25 Dec 2014

ಪ್ರೀತಿಯ ಹೂಗಳಿಗೆ ಕವನಗಳ ಜಾತ್ರೆ!

ಹೂ ಅರಳುತ್ತೆ ಎಂದು
ರಾತ್ರಿಯಿಡಿ ಕಾದು ಕೂತ ಆ ಹುಡುಗ;
ಹೂ ಕೋಡುತನೆಂದು
ನಿದ್ದೆಗೆಟ್ಟು ಕಾದು ಕೂತಲು ಈ ಹುಡುಗಿ;

ಅತ್ತ ಅವನು ಎಷ್ಟು ಕಾದರು
ಅರಳಲೇ ಇಲ್ಲ ಹೂ..
ಇತ್ತ ಇವಳು ಎಷ್ಟು ಕಾದರು
ತರಲೇ ಇಲ್ಲ ಹೂ..

ಅವಳದೊಂದು ಹೆಸರು
ಹೇಳಿದನಷ್ಟೆ..! ಮೊಗ್ಗು
ಅರಳಿ ಹೂವಾಯ್ತು..
ಇವಳು ಅವನಿಗಾಗಿ ಕವನ
ಉಸುರಿದಳಷ್ಟೆ..! ಹೂ
ತಂದು ಇವಳಿಗಿಟ್ಟ
ಅವನು ಕನಸಿನ ಹುಡುಗ..
ಇವಳು ಹೂ ಹುಡುಗಿ..
                                                                                                             -ಮಂಜುನಾಥ್‌

24 Dec 2014

ನನ್ನ ಪ್ರೀತಿಯ ಹುಡುಗನಿಗೆ!

                 ಹುಡುಗಾ, ಹೇ ಹುಡುಗಾ ಹೇಗಿದ್ದಿ? ನಾನು ಕಣೋ.... ಗುರ್ತು ಸಿಗಲಿಲ್ಲವಾ ?   ಜಲಪಾತದ ಕೆಳಗೆ ನಿಂತು ನಿನ್ನ ಜತೆ ಆಡಿದವಳು. ಕಡಲ ತೀರದ ಹಸಿ ಮರಳಿನ ಮೇಲೆ ಬೆರಳಿಟ್ಟುನಿನ್ನ ಹೆಸರು ಬರೆದವಳು. ತೆರೆಗಳುರುಳಿ ನಿನ್ನ ಹೆಸರು ಅಳಿಸಿದಾಗ ಆತಂಕಪಟ್ಟವಳು. ನಾನು ಕಣೋ ಹುಡುಗಾ. ನಾನು ನಿನ್ನ ಹುಡುಗಿ..

     ಹುಡುಗಾ........ ಹೇಗಿದ್ದಿ? ಕೆನ್ನೆಯ ಕೆಂಪೇನಾಯಿತೋ? ನಂಗೊತ್ತು ನೀನು blush  ಮಾಡ್ತಯಿರುತ್ತಿ. I love that ಕಣೋ...  ಅವತ್ತು ಹೀಗೆ ಬೆಳಬೆಳಗೆ ವಿಜಯನಗರದಲ್ಲಿ ನಂಗೊಂದು ವಾಕ್‌ ಕರೆದ್‌ಕೊಂಡು ಹೋಗ್ತ ಹೀಗೆನೆ ಬ್ಲಷ್‌ ಮಾಡ್ತಯಿದ್ದೆ.. ಎಷ್ಟು ಮುದ್ದು ಮದ್ದಾಗಿ ಕಂಡಿದ್ದೆ ನೀನು. ನಿನ್ನೊಂದಿಗೆ ಅದೆಷ್ಟು ಸ್ಥಿರವಾಗಿ ಬಂದಿದ್ದೆ. ನಿನ್ನ ಜತೆ ನಡೆಯುವದರಲ್ಲೆ ಅತಿದೊಡ್ಡ ಕಂಫರ್ಟ್‌ ಅನುಭವಿಸುತ್ತಿದ್ದೆ. ನನಗೆ ಮತ್ತೆನೇನೂ ಬೇಕಿರಲಿಲ್ಲ. I love you! ಅನ್ನಬೇಕಿರಲಿಲ್ಲ. ಮಾತನಾಡಿ react ಮಾಡಬೇಕಿರಲಿಲ್ಲ. ನಿನ್ನ ಕಣ್ಣುಗಳು ನನಗೊಂದು ಭದ್ರತಾ ಭಾವ ನೀಡಿತ್ತು. ಅದು ಶಾಶ್ವತ ಪ್ರೀತಿಯ ಕಣ್ಣು!

    ಜಗತ್ತಿನ ಪ್ರತಿ ಹುಡುಗಿಯೂ ಬಯಸುವ ಕಂಫರ್ಟ್ ಇದೇ ಕಣೋ Genius! ಕಾಮವಿಲ್ಲದ ಸಾಮೀಪ್ಯ. ಅವಸರವಿಲ್ಲದ ಅಪ್ಪುಗೆ. ಇಲ್ಲದಿದ್ದರೂ ಇದೆ ಎಂಬಂತೆ feel ಆಗುವ space. "ಪ್ರೀತಿಸ್ತಿಯಾ?" ಅಂತ ಬಾಯಿಬಿಟ್ಟು ಕೇಳದೆ "ಪ್ರೀತಿಸ್ತಾನೆ ಬಿಡು" ಅಂತ ತನಗೆ ತಾನೇ ತಂದುಕೊಳ್ಳುವ confidence ಮಾತೇ ಆಡದೆ ಸಾವಿರ ಭಾವ ತಿಳಿಸಿಕೊಡುವ ಸೌಮ್ಯ ಉಸಿರಾಟ.

    ಹುಡುಗಾ, ಇದೀಷ್ಟು ಭಾವವನ್ನೂ ಮತ್ತೆ ಅನಿಭವಿಸಬೇಕು ಕಣೋ.. ನೀನು I love you ಅಂತ ಹೇಳಲ್ಲ. ಅಸಲಿಗೆ ಮಾತೇ ಆಡಲ್ಲ ನೀನು. ದೇವಾಸ್ಥನದಲ್ಲಿ ಇರೋ ದೇವರ ಮೌನ ಕಣೋ ನಿಂದು.. ದೇವನಾದರು ಕಾದು ಕಾದು ಬೇಸರಾಗಿ ಮಾತಿಗಿಳಿದು ಹೊರಟೆ ಹೋಗುತ್ತಾನೆ, ಆದರೆ ನೀನಗಲ್ಲ. ನನ್ನ ಪ್ರೀತಿಯ ಹುಡುಗ ನೀನು. ನಾನು ಬರುವವರೆಗೂ ಕಾಯುತ್ತಿ. ಒಂದಿಷ್ಟು ಮಾತು ಆಡದೇ ಕಾಯುತ್ತಿ. ಬಂದ ಮೇಲಾದರೂ ಮಾತನಾಡುತ್ತಿ ತಾನೇ...?

  ಹೇ ಹುಡುಗಾ ನನಗೆ ನಿನ್ನ ಮೇಲೆ ತುಂಬಾ ಕೋಪವಿದೆ ಕಣೋ. ಅಷ್ಟು ವರ್ಷ ನಿನ್ನ ಜೊತೆಗಿದ್ದಿನಿ, ನಿನ್ನೊಂದಿಗೆ ಗಂಡೆಗಟ್ಟಲೆ ಮಾತಡಿದ್ದೀನಿ ಏರ್‌ಟೆಲ್‌ ಕಾಂಪನಿನ ಉದ್ದಾರ ಮಾಡುತ್ತಾ ಪ್ರತಿ ಮೇಸೆಜ್‌ಗೆ ಒಂದು ರೂಪಾಯಿ ಕೊಟ್ಟಿ ಮಾಡಿದ್ದೀನೊ.. ಒಮ್ಮೆ ಅದರೂ just once.... I love you ಅಂತ ಹೇಳಿದ್ಯೆನೋ.. At least ಪ್ರಯತ್ನ ಅದರೂ ಮಾಡಿದ್ದಿಯಾ? ನಂಗೊತ್ತು You never tried, ನಾನು ಹೇಳೊವರೆಗೂ ನೀ ಹೇಳಲ್ಲ.. ನೀ ಕೇಳೊವರೆಗೂ ನಾ ಹೇಳಲ್ಲ.. Let's wait ಕಣೋ..

   ನಂಗೊತ್ತು ನೀನು ನನ್ನದೆ ಸ್ಥಿತಿಯಲ್ಲಿದ್ದಿಯಾ. ಪ್ರೀತಿಸ್ತಿದೀನಿ ಅಂತ ಇಬ್ಬರೂ ಹೇಳಿಕೊಳ್ಳದೆ ಇರುವ, ಆದರೆ ಇಬ್ಬರಿಗೂ ಅದುಗೊತ್ತಾಗಿರುವ, ಅಲ್ಲಿ ಹೇಳಿಕೊಂಡು ಬಿಡುತ್ತೇವೋ ಅಂತ ಇಬ್ಬರೂ ಆತಂಕ ಪಡುವ ವಿಚಿತ್ರ ಸ್ಥಿಯಿದೆಯಲ್ಲ? ಪ್ರೇಮದಲ್ಲಿ ಅದಕ್ಕಿಂತ ಮಧುರವಾದುದು ಮತ್ತೊಂದಿಲ್ಲ. ಮಾತು ಆಡಿದರೇ ಹೋಯ್ತು ಎಂಬ ಭಯ. ಆಡಿಬಿಡುತ್ತೇನೇನೋ ಎಂಬ ಆತಂಕ. ಆಡದೆ ಹೀಗೆ ದಿನ ಕಳೆದು ಬಿಡುತ್ತೀನೇನೋ ಎಂಬ ದುಗುಡ. ಅದೂ ಆಡಿಬಿಟ್ಟರೆ, ಅದೆಲ್ಲ ಮಾಧುರ್ಯ ಮುಗಿದು ಹೋದಿತು ಎಂಬ ಎಚ್ಚರಿಕೆ! ಎಂತ ಮಧುರಭಾವ ಅಲ್ವೆನೋ ಇದು. ನಾನಿನ್ನೂ ಕಾಯಲ್ಲ "I LOVE YOU" ಅಂತಹೇಳುತ್ತೀಯಾ ತಾನೇ.. Yes, ಹೊಸ ವರ್ಷ ಬರುತ್ತಿದೆ..  get ready for a surprise ಹುಡುಗಾ..
                                                                                                            ನಿನ್ನ ಪತ್ರವನ್ನು ಕಾಯುತ್ತಾ,
                                                                                                                      ನಿನ್ನವಳು 

22 Dec 2014

ನನ್ನ ಪ್ರೀತಿಯ ಹುಡುಗಿ

ನನ್ನ ಬದುಕಿನ ಬದುಕೇ,

      ಬೆಳಗಿನ ಜಾವದ ಮೊದಲ ಸೂರ್ಯ ಕಿರಣ ಇನ್ನೂ ಭೂಮಿಗೆ ತಲುಪಿರಲಿಲ್ಲ, ಎಷ್ಟೊ ವರ್ಷಗಳ ನಂತರ ಇಷ್ಟು ಬೇಗನೆ long walk ಹೋಗ್ತಯಿದ್ದಿನಿ. ಅದೂ ಒಬ್ಬಂಟಿಯಾಗಿ! ಅಲ್ಲಿ ನೀನು ನೆನಪಾದೆ ಅಂದರೆ ಹೇಗೆ ಸರಿ? ನೀನು ನನ್ನೊಳಗೆ ಜೀವಿಸುವ ಜೀವತಂತು, ಕರುಳ ವೀಣೆ, ಬದುಕಿನ ಮಾತು, ಎದೆಯ ಡವಡವ. "ನೆನಪು ಮಾಡಿಕೊಳ್ಳುವ" outsider ಅಲ್ಲ ಕಣೇ ನೀನು. ನನಗೆ ನೆನಪಾಗಿದ್ದು ಇವತ್ತಿನ ತಾರೀಕು dec 29. ನನ್ನ ನಿನ್ನ ಈ ಅಪೂರ್ವವಾದ ಹಂಬಲಕ್ಕೆ, ಮಾತಿಗೆ, ಮೌನಕ್ಕೆ, ಕನಿಸಿಗೆ, ಪ್ರೀತಿಗೆ ಭರ್ತಿ 7 ವರ್ಷ.   ಒಂದು ಹಬ್ಬದಂತೆ, ಒಂದು ಉತ್ಸವದಂತೆ, ಒಂದು ಮೆರವಣಿಗೆಯಂತೆ, ಒಂದು ಮಳೆಯಂತೆ, ಒಂದು ವಸಂತ ಋತುವಿನಂತೆ ನನ್ನ ಬದುಕಿನಲ್ಲಿದ್ದ ನೀನು ಅದೃಶ್ಯಳಾಗಿಬಿಟ್ಟೆ. But I know, ನಂಗೊತ್ತು! ನೀನು ಪುನಃ ಬರುತ್ತಿ, ನೀನಗಿಷ್ಟವಿಲ್ಲದ ನನ್ನ ಬೈಕ್‌‌ನಲ್ಲೆ ಕುರುತ್ತಿ, ನಾನು ಜಗತ್ತಿನ ಅಷ್ಟು ಯೋಚನೆ ಬಿಟ್ಟು ನಿನ್ನೊಂದಿಗೆ ಬರುತ್ತೀನಿ. ನಿನ್ನೊಂದಿಗೆ ಹೆಜ್ಜೆಯಿಡುತ್ತ ಹೃದಯದ ಕೋಟೆಯೊಳಗೆ ಸಾವಿರ ಸಾವಿರ ಕನಸುಗಳನ್ನು ಕಾವಲಿಡುತ್ತೀನಿ. ಮತ್ತೆ ನನ್ನಿಂದ ದೂರ ಆಗಲ್ಲ ತಾನೇ......??
    
       ಸುಮ್ಮನೆ ಒಬ್ಬಂಟಿಯಾಗಿ ಇನ್ನೂ ಬೆಳಕಾರಿಯಾದ ರಸ್ತೆಯಲ್ಲಿ ನಡೆಯುತ್ತಾ, ನಡೆಯುತ್ತಾ ಅವತ್ತು ನಾವು New year ದಿನ ಹೋಗಿದ್ವಲ್ಲ ಅ ಪುಟ್ಟ walk. ಅದೇ ರಸ್ತೆಗೆ ನನಗೆ ಅರಿವಿಲ್ಲದಂತೆ ಬಂದುಬಿಟ್ಟೆ. ಯಾಕೋ ನೆನಪಿನ Idiot box.... Dec 29ರ ಅ ರಾತ್ರಿಗೆ ಕರೆದುಕೊಂಡು ಹೋಗ್ತಿದೆ. ಸುಮ್ಮನೆ ನಡೆದುಕೊಂಡು ಹೋಗ್ತಯಿರುವ ನನಗೆ ಅದೊಂದು ಮೇಸೆಜ್‌‌ ಕಾಡುತ್ತಿದೆ.

   " I'm in love with a young smart intelligent guy
        who is loving me from past 3 years.
            That is none other than you
"

      ಆಗ ರಾತ್ರಿ 9 ಗಂಟೆ 12 ನಿಮಿಷ!

         ನನ್ನ ಕಣ್ಣಿಗಲ್ಲ, ನನ್ನ ಮನಸ್ಸಿಗೂ ಅದೊಂದು ಮೇಸೆಜ್‌ ಮರೆಯಲು ಸಾಧ್ಯವೇ ಇಲ್ಲ. ನೆನಪಿದಿಯಾ ಅವಾಗ ನೀನು call ಮಾಡಿದ್ದೆ, ನಾನು ಮಾತಾಡಿದಕ್ಕಿಂತ ನಿಡುಸ್ಯುದದ್ದೆ ಜಾಸ್ತಿ. ಬೆಚ್ಚಿಬಿದ್ದಿದ್ದೂ phoneಗೂ ಗೋತ್ತಾಗಿತ್ತು. ಆಗ " ಎನ್‌ಮಾಡ್ತಿದಿಯ್ಯಾ?" ಅಂತ ನೀನು ಕೇಳಿದಾಗ. ನಾನು ಕೊಟ್ಟಂತ funny answer ನೆನಪಿದಿಯಾ "................." ಬೇಡ ಬೀಡು ಈ ಪತ್ರದಲ್ಲಿ ಹೇಳೊದು. I was in cloudnine for a week. ಮತ್ತೆ ನಾವು ಮೀಟ್‌ ಮಾಡಿದ್ದು ಹೊಸ ವರ್ಷದ ದಿನ. ಡಿಸೆಂಬರ್‌ನ ಚಳಿ ಸ್ವಲ್ಪ ಹೆಚ್ಚೆ ಇತ್ತು. ಸುತ್ತ universityಯ ಸಾಲು ಸಾಲು ಮರಗಳು.  ಬೆಂಗಳೂರಂತ ಬೆಂಗಳೂರಿನಲ್ಲಿ ಇಬ್ಬನಿ ಬಿಳುತ್ತಿದ್ದ ರಸ್ತೆಯದು, ಬೆಳಗಿನ ಮೊದಲ ಸೂರ್ಯ ಕಿರಣ ಆಗ ತಾನೇ ತನ್ನ ಇರುವಿಕೆಯನ್ನು ತೋರ್ಪಡಿಸಿದ್ದ ನಿರ್ಮಾನುಷ್ಯ ರಸ್ತೆಯಲ್ಲಿ ನಡೆದು ಹೋಗ್ತಯಿದದ್ದು ಕೇವಲ ನಾವಿಬ್ಬರೇ. wooow!  ಆ ಚಳಿಯಲ್ಲು you were looking gorgeous!!

   Yes, ಇವತ್ತು ಕೂಡ ನಡೆಯುತ್ತಾ ನಡೆಯುತ್ತಾ...  ಇದೇ ರಸ್ತೆಗೆ ಬಂದ್ದಿದಿನಿ. ಚಳಿ ಇನ್ನೂ ಸ್ವಲ್ಪ ಹೆಚ್ಚೆ ಇದೆ, ಆದರೆ ಜೊತೆಗೆ ನೀನಿಲ್ಲ. ನಿನ್ನ ನೆನಪಿದೆ! ನೀನಿಲ್ಲದ ನೀರವ ಗಳಿಗೆಯನ್ನು ಕೂಡ ನಾನು enjoy ಮಾಡಿಲ್ಲ ಕಾಣೇ. ನನ್ನ ನಗುವಿನಲ್ಲೂ ನೀ ಇರುತ್ತಿ. ನನ್ನ ದುಃಖದಲ್ಲೂ ನೀ ಹಾದು ಹೋಗುವೇ. Let it be... ಈ ಸಂತೋಷದ ದಿನದಂದು ದುಃಖ ಏಕೆ ಅಲ್ವ..

     ...... ನಿನ್ನ ಧ್ಯಾನಿಸಲು ಕುಳಿತು 7ನೇ ವರ್ಷಕ್ಕೆ ಬಂದಿದ್ದೇನೆ.. ಅಂದರೆ 314 ವಾರ , 2190 ದಿನಗಳು , 52560 ಗಂಟೆಗಳು ಅಲ್ಲಿಗೆ ನಿನ್ನನ್ನು ಧ್ಯಾನಿಸಿದ ನಿಮಿಷಗಳು 3153600!!

     ನಾಗತಿಹಳ್ಳಿ ಚಂದ್ರಶೇಖರಣ್ಣ ಹಾಡಿದ್ದು. " ನೂರು ಜನ್ಮಕು... ನೂರಾರು ಜನ್ಮಕು" ಎಂದು... ಅದರೆ ಇದೊಂದು ಜನ್ಮದಲ್ಲೇ ಪೂರ್ಣನನ್ನವಳಾಗದ ನಿನಗೆ ನೂರು ಜನ್ಮಕ್ಕಾಗಿ ಆರ್ಜಿಕೊಡುವ ಹಟಮಾರಿ ಭಕ್ಷುಕ ಕಣೇ ನಾನು.! ಆ ರಾತ್ರಿ ನೆನಪಿದೆಯೆ? ನಿನ್ನ ಎರಡೂ ಕೈಗಳಿಗೆ ಮೆಹಂದಿ ಹಾಕಿದ್ದು? ನೀನು  ಹಾಗೆ ಹಸ್ತವನ್ನೊಪ್ಪಿಸಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೂತಿದ್ದು. ನೀನು ಕೂತ ಭಂಗಿಯಿಂದ ಹಿಡಿದು ನಿನ್ನ ಹಸ್ತದ ಮಾಯಾವಿ ರೇಖೆಗಳ ಆಳ ಉದ್ದಗಳ ಜಾಡಿನಿಂದ ಹಿಡಿದು, ಅವುಗಳ ನಡುವೆ ಸಣ್ಣಗೆ ಒಸರಿದ ಬೆವರ ಹನಿಗಳಿಂದ ಹಿಡಿದು, ನನ್ನ ಹಿಡಿತಕ್ಕೆ ಹಸ್ತದ ಕಂಪನದ ಸವಿ ಅನುಭವದಿಂದ ಹಿಡಿದು..... ಹೌದು, ನನಗೆ ಎಲ್ಲ ನೆನಪಿದೆ. ಅದು ಹೊಸವರುಷದ ಮುನ್ನಾದಿನ. ಯಾರೋ ಹಾಡುತ್ತಿದ್ದರು. ಇನ್ನಾರೋ ತೂಕಡಿಸುತ್ತಿದ್ದರು. ಅದಾರೋ ಕುಡಿಯುತ್ತಿದ್ದರು. ಅದಿನ್ನಾರದೋ ಗೊರಕೆ. ಜನಜಂಗುಳಿಯಲ್ಲಿ ರಾತ್ರಿ ಅರಳುತ್ತಾ ಹೋಗುತ್ತಿತ್ತು. ಸುತ್ತ ಜನರಿದ್ದರೂ ನಮ್ಮಿಬ್ಬರದೇ ಒಂದು ಲೋಕ ನಿರ್ಮಾಣವಾಗಿತ್ತು. ಇಡೀ ರಾತ್ರಿ ಮೆಹಂದಿ ಹಾಕುತ್ತ, ಹಾಗೆ ಹಾಕುತ್ತಲೇ ನಿನ್ನ ಸಂಗದಲ್ಲಿ, ನಿನ್ನ ಸ್ಪರ್ಶದಲ್ಲಿ ಕುಳಿತು ಬಿಡುವ ಆಸೆ! ಈ ಕ್ಷಣಗಳು ಅನಂತವಾಗಬಾರದೆ ಎಂದು ಹಲುಬುತ್ತಿದ್ದೆ. ಕ್ಷಣ ಎಂಬ ಶಬ್ದದ ಮೂಲಭಾವವೇ ಕ್ಷಣಿಕ. 'ಕ್ಷಣಿಕ'ವೆಂಬುದು ಹೇಗೆ 'ಅನಂತ'ವಾದೀತು?

   ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ
ಸುತ್ತೆಳು ಲೋಕದಲಿ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೆ!!


    ನನ್ನ ಕತೆಯೊಳಡಗಿದ ಕಾವ್ಯವೇ ಹೇಗಿದ್ದಿ ಈಗ. ನಿನ್ನ 'ಅನು'ರೂಪವನ್ನು ನನ್ನ ಕಣ್ಣಗೊಂಬೆಯೊಳಗೆ ತುಂಬಿಕೊಂಡು ಭರ್ತಿ ವರ್ಷವಾಗೊಯ್ಯು ಕಾಣೇ. ನೀನಿಲ್ಲದೆ ನೀನಿರುವ ಎರಡು ಹುಟ್ಟುಹಬ್ಬ ಆಚರಿಸಿದೆನೇ(?) ಆಚರಿಸಿದ್ದಿನಾ ಗೊತ್ತಿಲ್ಲ. ಬೇಗನೆ ಬಂದು ನನ್ನೆದೆಗೆ ಅವಚಿ  ಕುಳಿತುಕೊಳ್ಳೆ. ಬೆಳಗಿನ ಜಾವದ sweet ನಿದ್ದೆಯಲ್ಲಿ ಕನಸು ಕಣೋಣ. ನಮ್ಮಿಬ್ಬರ ಕನಸುಗಳಿಗೆ ಬಣ್ಣ ತುಂಬೋಣ. ಹೊಸ ವರುಷದಿಂದ ಒಟ್ಟಾಗಿ ಕಾಲೇಜಿಗೆ ಹೋಗೊಣ, ಚಳಿಯಿಂದ ಕೂಡಿದ್ದ university roadನ ಸಂಜೆಯಲ್ಲಿ ಮಾತಿಲ್ಲದೆ ಮೌನದಿಂದ ನಡೆಯೋಣ,  Get ready for a surprise ಹುಡುಗಿ,

  ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗು ಕಣ್ಣಾಗಿ


   ಎಂದೋ ನಿನಗಾಗಿ , ನಿನ್ನ ನೆನಪಲ್ಲಿ ಬರೆದ ಶುಭಾಶಯ ಅಂತಾದರೂ ಅಂದುಕೋ; ಮತ್ತೊಂದು ಕಾಗದ ಅಂತಾದರೂ ಅಂದುಕೋ ನಿನ್ನ ಮಡಿಲಿಗೆ ಹಾಕಿ ಸುಮ್ಮನಾಗುತ್ತೇನೆ;  ಬೆಚ್ಚಗಿರಿಸಿಕೋ ಇದನ್ನ!

                                                                                                   -   ಸಾಯುವವರೆಗೂ ಕಾಯುತ್ತಾ 
                                                                                                                                ನಿನ್ನ ಮಂಜು

20 Dec 2014

ನನ್ನ ಪ್ರೀತಿಯ ಹುಡುಗಿಗೆ!

     ಹುಡುಗೀ,

                 ರಾತ್ರಿ ಮನೆಗೆ ಲೇಟಾಗಿ ಬಂದೆ, ಆಚೆ ಆಕಾಶವನ್ನು ದಿಟ್ಟಿಸುತ್ತ ಕುಳಿತವನಿಗೆ... ನಿನಗೆ ಪತ್ರ ಬರೆದು ಎಷ್ಟು ದಿನವಾಗೊಯ್ತು ಅಂತ ಅನ್ನಿಸದೆ ತಡ. ಬರೆಯುತ್ತ ಬರೆಯುತ್ತ ಅಕ್ಷರಗಳಲ್ಲಿ ಕಳೆದುಹೋಗಿ ಬಿಟ್ಟಿದ್ದಿನಿ. ಹೊರಗೆ ಕತ್ತಲು ಬಿದ್ದು ಬೆಳಕಾರೆಯುತ್ತಿರುವುದೂ ಅರಿವಿಗೆ ಬಂದಿಲ್ಲ. ಈಗ ಬೆಳಗಿನ ಜಾವ 4 ಗಂಟೆ . ಸಣ್ಣ ದನಿಯಲ್ಲಿ ಹಾಡುತ್ತಿದ್ದ ರೇಡಿಯೋ ಯಾವಾಗಲೋ ನಿಂತು ಹೋಗಿದೆ. ಸೂತಕದ ಮನೆಯಂತಹ ಆಕಾಶದಲ್ಲಿ ಎಲ್ಲೋ ಒಂದು ಮಿಣುಕು ನಕ್ಷತ್ರ: ನಿನ್ನ ಕಣ್ಣು ಹೊಳೆದಂತೆ. ನ್ನ ಸಣಿವು , ನನ್ನ ನೋವು ಹಂಚಿಕೊಳ್ಳಬಹುದಾದ್ದಲ್ಲ. ಅದು ಪುರಾತನ ವಿಷಾದದಂತಹುದು . ಒಬ್ಬನೆ ಅನುಭವಿಸಬೇಕು.

ಮನ್‌ ರೇ ತೂ
ಕಾಹೇ ನ ಧೀರ್‌ ಧರೆ.....


             ಇವತ್ತು ನೀನು ನನಗಾಗಿ ಗಾಂಧಿಬಜಾರ್‌ ಬಸ್‌ಸ್ಟಾಪ್‌ನಲ್ಲಿ ಸುಮ್ಮನೆ ಕಾಯುತ್ತ ನಿಂತುರಿತ್ತಿ. ಆಟೋಗೆ ಕೈ ತೋರುವುದಿಲ್ಲ . ಬಸ್ಸು ಕಂಡರೆ ನಿನಗೆ ತಿರಸ್ಕಾರ. ಎಷ್ಟು ಹೊತ್ತದಾರೂ ನನಗಗಾನಿ ಕಾಯುತ್ತಿ ಅಲ್ವ . ಅವತ್ತು ಕೂಡ ನಿನ್ನ ಮೊದಲ ಬಾರಿ ಅಲ್ಲೆ ನೋಡಿದ್ದು. ಗಾಂಧಿಬಜಾರ್‌ನ ಗಿಜಿಗುಡುವ ರಸ್ತೆಯ ಸಾವಿರಾರು ಮಂದಿಯ ಮಧ್ಯದಲ್ಲಿ . ಎಷ್ಟು ಚೆಂದ ಕಂಡಿದ್ದೆ ಅವತ್ತು , Black jeans  ಮೇಲೆ yellow color top. ಕಿವಿಯಲ್ಲಿ ಆಕರ್ಶಿಸುತ್ತಿದ್ದ ಬ್ಲೆಕ್‌ ಮೆಟಲ್‌ ಓಲೆ , ಇದಿಯೋ ಇಲ್ಲವೋ ಎನ್ನುವಷ್ಟಿದ್ದ ಪುಟ್ಟ ಬಿಂದಿ... My God! , ಮೊದಲ ನೋಟದಲ್ಲೆ ನನ್ನ ಅಷ್ಟು Attention ಕದ್ದೆಬಿಟ್ಯಲ್ಲ. ನಿನ್ನ ಕಣ್ಣು ನನ್ನ ಕಣ್ಣ ಗೊಂಬೆಯೊಳಗೆ ಅಚ್ಚೆಯಾಗಿ ಕುಳಿತುಬಿಟ್ಟಿದೆ.
 ಅದು ಅದ ಮೇಲೆ ಎಷ್ಟು ಬಾರಿ ನಿನ್ನ ನೋಡಿರಬೇಕು I tink its just 3 times... ನಿನ್ನ ಕಾಲೇಜ್‌ ಡೇನಲ್ಲಿ , ಮತ್ತದೆ ಗಾಂಧಿಬಜಾರ್‌ ಬಸ್‌ಸ್ಟಾಪಿನಲ್ಲಿ 2 ಬಾರಿ.... ನನ್ನದು ಮಾತಿಲ್ಲದ ನೀರವ ಮೌನ ಎಷ್ಟು ರೇಗಿಸಿದ್ದೆ " ಏನು ಮಾತಾಡೋದೆ ಇಲ್ವ ನೀನು" ಅಂತ ಕೇಳಿದಾಗ ಬಸ್‌ಸ್ಟಾಪಿನಲ್ಲಿ ಆಕಿದ್ದ ಪಾರ‍್ಲೆ ಜಿ ಆಡ್‌‌ನ ಪುಟ್ಟ ಹುಡುಗಿ ನನ್ನ ನೋಡಿ ನಕ್ಕಂತೆ ಭಾಸವಾಗಿತ್ತು. ಅವತ್ತು ಇಡೀಯಾಗಿ ವಿದ್ಯಾರ್ಥಿ ಭವನ್‌ನಲ್ಲಿ ದೋಸೆ ತಿಂದಿದ್ದೆ ಕಡೆ ಮತ್ತೆ ನಾನು ನೀನು ಒಮ್ಮೆಯು ಭೇಟಿಯಾಗಿಲ್ಲ...
  
                ಈ ರಾತ್ರಿ ಎಷ್ಟೋ ಹೊತ್ತಿಗೆ ಸೋತ ಕಙಯಗಳಲ್ಲಿ ಚಹ ಮಾಡಿಕೊಂಡು ಕುಡಿಯುತ್ತಿದ್ದೇನೆ. ಆಸೆಗಳು ಕೆರಳುವ ಮಧ್ಯರಾತ್ರಿ ಇದು. ಮನಸು ನಿನಗೋಸ್ಕರ ಚಡಪಡಿಸುತ್ತಿದೆ. ನನಗೆ ಬೇಳಕು ಹರಿದು , ಹಗಲು ಬೀದಿಗೆ ಬೀಳುವ ಹೊತ್ತಾದರೂ ನಿನ್ನೊಂದಿಗೆ ಮಾತುಬೇಕು. ನಿನ್ನೊಂದಿಗೆ ಮೌನ ಬೇಕು. ಜೊತೆಗೆ ಕೂತು ಕೇಳುವ ಹಾಡು ಬೇಕು. ಉಳಿದೆಲ್ಲರೂ ಎದ್ದು ಬದುಕಿನತ್ತ ಹೆಜ್ಜೆಯಿಡುವ ಹೊತ್ತಿಗೆ ನನಗೊಂದು ಸಾವು ಬೇಕು. ಆಗಷ್ಟೆ ಮಾತು ಕಲಿತ ಮಗು ಓಡಿ ಬಂದು ಅಮ್ಮನನ್ನಾ, ಅಮ್ಮನ ಮಡಿಲನ್ನಾ? ನಂಗೆ ನೀನು ಇಡಿಯಾಗಿ ಬೇಕು.

ಮುಝೆ ಜಾ ನ ಕಹೋ
ಮೇರೀ ಜಾನ್‌‌....


              ಇವತ್ತು ಮತ್ತದೆ ಸಂಕಲ್ಪ; ನಂಗೊತ್ತು, ನೀನು ಮತ್ತದೆ ರಸ್ತೆಯಲ್ಲಿ ನಿಂತಿತುತ್ತಿ. ಕಣ್ಣು ಕಾಯುತ್ತಿರುತ್ತವೆ. ರಸ್ತೆಯುದ್ದಕ್ಕೂ ಓಡುವ ನೋಟಕ್ಕೆ ಗೆಜ್ಜೆಯೊಂದೇ ಕಡಿಮೆ. ಒಂದು ಸಾಯಂಕಾಲ ಒಟ್ಟಿಗೆ ಕಳೆಯೋಣ. ನಿನಗಿಷ್ಟವಾಗುವ ಜಾಗವೇ ಆಗಲಿ. ಹನಿಯುವ ಗಾಂಧಿಬಜಾರ್‌ ಸಂಜೆಯಲ್ಲಿ ಭುಜ ತಾಕಿಸುತ್ತ ನಡೆಯೋಣ. ಸುಟ್ಟ ಮುಸುಕಿನ ಜೋಳ, ರುಚಿಯಾದ ಪಾನಿಪುರಿ , ವಿದ್ಯಾರ್ಥಿ ಭವನಿನ ದೋಸೆ, ಕಲ್ಮನೆ ಹೌಸ್‌ನಲ್ಲಿ ಅದ್ಭುತ ಕಾಫಿ! ನಿನ್ನ ಕಡುಗಪ್ಪು ಕಣ್ಣುಗಳ ತೀವ್ರತೆ ಕೊಂಚ ಕಡಿಮೆ ಮಾಡಿ ನನ್ನ ಪ್ರೀತಿಸೆ ಹುಡುಗೀ....

ತುಮ್‌ಸೇ ಮಿಲ್‌ ಕೇ
ನಾ ಜಾನೇ ಕ್ಯೂಂಮ, ಔರ್‌
ಬೀ ಕುಚ್‌ ಯಾದ್‌ ಆತಾ ಹೇನ್‌.....

                                       
                                                                                                       -ನಿನ್ನವನು

12 Dec 2014

ಹುಣ್ಣಿಮೆಯ ನಿಶಬ್ಧ ಕೊನೆಯ ಭಾಗ!

 " ಹಿಮು, ನನ್ನ ಜೊತೆ ಜೀವನ ಪೂರ್ತಿ ಇರುತ್ತಿಯಾ?" ಶಾಲಿನಿ ತನ್ನ ಮೌನ ಮುರಿದು ಈ ಮಾತು ಹೇಳುತ್ತಿದಂತೆ ಸ್ತಂಭಿಭೂತನಾಗಿ , ಅಚ್ಚರಿಯಾಗಿ , ರೊಮಾಂಚನವಾಗಿ ಶಾಲಿನಿಯನ್ನು ನೋಡುತ್ತಾ ನಿಂತುಬಿಟ್ಟ.

    ಆಗ ರಾತ್ರಿ 10 ಗಂಟೆ!

    ಹುಣ್ಣಿಮೆಯ ಚಂದ್ರ ತನ್ನ ಸೌಂದರ್ಯವನ್ನು ಕೇವಲ ಮಲ್ಲೇಶರಂನ 7ನೇ ಕ್ರಾಸ್‌ನ ಆ ಮನೆಯ ಮೇಲೆಯೆ ಬೀರುತ್ತಿದ್ದನೆನೋ ಎಂದು ಭಾಸವಾಗುತ್ತಿತ್ತು. ಅದು ಡಿಸೆಂಬರ್‌ನ ಆರಂಭದ ದಿನಗಳು ಚಳಿ ಮೈ ಕೊರೆಸುತ್ತಿತ್ತು . ಬೆಳಗ್ಗೆಯಿಂದ ಗಿಜಿಗುಡುತ್ತಿದ್ದ ಮಲ್ಲೇಶರಂನ ರಸ್ತೆಗಳು ಶಾಂತವಾಗಿತ್ತು , ಸಂಪಿಗೆ ಹೂವಿನ ಘಮ ಮುಗಿಗೆ ನಾಟುತ್ತಿತ್ತು , ಅಲ್ಲಿ ಶಾಲಿನಿ-ಹಿಮುವಿನ ನಡುವೆ ಮೌನ ಮಾತಡಿತ್ತು , ತನ್ನ ನಗುವಿನಲ್ಲೆ ,ಕಣ್ಣಲ್ಲೆ ಒಪ್ಪಿಗೆ ಸೂಚಿಸಿದ್ದ ಹಿಮಾಂಶು.

   ಆಗ ಶಾಲಿನಿಗೆ ನೆನಪುಗಳ ಸೊನೆಮಳೆ ಬಂದಂತ್ತಿತ್ತು . ಸೇಂಟ್‌ ಡೇವಿಡ್‌ ಕಾಲೇಜಿನಲ್ಲಿ ಮೃದುವಾದ ಕಣ್ಣುಗಳಲ್ಲಿ ಆಸೆಯನ್ನು ಹೊತ್ತು ಬಂದಿದ್ದ ಹಿಮಾಂಶು ನೆನಪಾದ , " can you mind your own work " ಅಂತ ರೇಗಿದ್ದ ಹಿಮಾಂಶು ನೆನಪಾದ, ಸ್ಯಾಂಕಿ ರಸ್ತೆಯ ಬದಿಯಲ್ಲಿ ಕಾಫಿ ಕೊಡಿಸಿದ್ದ ಹಿಮು ನೆನಪಾದ , ನಲ್ಲಮಲ ಅರಣ್ಯದ ಅ ಕತ್ತಲಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ ಪ್ರೀತಿಯ ಹಿಮು ನೆನಪಾಗಿಬಿಟ್ಟ . ಶಾಲಿನಿಯ ಮನಸ್ಸು ಒಮ್ಮೆಲೆ ತುಂಬಿ ಬಂದಿತ್ತು . 96 ದಿನಗಳಿಂದ ನೋಡದೆ ಅವನನ್ನು ಪ್ರೀತಿಸಿದ ಹಿಮಾಂಶು ಪಕ್ಕದಲ್ಲಿದ್ದಾನೆ . ಅವಳ ಕಣ್ಣುಗಳಲ್ಲಿ ಪ್ರೀತಿ ಬೆರೆತ ಆಶರ್ಯ!!

   ಶಾಂತವಾದ ಆ ರಸ್ತೆಯಲ್ಲಿ ಮೌನ ಮಾತಾಗಿ , ಮಾತು ಪ್ರೀತಿಯಾಗಿ ಹಿಮಾಂಶುವಿನ ಹೆಗಲ ಮೇಲೆ ತನ್ನ ತಲೆಯಿಟ್ಟು  ಶಾಲಿನಿ ಕನಸ್ಸಿನ ಕೋಟೆ ಕಟ್ಟತ್ತ ಅವರಿಬ್ಬರು ನಡೆಯುತ್ತಾ ನಡೆಯುತ್ತಾ ಕನಸ್ಸಿನ ಕೋಟೆಯೊಳಗೆ ಕಣ್ಮರೆಯಾಗಿ ಬಿಟ್ಟರು.
   ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತು.....

                                        ******************************

  ಸುಬ್ಬಮ್ಮನೆಂಬ ಅತಿ ಕ್ರೂರ ಮಾಟಗಾತಿ ತನ್ನ ಶಕ್ತಿ , ಸಾಧನೆಯಾದ ಕಾಮಕರ್ಣ ಪಿಶಾಚಿಯನ್ನು ಬಳಸಿ ಸರ್ವನಾಶಕ್ಕೆ ಅಣಿಯಾಗಿ , ಆಲ್ಗೆಜಂಡರ್‌ ರಾಜನಾಥ ಚಟರ್ಜಿ ನಾಶಕ್ಕೆ ನಿಂತಾಗ ಕರ್ಣ ಪಿಶಾಚಿ ಕೋಪಗೊಂಡಿದ್ದಳು . ಅದು ಕರ್ಣ ಪಿಶಾಚಿಯ ಸಾಧನೆಯ ವಿರುದ್ಧದ ಬಳಕೆ . ಬೆಂಗಳೂರು ತಲಘಟ್ಟಪುರದ ಸ್ಮಶಾನದಲ್ಲಿ ಮಾಟಗಾತಿ ಪೂಜೆ ಆರಂಭಿಸಿದರೆ ಪ್ರಶಾಂತಿನಿ ಅದೆಲ್ಲೊ ದೂರದಲ್ಲಿ ಕೊಲೆ ಮಾಡುವ ಹೊತ್ತಿಗೆ ಕರ್ಣ ಪಿಶಾವಿನಿ ತಿರುಗಿ ಬಿಳುತ್ತಾ ಬಂದಳು ಅದರ ಜೊತೆಗೆ ಕರೀಂ ಬಾಬಾ ಎಂಬ ಮುಸ್ಲಿಂ ಮಾಂತ್ರಿಕ ಸೇಡಿಗಾಗಿ ಆತೊರೆದ . ಸುಬ್ಬಮ್ಮ ಯಾರದೋ ಸರ್ವನಾಶಕ್ಕೆ ನಿಂತವಾಳು ಅವಳ ಸರ್ವನಾಶಕ್ಕೆ ಬೇರೊಬ್ಬರು ನಿಂತಿದಿದ್ದಾರೆಂನುದು ಮರೆತೆ ಬಿಟ್ಟಳು . 8ನೇ ವಾರದಲ್ಲಿ ಸುಬ್ಬಮ್ಮನ ಅಷ್ಟು ಬಲವು ಉದುಗಿ ಹೋಗಿತ್ತಿತ್ತು.
                                                               *  * *
   
    ಕಪ್ಪು ಸುಂದರಿ ಪ್ರಶಾಂತಿ ಎಕ್ಸ್‌ಪ್ರೇಸ್‌  ತನ್ನ ಇಂಜಿನ್‌ ಆನ್‌ ಮಾಡಿಕೊಂಡು ಡಿಸೇಂಬರ್‌ನ ಚಳಿಯಲ್ಲಿ ಸಾಧಾರಣ ಎನ್ನಿಸುವಷ್ಟು ಪ್ರಯಾಣಿಕರನ್ನು ಬೆಂಗಳೂರಿನಿಂದ ಹೊತ್ತೊಯ್ತಿತ್ತು . ಆ ಕೊಲೆಗಳ ಭಯ ಇನ್ನ ಪೋಲಿಸರಿಗೆ ಹಾಗೇಯೆ ಇತ್ತು , ಬೋಗಿ ಬೋಗಿಯಲ್ಲು ಪೋಲಿಸರ ಸದ್ದು , ಹುಣ್ಣಿಮೆಯೆ ದಿನವದು ಟ್ರೇನ್‌‌ ಬೆಂಗಳೂರು ಅಂಧ್ರ ದಾಟಿ ಒಡಿಶಾದ ಭುಭನೇಶ್ವರ ತಲುಪಿತ್ತು . ಕಪ್ಪು ಸುಂದರಿ ಮತ್ತೆ ಮತ್ತೆ ತನ್ನ ಸೌಂದರ್ಯ ಸೂಚಿಸುತ್ತಿದ್ದಳು. ಹುಣ್ಣಿಮೆಯ ರಾತದರಿಯಲ್ಲಿ ಕರ್ಬೊಗೆಯು ಆಕಾಶಕ್ಕೆ ಸೇರುವ ಅ  ಕಪ್ಪು ಬಿಳುಪು ಆಟ ಮನಮೋಹಕವಾಗುತ್ತಿತ್ತು . 16 ಭರ್ಬರ ಹತ್ಯೆ ಕಂಡಿದ್ದ ಪ್ರಶಾಂತಿ ಎಕ್ಸ್‌ಪ್ರೇಸ್‌ ಭರ್ತಿ 3 ತಿಂಗಳ ನಂತರ ಶಾಂತವಾಗುತ್ತಾ ಬಂತು . ಅಷ್ಟು ಹತ್ಯೆಗಳನ್ನು ಮರೆತು ತನ್ನ ದೈನಿಕ ಓಡಾಟ ಪ್ರಾರಂಭಿಸಿತ್ತು ಕರ್ನಾಟಕ-ಅಂಧ್ರದ ಜೀವನಾಡಿ ಪ್ರಶಾಂತಿ ಎಕ್ಸ್‌ಪ್ರೇಸ್‌.
  ಪ್ರಶಾಂತಿ  ಎಕ್ಸ್‌ಪ್ರೇಸ್‌‌‌ನಲ್ಲಿ ಹಿಂದಿನ ಪ್ರಶಾಂತತೆ ಕಾಣಿಸಿತ್ತು !ಹುಣ್ಣಿಮೆಯಲ್ಲಿ ನಿಶಬ್ಧ ಅವರಿಸಿತ್ತು......

                                                               *****************


    ಸುಬ್ಬಮ್ಮ ತನ್ನ ಮೊದಲ ಪೂಜೆ ಆರಂಭಿಸಿದ ದಿನದಿಂದಲೇ ಗೆಲುವು ಸಾಧಿಸುತ್ತಾ ಹೋದಳು , ಅದು ಸ್ವತಃ ಕರ್ಣ ಪಿಶಾಚಿಯನ್ನು ಬಳಸಿ ಪಡೆಯುತ್ತಿದ್ದ ಗೆಲುವು .ಕರ್ಣ ಪಿಶಾಚಿಗೆ ಅಷ್ಟು ವಾರಗಳು ನೆತ್ತರು ಅರ್ಪಿಸಿ ತಣಿಸಿದ್ದಳು ಅದರೂ ಕರ್ಣ ಪಿಶಾಚಿಯ ಉಗ್ರರೂಪ ತಣಿಸಲಾಗಲಿಲ್ಲ ಅವಳಿಗೆ, ಜೊತೆಗೆ ಕರೀಂ ಬಾಬಾನ ಶಕ್ತಿ , ಮುಸ್ಲಿಂ ವಾಮಾಚಾರ ಲೋಕವೇ ಹಾಗೆ ಅದು ತಕ್ಷಣ ತನ್ನ ಕಾರ್ಯ ಶುರುಮಾಡದೆಯಿದ್ದರು . ಭರ್ತಿ ತನ್ನೆಲ್ಲ ಶಕ್ತಿಯನ್ನು ತೋರಿಸಲು ಹಪಹಪಿಸುತ್ತದೆ . ಕೇವಲ ಎಂಟೊಂಬತ್ತು ವಾರದಲ್ಲಿ ಮಾಟಗಾತಿ ಸುಬ್ಬಮ್ಮ 16 ಬಲಿ ಪಡೆದು ಬೀಗುತ್ತಿದ್ದಳು . ಆಗಲೇ ನೋಡಿ ಕರೀಂ ಬಾಬಾ ಹಿಮಾಂಶುವಿನ ನೆರವು ಪಡೆದಿದ್ದು . ಹಿಮು ಅರೆಷ್ಟ್‌ ಆಗಿ , 17ನೇ ಬಲಿಯಾಗಲು ಅವಕಾಶ ನೀಡದೆ ಇದ್ದದ್ದು . ಅದು ಹುಣ್ಣಿಮೆಯ ದಿನ ಕರ್ಣ ಪಿಶಾಚಿಗೆ ಒಂದು ಬಲಿ ಅರ್ಪಿಸಿಲ್ಲವೆಂದರೆ ಉಗ್ರರೂಪಿಯಾಗಿ ತನ್ನೆನ್ನೆ ಬಲಿ ಪಡೆಯುತ್ತಾಳೆ ಎಂದು ಗೊತ್ತಾಗುತ್ತೆ . ಮುಸ್ಲಿಂ ಮಾಂತ್ರಿಕ ಕರೀಂ ಬಾಬಾ ಪುತ್ತೂರಿನಿಂದಲೇ ತನ್ನ ಪೂಜೆ ಆರಂಭಿಸಿದ್ದ . ಮೆಲ್ಲನೆ ಧ್ವನಿಯಲ್ಲಿ ಆರಂಭವಾಗಿದ್ದ ಈ ಸಾಲು ಮುಗಿಯುವಷ್ಟರಲ್ಲಿ ಕಿವಿ ಹೊಡೆದು ಹೋಗುವಷ್ಟು ಜೋರಾಗುತ್ತಿತ್ತು .

   "ಯೋಮಾಯುನ್‌ ಪಿಕ್ಕ್‌ ಫಿಸೂರಿ ಪತುತೂನಾ ಆಫ್‌ ವಾಜಾ!"

  " ಈ ದಿನವೂ ಶಂಕವು ಊದಲಾಗುತ್ತದೆ . ಆಕಾಶ ತೆರೆಯಲ್ಪಡುತ್ತದೆ , ಆಗ ಶವಗಳು ಗುಂಪು ಗುಂಪಾಗಿ ಎದ್ದು ಬರುತ್ತವೆ "


   ತಾನು ಸಾದಿಸಿದ್ದ ಕರ್ಣ ಪಿಶಾಚಿಯಿಂದಲೇ ಸುಬ್ಬಮ್ಮನ ಅಂತಿಮದ ಆರಂಭವಾಗಿತ್ತು . 16 ಶವಗಳು ಗುಂಪು ಗುಂಪಾಗಿ ಎದ್ದು ಬಂದು ಸುಬ್ಬಮ್ಮನೆಂಬ ಅತಿಕ್ರೂರ ಮಾಟಗಾತಿಯನ್ನು ಅಷ್ಟೆ ಕ್ರೂರವಾಗಿ ಬಲಿ ಪಡೆದುಬಿಟ್ಟವು.

  ಕಾಲ ಸ್ತಬ್ಧವಾಯ್ತು!! ಹುಣ್ಣಿಮೆಯಲ್ಲಿ  ನಿಶಬ್ಧ ಅವರಿಸಿಕೊಳ್ಳುತ್ತಾಲೆ ಅದೆಲ್ಲೊ  ದೂರದ ಪುತ್ತೂರಿನ ಜಮೀಯ ಮಸೀದಿಯ ಪಕ್ಕದಲ್ಲಿದ್ದ ಶವ ಕಂಪಿಸಿದಂತಾಯ್ತು. ಮಲ್ಲೇಶರಂ ಏಳನೇ ಕ್ರಾಸ್‌ನ ಬೀದಿಯ ತಿರುವಿನಲ್ಲಿ ಪ್ರಶಾಂತಿನಿ ಕಾಣಿಸಿಕೊಳ್ಳುತ್ತಾಳೆ . ಅದನ್ನು ಗಮನಿಸಿದ ಕರೀಂ ಬಾಬಾ ಬೆಚ್ಚಿಬಿದ್ದ .
ಅಲ್ಲಿಂದ ಆರಂಭವಾದದ್ದೆ ಮತ್ತೊಂದು ಕಥೆ

"ಹುಣ್ಣಿಮೆಯ ರಹಸ್ಯ!"

                                                                                    (ಮುಗಿಯುತ್ತದೆ)
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →