Showing posts with label horror story. Show all posts
Showing posts with label horror story. Show all posts

18 Oct 2014

ಹುಣ್ಣಿಮೆಯ ನಿಶಬ್ಧ ಭಾಗ - ೫

          ಪ್ರಶಾಂತಿ ಎಕ್ಸ್‌ಪ್ರೇಸ್‌ನಲ್ಲಿ ನಡೆಯುತ್ತಿದ್ದ ಸರಣಿ ಕೊಲೆಗಳ ರಹಸ್ಯ ಭೇದಿಸಲು ಸ್ಥಾಪಿಸಿದ special task force ಕೇವಲ ಹತ್ತು ದಿನಗಳಲ್ಲೆ ಮೊದಲ ಯಶಸ್ಸು ಪಡೆದಿತ್ತು , ಹುಣ್ಣಮೆಯ ದಿನದಂದು ನಡೆಯುತ್ತಿದ್ದ ಕೊಲೆಗಳಿಗೆ ಸಂಭದಿಸಿದಂತೆ ನಾಲ್ಕರು ಸಕ್ಷಿ ಸಿಕ್ಕಿತ್ತು.. ಅದಕ್ಕಿಂತ್ತ ಹೆಚ್ಚಾಗಿ ಅವರಿಗೆ ಸಿಸಿಟಿವಿ ದೃಶ್ಯವಳಿಗಳು ಸಿಕ್ಕಿತ್ತು! ಕೂಡಲೇ ಮುಖ್ಯಮಂತ್ರಿ , ಗೃಹಸಚಿವ ಮತ್ತು DGPಗೆ ವರದಿ ಒಪ್ಪಿಸಿ 'operation railroad killer' ಕಾರ್ಯಚರಣೆ ಆರಂಭಿಸಿದರು ಟೈಗರ್‍  ಪ್ರತಾಪ್‌ಕುಮಾರ್‍್ನೇತೃತ್ವದ STF ತಂಡ..
                                                           *  *  *

  ಹಿಮಾಂಶು ಕೊಟ್ಟಿದ್ದ ಪತ್ರವನ್ನು ಮೂರು ನಿಮಿಷದಲ್ಲಿ ಹತ್ತು ಬಾರಿ ಓದಿಕೊಂಡಿದ್ದಳು , ಆ ಪತ್ರದಲ್ಲಿ ಬರೆದ ಪ್ರತಿ ಪದಗಳಿಂದೆ ಅಡಗಿದ್ದ ಭಾವ ಅರಿತಿದ್ದಳು ಶಾಲಿನಿ , ಆಗ ರಾತ್ರಿ ೧೦:೪೫ ನಿಮಿಷ ಆ ನಿರ್ಜನ ನಲ್ಲಮಲ ಅರಣ್ಯ ಪ್ರದೇಶದ ನಡುವೆ ಇದ್ದ ಅಧ್ಯಯನ ಕೇಂದ್ರಲ್ಲಿದ್ದದ್ದು ೧೩ ಮಂದಿ ಮಾತ್ರ . ಆ ಭಯಂಕರ ಕತ್ತಲ ರಾತ್ರಿಯಲ್ಲಿ ಹಿಮಾಂಶು ರೂಮಿಗೆ ನಡೆದು ಹೋದವಳೆ ಬಾಗಿಲು ತಟ್ಟಿದ್ದಳು . ಜಗತ್ತಿನ ಅರಿವಿಲ್ಲದ ಹಾಗೆ ಗೋಪಲ ಕೃಷ್ಣ ಅಡಿಗರ ಕವಿತೆ ಓದಿ ಕುಳಿತ್ತಿದ್ದ ಹಿಮಾಂಶು...
            " ಒಡೆದು ಬಿದ್ದ ಕೊಳಲು ನಾನು
         ನಾದ ಬರದು ನನ್ನಲ್ಲಿ!!"

                                                                                                ಎರಡು ಸಾಲಿನಲ್ಲಿ ಅದೆಷ್ಟು ಅರ್ಥ!!
ಬಾಗಿಲು ತಟ್ಟಿದ ಶಬ್ದ ಕೇಳಿದವನೆ ಪುನಃ ವಾಸ್ತವ ಜಗತ್ತಿಗೆ ಇಳಿದ , ಶಾಲಿನಿ ಬಾಗಿಲಲ್ಲಿ ನಿಂತದ್ದು ನೋಡಿ ಸಂತೋಷದೊಡನೆ ಅಚ್ಚರಿಪಟ್ಟ ಹಿಮಾಂಶು !!!
  " Himu , Shall we go for a walk " ಅಂದಿದ್ದ ಶಾಲಿನಿಯ ಕಣ್ಣುಗಳಲ್ಲಿ ವಿನಂತಿಯಿತ್ತು.
ತಲೆಯಾಡಿಸಿದವನೆ ಅ ನೀರವ ರಾತ್ರಿಯಲ್ಲಿ ಮುದ್ದು ಮುದ್ದು ಹುಡಿಗಿ ಶಾಲಿನಿಯೊಂದಿಗೆ ಹೆಜ್ಜೆ ಇಡುತ್ತ ಹೊರಟ ಹಿಮಾಂಶು.. ೧೦ ನಿಮಿಷ ಯಾವುದೇ ಮಾತಿಲ್ಲದೆ ನಡೆಯುತ್ತಾ ಹೋಗುತ್ತಿದವರಲ್ಲಿ ಶಾಲಿನಿಯು ಹಾಡಿದ ಹಾಡು ಮೌನ ಮುರಿದಿತ್ತು..  "ಓಲವೇ ಜೀವನ ಸಾ‍ಷತ್‌ಕಾರ , ಓಲವೇ ಮರೆಯಾದ ಮಮಾಕರ "
ಶಾಲಿನಿಯೊಂದಿಗೆ ನಲ್ಲಮಲ ಅರಣ್ಯದಲ್ಲಿ ರಾತ್ರಿ ೧೧.೦೦ ಗಂಟೆಗೆ ಆ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನನ್ನು ಹುಡುಕುತ್ತಾ ಹೋಗುತ್ತಿದ್ದ ಹಿಮಾಂಶುವಿಗೆ ಈ ಹಾಡು ೧೪ ವರ್ಷಗಳ ಹಿಂದಕ್ಕೆ ಕರೆದೊಯ್ತು !! ಅದು ಇಂತಹುದೆ ಒಂದು ಹುಣ್ಣಿಮೆಯ ರಾತ್ರಿ ಚಂದ್ರನೇಕೊ ಮರೆಯಾಗಿದ್ದ.. ಸದಾಶಿವನಗರದ ಎರಡನೇ ಕ್ರಾಸಿನ ಮನೆಮೇಲಿನ Terraceನಲ್ಲಿ ಕುತ್ತಿದ್ದ ಹಿಮಾಂಶು ಮತ್ತು ಅವನ ತಾಯಿ ಪ್ರಶಾಂತಿನಿ ಮೌನದಿಂದಲೇ ಈ ಹಾಡು ಕೇಳಿಸಿಕೊಂಡಿದ್ದರು...

      ಓಲವೇ ಜೀವನ ಸಾಷತ್‌ಕಾರ....ಓಲವೇ ಮರೆಯಾದ ಮಮಾಕರ...!!

  ಐದು ವರ್ಷದ ಪುಟ್ಟ ಹಿಮಾಂಶು , ಅಮ್ಮನಿಗೆ ಕೇಳುತ್ತಾನೆ , " ಅಮ್ಮ , ಅಪ್ಪ ಏಲ್ಲಿಗ್‌ಗೊಗಿದ್ದಾನೆ... ನಂಗೆ , ಅಪ್ಪ ಬೇಕು " ಅಂತ ಭಾವಪೂರ್ವಕಾವಾಗಿ ಕೇಳಿದ್ದ.... ಅಪ್ಪ !! ಮರೆತುಹೋಗಿದ್ದ ಪ್ರೋಫೆಸರ್‌ ಪ್ರಶಾಂತಿನಿಗೆ ನೆನಪಾದ , ಅತನ ಪ್ರತಿಯೊಂದು ಭಾವಗಳು ನೆನಪಾಗಿದ್ದವು ನಿಷ್ಕಲಮಶವಾಗಿದ್ದ ತನ್ನ ಅಕ್ಕನ ಮೇಲಾದ ದೌರ್ಜನ್ಯಗಳು ನೆನಪದವು , ಮೋಸ ನೆನಪಾದವು , ನಿವೇಧಿತಾ ನೆನಪದಳು !!!! ಎಲ್ಲದಿಕ್ಕಿಂತ ಮಿಗಿಲಾಗಿ ಮರೆತುಹೋಗಿದ್ದ ತನ್ನ ದ್ವೇಷ ನೆನಪಾಯ್ತು , REVENGE ಎಂಬ ಪದ ನೆನಪಾಗಿತ್ತು...
      ಮೂಡಬಿದರೆಯ ಅಳ್ವಸ್ ಕಾಲೇಜಿನಲ್ಲಿ ಮೊದಲ ಬಿಎ ಓದುತ್ತಿದ್ದ ಹುಡುಗಿ ನಿವೇಧಿತಾ , ಕಪ್ಪು ಕಾಡಿಗೆಗೆ ರೆಪ್ಪೆಯೊಡ್ಡಿ ಇಣಕು ನೋಡುತ್ತಿದ್ದ ಕಣ್ಣುಗಳು ಬೆಳಗಿನ ಜಾವದ ಮೊದಲ ಸೂರ್ಯಕಿರಣಗಳು ಕಿಟಕಿಯ ಮೂಲಕ ಇಣುಕಿ ನೋಡುತ್ತಿದ್ದ ಹಾಗೆ ಕಾಣಿಸಿತು , ಎತ್ತರವಾದ ನಿಲುವು , ಹಾಲು ಬಿಳುಪು ಬಣ್ಣದ ಕೆನ್ನೆ , ಕಾಲೇಜಿನಲ್ಲಿ ಅತೀ ಮುದ್ದು ಮುದ್ದುಗಿದ್ದ ಹುಡುಗಿ ನಿವೇಧಿತಾ... ಬಿಎ ಓದುತ್ತಿದ್ದ ಅವಳು ಅದೇಕೊ ವಾಮಚಾರದ ಬಗ್ಗೆ ಆಸಕ್ತಿ , ಮಾಟಗಾತಿ ಸುಬ್ಬಮ್ಮನ ಬಗ್ಗೆ ಆಸಕ್ತಿ . ಪ್ರತಿ ಅಮಾವಾಸೆ , ಹುಣ್ಣಿಮೆಯ ದಿನ ಸುಬ್ಬಮ್ಮ ಮಾರ್ಕಂಡಿಯನ್ನು ಓಲಿಸಿಕೊಳ್ಳುತ್ತಿದ್ದ ಬಗ್ಗೆ ವಿಪರೀತ ಆಸಕ್ತಿ ತೋರುತ್ತಿದ್ದಳು .. ಯಾರನ್ನು ನಂಬುತ್ತಿರದ , ಭಾವನೆಗಳೇ ಇಲ್ಲದ , ಸೆಂಟಿಮೆಂಟ್ ಅವಳ ಭ್ರೂ ಮಧ್ಯದ ರಕ್ತಕುಂಕುಮದಲ್ಲೂ ಜಾಗವಿಲ್ಲದ ಸುಬ್ಬಮ್ಮ ನಿವೇಧಿತಾಳನ್ನು ಅಚ್ಚುಕೊಂಡಿದ್ದಳು . ಆಕೆಗೆ ಪ್ರತಿವಿದ್ಯಯ ಬಗ್ಗೆಯೂ ಮಾಹಿತಿ ನೀಡುತ್ತಿದ್ದಳು... ಅಷ್ಟು Ruthless ಅಗಿದ್ದ ಮಾಟಗಾತಿ ಸುಬ್ಬಮ್ಮ ಆಕೆಯ ಬದುಕಿನ ಕಟ್ಟಕಡೆಯ ಗುರಿಯನ್ನು ನಿವೇಧಿತಾಗೆ ತಿಳಿಸಿದ್ದಳು.. ಅದು ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು , ಕ್ಷುದ್ರವಿದ್ಯಯಲ್ಲಿ ಪರಂಗತವಾಗುವುದು , ಕಾಮ ಪಿಶಾಚಿಯನ್ನು ಪ್ರತ್ಯಕ್ಷಿಸುವುದು . ಇದೆಲ್ಲ ನೋಡುತ್ತಿದ್ದ ನಿವೇಧಿತಾಗೆ ಭಯವಾಗಲಿ , ಅಳುಕಗಲಿ ಇರಲಿಲ್ಲ ಅದರೆ ಅವಳಿಗೆ ಮತ್ತಷ್ಟು ಅಸಕ್ತಿ ಹೆಚ್ಚುತ್ತಿತ್ತು...
       ತನ್ನ ಓದು , ಮನೆ , ಮಾಟದ ಬಗ್ಗೆ ಆಸಕ್ತಿಯಿದ್ದ ನಿವೇಧಿತಾಗೆ ಹುಡುಗನೊಬ್ಬ ಪ್ರೀತಿಯ ಬಯಕೆಯಿಟ್ಟ ತುಂಬಾ ಸ್ಪುರದೃಪಿಯಾದ ಯುವಕನನ್ನು ನಿವೇಧಿತಾ ಮರುಪ್ರೀತಿಸದೆ ಇರಲಿಲ್ಲ... ಇದು ತನ್ನ ಬದುಕಿಗೆ Brutal ಅಗಬಹುದು , ನನ್ನ destroy ಮಾಡಬಹುದೆಂದು ಊಹೇ ಕೂಡ ಮಾಡಿರಲಿಲ್ಲ ಅವಳು!!
ಪ್ರೀತಿ ಎರಡು ವರ್ಷಗಳ ಕಾಲ ಮುಂದುವರೆದಿತ್ತು , ಮರಗಳನ್ನು ಸುತ್ತಿಯಾಗಿತ್ತು , ಸಿನಿಮಾ long ride ಹೀಗೆ ಎಂಜಾಯ್‌ ಮಾಡಿದ್ದರು... ನಿವೇಧಿತಾ ಅವನನ್ನು ತುಂಬಾ ನಂಬಿದ್ದಳು , ಪ್ರೀತಿಸಿದಳು , ಅರದಿಸಿದ್ದಳು .... ಎರಡು ಧರ್ಮದ ದಂಪತಿಗಳ ಮಗನಗಿದ್ದರಿಂದ ನಿವೇಧಿತಾಳನ್ನು ಅವನೊಂದಿಗೆ ಮದುವೆ ಮಾಡಿಕೊಳ್ಳಲು ಅವಳ ತಂದೆ ಓಪ್ಪಿಕೊಂಡಿರಲಿಲ್ಲ... ಅದರೆ ಶ್ರೀಮಂತರ ಮಗಳಳಾಗಿದ್ದ ನಿವೇಧಿತಾ ಓಡಿ ಹೋಗಿ ಮದುವೆಯಾಗಿದ್ದರು.. ಅದರೆ..?? ಅದರೆ ನಿವೇಧಿತಾಳ ಅಸ್ತಿಯನ್ನು ನೋಡಿ ಪ್ರೀತಿಸಿದ್ದ ಅತ ಅವಳನ್ನ ಜಸ್ಟ್ ಯೂಸ್ ಮಾಡಿ ಎಸೆದಿದ್ದ.. ಕಷ್ಟ ಕೊಟ್ಟ , ಬರುಬರುತ್ತಾ ತುಂಬಾ brutalಅಗಿ behave ಮಾಡಿದ್ದ ಆತ ಅವಳನ್ನ ಕೊಲೆಮಾಡಿಬಿಟ್ಟಿದ್ದ... ಅವನು  Alexander ರಾಜನಾಥ ಚಟರ್ಜಿ...  
  ಆಗ ತಾನೇ national ಕಾಲೇಜಿನಲ್ಲಿ  I pu ಓದುತ್ತಿದ್ದ ಮುಗ್ದ ಹುಡುಗಿ ಪ್ರಶಾಂತಿನಿಗೆ ಈ ವಿಷಯ ತಿಳಿಯದೆ ಇರಲಿಲ್ಲ !! ಅಕ್ಕನನ್ನು ಕೊಂದವನ ಬಗ್ಗೆ ಉಗ್ರ ಕೋಪ ಮಾಡಿಕೊಂಡಳು . ಮನೆಯಲ್ಲಿ ವಿಷಯ ತಿಳಿಸಿದರೆ ಏನು ಆಗದು ಎಂದು ಅರೆತ ಪ್ರಶಾಂತಿನಿ ಮಾಟಗಾತಿ ಸುಬ್ಬಮ್ಮನಿಗೆ ವಿಷಯ ತಿಳಿಸಿಲು ಅಣಿಯದಳು...
   ಅದು ಮೆಜೆಸ್ಟಿಕ್ಕಿನ ಎದುರು , ಆಯುರ್ವೇದದ ಆಸತ್ರೆಯ ಪಕ್ಕ ರಾಜ್‌ಮಹಲ್ ಹೊಟೇಲೆಂಬ ಮುಗಿಲೆತ್ತರದ ಕಟ್ಟಡದ ಮುಂದೆಯೇ , ಮೆಜೆಸ್ಟಿಕ್ಕಿನಿಂದ ಮಲ್ಲೇಸ್ವರಕ್ಕೆ ಹೋಗುವ ಅಂಡರ್‍್ಬ್ರಿಡ್ಜ್ ರಸ್ತೆಯ ಒಂದು ಪಾರ್ಶದ ಮೇಲೆ ಹರಡಿಕೊಂಡಿರುವ ಮಹಾ ಕೊಳಕು ಸ್ಲಮ್ಮೇ ಲಕ್ಷಣಪುರಿ!! ಅದು ಇವತ್ತಿಗೂ ಇದೆ. ಮೆಜೆಸ್ಟಿಕ್ಕಿನ ಎಲ್ಲ ಪಾಪವೂ ಘನೀಭವಗೊಂಡು ಈ ಲಕ್ಷಣಪುರಿ ಸೃಷ್ಟಿಯಾದಂತಿದೆ . ಅಂತಹ ಕೆಟ್ಟಾಕೊಳಕು ಸ್ಲಮ್ಮೆನಲ್ಲಿ ಒಂದೇ ಒಂದು ಬ್ರಾಹ್ಮಣರ ಮನೆ!
   ಅದು ಮಾಟಗಾತಿ ಸುಬ್ಬಮ್ಮನದು !!
 ಜಗತ್ತಿನಲ್ಲಿ ತಾನು ಪ್ರೀತಿಸಿದ , ಗೌರವಿಸಿ , ನಂಬಿದ್ದ ಹುಡುಗಿ ನಿವೇಧಿತಾ ಸಾವು ಮಾಟಗಾತಿ ಸುಬ್ಬಮ್ಮನಿಗೆ ವಿಚಲಿತಗೊಳಿಸಿತು . ಭಾವನೆಗಳೇ ಮರೆತುಹೋಗಿದ್ದ ಸುಬ್ಬಮ್ಮ ಒಂದು ಕ್ಷಣ ನಿವೇಧಿತಾಳಿ ಗೋಸ್ಕರ ಮರುಗಿದ್ದಳು . ತನ್ನ ಬದುಕಿನ ಗುರಿ ಒಂದಲ್ಲ ಎರಡು!! ಎಂದು ತೀರ್ಮಾನ ಮಾಡಿದಳು... ಒಂದು ಕರ್ಣ ಪಿಶಾಚಿ-ಮಾರ್ಕಂಡಿಯನ್ನು ಒಲಿಸಿಕೊಳ್ಳುವುದು ಎರಡನೇಯದು alexander ರಾಜನಾಥ ಚಟರ್ಜಿಯನ್ನು ತನ್ನ ದಿವ್ಯ ಶಕ್ತಿಯಿಂದಲೆ ಸಾಯುಸುವುದು.... ಅದು ಮಾರ್ಕಂಡಿಗೆ ಬಲಿ ನಿಡುವುದು!!
     ಹೀಗೆ ೧೪ ವರ್ಷದ ಹಿಂದಿನ ನೆನಪಿಗೆ ಹೋಗಿದ್ದ ಹಿಮಾಂಶು ವಾಸ್ತವಕ್ಕೆ ಇಳಿದಿದ್ದ , ಮಾಟಗಾತಿ ಸುಬ್ಬಮ್ಮ ಈಗಗಲೇ  ಕರ್ಣಪಿಶಾಚಿ *ಯನ್ನು ಒಲಿಸಿಕೊಳ್ಳಲು ದೊಡ್ಡ ಮಾರಣ ಹೋಮ ಶುರುಮಾಡಿ ೮ ತಿಂಗಳಾಗಿತ್ತು.. ೮ ತಿಂಗಳಲ್ಲಿ ೧೬ ಬಲಿ ; ಇನ್ನು ಕೇವಲ ೪ ತಿಂಗಳಲ್ಲಿ ಭಾರತದ ಕೇಲವೆ ಕ್ಷುದ್ರಸಾಧಕರು ಸಾಧಿಸಿಕೊಂಡಿರುವ ಉಗ್ರ ವಿದ್ಯಾಯನ್ನು ಸಾಧಿಸಿಕೊಳ್ಳಲಿದ್ದಳೆ ಮಾಟಗಾತಿ ಸುಬ್ಬಮ್ಮ... ಅವಳ ೨೪ ಬಲಿ alexander ರಾಜನಾಥ ಚಟರ್ಜಿನ......??
                                                                          (ಮುಂದುವರೆಯುತ್ತದೆ-to be continued)
( ವಿ.ಸೂ - * ಕರ್ಣಪಿಶಾಚಿ : ಇದೊಂದು ದೊಡ್ಡ ಗಾತ್ರದ ಶಕ್ತಿಯುಳ್ಳ ಕ್ಷುದ್ರ ದೇವತೆ. ಜನ ಸರಿಯಾದೆ ಹೆಸರು ಗೊತ್ತಿಲ್ಲದೆ ಕರ್ಣಪಿಶಾಚಿ ಎನ್ನುತ್ತಾರೆ . ಅದರೆ ಆಕೆಯ ನಿಜವಾದ ಹೆಸರು ಕಾಮಕರ್ಣ ಪಿಶಾಚಿ . ವಾಮಾಚಾರದ ಆಳ-ಗಲ ಬಲ್ಲವರಿಗೆ ಅವಳ ತಾಕತ್ತು-ಅಪಾಯಗಳೆರಡೂ ಗೊತ್ತು . ಕ್ಷುದ್ರ ಔಪಸನೇಯ ನಂಬಲಿಕ್ಕಾಗದ ವಾಸ್ತವವೋ ಗೊತ್ತಿಲ್ಲ . ಪ್ರತ್ಯಕ್ಷವಾಗುವಕೆ nude goddess !! ಆಕೆ ಬಟ್ಟೆ ಧರಿಸುವುದಿಲ್ಲ . ಆದರೆ ಅವಳ ಶಕ್ತಿ ಊಹೆಗಿಂತಲು ತುಂಬಾ ಹೆಚ್ಚು.. ಕರ್ಣ ಪಿಶಾಚಿನಿಯೆದುರು ಮಗುವಾಗಬೇಕು . ಕೊಂಚ ಆಯತಪ್ಪದರು ಆಕೆ ರಕ್ತ ಕುಡಿಯುತ್ತಾಳೆ.... ನನ್ನ ಮುಂಬರುವ ವಾಮಾಚಾರದ ಭಾಗದಲ್ಲಿ ಇದರ ಬಗ್ಗೆ ಹೆಚ್ಚು ವಿವರಿಸಲು ಪ್ರಯತ್ನಿಸುತ್ತೆನೆ.. ಕರ್ಣ ಪಿಶಾಚಿನಿಯ ಬಗ್ಗೆ ಹೆಚ್ಚು ತಿಳಿಯಲು ೧೯೦೬ರಲ್ಲಿ ಪ್ರಕಟವಾಗಿರುವ ತಮಿಳು ಗ್ರಂಥವೊಂದನ್ನು ಓದಬಹುದು ಅಥವಾ ಅಂಥ್ರದ ಪಶ್ಚಿಮ ಗೋದವರಿಯ ಚುಂಗುರಿ ಮತ್ತು ನರ‍್ಮಿ ಹಳ್ಳಿಗಳಿಗೆ ಬೇಟಿನಿಡಬಹುದು - ಮಂಜುನಾಥ್ )

11 Oct 2014

ಹುಣ್ಣಿಮೆಯ ನಿಶಬ್ದ ಭಾಗ-೪

    (Romantic thriller ಹುಣ್ಣಿಮೆಯ ನಿಶಬ್ದದ ಹಿಂದಿನ ಮೂರು ಭಾಗವನ್ನು ಓದಲು ಇಲ್ಲಿ click ಮಾಡಿ)

        ಭಾಗ-೪

  ಆಶ್ಚರ್ಯವಾಗಬಹುದು! ಸಹಸ್ರಾರು ಚದರಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ಯಾವುದೇ ದಾರಿಯಿಲ್ಲದ ಈ  ಸ್ಥಳದಲ್ಲಿ ಯಾರು ಈ ಅಧ್ಯಯನ ಕೇಂದ್ರವನ್ನು ಕಟ್ಟಿರಬಹುದೆಂದು??   ಹಿಂದೆ ತಿರುಗಿದರೆ ಭೊರ್ಗರೆಯಿತ್ತಿರುವ ಕೃಷ್ಣೆ ಮುಂದೆ ಕತ್ತಲಿಗು ಬೆಚ್ಚಿಬಿಳಿಸಿವ ಕಾಡು. ನಲ್ಲಮಲ ಅರಣ್ಯಪ್ರದೇಶ ತನ್ನ ಬೆರನ್ನ ಅಂಧ್ರದ ಉದ್ದಗಲಕ್ಕು ಚಾಚಿ ತಮಿಳುನಾಡು ತಲುಪಿತ್ತು , ಶ್ರೀಶೈಲಂ ಡ್ಯಾಮ್ನಲ್ಲಿ ಕೃಷ್ಣೆ ರೌದ್ರರಮಣೀಯವಾಗಿ ತನ್ನ ಶಕ್ತಿಯನ್ನು ತೋರಿಸುತ್ತಿದ್ದಳೆ , ದೂರದಲ್ಲೆಲ್ಲೊ ಹುಲಿಗಳ ಗರ್ಜನೆ ಆನೆಯ ಕೂಗು ಅವುಗಳಿಗೆ ಪೈಪೋಟಿ ನಿಡುವಂತೆ ಶಬ್ದಮಾಡುತ್ತ ಹರಿಯುತ್ತಿರುವ ಕೃಷ್ಣ ನದಿ , ಪ್ರಕೃತಿಯ ಸೋಬಗನ್ನು ಸಾರಿ ಸಾರಿ ಹೇಳುತ್ತಿತ್ತು . ನಲ್ಲಮಲ ಅರಣ್ಯದ ಆ ಭೀಕರ ಸೌಂದರ್ಯ ಕಂಡ ಬೆಂಗಲೂರಿನ ಸೆಂಟ್ ಡೇವಿಡ್ ಕಾಲೇಜಿನ ವಿದ್ಯಾರ್ಥಿಗಳ ಕಣ್ಣು ಆಶ್ಚರ್ಯಪಟ್ಟಿತ್ತು . ಪ್ರಕೃತಿಯ ಸೌಂದರ್ಯ , ಕಣ್ಣುಹಯಿಸಿದಷ್ಟು ದೂರ ಡಟ್ಟವಾಗಿ ಬೆಳದಿದ್ದ ದೊಡ್ಡ ದೊಡ್ಡ ಮರಗಳು , ಅದರೊಳಗೆ ಹಾಸುಹೊಕ್ಕಗಿದ್ದ ಪ್ರಾಣಗಳ ದಂಡು , ಕೃಷ್ಣನದಿಯ ಭೊರ್ಗರೆತ... ಇದರ ಸೌಂದರ್ಯ ಕಂಡು ಅವರ ಮನಸಲಿದ್ದ ಸಂತೋಷ , ಸಂಭ್ರಮ ಮತ್ತಷ್ಟು ಹೆಚ್ಚಿಸಿತು , ನಲ್ಲಮಲ ಹುಲಿ ಸಂರಕ್ಷಣ ಹಾಗೂ ಶ್ರೀಶೈಲಂ ಡ್ಯಾಮ್ನ Hydroelectric power station ಬಗ್ಗೆ ಅಧ್ಯಯನ ಮಾಡಲು ಬಂದಿದ್ದೆವೆ ಎನ್ನುವುದು ಮರೆತುಹೋಗುವಷ್ಟು ಸುಂದರವಾಗಿತ್ತು ಆ ನೋಟ...
    ಎಲ್ಲರೂ ಆ ಸೌಂದರ್ಯವನ್ನು ಒಂದು split secondನಷ್ಟು ಹೊತ್ತು ಮಿಸ್ ಮಾಡದೆ ನೋಡುತ್ತಿದ್ದರೆ ಇತ್ತ ಶಾಲಿನಿಗೇನೊ ತಳಮಳ . ಹಿಮಾಂಶು ತಾನು ನೀಡಿದ್ದ ಪತ್ರಕ್ಕೆ ಇನ್ನ ಉತ್ತರಿಸಿಲ್ಲವೆಂದು!!  ಪ್ರತಿ ನಿಮಿಷ , ಪ್ರತಿ ಕ್ಷಣ ಶಾಲಿನಿ ಅದರ ಬಗ್ಗೆಯೆ ಯೋಚಿಸುತ್ತಿದ್ದಳು . ಹಿಮಾಂಶು ಇದಾವುದರ ಬಗ್ಗೆಯು ಅರಿವಿಲ್ಲದೆ ಪೂ.ತೇಜಸ್ವಿಯ ಕಾಡಿನ Romantic thriller 'ಜುಗಾರಿ ಕ್ರಾಸ್ ' ಕಾದಂಬರಿಯನ್ನು ಓದುತ್ತ ಪ್ರತಿ ನಿಮಿಷವನ್ನು ಆ ಅರಣ್ಯದಲ್ಲಿ enjoy ಮಾಡ್ತಿದ್ದ...

                      *  *  *

      ACP ಲೂಹಿಸ್ ವಿನ್ಸೆಂಟ್ ತನ್ನ ಇಡೀ ಜೀವಮಾನದ ದೊಡ್ಡ ಮೀಷನ್ ಆಗಿದ್ದ ರೈಲ್ವೆ ಹಂತಕನ ಸೇರೆಯಲ್ಲಿ ವಿಫಲವಾಗಿದ್ದರು . ಮಾಧ್ಯಮಗಳಲ್ಲಿ ಸಾಲು ಸಾಲು ವರದಿಗಳು ಬರುತ್ತಾ ಇದ್ದವು .   ವಿನ್ಸೆಂಟ್ನ ಕಾರ್ಯಶಮತೆಯ ಬಗ್ಗೆಯು ಪ್ರಶ್ನಿಸತೋಡಗಿದವು , ಅಂಧ್ರದ ಪೋಲಿಸ್ ಕಾಮಿಷ್ನರ್‍್ತಲೆಯತ್ತಿ ಮಾತನಾಡದಂತಾಯ್ತು . ಇತ್ತ ಬೆಂಗಳೂರಿನಲ್ಲಿ ಒತ್ತಡ ಹೆಚ್ಚುತ್ತಿತ್ತು... ಇದಕ್ಕೆ ಪುಷ್ಟಿನೀಡುವಂತೆ ಅಂದು ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ನಡೆಸಿದ ದಿನ ಧರ್ಮವರಂ-ಅನಂತಪುರ ಜಂಕ್ಷನ್ ಅದರೂ ಕೊಲೆಯಾಗದನ್ನು ಕಂಡು , ಕೊಲೆಗಾರ ಸಿಕ್ಕಿಲದ ಕಂಡು ಪೋಲಿಸರು ಕಾರ್ಯಚರಣೆ ಸ್ಥಗಿತಗೊಳಿಸಿದರು ಆದರೆ ಅಲ್ಲಿ ಅವರ ಊಹೆಗೆ ನಿಲುಕದ ಘಟನೆ ನಡೆದಿತ್ತು . ಅನಂತಪುರ ಕೇಂದ್ರ ರೈಲ್ವೆ ಸ್ಟೆಷನಿಂದ ನಿದಾನವಾಗಿ ಹೊರಡುತ್ತಿದ್ದ    ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಯಾರಿಗೂ ತಿಳಿಯದೆ ಕೊಲೆನಡೆದು ಹೋಗಿತ್ತು . ಆ ಕೊಲೆಯಲ್ಲಿದದ್ದು ಕೂಡ ಅದೇ ಭೀಕರತೆಯಲ್ಲಿ ಕರ್ನೂಲ್ ಜಿಲ್ಲೆಯ ಮಧ್ಯ ವಯಸ್ಸಿನ ಹೆಣ್ಣುಮಗಳ ಗಂಟಲನ್ನು ಕುಯ್ದು ಹೊತ್ತುಹೋಗಿದ್ದರು ಹಂತಕರು . ರಕ್ತ ಅ ಬೋಗಿಯಲ್ಲಿ ನೀರು ಹರಿದಂತೆ ಹರಿದಿತ್ತು .  ಪ್ರಶಾಂತಿ ಎಕ್ಸಪ್ರೇಸ್ನ ೧೬ನೇ ಬೋಗಿ ಸ್ತಬ್ದವಾಗಿತ್ತು , ಅ ಹುಣ್ಣಿಮೆಯ ರಾತ್ರಿಯಲ್ಲಿ ಅನಂತಪುರದಿಂದ ೪೦ ಕೀಲೊ ದೂರದಲ್ಲಿ  ಪ್ರಶಾಂತಿ ಎಕ್ಸಪ್ರೇಸ್ ನಿಶಬ್ದವಾಗಿತ್ತು . ಅಂದು  ಪ್ರಶಾಂತಿ ಎಕ್ಸಪ್ರೇಸ್ ೧೫ನೇ ಹತ್ಯೆಕಂಡಿತ್ತು . ಒಂದಿಡಿ ರೈಲ್ವೆ ಸಿಬಂದಿ ಬೆಚ್ಚಿಬಿದ್ದರು ! ಪತ್ರಿಕೆಗಳಲ್ಲಿ ೩-೪ ಪುಟ ಈ ಸರಣಿ ಹತ್ಯಗಳ ವರದಿ ಇರುತ್ತಿತ್ತು . ಹಿರಿಯ ಪರ್ತಕರ್ತರು ಸಂಪಾದಕೀಯ ಬರೆದರು . ಗಂಟೆಗಟ್ಟಲೆ ಟಿವಿಗಳಲ್ಲಿ , ರಸ್ತೆಯಲ್ಲಿ , ಸರ್ಕಾರಿ ಕಚೇರಿಯಲ್ಲಿ ಚರ್ಚೆ ನಡೆಯಿತ್ತು...  ಕರ್ನಾಟಕ-ಅಂಧ್ರ ವಿಧಾನಸಭೆಗಳಲ್ಲಿ ಅಲ್ಲೊಲ-ಕಲ್ಲೊಲ . ಪರೆದ್ತಿಯ ಭೀಕರತೆ ಮರೆತು ಅಡಲಿತ ರೂಡ ಪಕ್ಷಕ್ಕೆ ಹೀಯಳಿಸುತ್ತಿತ್ತು ಪ್ರತಿಪಕ್ಷಗಳು!!
    ಸಾಲು ಸಾಲು ಕೊಲೆಗಳು ಭೀಕರತೆ , ಕೇಸಿನ ಗಾಂಬಿರ‍್ಯವರೆತ ಎರೆಡು ರಾಜ್ಯದ ಮುಖ್ಯಮಂತ್ರಿಗಳು ಒಟ್ಟಾಗಿ , ಒಮ್ಮತವಾಗಿ ಒಂದು ನಿರ್ಧಾರ ಕೈಗೊಂಡರು , ಅದೇ special task forceನ ರಚನೆ ....."Operation Railroad Killer "  ಜಂಟಿಯಾಗಿ  ಪ್ರಾರಂಭವಾಗೇ ಬಿಟ್ಟಿತ್ತು..
   ಕರ್ನಾಟಕ-ಅಂಧ್ರದ ಪ್ರಮುಖ ಹಿರಿಯ ಪೋಲಿಸ್ ಅಧಿಕಾರಿಗಳು ಒಂದಾಗಿ Special Task Forceನ ರಚನೆಯಾಯಿತು... ಇದರ ನೇತೃತ್ವ ವಯಿಸಿದ್ದು.... ಹೆಸರು ಕೇಳಿದರೆ ಭೂಗತ ಲೋಕವೆ ನಡುಗುವ ಹಾಗೆ ಮಾಡುತ್ತಿದ್ದ ಕರ್ನಾಟಕದ Daring ಅಧಿಕಾರಿ tiger ಪ್ರತಪ್... ೧೬ ಜನರಿದ್ದ ಹಿರಿಯ ಪೋಲಿಸ್ ತಂಡ , ಜೊತೆಗೆ ೧೨ ACP , ೧೦ DCP , ೪೫ SI , ೧೫೦ PCಗಳು.. "Operation Rail Road Killer " ಕಾರ್ಯಚರಣೆಗೆ ಇಳಿದಿತ್ತು ದೊಡ್ಡ ಪೋಲಿಸ್ ತಂಡ.
                 *  *  *

       ಶಾಲಿನಿ ,
            ನನ್ನ ಜೀವನದಲ್ಲಿ ಅತೀ ಸಂತೋಷದದಿಂದ ಮಾತನಾಡಿಸಿದ ಹುಡುಗಿಯಂದರೆ ಅದು ನೀನೆ . ಎಲ್ಲ ನನ್ನನ್ನ ಹೊರಗಿನವನು , ನಿಗೂಢವಾಗಿ ಏನೋ ಮಾಡುತ್ತಿದ್ದನೆ ಎಂದು ದೂರ ತಳ್ಳಿದರು . ಅದರೆ ನೀನು ನನ್ನನ್ನ ಅಚ್ಚಿಕೊಂಡೆ , ಕಾಫಿ ಕುಡಿಸಿದೆ , ನನ್ನ ಜೊತೆಯಿದ್ದ ಆ ಕ್ಷಣ ನಿನ್ನ ಕಣ್ಣಗಳಲಿದ್ದ ಗೆಲುವುಕಂಡಿದ್ದೆ .. ಸ್ಯಾಂಕಿ ರೋಡ್ನಲ್ಲಿ ನಡೆದು ಹೋಗಿತ್ತಿರುವಾಗ ನಿನ್ನ ಆ ಕಿರುನಗೆ ಪ್ರೀತಿಬಿರಿದ್ದನ್ನು ಗಮನಿಸಿದ್ದೆ... I'm greatfull to you , ಅದರೆ ಶಾಲಿನಿ ನನ್ನ ಬಗ್ಗೆ ನೀನು ತಿಳಿದುಕೊಂಡಿಲ್ಲ ಅನಿಸುತ್ತೆ , I'm not a nice man to know.. ನಾನು ತುಂಬಾ ಮನುಷ್ಯನಲ್ಲ...ನಾನು ದೊಡ್ಡ ಕನಸನ್ನ ಹೊತ್ತಿದ್ದೆನೆ , ಸಾಧಿಸುವುದು ಬಹಳಷ್ಟಿವೆ..
   What do you know about me , ನನ್ನ ಬಗ್ಗೆ ಏನು ಗೊತ್ತು..ನನ್ನ ಕುಟುಂಬವೇ ವಿಚಿತ್ರ , ನಿನ್ನಂತ ಶ್ರೀಮಂತರ ಮಗಳು ಈ ಬೀಕರಿಯನ್ನು ಪ್ರೀತಿಸುವುದೆ , NO ಸಮಾಜ ಒಪಲ್ಲ.. ಸಮಾಜ ಏಕೆ ನಾನೇ ಒಪ್ಪುವುದಿಲ್ಲ..
              ಕ್ಷಮೆ ಇರಲಿ,                                   
                                                                                                     
                                                                                                                 - ನಿನ್ನ ಹಿಮು

   ಯಾವುದೆ ಎರಡನೇ ಯೋಚನೆ ಇಲ್ಲದೆ ಕೇವಲ ೩೦ secondನಲ್ಲಿ ಪತ್ರ ಬರೆದು ಮುಗಿಸಿ ಎರಡನೇ ಬಾರಿಯು ಹೋದದೆ ಸ್ವತಃ ಶಾಲಿನಿಗೆ ಕೊಟ್ಟುಬಂದಿದ್ದ ಹಿಮಾಂಶುವಿನ ಮನಸ್ಸಿನಲ್ಲಿ ಒಂದು ಚಿಂತೆ. "ನಿನ್ನ ಹಿಮು" ಅಂತ ನನಗೆ ತಿಳಿಯದೆ ಬರೆದುಬಿಟ್ಟೆನಲ್ಲ! , ಆ ಪದ ಮನಸ್ಸಿನಿಂದ ನೆರವಾಗಿ ಅಕ್ಷರ ರೂಪದಲ್ಲಿ ಪೇಪರ್‍್ಮೇಲೆ ಇಳಿದಿತ್ತು . ಹಿಮಾಂಶು ಮತ್ತಷ್ಟು ಯೋಚಿಸ ತೊಡಗಿದ . ಶಾಲಿನಿಯ ಆ ನಗು , ಅವಳ ಮುಂಗುರುಳು ಈಗ ತಾನೆ ಹಚ್ಚಿದ ದೀಪದಂತೆ ಕನುತ್ತಿದ್ದ ಕಣ್ಣುಗಳು ಹಿಮಾಂಶುವನ್ನು ಕಾಡತೋಡಗಿದವು , ಒಂದು ಕ್ಷಣ ತಾನೆ ಏನು ಮಾಡುತ್ತಿದೆನೆಂದು ಅರಿವು ಕೂಡ ಬಂದಿರಲಿಲ್ಲ ಶಾಲಿನಿಯ ಹಿಮುವುಗೆ!!
                                             *   *   *  *

       ಅತ್ತ ಬೆಂಗಳೂರಿನಿಂದ ಭಬನೆಶ್ವರಕ್ಕೆ ತಲುಪುತ್ತಿದ್ದ ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಕಾರ್ಯಚರಣೆ ತಿರ್ವಗೊಂಡಿತ್ತು..   ಕರ್ನಾಟಕ-ಅಂಧ್ರದ ಅಷ್ಟು ರೈಲ್ವೆ ರೂಟುಗಳಲ್ಲು ಭೀಗಿ ಬಂದೊಬಸ್ತ್. ಅಷ್ಟು ಗಿಜಿಗುಡುತ್ತಿದ್ದ  ಪ್ರಶಾಂತಿ ಎಕ್ಸಪ್ರೇಸ್ನಲ್ಲಿ  ಪೋಲಿಸ್ ಬೂಟುಗಳ ಶಬ್ದ ಹೊರತುಪಡಿಸಿದರೆ ನೀರವ ಮೌನ . ನಿಶ್ದವಲ್ಲಿ ಜೀವ ಪಡೆದಿತ್ತು . special task forceನ Operation Rail Road Killer ಕಾರ್ಯಚರಣೆ ಶುರುವಾದಗಲಿಂದ ಯಾವುದೆ ಹತ್ಯೆಯಾಗಿರಲಿಲ್ಲ , ಇತ್ತ Investigation ಟೀಮ್ ಮೈಕೊಡವಿ  ನಿಂತಿತ್ತು . ಕಳೆದ ನಾಲ್ಕು ತಿಂಗಳಿಂದ record ಆದ CC  cameraಗಳ ದೃಶ್ಯ , mobile phone network ಮತ್ತು ಟ್ರೇನ್ನಲ್ಲಿ ಸಿಕ್ಕಿದ್ದ ಕೆಲವು ದೃಶ್ಯಗಳ ಬಗ್ಗೆ ವಿಸ್ತೃತವಾದ ಅಧ್ಯಯನ ಮಾಡ ತೊಡಗಿತ್ತು . Especially ಹುನ್ನಿಮೆಯ ಹಿಂದು ಮುಂದು  ಮೂರು ದಿನಗಳ ದೃಶ್ಯ ಮತ್ತು ಟೀಕೆಟ್ ಗಳ details ಪ್ರತಿಯೊಂದನ್ನು ಕಲೆಯಾಕಲಾಗಿತ್ತು ಹತ್ತು ದಿನಗಳ ನಂತರ investigation team ವರದಿಯನ್ನು tiger ಪ್ರತಪ್ ಗೆ ನೀಡಲಾಗಿತ್ತು . They had a first susscess in this operation... they got a hint.. the big hint ...ಹಂತಕರ ಬಗ್ಗೆ ಸಕ್ಷಿಗಳ ಜೊತೆ ಕೆಲವು ದೃಶ್ಯಗಳು ಸಿಕ್ಕಿಬಿಡ್ತು. ಹುಣ್ಣಿಮೆಯ ಕೊಲೆಗಳ ರಹಸ್ಯ ಭೇದಿಸಲು ಅಣಿಯಾದರು STF ತಂಡ!!
                                                                           (ಮುಂದುವರೆಯುತ್ತದೆ-to be continued)

3 Oct 2014

ಹುಣ್ಣಿಮೆಯ ನಿಶಬ್ಧ ಭಾಗ-೩

    

    ( ಹಿಂದಿನ ಭಾಗದಿಂದ- ಹಿಂಟ್ ಸಿಕ್ಕಿದ ಖುಷಿಯಲ್ಲಿ AC Viencient ಹಂತಕರ ಬೆನ್ನೆಟ್ಟಿ ಹೊರಟರು . ಶಾಲಿನಿ ತನಗೆ ಅರಿವಿಲ್ಲದೆ ಹಿಮಾಂಶುವಿಗೆ ಮತಷ್ಟು ಹತ್ತಿರವಾಗುತ್ತ ಹೋದಳು, ಹಿಮಾಂಶು ಹುಣ್ಣಿಮೆಯ ದಿನ ಯಾಕೆ ಕಾಲೇಜಿಗೆ ಬರುವುದಿಲ್ಲ ಮತ್ತು ಈ ಹುಣ್ಣಮೆಯ ದಿನ ಕಾಲೇಜಿಗೆ ಬಂದದ್ದು ಕೂಡ ನಿಗೂಢವಾಗೆಯಿತ್ತು)

   ಭಾಗ-೩  

       ಪುಟ್ಟ ಹಿಂಟ್ ದೊರೆತದ್ದೆ ತಡ ಹಿಂದುಪುರದ Assistant commisioner vincient ಬೆಂಗಳೂರು ಪೋಲಿಸರೊಂದಿಗೆ ದೊಡ್ಡ plan ಸಿದ್ದಪಡಿಸಿದ್ದರು "It was a very intellectual plan" ರಾತ್ರೊರಾತ್ರಿ ತಾತಲ್ಕಿಕ  CC cameraಗಳನ್ನು ರೈಲಿನ ಎಲ್ಲಾ  ಬೋಗಿಗು ಫಿಕ್ಸ್ ಮಾಡಲಾಗಿತ್ತು. ತಾವು ಪೋಲಿಸ್ ಎಂಬುದೇ ಗೊತ್ತಗದ ಮಟ್ಟಗೆ ವೇಶ ಮರಿಸಿಕೊಂಡರು , "Fully loaded English made CZ೭೫ SEMI AUTOMATIC PISTOL"ಗಳನ್ನ ಇಟ್ಟುಕೊಂಡಿದ್ದರು , ಒಂದು bullet, just one bullet ಹಂತಕನ ತಲೆಗೆ ಬಿದ್ದರೆ. ಅವನ ಮೆದುಲು ಟ್ರೇನ್ನ ಚವಣಿಗೆ ಕಚ್ಚಿಕೊಳ್ಳತ್ತಿತ್ತೆನೊ? ಅಷ್ಟು damage , mobility , acclereation ಇರೋ pistolನನ್ನು ಇಟ್ಟುಕೊಂಡಿದ್ದರು Assistant commisioner of Police Louis vincient , ಟ್ರೇನ್ನ ಅಷ್ಟು ಬೋಗಿಯಲ್ಲು ಮಫ್ತಿಯಲ್ಲಿದ್ದ ಪೋಲಿಸರು ಸುತ್ತುವರಿದಿದ್ದರು. ಕಳೆದ  ನಾಲ್ಕು ಹುಣ್ಣಮೆಗಳಿಂದ ನಡೆಯುತ್ತಿದ್ದ ಸಾಲು ಸಾಲು ಕೊಲೆಗಳು ಅವರನ್ನ ನಿದ್ದೆಗೆಡಿಸಿತ್ತು " It was reallu an INTELLECTUAL plan" ಹದ್ದಿನ ಕಣ್ಣಂತೆ ಟ್ರೇನ್ಗೆ ಹತ್ತುತಿದ್ದ ಪ್ರತಿ ಒಬ್ಬರನ್ನು ಗಮನಿಸುತ್ತಿದ್ದರು  , ಆಗ ಬೆಳಗ್ಗೆ ಆರು ಗಂಟೆ ಮುವತ್ತು ನಿಮಿಷ ಬೆಂಗಳೂರು-ಭಬನೆಶ್ವರ ಟ್ರೇನ್ ನಂ.೧೮೪೬೪ ಪ್ರಶಾಂತಿ ಎಕ್ಸಪ್ರೇಸ್ ನಿಧಾನವಾಗಿ ಸದ್ದು ಮಾಡುತ್ತ , ಕೂಗುತ್ತ ಚಲಿಸಲಾರಂಬಿಸಿತು.

    ಕರ್ನಾಟಕ -ಅಂಧ್ರದ ಜೀವನಾಡಿಯಾಗಿದ್ದ ಪ್ರಶಾಂತಿ ಎಕ್ಸಪ್ರೇಸ್ ಭರ್ತಿ ೬೦೦೦ ಪ್ರಯಾಣಿಕರರನ್ನು ಒತ್ತುಹೊಯ್ಯತ್ತಿತ್ತು , ಟ್ರೇನ್ ಯಲಹಂಕ , ಗೌರಿಬಿದನೂರು ದಾಟಿತ್ತು ಪೋಲಿಸರ ಕಣ್ಣಗಳು ಮೊನಚಗಿತ್ತು , ಬಲಿಗಾಗಿ ಕಾಯುತ್ತ ಬೆಚ್ಚನೆ  Assistant commisioner vincientನ ಕಾಲುಗಳ ಸಾಕ್ಸನಲ್ಲಿ ಅಡಗಿ ಕೂತ್ತಿತ್ತು English made CZ೭೫ SEMI AUTOMATIC PISTOL, ೯ಕಿಮೀ ಪೋಲಿಸರ ಎದೆಬಡಿತ ಹೆಚ್ಚಗುತ್ತಿತ್ತು , ಬೋಗಿಯಲ್ಲಿದ್ದ ಅಷ್ಟು ಜನರನ್ನು ದಿಟ್ಟಿಸಿ ನೋಡುತ್ತಿದ್ದರು.ಒಂದೇ ಸಮ ತಾವು ತಂದಿದ್ದ hidden mikeನಲ್ಲಿ ಆದೇಷ ಪಾಸ್ ಆಗುತ್ತಿತ್ತು .ಹಿಂದುಪುರ,   ಕರ್ನಾಟಕ -ಅಂಧ್ರದ ಗಡಿ ಪ್ರದೇಶವಾದ ಹಿಂದುಪುರ ಬಂದೆಬಿಟ್ಟಿತ್ತು . ಪೋಲಿಸರ ಕಣ್ಣುಗಳು ಏನ್ನನ್ನೊ ಹುಡುಕುತಿದೆ , ಪ್ರತಿಯೊಂದು ಜಾಗವನ್ನು ದಿಟ್ಟಿಸಿ ನೋಡುತ್ತಿತ್ತು , no, ಯಾವುದೇ ಕೊಲೆ ಈ ಬಾರಿ ನಡೆದಿರಲಿಲ್ಲ , they didn't give up- let us wait untill we reach Ananthpur ಅಂದಿದ್ದರು AC Vincient . They were waiting to catch the killers . No, they were dissappointed ಕೊಲೆಗಾರರು ಈ ಬಾರಿ ಇಲ್ಲಿಗೆ ಬಂದಿರಲಿಲ್ಲ.. ಬಂದಿರಲಿಲ್ವ??
     *   *   *

      ಕಾಮಟಿಪುರದ ಕಾವೇರಿ , ಬೆಳಕನ್ನು ಕಂಡು ಅದೆಷ್ಟು ದಿನಗಳಾಗಿದ್ದವು. ಅವಳ ಬದುಕಿದ್ದದ್ದೆ ಕತ್ತಲೆಯಲ್ಲಿ. ರಾತ್ರಿಯಾದ ಕೂಡಲೆ ಒಂದು ತೆಳ್ಳನೆಯ ಸೀರೆ ಹುಟ್ಟು. ಹೂವು ಮುಡಿದು ಹೊರಟಲೆಂದರೆ ಪುನಃ ಹಿಂತುರುಗುತ್ತಿದ್ದದ್ದೆ ಮರುದಿನ ಬೆಳಗ್ಗೆಯೇ. ಕಾವೇರಿ ಕಸುಬು ಎಷ್ಟು ಪ್ರಸಿದ್ದಿ ಪಡೆದಿತ್ತು ಎಂದರೆ ಅವಳಿಗೆ ಹೆಸರು ತಂದಿಟ್ಟಿದ ಮುಂಬೈನ ಕೇಂಪು ಲೋಕ ಕಾಮಟಿಪುರದ ಗಲ್ಲಿಗಲ್ಲಿಯಲ್ಲೂ  ಗೊತ್ತಿತ್ತು. ಕಾವೇರಿಯನ್ನು ಮುಂಬೈನಿಂದಲು ಜನ ಹುಡುಕಿಬರುತ್ತಿದರು . ಕಾವೇರಿ ಕತ್ತಲ ಲೋಕದ ಕಸುಬಿನಲ್ಲಿ ಮುಳುಗಿ ಹೋಗಿದ್ದಳು "ಹುಣ್ಣಮೆಯ ದಿನ : ಹೊರತುಪಡಿಸಿ . ಅಮ್ಮ ಯಾಕೆ ಹೀಗೆ , ಇದರಿಂದ ಹೊರಗೆ ಬಾ! ನಾನು ನಿನ್ನನ್ನು ನೋಡಿಕೊಳ್ಳುತ್ತೆನೆಂದು ಹೇಳಲು ಯೋಚಿಸಿದ್ದನಾದರು. ಅಮ್ಮನ ಬಗ್ಗೆ ಜಿಗುಪ್ಸೆ ಹುಟ್ಟಿಸಿತು ಹಿಮಾಂಶುವಿಗೆ . ಅಮ್ಮನ ಮೇಲಿದ್ದ ಕೋಪ , ಅಮ್ಮನ ಮೇಲಿದ್ದ ಜಿಗುಪ್ಸೆ , ತೀರಸ್ಕರ , ಇವನನ್ನು ಮೌನದಿಂದಲೆ ಬೆಳೆಯಲು ಹೆಡುಮಾಡಿತ್ತು , ಯಾರೊಂದಗೂ ಬೆರೆದಿರಲಿಲ್ಲ . ಯಾರ ಪ್ರೀತಿಯು ಸಿಕಿರಲಿಲ್ಲ. ಹಿಮಾಂಶು , ಅನಾಥ ಮಕ್ಕಳಿಗೂ ಹೀನವಾಗಿ ಬೆಳೆದಿದ್ದ  . ಅಮ್ಮನೊಂದಿಗೆ ಸಂತೋಷ , ನೋವು , ನಲಿವು , ಪ್ರೀತಿ , ಅನುಭವ ಯಾವುದನ್ನು ಅಂಚುಕೊಂಡಿರಲಿಲ್ಲ , ಎಷ್ಟೊ ಬಾರಿ ಸಾಯಲು ಪ್ರಯತ್ನಿಸಿದ್ದನಾದರು , "ಇಲ್ಲ , ಈ ಜಗತ್ತಿನಲ್ಲಿ ಎಲ್ಲಾ ನನ್ನನ್ನು ತಿರುಗಿನೊಡಬೇಕು , ಸಾದಿಸಬೇಕು" ಎಂದು ತನ್ನಲ್ಲೆ ತಾನೆ ಹೇಳಿಕೊಂಡಿದ್ದ ಹಿಮಾಂಶು...
     ಇತ್ತ ತಾಯಿ ತಾನೇಕೆ ಹೀಗೆ.. ಇದರ ಹಿಂದಿನ ಕಾರಣ ಏನೆಂಬುದು ಎಂದು ವಿವರಿಸಲು ಹೊದರು ಯಾರು ಕೇಳುತ್ತಿರಲಿಲ್ಲ , ನನ್ನ ನಿಜವಾದ ಹೆಸರು ಕಾವೇರಿಯಲ್ಲ , ಪ್ರಶಾಂತಿನಿ ಅಂತ ಸ್ವತಃ ತನ್ನ ಮಗ ಹಿಮಾಂಶುವಿಗೆ ಹೇಳೆದರು ಕೂಡ ನಂಬುತ್ತಿರಲಿಲ್ಲ. ಅವಳ ಜೀವನದಲ್ಲಿ ನಡೆದ ಆ ದೊಡ್ಡ ಮೋಸ, ಹಿಂಸೆ ಕಾಡುತ್ತಲೆ ಇತ್ತು , "ಎಷ್ಟು ಸುಂದರವಾಗಿತ್ತು ನನ್ನ ಬದಕು " ಅಂತ ತನ್ನೊಳಗೆ ತಾನೆ ಕೇಳಿಕೊಳ್ಳುತ್ತಿದ್ದಲು ಕಾವೇರಮ್ಮ
    ಸುಂದರವಾದ ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಪ್ರಶಾಂತಿನಿ ಲವ್ ಮಾಡಿ ಪ್ರೋಫೆಸರ್‍್ನನ್ನು ಮದುವೆಯಾಗಿದ್ದಳು . ಜೀವನದಲ್ಲಿ ತನಗಿದ್ದ ಎಲ್ಲಾ comfort ನೀಡಿದ್ದ ಪ್ರಶಾಂತಿನಿ ಗಂಡ  . ಬೆಂಗಳೂರಿನ ಜಯನಗರದಂತ ಜಯನಗರದಲ್ಲೊಂದು ಸ್ವಂತ ಮನೆ , ಇಬ್ಬರು ಮಕ್ಕಳು. ಹೀಗೆ ಶಾಂತ ಸಾಗರದಲ್ಲಿ ಸಾಗುತ್ತಿದ್ದ ದೋಣಿಗೆ ನಾವುಕ ಮಾರೆಯಾಗಿ ಹೋಗಿದ್ದ , ಸುಂದರವಾದ ಪ್ರಶಾಂತಿನಿಯನ್ನು ಬಿಟ್ಟು ಹೋಗಿದ್ದ ಪ್ರೋಫೆಸರ್ "‍ತನ್ನ ಬದುಕಿನ ಎಲ್ಲಾ ಬಾಗಿಲು ಮುಚ್ಚಿಕೊಂಡಗಲೇ ಅಲ್ವೇ ನಾನು ಈ ಕಸುಬಿಗೆ ಇಳಿದದ್ದು " ಎಂದು ತನ್ನೊಳಗೆ ತಾನೆ ಕೊರಗುತ್ತಿದ್ದಳು ಪ್ರಶಾಂತಿನಿ @ ಕಾವೇರಿ
   *   *   *
    Alaxander ರಾಜನಾಥ ಚಟರ್ಜಿ  , ಬೆಂಗಳೂರಿನ ಪ್ರತಿಷ್ಠತ ಕಾಲೇಜು ಪ್ರೀನ್ಸಿಪಾಲ್ ಗೆ ಇರಬೇಕಾದ ಸಂತೋಷ ಆಗಲಿ , comfort ಆಗಲಿ ಇರಲಿಲ್ಲ . ಒಬ್ಬಂಟಿ ಬದುಕಿನಲ್ಲಿ ಒಂದು ಹೆಣ್ಣು ಮಗುವನ್ನು ತಾಯಿಯ ಆಸರೆಯಿಲ್ಲದೆ ಬೆಳೆಸಿದ್ದರು , ಆಕೆಗೆ comfortಗಿಂತ luxuryಯನ್ನೆ ನೀಡಿದ್ದ , but what ಇರಬೇಕಾದ ನೆಮ್ಮದಿಯೆ ಇರಲಿಲ್ಲ ಆಕೆಗೆ , ಮಧ್ಯರಾತ್ರಿಯಲ್ಲಿ  ಕಿಟರೆನೆ ಚಿರುತ್ತಿದ್ದಳು , ಅಪ್ಪನಿದ್ದ ಬಳಿಗೆ ಓಡಿ ಬರುತ್ತಿದ್ದಳು ಸಿಂಧು...... ತಾನು ಚಿಕ್ಕ ವಯಸ್ಸಿನಲ್ಲೆ ಇದ್ದಾಗ ಅಮ್ಮನ ಬಿಟ್ಟು ಬಂದಿದ್ದ ಅಂತ ಗೊತ್ತಿತ್ತು. ಆದರೆ ಅಮ್ಮನ ಮಮತೆ , ಪ್ರೀತಿ ಕೊಟ್ಟು ಬೆಳೆಸಿದ್ದ ಚಿಕ್ಕಮ್ಮ ಇದ್ದಕ್ಕ್ಇದಂತೆ ತೀರಿಕೊಂಡಿದ್ದು ಆಕೆ ಮೇಲೆ ಗಾಢ ಪರಿಣಾಮ ಬೀರಿತ್ತು , ಯಾಕೋ ತನ್ನ ಸೀಮಿತ ಕಳೆದುಕೊಡಿದ್ದಳು ಸಿಂಧು
*  *  *
 
  ಅಂದು ಸ್ಯಾಂಕಿಯ ರಸ್ತೆಯಲ್ಲಿ ಅನಿರಿಕ್ಷಿತವಾಗಿ ಸಿಕ್ಕಿದ ಹಿಮಾಂಶು ಅಲ್ಲೆ MES ಕಾಲೇಜು ಬಳಿ ಇದ್ದ ಕಾಫಿ ಡೇ ಕರೆದೊಯ್ದು cappacio ಕುಡಿದ ನಂತರ ಶಾಲಿನಿಯ ಮನಸ್ಸೆಲ್ಲಿ ಹಿಮು ಅಂತ ಅಂತವಾಗಿ ಅವರಿಸಿಕೊಂಡಿದ್ದ .. ಎಂದು ತನ್ನ appreance ಬಗ್ಗೆ ಕಾಳಜಿವಯಸದ ಶಾಲಿನಿ ಆ ದಿನ ಮನಗೆ ಹೊದವಳೆ ತನ್ನ ಸೌಂದರ್ಯದ ಬಗ್ಗೆ ಯೋಚಿಸ ತೋಡಗಿದಲಳು.." Am I pretty enough to be a friend for my ಹಿಮು??" ಅಂತ ತನ್ನೊಳಗೆ ತಾನೆ ಕೇಳಿಕೊಂಡ ಶಾಲಿನಿಯ ಮುಖದಲ್ಲಿ ಸಣ್ಣದೊಂದು ನಗೆ ಆಕೆಯ ಕೆನ್ನೆಯನ್ನು ತಂಪುಮಾಡಿತ್ತು . ಈಗ ತಾನೇ ಹಚ್ಚಿದ್ದ ದೀಪದಂತೆ ಆಕೆಯ ಕಣ್ಣುಗಳು ಹೊಳೆಯುತದತಿದ್ದವು . ಯಾವುದೋ ಸಂತೋಷದಲ್ಲಿ ತನ್ನ bed ಮೇಲೆ ಅಂಗಾತ ಮಲಗಿ ಯೋಚಿಸತೊಡಗಿದಳು "ನಾನು ಹಿಮುನನ್ನು ಪ್ರೀತಿಸ ತೋಡಗಿದ್ದೆನ? Am I in love with him "   ಆಕೆಗೆ Clarity ಇರಲಿಲ್ಲ. confused stateನಲ್ಲಿದ್ದಳು ಜಗತ್ತಿನ ಎರಡನೇ ಅತೀ ಸುಂದರಿ ಶಾಲಿನಿ , ಯಾವುದೆ ದಾರಿ ಕಾಣದೆ ಹಿಮಾಂಶುವಿಗೆ ಬರೆಯತೊಡಗಿದಳು..

     ಪ್ರೀತಿಯ(?) ಹಿಮು ,
       ಈ ಪತ್ರ ನನ್ನ ಎದೆಯಲ್ಲಿ ಮೂಡಿನಿಂತು ದಿನಗಳೆ ಆಗಿದ್ದವು , I don't know whether I'm doing it right or not , ನೀನು ನನ್ನ ಜೊತೆಯಲ್ಲಿದಷ್ಟು ಹೊತ್ತು I feel comfort , ನಿನ್ನೊಂದಿಗೆ ನಡೆಯುವ ಪ್ರತಿ ಹೆಜ್ಜೆಯನ್ನು ನಾನು enjoy ಮಾಡಿದ್ದೆ , ನಿನ್ನ presence ನನ್ನ ಮನಸ್ಸಿಗೆ ಮುದ ನೀಡುತ್ತೆ.. ಬರೀ comfort , happy , sweetness , ಮುದ ನೀಡುವ ಅನುಭವ ಪ್ರೀತಿನ ಗೊತಿಲ್ಲ , ನೋ definately ಇದು ಲವ್ ಅಲ್ಲ , ಲವ್ ಇರಬಹುದ ಹಿಮು?? ನಿಜವಾಗಲೂ ಗೊತ್ತಿಲ್ಲ , but we are not just friends , we are more than  friends , ನಿನ್ನ ಉತ್ತರದ ನೀರಿಕ್ಷೆಯಲ್ಲಿ..
                                                                                           -ನಿನ್ನ ಶಾಲಿನಿ


   ಈ ರೀತಿ kanglishನಲ್ಲಿ ಪತ್ರ ಬರೆದು ಹಿಮಾಂಶುವಿಗೆ ನೀಡಿದ್ದಳು ಶಾಲಿನಿ , ಆತ ನೀಡಿದ್ದ ಉತ್ತರ ಶಾಲಿನಿಯನ್ನ ದಂಗುಬಡಿಸುವುದರೊಂದಿಗೆ ನೆಮ್ಮದಿನೀಡಿತ್ತು!!!?? 

29 Sept 2014

ಹುಣ್ಣಿಮೆಯ ನಿಶಬ್ಧ ಭಾಗ-೨

    (ಮೊದಲ ಭಾಗದಿಂದ-ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆದರು ಹಿಮಾಂಶು ಎಲ್ಲರಿಗೂ ನಿಗೂಢನಾಗಿದ್ದ.... ಹುಣ್ಣಿಮೆಯ ದಿನ ಕಾಲೇಜಿಗೆ ಬಾರದ ಹಿಮಾಂಶುವಿನ ಬಗ್ಗೆ  ಅನುಮಾನ ಮೂಡಿತ್ತು .... ತನಗೆ ತಿಳಿಯದೆ ಹಿಮಾಂಶುವಿನ ಕಡೆ ಶಾಲಿನಿಯ ಮನಸ್ಸು ವಾಲುತ್ತಿತ್ತು )
  ಹುಣ್ಣಿಮೆಯ ನಿಶಬ್ಧ ಮೊದಲ ಭಾಗ ಓದಲು ಇಲ್ಲಿ click ಮಾಡಿ.

 
      ಅವತ್ತು ಕೂಡ ಅಂತಹುದೇ ಒಂದು ಹುಣ್ಣಿಮೆಯ ದಿನ , ಇವತ್ತು ಹಿಮು ಬಂದಿರವಿಲ್ಲವೆಂದು ಶಾಲಿನಿಯ ಕಣ್ಣು ಹುಡುಗರ ಬೆಂಚಿನೆಡೆಗೆ ಹೋಗಿರಲಿಲ್ಲ...ಅವಳ ಪಕ್ಕದಲ್ಲಿದ್ದ ಪ್ರಾಥನ 'ಹಿಮಾಂಶು' ಬಂದಿದ್ದಾನೆಂದು ಉದ್ಗರಿಸಿದಳು..ಕ್ಲಾಸ್ ನಲ್ಲಿದ್ದ ಅಷ್ಟು ಜನರು ಹಿಮಾಂಶುನನ್ನು ದಿಟ್ಟಿಸಿ ನೋಡಿದರು , ಶಾಲಿನಿ ತಡೆಯಲಾಗದೆ "wow what a surprise, ಹಿಮು ಇವತ್ತು ನೀ ಬಂದಿದ್ಯಾ , ನಿನ್ನ ಹುಣ್ಣಿಮೆಯ ಕೆಲಸ ಮಾರೆತುಬಿಟ್ಯಾ"ವೆಂದು ವ್ಯಂಗ್ಯವಾಗಿ ಮಾತಾಡಿದ್ಳು... ಏನು ನಡೆದಿಲ್ಲ ಮತ್ತು ಯಾವುದೇ ಅಚ್ಚರಿಯಿಲ್ಲದೆ ಹಿಮಾಂಶು ಸಣ್ಣದೊಂದು ನಗೆ ಬೀರಿ ಸುಮ್ಮನಾಗಿದ್ದ
      ಹಿಮಾಂಶು ಪಕ್ಕದಲ್ಲಿ ಕುತ್ತಿದ್ದ ಚಿರಂತ್ "ಹಿಮಾಂಶು, ನೀನು ಎಲ್ಲಿರೋದು , ನೀನೇಕೆ ಇಷ್ಟು ನಿಗೂಡ , ಹುಣ್ಣಿಮೆ ದಿನ ಎಲ್ಲಿಗೆ ಹೊಗ್ತ್ಯ? ಯಾಕೋ ನಿನ್ನ ಮೇಲೆ ನನಗೆ ಅನುಮಾನ , ನೀನು ಏನೋ ಮಾಡ್ತಯಿದ್ಯ??!" ಎಂದು ಅನುಮಾನದಿಂದ ಕೇಳಿದ್ದ..   ಹಿಮಾಂಶು ಅವನನ್ನೆ ದಿಟ್ಟಿಸಿ ನೋಡಿದ, ಅವನ ಕಣ್ಣುಗಳಲ್ಲಿ ಏನೋ ಶಕ್ತಿಯಿದೆ ಎನಿಸಿದ ಚಿರಂತ್ ಗೆ ದಂಗುಬಡಿಸಿತ್ತು , ಭಯಗೊಂಡವನೆ ಅಲ್ಲಿಂದ ಎದ್ದುಹೋಗಿದ್ದ ಚಿರಂತ್ , ಆಗ ನಡೆಯುತ್ತಿದ್ದ ಕ್ಲಾಸ್ನಿಂದ ಅತ್ಯಂತ  ಭಯಗೊಂಡು ನಡುಗುತ್ತ ಹೋಡಿಹೋಗಿದ್ದ ಚಿರಂತ್ ರೋಡಿನಲ್ಲಿ ಯಾವುದೋ ಲಾರಿಗೆ ಸಿಕ್ಕು ಸತ್ತನೆಂಬ ಸುದ್ದಿ ಕಾಲೇಜಿನಲ್ಲಿ ಹರಿದಾಡಿತ್ತು..ಅವನ ಸಾವು ದಾರುಣವೇನಿಸಿದ್ದೆ ಇದಕ್ಕೆ..ತನ್ನ ಪಾಡಿಗೆ ಕಾಲೇಜು ರೋಡಿನ ಫುಟ್ ಬಾತ್ ಮೇಲೆ ಒಂದು ಸಿಗರೇಟ್ ಸೇದುತ್ತ ಏನೋ ಚಿಂತಿಸುತ್ತಿದ್ದ ಚಿರಂತ್ ಮೇಲೆ ಅತಿವೇಗವಾಗಿ ದನದ ಚರ್ಮವನ್ನು ಹೊತ್ತು ತರುತಿದ್ದ ಲಾರಿ ಬ್ರೇಕ್ ಫೇಲ್ ಆಗಿ ಯಾವುದೇ ಕಷ್ಟವಿಲ್ಲದೆ  ಚಕ್ರಗಳು ಅವನ ದೇಹದ ಮೇಲೆ ಅರಿದಿತ್ತು.. ರಕ್ತ ರೋಡಿನ ಇಕ್ಕೆಲಗಳಿಗು ಹರಿದಿತ್ತು , ಎದುರಿಗೆ ನಿಂತಿದ್ದ ಶಾಲಿನಿ ಗೆಳತಿ ಪ್ರಾರ್ಥನ ಮೇಲೆ ರಕ್ತ ಚಿಮ್ಮಿತ್ತು. ವಿಷಯ ತಿಳಿಯುತ್ತಿದಂತೆ ಕ್ಲಾಸಿನ ಅಷ್ಟು ಜನ ಓಡಿ ಬಂದಿದ್ದರು , ಹಿಮಾಂಶುವನ್ನ ಹೊರತುಪಡಿಸಿ... ಕಾರಣವಿಲ್ಲದೆ ಸತ್ತು ಹೋಗಿದ್ದ ಚಿರಂತ್. ಹಿಮಾಂಶು ಆ ಹುಣ್ಣಿಮೆಯ ದಿನ ಬಂದಿದ್ದಕ್ಕು ಒಂದು ಕಾರಣವಿತ್ತು!!!
                                                    * * *    * * *    * * *
     ಆಗ ತಾನೆ ಬಿದ್ದಿದ್ದ  ಅಲ್ಪ ಮಳೆ ಭಾನುವಾರದ ಸಂಜೆಯನ್ನು ಮತ್ತಷ್ಟು ತಂಪುಗೊಳಿಸಿತ್ತು , ಆ ನಿಚ್ಚಳ ಸಂಜೆಯನ್ನು enjoy ಮಾಡುತ್ತ ಹೋಗುತ್ತಿದ್ದ ಹಿಮಾಂಶು, ಶಾಲಿನಿಯ ಕಣ್ಣಗೆ ಬಿದ್ದಿದ್ದ..  ಬ್ಲೂ ಜಿಂನ್ಸ್ ಮೇಲೆ ಬಿಳಿ ಜುಬ್ಬ ಧರಿಸಿ , ಕ್ರಾಪ್ ತೆಗದ ತಲೆ , ಮುಗ್ಲ್ನಗೆ ಬಿರುತ್ತಿದ್ದ ತುಟಿಗಳು , ತಣ್ಣನೆಯಾ ಪ್ರಶಾಂತವಾದ ಕಣ್ಣಗಳು , ಇದೆ ಮೊದಲ ಬಾರಿಗೆ ಇಷ್ಟು ಸುಂದರವಾದ ಹಿಮಾಂಶುನನ್ನು ಮೊದಲ ಬಾರಿಗೆ ನೋಡಿದ್ದಳು ಶಾಲಿನಿ , ತಡೆಯಾಲಾಗದೆ ತನ್ನ ಕೈನಿಯನ್ನು ಹಿಮುವಿನ ಕಡೆ ತಿರುಗಿಸಿದಳು.
   ಶಾಲಿನಿ, ಹೇಳಿಮಾಡಿಸಿದ ದುಂಡನೆಯ ತಲೆಗೆ ಬಿಗಿಯಾಗಿ ಕಟ್ಟಿದ ತುರುಬು , ಅದರ ಹಿಂಬದಿಗೊಣದು ಚಿಟ್ಟೆಯಾ ಕ್ಲಿಪ್ , ಉತ್ತರಾಷಡದ ಮಳೆಯಂತೆ ಹೊಳೆಯುವ ವಜ್ರದ ಹರಳಿನ ಬೆಂಡೋಲೆ , ಅವಳ ಬಿಳಿ ಬಿಂದಿ, ಆ ನಗು ಹಿಮಾಂಶುನನ್ನು ಹೊಟ್ಟೆಕಿಚ್ಚಿಸುತ್ತಿತ್ತು..
  ಕೈನಿಯನ್ನು ನಿಲ್ಲಿಸಿದವಳೆ "hi" ಅಂದಿದ್ಲು.
 ಒಂದು ತೆಳುವಾದ ನಗೆ ಬೇರಿದ್ದ ಹಿಮಾಂಶು.
 "where are you going handsome " ಎಂದು ಕಿಲಕಿಲ ನಕ್ಕಿದ್ಲು.
 "ನಿನ್ನಷ್ಟು ಸುಂದರವಾಗೆನಿಲ್ಲ ನಾನು ,  i am just a normal man , ನೀನು ಸುಂದರಿ " ಎಂದಿದ್ದ ಅವನು  ಅವಳ ನಗುವನ್ನು ಕಣ್ತುಂಬ ತುಂಬಿಕೊಂಡ.
"ಹಿಮು , is that you talking   ನಿನಗೆ ಮಾತಡಕ್ಕೂಡ ಬರುತ್ತ " ಎಂದು ಅಚ್ಚರಿ ಪಟ್ಟಿದ್ದಳು ಶಾಲಿನಿ.
" ಅವತ್ತು ನಾನು ಹಾಗೆ ಮಾತಡಿರಬಾರದಿತ್ತು I'm sorry ಶಾಲಿನಿ " ಎಂದು ವಿನಂತಿಸಿಕೊಂಡ.
"chill ಹಿಮು ಅದ್ಯಾವುದನ್ನು ನಾನು ಮನಸ್ಸಿನಲ್ಲಿಟ್ಟುಕೊಂಡಿಲ್ಲ , at least ಇವತ್ತಾದರೂ ನಿನ್ನ ಜೊತೆ ಕಾಫಿ ಕುಡಿಬಹುದ?? " ಎಂದಳು .
"off course " ಎಂದವನೇ ಅಲ್ಲೆ ಪಕ್ಕದಲ್ಲಿದ್ದ ಕಾಫಿ ಡೇಗೆ ಕರೆದ್ಹೊದ..
"Thanks a lot Himu , its getting late I'll meet you tommorow " ಎಂದವಳೆ ತನ್ನ ಕೈನಿಯನ್ನು ಯಾವತ್ತು ಇಲ್ಲದ ಸಂತೋಷದಲ್ಲಿ ಓಡಿಸುತ ಹೋದಳು ಶಾಲಿನಿ , ಹಿಮುನನ್ನ ಮನಸ್ಸಿನಲ್ಲಿಟ್ಟುಕೊಂಡು.
                                                        *   *   *   *   *   *   *

      ಬೆಂಗಳೂರಿನಿಂದ ಭಬನೆಶ್ವರ ತಲುಪುತಿದ್ದ ಟ್ರೇನ್ ನಂ.೧೮೪೬೪ ಪ್ರಶಾಂತಿ ಎಕ್ಸಪ್ರೇಸ್ನಲ್ಲಿ ಇಂದಿನ ಆ ಪ್ರಶಾಂತತೆ ಇರಲಿಲ್ಲ , ಅಷ್ಟು busy ಹಾಗಿದ್ದ ಟ್ರೇನ್ ಕ್ರಮೇಣ ತನ್ನ ಪ್ರಯಣಿಕರು ಕಡಿಮೆಯಾಗುತ್ತಿರುವುದನ್ನು ನಿಶಬ್ಧದಿದಂದಲೆ ಗಮನಿಸಿತ್ತು , ಇದಕ್ಕಿಂತ ಹೆಚ್ಚು ತಲೆಕೆಡಿಸಿಕಂಡಿದ್ದು ಒಂದೀಡಿ ಪೋಲಿಸರ ದಂಡು.. ಬೆಂಗಳೂರು , ಅಂಧ್ರ ಮತ್ತು ರೈಲ್ವೆ ಪೋಲಿಸರು ... ಪ್ರಶಾಂತತೆ ಕೂಡಿದ್ದ ಪ್ರಶಾಂತಿ ಎಕ್ಸಪ್ರೇಸ್ ಬೆಂಗಳೂರು ಸಿಟಿ ಜಂಕ್ಷನ್ ಬಿಟ್ಟು ಕಂಟೋನ್ಮೇಟ್ , ಯಲಹಂಕ , ಗೌರಿಬಿದನೂರು ಡಾಟುತ್ತಿದಂತೆ ಕರ್ನಾಟಕ- ಅಂಧ್ರ ಗಾಡಿಯಾದ ಹಿಂದುಪುರದಲ್ಲಿ ಸಂಭವಿಸುತ್ತಿದ್ದ ಸಾವು ಮಧ್ಯವಯಸ್ಕ ಹೆಣ್ಣುಮಕ್ಕಳೆ ಸಾಯುತ್ತಿದ್ದದ್ದು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿತ್ತು ಬೆಂಗಳೂರು ಪೋಲಿಸರಿಗೆ.... ಇದರೊಂದಿಗೆ ರೈಲು   ಕರ್ನಾಟಕ ಗಡಿ ದಾಟಿ ಸತ್ಯಸಾಯಿಬಾಬನ ಆಶ್ರಮ ಬಿಟ್ಟು ದಾರ್ಮವಾರಂ ಜಂಕ್ಷನ್  ತಲುಪಿ ಇನ್ನೆನು ಅನಂತಪುರ ಸಮೀಪಿಸಬೇಕು ಅನ್ನುವಷ್ಟರಲ್ಲೆ ಬಿಳುತ್ತಿತ್ತು ಮತ್ತೊಂದು ಹೆಣ , ೧೧೦kmನ ಹಿಂದುಪುರ ಮತ್ತು ೨೨೦kmನ  ದಾರ್ಮವಾರಂ  ಮತ್ತು ಅನಂತಪುರ ಜಂಕ್ಷನ್ ನಡುವೆ....

 ಪ್ರತಿ ಅದಿನೈದು ದಿನಕ್ಕೊಮ್ಮೆ ಸಂಭವಿಸುತ್ತಿದ್ದ ಈ ಸಾವು ಪೋಲಿಸ್ ಇಲಾಖೆಯ ಪ್ರಮುಖರನ್ನು ನಿದ್ದೆಗೆಡಿಸಿತ್ತು , ಎರಡು ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳ ತಂಡವನ್ನು ಕಟ್ಟಿ ಕಾರ್ಯಚರಣಕ್ಕೆ ಇಳಿಸಲಾಯಿತು.. ಹಿಂದುಪುರದ assistant commissioner vinciet ಅತ್ಯಂತ ಕ್ಲಷ್ಟವಾದ ಈ ಕೇಸ್ನ ನೇತೃತ್ವವಾಯಿಸಿದರು , ಬರ್ಬರ ಹತ್ಯಗಳ , ಸಾಲು ಸಾಲು ಕೊಲೆಗಳ ಜಾಡು ಇಡಿದು ಹೊರಟರು... ಅ ಎಲ್ಲಾ ಕೊಲೆಗಳು ಒಂದೇರೀತಿಯಾಗಿತ್ತು..ಕತ್ತನ್ನು ಕುಯ್ದು ಗಂಟಲ ಭಾಗವನ್ನು ಹೊತ್ತು ಹೊಯುತ್ತಿದ್ದರು ಹಂತಕರು... ವಿಚಾರಣೆ ಕೈಗೆತ್ತಿಕೊಂಡ ಕೇಲವೆ ದಿನದಲ್ಲಿ hint ಸಿಕಿದ್ದ ಖುಷಿಯಲ್ಲಿದ್ದ AC Vincient , commissioner  ಬಳಿ ಹೊದವರೆ..
 "sir ,  we got a hint , ಹಂತಕರು ಬೆಂಗಳೂರಿನವರೆ ಮತ್ತು ಬೆಂಗಳೂರಿನಲ್ಲಿ ಪ್ರಶಾಂತಿ ಎಕ್ಸಪ್ರಸ್ ಟ್ರೇನ್ ನಂ.೧೮೪೬೪ ಹತ್ತುತ್ತಿದ್ದವರೆ ಕೊಲೆಯಾಗುತ್ತಿದ್ದರು Sir, I need a full force ನಮ್ಮ ಮತ್ತು ಬೆಂಗಳೂರು ಪೋಲಿಸರು ಮಫ್ತಿಯಲ್ಲಿ  ಕಾರ್ಯಚರಣೆ ನಡೆಸಿದರೆ we can trap them " ಅಂತ ವರದಿನೀಟಿದ್ದ ...
 ಯಾವುದೇ ಮರು ಯೊಚನೆ ಇಲ್ಲದೆ "go ahead ಅಂದಿದ್ದರು " commissioner  ಎಂ , ಎನ್ , ಪ್ರಕಾಶ್ ನಾಯ್ಡು..
ಎಲ್ಲದಕ್ಕಿಂತ ಅತಿ ಪ್ರಮುಖವಾಗಿ  assistant commissioner viencient  ಗಮನಿಸಿದ್ದು....ಮದ್ಯವಯಸ್ಕ ಹೆಣ್ಣುಮಕ್ಕಳೆ ಹಂತಕರ ಟಾರ್ಗೆಟ್ ಅಗಿತ್ತು ಮತ್ತು ಈ ಸರಣಿ ಕೊಲೆ ನಡೆಯುತ್ತಿದೂ ಕೂಡ ಹುಣ್ಣಿಮೆಯ ದಿನದಂದೆ..
                                                                 (ಮುಂದುವರೆಯುತ್ತದೆ-to be continued)

27 Sept 2014

ಹುಣ್ಣಿಮೆಯ ನಿಶಬ್ಧ!

   ಒಂದು ನಿಚ್ಚಳ ಸುರ‍್ಯೂದಯದ ಬೆಳಗ್ಗೆ ಸುರ‍್ಯನಂತೆ ಪ್ರಜ್ವಲಿಸುತ್ತ ಪ್ರತಿಷ್ಠಿತ ಸಂಟ್ ಡೇವಿಡ್ ಕಾಲೇಜು ಮೆಟ್ಟಿಲೇರಿ ಬರುತ್ತಿದ್ದ ಯುವಕನ ಕಣ್ಣಾಲ್ಲಿ ಸಾವಿರ ಸಾವಿರ ಕನಸುಗಳಿದ್ದವು , ನಿರೀಕ್ಷೆಯಿತ್ತು , ಸಾದಿಸಬೇಕು ಎಂಬ ಹಂಬಲವಿತ್ತು.. ಪ್ರಿನ್ಸಿಪಾಲರ ಕ್ಯಾಬಿನ್ ಗೆ ಹೋದವನೆ ಆಪ್ಲೀಕೆಷನ್ ಫಾರಂ ಅವರ ಕೈಗಿಟ್ಟ..
  "ಹೆಸರು?" ಕೇಳಿದರು ಪ್ರಿನ್ಸಿಪಾಲ್ .
"ಅಪ್ಪ ಏನಿಟ್ಟನೋ ಗೋತ್ತಿಲ್ಲ , ಅಮ್ಮ ಹಿಮಾಂಶು ಅಂತ ಕರಿತಾಳೆ, ಜಗತ್ತು ಅನಾಥ ಅಂತ ಗುರುತುಸುತ್ತದೆ" ಯಾವುದೇ ದುಗುಡವಿಲ್ಲದೆ , ಒಂದೇ ಉಸಿರಿನಲ್ಲಿ ಒಂದಿಷ್ಟು ಯೋಚಿಸದೆ ಉತ್ತರಿಸಿದ ಹಿಮಾಂಶು.
 ಕುಳಿತ ಕುರ್ಚಿಯಲ್ಲೆ ಅಸಹನೆಯಿಂದ ಹಂದಾಡಿದ್ದರು ಪ್ರಿನ್ಸಿಪಾಲ್.. ಹೆಸರು-ಹಿಮಾಂಶು , ಜಾತಿ-ಮನುಷ್ಯ , ಅಪ್ಪ-ಗೊತ್ತಿಲ್ಲ , ಅಮ್ಮ-ಕಾಮಟಿಪುರದ ಕಾವೇರಿ ( ನಿಜವಾದ ಹೆಸರು ಹೇಳಿದ್ದರೆ ಪ್ರಿನ್ಸಿಪಾಲ ಬೆಚ್ಚಿಬಿಳುತ್ತಿದ್ದರೆನೋ... ಆ ಹೆಸರಿಗೆ ಅಷ್ಟು ಇತಿಹಾಸವಿತ್ತು , ನೆನಪಿತ್ತು , ಮೋಸವಿತ್ತು ) , ಕೆಲಸ-ಸೂ*ಗರಿಕೆ, ಸ೦ಬಳ- it depends!!     ತನ್ನ ಇಡೀ ಜೀವನದಲ್ಲೆ ಅಂತಹದೊಂದು ಆಪ್ಲೀಕೆಷನ್ ಫಾರಂ ಕಂಡಿರದ  ಪ್ರಿನ್ಸಿಪಾಲ ಅವನನ್ನ ನೋಡುತ್ತ ಬೆವತಿದ್ದರು..
  "character certificate ಎಲ್ಲಿ??" ತೀರಸ್ಕರದ ಧನಿಯಲ್ಲಿ ಕೇಳಿದರು  ಪ್ರಿನ್ಸಿಪಾಲ್.
 "No, I don't need it" ಅಂದಿದ್ದ ಹಿಮಾಂಶು
 "ಅಂದರೆ??" ಪ್ರಿನ್ಸಿಪಾಲ್ ಕಣ್ಣಗಾಲಿಸಿ ಕೇಳಿದ್ದ
 "ನನ್ನ characterಗೆ ಬೇರೆಯವರಿಂದ certificate ತೋಗಬೇಕಾಗಿಲ್ಲ, I am not here to impress anyone , ನನ್ನ character ಏನೆ೦ದು ನನಗೆ ಗೊತ್ತು , ನನ್ನ ಮಾತಿನಿಂದ ನೀವು ಬೇಸರಗೊಂಡರೆ i am helpless" ಯಾವುದೇ ಅಂಜಿಕೆಯಿಲ್ಲದೆ , ದುಗುಡವಿಲ್ಲದೆ ಸತ್ಯವನ್ನ ನುಡಿದಿದ್ದ ಹಿಮಾಂಶುವಿನ ಕಣ್ಣಲ್ಲಿ ಭರವಸೆಯ , ಸಾಧಿಸುವ ಬೆಳಕು ಕಾಣಿಸಿತು.  ಅವನ ಮಾತನ್ನು ನಿಶಬ್ದದಿಂದಲೇ ಆಲಿಸಿದರು ಪ್ರಿನ್ಸಿಪಾಲ್ , ಎರಡು ನಿಮಿಷ ನೀರವ ಮೌನ.. ಅದೆನನಿಸಿತೋ ಪ್ರಿನ್ಸಿಪಾಲರಿಗೆ " you are admitted , ನೀನು ಫೀ ಕೂಡ ಕಟ್ಟಬೇಕಿಲ್ಲ, ನಾನು scholorship ನೀಡ್ತೇನೆ" ಎಂದಿದ್ದರು... ಏನೋ ದೊಡ್ಡ ಗೆಲುವು ಸಾಧಿಸುತ್ತಾನೆ ಅಂತ ಪ್ರಿನ್ಸಿಪಾಲ್ಗೆ ಅನಿಸಿತ್ತು.. ಏನದು ಗೊತ್ತಿಲ್ಲ? , ಯಾವಾಗ ಉತ್ತರವಿಲ್ಲ , ಅದರೆ ನಿಜಕ್ಕೂ ಈತ ನಮ್ಮೆಲರಿಗಿಂತ ಎತ್ತರಕ್ಕೆ ಬೆಳೆಯುತ್ತಾನೆ ಮತ್ತು ತನ್ನ ಜೀವನದಲ್ಲೂ ಪ್ರಮುಖ ಪಾತ್ರವಯಿಸುತಾನೆಂದು ಪ್ರಿನ್ಸಿಪಾಲ್ ಕೂಡ ಊಹಿಸಿರಲಿಲ್ಲ.. ಹೆಸರು " Alexander ರಾಜನಾಥ ಚಟರ್ಜಿ" ಹಿಂದೂ-ಕ್ರಿಶ್ಯನ್ ದಂಪತಿಗೆ ಜನಿಸಿದ ಪ್ರಿನ್ಸಿಪಾಲ್ ಎರಡು ಮನೆತನದ ಹೆಸರು ಇಟ್ಟುಕೊಂಡು ವಿಚಿತ್ರವೇನಿಸಿದ..
                                                                    
                                                             *     *     *     *     *     *

        ಕಾಲೇಜು ಪ್ರಾರಂಭವಾಗಿತ್ತು ಹಿಮಾಂಶು ಬೇರೆ ವಿದ್ಯಾರ್ಥಿಗಳೊಂದಿಗೆ ಬೇರೆಯುತ್ತಿರಲಿಲ್ಲ , ಆತ ಯಾರು , ಎಲ್ಲಿಂದ ಬರುತ್ತಾನೆ , ಅಪ್ಪ-ಅಮ್ಮ , ಊಂ, ಯಾರಿಗೂ ಏನು ತಿಳಿದಿರಲಿಲ್ಲ ... ಹಿಮಾಂಶು ಕಾಲೇಜುನವರಿಗೆ ನಿಗೂಡನಾಗಿದ್ದ , ಒಬ್ಬನೆ ಕುರುತ್ತಿದ್ದ , breakನಲ್ಲೂ ಏನು ತಿನ್ನದೆ ಯಾವುದೋ  ಕಾದಂಬರಿಯನ್ನು ಓದುತ್ತಿರುತ್ತೆದ್ದ , ಐದು ದಿನಗಳಿಗೊಂದು ಹೊಸ ಕಾದಂಬರಿ , ಅಷ್ಟು ಓದುತ್ತಿದ್ದ ಹಿಮಾಂಶು , ವಾಲಿಬಾಲ್ ನಲ್ಲಿ ಕಾಲೇಜಿಗೆ ಕ್ಯಾಪ್ಟನ್ ಆಗಿದ್ದ , ಕೊರ್ಟನೊಳಗೆ ಕಾಲಿಟ್ಟರೆ ಹಸಿದ ಹೆಬ್ಬುಲಿಯಂತೆ ಬಡಬಡನೆ ಆಡುತಿದ್ದ , ಎಲ್ಲರೊಂದಿಗೂ ಬೇರೆಯುತ್ತಿದ್ದ ಆತ ಕೊರ್ಟನಿಂದ ಹೊರ ಬಂದರೆ ಅದೆ ನೀರಾವ ಮೌನ ಮತ್ತು ನಿಗೂಡತೆ ಅವರಿಸಿಕೊಳ್ಲುತ್ತಿತ್ತು.. ಹಿಮಾಂಶು ಯಾಕೆ ಹೀಗೆ ಅಂತ ಎಲ್ಲರಿಗಿಂತ ಹೆಚ್ಚು ತಲೆಕೆಡಿಸಿಕೊಂಡವಳು ಶಾಲಿನಿ.. ದೊಡ್ಡ ಶ್ರೀಮಂತರ ಮಗಳು ಇಡೀ ಕಾಲೇಜಿಗೆ ಗಾಡಿ ತರುತಿದ್ದ ಹುಡುಗಿ ಅವಳೊಬ್ಬಳೆ , ಕಪ್ಪು kinetic honda...

    ಕೈನಿಯಲ್ಲಿ ಬರುತ್ತಿದ್ದರೆ ಒಂದೀಡಿ ಹುಡುಗರ ಗುಂಪು ಬೆರಗಾಗಿ ನೋಡುತ್ತ ನಿಂತಿರುತಿದ್ದರು , ಅದೆಷ್ಟು ಪ್ರಪೋಸಲ್ ಬಂದಿತ್ತು ಶಾಲಿನಿಗೆ , ಲೆಕ್ಕವೆಯಿಲ್ಲ ಅದನ್ನ ಆಗೆ ಲೆಕ್ಕವೆಯಿಲ್ಲದಂತೆ ತೀರಸ್ಕರಿಸಿದ್ದಳು, ಹುಡುಗರ ಬಗ್ಗೆ ಆಸಕ್ತಿಯಿಲದ ಶಾಲಿನಿಗೆ ಅವತ್ತು ಹಿಮಾಂಶು ಬಗ್ಗೆ ಚಿಂತಿಸಿದ್ಲು.. ಮೊದಲ ಬಾರಿಗೆ ಯಾವುದೋ ಹುಡುಗನ ಬಗ್ಗೆ ಅದರಲ್ಲೂ ನಿಗೂಢತೆಯನ್ನು ಮೈಗೂಡಿಸಿಕೊಂಡಿದವನ ಬಗ್ಗೆ ಚಿಂತಿಸುತ್ತಿದಿನಿ ಎಂದು ಶಾಲಿನಿ ತನ್ನೊಳಗೆ ತಾನೆ ನಕ್ಕಳು! , ಆಗ್ಗೆ ಒಂದು ದಿನ ತೀರ ಬೊರಿಂಗ್ ಆದ ಕ್ಲಾಸ್ ನಂತರ ಹಿಮಾಂಶು ಬಳಿ ಹೋಗಿ "Let's have a cup of coffee, ಹಿಮು!!" , ಅಂದಿದ್ಲು , ಹಿಮು ತನ್ನ ಮನಸ್ಸಿಗೆ ತಿಳಿಯದೆ ಬಂದ ಪಧವಾ? ಅಥವಾ ಇಷ್ಟು ದಿನ ಮನಸ್ಸಿನಲ್ಲಿ ಅಡಗಿದ ಪ್ರೀತಿಯ ಮಾತ? ಆರೆ ನಾನೇಕೆ ಹಿಮು ಎಂದೆ?. ಯೊಚಿಸುವುದಕ್ಕು ಸಮಯ ಕೊಡದೆ ಅವಳ ಆಹ್ವನಕ್ಕೆ ಉತ್ತರ ನೀಡಿದ್ದ ಹಿಮಾಂಶು..

      "can you mind your own business " ಎಷ್ಟು ಆಹಂಕಾರ ಎಂದುಕೊಂಡಿದ್ದಲು ಶಾಲಿನಿ,

       "Look ಹಿಮಾಂಶು , ನೀನು ಒಬೊಂಟಿಯಾಗಿ ಇರುತಿಯಾಲ್ಲ ಅಂತ ನಾನು ಕಾಫಿಗೆ ಕರೆದದ್ದು ,ನಿನ್ನನ್ನ ಮೆಚ್ಚಿಸಿಲಿಕ್ಲ ಅಥವಾ ನನ್ನ ಜೊತೆ ಕಾಫಿ ಕುಡಿಯಲು ಯಾರು ಇಲ್ಲವೆಂದಲ್ಲ , ನಾನು ಕರೆದರೆ ನೂರಾರು ಹುಡುಗರು ತಲೆಮೆಲೊತ್ತು ರಾಣಿತರ ಕಾಫಿ ಡೇ ಕರೆದುಕೊಂಡು ಹೋಗ್ತರೆ" ಬಸುಗುಡುತ್ತ ಹೇಳಿದಳು ಶಾಲಿನಿ , ಅವಳ ಕೆನ್ನೆ ಕೆಂಪಾಗಿತ್ತು , ಕಣ್ಣು ಕೆಂಡಾಕರುತಿತ್ತು. ಇದನ್ನು ಹೇಳಿದವಳೆ ಮುಖ ತಿರುಗಿಸಿ ಹೊರಟು ಹೊದಳು.. ಇದನ್ನು ಕೇಳಿಸಿಕೊಂಡಿದ್ದ ಹಿಮಾಂಶುವಿನ ಕಣ್ಣಲ್ಲಿ ಯಾವುದೇ ಅಪರಾಧ ಮನೋಭವ ಇರಲಿಲ್ಲ , ಏನು ನಡೆದಿಲ್ಲವೆನೋ ಎಂಬಂತೆ ವಾಲಿಬಾಲ್ practice ನಲ್ಲಿ ತೋಡಗಿದ , ಅವನ ಮನೆ, ಎಲ್ಲಿಂದ ಬರುತ್ತನೆ ಎಂಬೂದು ಅವನಷ್ಟೆ ನಿಗೂಡವಾಗಿತ್ತು , ನಡೆದು ಬರುತ್ತಿದ್ದ , ಕೀಲೊ ಮೀಟರ್ ಕೀಲೊ ಮೀಟರ್‍ ಲೆಕ್ಕಿಸದೆ ನಡೆದುಬರುತ್ತಿದ್ದ , ಕಾಲೇಜಿಗೆ ಒಂದು ದಿನವೂ ರಜೆ ಹಾಕದೆ ಬರುತ್ತಿದ್ದ , ಒಬ್ಬರನ್ನೂ ಮಾತಡಿಸಿರಲಿಲ್ಲ ಶಾಲಿನಿಯನ್ನು ಬಿಟ್ಟು  "can you mind your own business " ಅನ್ನೊ ಮಾತನ್ನು ಬಿಟ್ಟು , ಅವನ ನಿಗೂಡತೆಯ ಬಗ್ಗೆ ಆಸಕ್ತಿ ಬೆಳೆಯುತ್ತಲೆ ಇತ್ತು , ಒಮ್ಮೆ ಹಿಮಾಂಶು ಕಾಲೇಜಿಗೆ ಬರದಿರುವುದು ಎಲ್ಲರಿಗೂ ಅಚ್ಚರಿಯಾಗಿತ್ತು , ನಂತರ ಕಾಲ ಉರುಳಿದಂತೆ ತಿಂಗಳು ತಿಂಗಳು ಕಳೆದಂತೆ ಎಲ್ಲರು ಗಮನಿಸಿದ್ದು ಒಂದೇ!! ಹಿಮಾಂಶು ಪೂರ್ತಿ ಚಂದ್ರನ ದಿನ ಅಂದರೆ "ಹುಣ್ಣಿಮೆಯ ದಿನ" ಕಾಲೇಜಿಗೆ ಬರುತ್ತಿಲ್ಲವೆಂದು , ಹಿಮಾಂಶು ಮತ್ತಷ್ಟು ನಿಗೂಡನಾದ , ಯಾರು ಏನೇ ಮಾತಡಿದರೂ ಕಣ್ಣಲ್ಲೆ ಉತ್ತರ , semester examನಲ್ಲಿ first ಬಂದರು ಕೂಡ ಅತನ ಮುಖದಲ್ಲಿ ನಗುವಿರದನ್ನು ಕಂಡು ಸ್ವತಃ ಪ್ರಿನ್ಸಿಪಾಲ್ ಕೂಡ ಅಚ್ಚರಿಪಟ್ಟರು. ಹಿಮಾಂಶು ನಮ್ಮೆಲ್ಲರಿಗಿಂತಲೂ ವಿಚಿತ್ರ ಮತ್ತು ವಿಶಿಷ್ಟತೆಯುಳ್ಳ ಒಳ್ಳ ಹುಡುಗನೆಂದುಕೊಂಡಳು ಶಾಲಿನಿ , ತನ್ನ ಮನಸ್ಸು ಹಿಮಾಂಶುವಿನ ಕಡೆ ವಾಲುತ್ತಿರುವುದೂ ಶಾಲಿನಿ ಕೂಡ ಅರ್ಥಮಾಡಿಕೊಂಡಿರಲಿಲ್ಲ... ಮತ್ತೊಂದು ಅಚ್ಚರಿಯಂದರೆ state level championshipಗೆ ಹಿಮಾಂಶು ಬರದೆ ಇದ್ದದ್ದು!! ಅವತ್ತು ಕೂಡ "ಹುಣ್ಣಮೆ"!!!  
                                                                                  (ಮುಂದುವರೆಯುತ್ತದೆ-to be continued)
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →