೆಯ ನಿಶಬ್ದ ಭಾಗ-೪

    (Romantic thriller ಹುಣ್ಣಿಮೆಯ ನಿಶಬ್ದದ ಹಿಂದಿನ ಮೂರು ಭಾಗವನ್ನು ಓದಲು ಇಲ್ಲಿ click ಮಾಡಿ)

        ಭಾಗ-೪

  ಆಶ್ಚರ್ಯವಾಗಬಹುದು! ಸಹಸ್ರಾರು ಚದರಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ಯಾವುದೇ ದಾರಿಯಿಲ್ಲದ ಈ  ಸ್ಥಳದಲ್ಲಿ ಯಾರು ಈ ಅಧ್ಯಯನ ಕೇಂದ್ರವನ್ನು ಕಟ್ಟಿರಬಹುದೆಂದು??   ಹಿಂದೆ ತಿರುಗಿದರೆ ಭೊರ್ಗರೆಯಿತ್ತಿರುವ ಕೃಷ್ಣೆ ಮುಂದೆ ಕತ್ತಲಿಗು ಬೆಚ್ಚಿಬಿಳಿಸಿವ ಕಾಡು. ನಲ್ಲಮಲ ಅರಣ್ಯಪ್ರದೇಶ ತನ್ನ ಬೆರನ್ನ ಅಂಧ್ರದ ಉದ್ದಗಲಕ್ಕು ಚಾಚಿ ತಮಿಳುನಾಡು ತಲುಪಿತ್ತು , ಶ್ರೀಶೈಲಂ ಡ್ಯಾಮ್ನಲ್ಲಿ ಕೃಷ್ಣೆ ರೌದ್ರರಮಣೀಯವಾಗಿ ತನ್ನ ಶಕ್ತಿಯನ್ನು ತೋರಿಸುತ್ತಿದ್ದಳೆ , ದೂರದಲ್ಲೆಲ್ಲೊ ಹುಲಿಗಳ ಗರ್ಜನೆ ಆನೆಯ ಕೂಗು ಅವುಗಳಿಗೆ ಪೈಪೋಟಿ ನಿಡುವಂತೆ ಶಬ್ದಮಾಡುತ್ತ ಹರಿಯುತ್ತಿರುವ ಕೃಷ್ಣ ನದಿ , ಪ್ರಕೃತಿಯ ಸೋಬಗನ್ನು ಸಾರಿ ಸಾರಿ ಹೇಳುತ್ತಿತ್ತು . ನಲ್ಲಮಲ ಅರಣ್ಯದ ಆ ಭೀಕರ ಸೌಂದರ್ಯ ಕಂಡ ಬೆಂಗಲೂರಿನ ಸೆಂಟ್ ಡೇವಿಡ್ ಕಾಲೇಜಿನ ವಿದ್ಯಾರ್ಥಿಗಳ ಕಣ್ಣು ಆಶ್ಚರ್ಯಪಟ್ಟಿತ್ತು . ಪ್ರಕೃತಿಯ ಸೌಂದರ್ಯ , ಕಣ್ಣುಹಯಿಸಿದಷ್ಟು ದೂರ ಡಟ್ಟವಾಗಿ ಬೆಳದಿದ್ದ ದೊಡ್ಡ ದೊಡ್ಡ ಮರಗಳು , ಅದರೊಳಗೆ ಹಾಸುಹೊಕ್ಕಗಿದ್ದ ಪ್ರಾಣಗಳ ದಂಡು , ಕೃಷ್ಣನದಿಯ ಭೊರ್ಗರೆತ... ಇದರ ಸೌಂದರ್ಯ ಕಂಡು ಅವರ ಮನಸಲಿದ್ದ ಸಂತೋಷ , ಸಂಭ್ರಮ ಮತ್ತಷ್ಟು ಹೆಚ್ಚಿಸಿತು , ನಲ್ಲಮಲ ಹುಲಿ ಸಂರಕ್ಷಣ ಹಾಗೂ ಶ್ರೀಶೈಲಂ ಡ್ಯಾಮ್ನ Hydroelectric power station ಬಗ್ಗೆ ಅಧ್ಯಯನ ಮಾಡಲು ಬಂದಿದ್ದೆವೆ ಎನ್ನುವುದು ಮರೆತುಹೋಗುವಷ್ಟು ಸುಂದರವಾಗಿತ್ತು ಆ ನೋಟ...
    ಎಲ್ಲರೂ ಆ ಸೌಂದರ್ಯವನ್ನು ಒಂದು split secondನಷ್ಟು ಹೊತ್ತು ಮಿಸ್ ಮಾಡದೆ ನೋಡುತ್ತಿದ್ದರೆ ಇತ್ತ ಶಾಲಿನಿಗೇನೊ ತಳಮಳ . ಹಿಮಾಂಶು ತಾನು ನೀಡಿದ್ದ ಪತ್ರಕ್ಕೆ ಇನ್ನ ಉತ್ತರಿಸಿಲ್ಲವೆಂದು!!  ಪ್ರತಿ ನಿಮಿಷ , ಪ್ರತಿ ಕ್ಷಣ ಶಾಲಿನಿ ಅದರ ಬಗ್ಗೆಯೆ ಯೋಚಿಸುತ್ತಿದ್ದಳು . ಹಿಮಾಂಶು ಇದಾವುದರ ಬಗ್ಗೆಯು ಅರಿವಿಲ್ಲದೆ ಪೂ.ತೇಜಸ್ವಿಯ ಕಾಡಿನ Romantic thriller 'ಜುಗಾರಿ ಕ್ರಾಸ್ ' ಕಾದಂಬರಿಯನ್ನು ಓದುತ್ತ ಪ್ರತಿ ನಿಮಿಷವನ್ನು ಆ ಅರಣ್ಯದಲ್ಲಿ enjoy ಮಾಡ್ತಿದ್ದ...

                      *  *  *

      ACP ಲೂಹಿಸ್ ವಿನ್ಸೆಂಟ್ ತನ್ನ ಇಡೀ ಜೀವಮಾನದ ದೊಡ್ಡ ಮೀಷನ್ ಆಗಿದ್ದ ರೈಲ್ವೆ ಹಂತಕನ ಸೇರೆಯಲ್ಲಿ ವಿಫಲವಾಗಿದ್ದರು . ಮಾಧ್ಯಮಗಳಲ್ಲಿ ಸಾಲು ಸಾಲು ವರದಿಗಳು ಬರುತ್ತಾ ಇದ್ದವು .   ವಿನ್ಸೆಂಟ್ನ ಕಾರ್ಯಶಮತೆಯ ಬಗ್ಗೆಯು ಪ್ರಶ್ನಿಸತೋಡಗಿದವು , ಅಂಧ್ರದ ಪೋಲಿಸ್ ಕಾಮಿಷ್ನರ್‍್ತಲೆಯತ್ತಿ ಮಾತನಾಡದಂತಾಯ್ತು . ಇತ್ತ ಬೆಂಗಳೂರಿನಲ್ಲಿ ಒತ್ತಡ ಹೆಚ್ಚುತ್ತಿತ್ತು... ಇದಕ್ಕೆ ಪುಷ್ಟಿನೀಡುವಂತೆ ಅಂದು ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ನಡೆಸಿದ ದಿನ ಧರ್ಮವರಂ-ಅನಂತಪುರ ಜಂಕ್ಷನ್ ಅದರೂ ಕೊಲೆಯಾಗದನ್ನು ಕಂಡು , ಕೊಲೆಗಾರ ಸಿಕ್ಕಿಲದ ಕಂಡು ಪೋಲಿಸರು ಕಾರ್ಯಚರಣೆ ಸ್ಥಗಿತಗೊಳಿಸಿದರು ಆದರೆ ಅಲ್ಲಿ ಅವರ ಊಹೆಗೆ ನಿಲುಕದ ಘಟನೆ ನಡೆದಿತ್ತು . ಅನಂತಪುರ ಕೇಂದ್ರ ರೈಲ್ವೆ ಸ್ಟೆಷನಿಂದ ನಿದಾನವಾಗಿ ಹೊರಡುತ್ತಿದ್ದ    ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಯಾರಿಗೂ ತಿಳಿಯದೆ ಕೊಲೆನಡೆದು ಹೋಗಿತ್ತು . ಆ ಕೊಲೆಯಲ್ಲಿದದ್ದು ಕೂಡ ಅದೇ ಭೀಕರತೆಯಲ್ಲಿ ಕರ್ನೂಲ್ ಜಿಲ್ಲೆಯ ಮಧ್ಯ ವಯಸ್ಸಿನ ಹೆಣ್ಣುಮಗಳ ಗಂಟಲನ್ನು ಕುಯ್ದು ಹೊತ್ತುಹೋಗಿದ್ದರು ಹಂತಕರು . ರಕ್ತ ಅ ಬೋಗಿಯಲ್ಲಿ ನೀರು ಹರಿದಂತೆ ಹರಿದಿತ್ತು .  ಪ್ರಶಾಂತಿ ಎಕ್ಸಪ್ರೇಸ್ನ ೧೬ನೇ ಬೋಗಿ ಸ್ತಬ್ದವಾಗಿತ್ತು , ಅ ಹುಣ್ಣಿಮೆಯ ರಾತ್ರಿಯಲ್ಲಿ ಅನಂತಪುರದಿಂದ ೪೦ ಕೀಲೊ ದೂರದಲ್ಲಿ  ಪ್ರಶಾಂತಿ ಎಕ್ಸಪ್ರೇಸ್ ನಿಶಬ್ದವಾಗಿತ್ತು . ಅಂದು  ಪ್ರಶಾಂತಿ ಎಕ್ಸಪ್ರೇಸ್ ೧೫ನೇ ಹತ್ಯೆಕಂಡಿತ್ತು . ಒಂದಿಡಿ ರೈಲ್ವೆ ಸಿಬಂದಿ ಬೆಚ್ಚಿಬಿದ್ದರು ! ಪತ್ರಿಕೆಗಳಲ್ಲಿ ೩-೪ ಪುಟ ಈ ಸರಣಿ ಹತ್ಯಗಳ ವರದಿ ಇರುತ್ತಿತ್ತು . ಹಿರಿಯ ಪರ್ತಕರ್ತರು ಸಂಪಾದಕೀಯ ಬರೆದರು . ಗಂಟೆಗಟ್ಟಲೆ ಟಿವಿಗಳಲ್ಲಿ , ರಸ್ತೆಯಲ್ಲಿ , ಸರ್ಕಾರಿ ಕಚೇರಿಯಲ್ಲಿ ಚರ್ಚೆ ನಡೆಯಿತ್ತು...  ಕರ್ನಾಟಕ-ಅಂಧ್ರ ವಿಧಾನಸಭೆಗಳಲ್ಲಿ ಅಲ್ಲೊಲ-ಕಲ್ಲೊಲ . ಪರೆದ್ತಿಯ ಭೀಕರತೆ ಮರೆತು ಅಡಲಿತ ರೂಡ ಪಕ್ಷಕ್ಕೆ ಹೀಯಳಿಸುತ್ತಿತ್ತು ಪ್ರತಿಪಕ್ಷಗಳು!!
    ಸಾಲು ಸಾಲು ಕೊಲೆಗಳು ಭೀಕರತೆ , ಕೇಸಿನ ಗಾಂಬಿರ‍್ಯವರೆತ ಎರೆಡು ರಾಜ್ಯದ ಮುಖ್ಯಮಂತ್ರಿಗಳು ಒಟ್ಟಾಗಿ , ಒಮ್ಮತವಾಗಿ ಒಂದು ನಿರ್ಧಾರ ಕೈಗೊಂಡರು , ಅದೇ special task forceನ ರಚನೆ ....."Operation Railroad Killer "  ಜಂಟಿಯಾಗಿ  ಪ್ರಾರಂಭವಾಗೇ ಬಿಟ್ಟಿತ್ತು..
   ಕರ್ನಾಟಕ-ಅಂಧ್ರದ ಪ್ರಮುಖ ಹಿರಿಯ ಪೋಲಿಸ್ ಅಧಿಕಾರಿಗಳು ಒಂದಾಗಿ Special Task Forceನ ರಚನೆಯಾಯಿತು... ಇದರ ನೇತೃತ್ವ ವಯಿಸಿದ್ದು.... ಹೆಸರು ಕೇಳಿದರೆ ಭೂಗತ ಲೋಕವೆ ನಡುಗುವ ಹಾಗೆ ಮಾಡುತ್ತಿದ್ದ ಕರ್ನಾಟಕದ Daring ಅಧಿಕಾರಿ tiger ಪ್ರತಪ್... ೧೬ ಜನರಿದ್ದ ಹಿರಿಯ ಪೋಲಿಸ್ ತಂಡ , ಜೊತೆಗೆ ೧೨ ACP , ೧೦ DCP , ೪೫ SI , ೧೫೦ PCಗಳು.. "Operation Rail Road Killer " ಕಾರ್ಯಚರಣೆಗೆ ಇಳಿದಿತ್ತು ದೊಡ್ಡ ಪೋಲಿಸ್ ತಂಡ.
                 *  *  *

       ಶಾಲಿನಿ ,
            ನನ್ನ ಜೀವನದಲ್ಲಿ ಅತೀ ಸಂತೋಷದದಿಂದ ಮಾತನಾಡಿಸಿದ ಹುಡುಗಿಯಂದರೆ ಅದು ನೀನೆ . ಎಲ್ಲ ನನ್ನನ್ನ ಹೊರಗಿನವನು , ನಿಗೂಢವಾಗಿ ಏನೋ ಮಾಡುತ್ತಿದ್ದನೆ ಎಂದು ದೂರ ತಳ್ಳಿದರು . ಅದರೆ ನೀನು ನನ್ನನ್ನ ಅಚ್ಚಿಕೊಂಡೆ , ಕಾಫಿ ಕುಡಿಸಿದೆ , ನನ್ನ ಜೊತೆಯಿದ್ದ ಆ ಕ್ಷಣ ನಿನ್ನ ಕಣ್ಣಗಳಲಿದ್ದ ಗೆಲುವುಕಂಡಿದ್ದೆ .. ಸ್ಯಾಂಕಿ ರೋಡ್ನಲ್ಲಿ ನಡೆದು ಹೋಗಿತ್ತಿರುವಾಗ ನಿನ್ನ ಆ ಕಿರುನಗೆ ಪ್ರೀತಿಬಿರಿದ್ದನ್ನು ಗಮನಿಸಿದ್ದೆ... I'm greatfull to you , ಅದರೆ ಶಾಲಿನಿ ನನ್ನ ಬಗ್ಗೆ ನೀನು ತಿಳಿದುಕೊಂಡಿಲ್ಲ ಅನಿಸುತ್ತೆ , I'm not a nice man to know.. ನಾನು ತುಂಬಾ ಮನುಷ್ಯನಲ್ಲ...ನಾನು ದೊಡ್ಡ ಕನಸನ್ನ ಹೊತ್ತಿದ್ದೆನೆ , ಸಾಧಿಸುವುದು ಬಹಳಷ್ಟಿವೆ..
   What do you know about me , ನನ್ನ ಬಗ್ಗೆ ಏನು ಗೊತ್ತು..ನನ್ನ ಕುಟುಂಬವೇ ವಿಚಿತ್ರ , ನಿನ್ನಂತ ಶ್ರೀಮಂತರ ಮಗಳು ಈ ಬೀಕರಿಯನ್ನು ಪ್ರೀತಿಸುವುದೆ , NO ಸಮಾಜ ಒಪಲ್ಲ.. ಸಮಾಜ ಏಕೆ ನಾನೇ ಒಪ್ಪುವುದಿಲ್ಲ..
              ಕ್ಷಮೆ ಇರಲಿ,                                   
                                                                                                     
                                                                                                                 - ನಿನ್ನ ಹಿಮು

   ಯಾವುದೆ ಎರಡನೇ ಯೋಚನೆ ಇಲ್ಲದೆ ಕೇವಲ ೩೦ secondನಲ್ಲಿ ಪತ್ರ ಬರೆದು ಮುಗಿಸಿ ಎರಡನೇ ಬಾರಿಯು ಹೋದದೆ ಸ್ವತಃ ಶಾಲಿನಿಗೆ ಕೊಟ್ಟುಬಂದಿದ್ದ ಹಿಮಾಂಶುವಿನ ಮನಸ್ಸಿನಲ್ಲಿ ಒಂದು ಚಿಂತೆ. "ನಿನ್ನ ಹಿಮು" ಅಂತ ನನಗೆ ತಿಳಿಯದೆ ಬರೆದುಬಿಟ್ಟೆನಲ್ಲ! , ಆ ಪದ ಮನಸ್ಸಿನಿಂದ ನೆರವಾಗಿ ಅಕ್ಷರ ರೂಪದಲ್ಲಿ ಪೇಪರ್‍್ಮೇಲೆ ಇಳಿದಿತ್ತು . ಹಿಮಾಂಶು ಮತ್ತಷ್ಟು ಯೋಚಿಸ ತೊಡಗಿದ . ಶಾಲಿನಿಯ ಆ ನಗು , ಅವಳ ಮುಂಗುರುಳು ಈಗ ತಾನೆ ಹಚ್ಚಿದ ದೀಪದಂತೆ ಕನುತ್ತಿದ್ದ ಕಣ್ಣುಗಳು ಹಿಮಾಂಶುವನ್ನು ಕಾಡತೋಡಗಿದವು , ಒಂದು ಕ್ಷಣ ತಾನೆ ಏನು ಮಾಡುತ್ತಿದೆನೆಂದು ಅರಿವು ಕೂಡ ಬಂದಿರಲಿಲ್ಲ ಶಾಲಿನಿಯ ಹಿಮುವುಗೆ!!
                                             *   *   *  *

       ಅತ್ತ ಬೆಂಗಳೂರಿನಿಂದ ಭಬನೆಶ್ವರಕ್ಕೆ ತಲುಪುತ್ತಿದ್ದ ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ತಿರ್ವಗೊಂಡಿತ್ತು..   ಕರ್ನಾಟಕ-ಅಂಧ್ರದ ಅಷ್ಟು ರೈಲ್ವೆ ರೂಟುಗಳಲ್ಲು ಭೀಗಿ ಬಂದೊಬಸ್ತ್. ಅಷ್ಟು ಗಿಜಿಗುಡುತ್ತಿದ್ದ  ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಪೋಲಿಸ್ ಬೂಟುಗಳ ಶಬ್ದ ಹೊರತುಪಡಿಸಿದರೆ ನೀರವ ಮೌನ . ನಿಶ್ದವಲ್ಲಿ ಜೀವ ಪಡೆದಿತ್ತು . special task forceನ Operation Rail Road Killer ಕಾರ್ಯಚರಣೆ ಶುರುವಾದಗಲಿಂದ ಯಾವುದೆ ಹತ್ಯೆಯಾಗಿರಲಿಲ್ಲ , ಇತ್ತ Investigation ಟೀಮ್ ಮೈಕೊಡವಿ  ನಿಂತಿತ್ತು . ಕಳೆದ ನಾಲ್ಕು ತಿಂಗಳಿಂದ record ಆದ CC  cameraಗಳ ದೃಶ್ಯ , mobile phone network ಮತ್ತು ಟ್ರೇನ್ನಲ್ಲಿ ಸಿಕ್ಕಿದ್ದ ಕೆಲವು ದೃಶ್ಯಗಳ ಬಗ್ಗೆ ವಿಸ್ತೃತವಾದ ಅಧ್ಯಯನ ಮಾಡ ತೊಡಗಿತ್ತು . Especially ಹುನ್ನಿಮೆಯ ಹಿಂದು ಮುಂದು  ಮೂರು ದಿನಗಳ ದೃಶ್ಯ ಮತ್ತು ಟೀಕೆಟ್ ಗಳ details ಪ್ರತಿಯೊಂದನ್ನು ಕಲೆಯಾಕಲಾಗಿತ್ತು ಹತ್ತು ದಿನಗಳ ನಂತರ investigation team ವರದಿಯನ್ನು tiger ಪ್ರತಪ್ ಗೆ ನೀಡಲಾಗಿತ್ತು . They had a first susscess in this operation... they got a hint.. the big hint ...ಹಂತಕರ ಬಗ್ಗೆ ಸಕ್ಷಿಗಳ ಜೊತೆ ಕೆಲವು ದೃಶ್ಯಗಳು ಸಿಕ್ಕಿಬಿಡ್ತು. ಹುಣ್ಣಿಮೆಯ ಕೊಲೆಗಳ ರಹಸ್ಯ ಭೇದಿಸಲು ಅಣಿಯಾದರು STF ತಂಡ!!
                                                                           (ಮುಂದುವರೆಯುತ್ತದೆ-to be continued)

10 Oct 2014

ಅವಳ ನೆನಪಲ್ಲಿ ೩!!

ಶಬ್ದಗಳಿಲ್ಲಿದೆ ನಿಶಬ್ದವಾದೆ
ಮಾತುಗಳಿಲ್ಲದೆ ರೋಮಾಚನವಾದೆ
ಕನಸುಗಳಿಲ್ಲದೆ ಕತ್ತಲಾದೆ
ನೀನಿಲ್ಲದೆ ನಾ! ಬರಿದಾದೆ!!

ಗಾಡಕತ್ತಲೆಯಲ್ಲಿ ಕನಸಕಂಡೆ
ನನ್ನೊಲವಿನ ಹುಡುಗಿ ಎಲ್ಲಿದಳೆಂದು?!;
ಸುತ್ತಲೂ ಮುತ್ತಲೂ ಎಲ್ಲೆಲ್ಲೂ ಕತ್ತಲು
ನೀನೆ ನನ್ನ ಮನದೊಳಗೆ ದೀಪ ಹಚ್ಚಿದಂತಾಯ್ತು!!

ಅಂದು ಏಕೆ ಸಿಕ್ಕೆಯೊ ಬಸ್ಸಿನಲ್ಲಿ
ಇಂದು ಏಕೆ ಮಾಯವಾದೆ ಮರೆಯಲ್ಲಿ
ನಿನಗಾಗಿ ಕಾಯುತ್ತಿರುವೆ ನನಿಲ್ಲಿ
ಎಲ್ಲಿರುವೆ ಹುಡುಗಿ ಬಾ ನನ್ನ ಬಳಿ ಇಲ್ಲಿ!
 ಹಣತೆಯನ್ನು ಕೈಲಿಡಿದು ಕಾಯುತ್ತಿರುವೆ  ಹುಡುಗಿ.....
                            ನಿನಗಾಗಿ.. ನಿನ್ನ ಪ್ರೀತಿಗಾಗಿ...!!
                                                                            -ಮಂಜುನಾಥ್

9 Oct 2014

ಅವಳ ನೆನಪಲ್ಲಿ!!-೨

ರಾತ್ರಿಯ ಕಗ್ಗತ್ತಲು ಭಯವಾಗಿತ್ತು
ಯಾವುದೋ ನೆನಪಲ್ಲಿ ನಿದ್ದೆಮಾಡಿದ್ದೆ;
ಬೆಳಗಿನ ಜಾವದ ಸವಿಗನಸು ಸಿಹಿಯಾಗಿತ್ತು
ನಿನ್ನ ನೆನಪಲ್ಲೆ ಹಾಸಿಗೆಬಿಟ್ಟಿದ್ದೆ!!

ಸಾವಿರ ಕನಸನ್ನು ಹೊತ್ತು ನಿನ್ನ ಬಳಿ ಬಂದೆ
ನಿನ್ನ ಆ ಸಿಹಿ ನಗುವಿನಲ್ಲಿ ಮಿಂದೆ;
ನಿನ್ನ ಕಣ್ಣುಗಳಲಿದ್ದ ಭಾವ ನನಗೆ ಪ್ರೀತಿ ಹುಟ್ಟಿಸಿತು
ನಿನ್ನ ಮೇಲೋ , ನಿನ್ನ ಕಣ್ಣ ಮೇಲೋ!!

ಸೆಪ್ಟಂಬರ‍್ನ ಮೊದಲ ಮುಂಗಾರು ಬೀರುಸಾಗಿತ್ತು
ಬಿಳುತ್ತಿದ್ದ ಪ್ರತಿ ಹನಿಯು ನಿನ್ನ ನೆನಪಿಸಿತ್ತು;
mes ಕಾಲೇಜಿನಿಂದ ವಿಜಯನಗರದವರೆಗೂ ಕಾಣಿಸಿದ್ದು ನೀನೆ
ಅದು ಹೇಗೆ ನೀ ನನ್ನೊಲವಿಗೆ ಸಿಕ್ಕೆ!!
ಮಳೆಯ ಹನಿಯನ್ನು ಕೈಲಿಡಿದು ಕಾಯುತ್ತಿರುವೆ ಹುಡುಗಿ
                                                ನಿನಗಾಗಿ.... ನಿನ್ನ ಪ್ರೀತಿಗಾಗಿ.....!!
                                                                                 -ಮಂಜುನಾಥ್
close